Thursday, February 6, 2014

ಸತ್ಯ ವಿಶ್ವಾಸಿಗಳ ನಾಯಕ ಪ್ರವಾದಿ ಮುಹಮ್ಮದ್ [ಸ]


(ಸಂದೇಶವಾಹಕರೇ) ನಾವು ನಿಮಗೆ ಕೌಸರ್ ದಯಪಾಲಿಸಿರುತ್ತೇವೆ. 
[ಅಲ್ ಕೌಸರ್, 1]

ಪರಲೋಕದಲ್ಲಿ ಪ್ರವಾದಿ [ಸ] ರಿಗೆ ಹೌಳುಲ್ ಕೌಸರ್ ದಯಪಾಲಿಸಲಾಗುವುದು. ವಿಚಾರಣೆ ಮುಗಿದ ಬಳಿಕ ಜನರೆಲ್ಲರೂ ದಾಹದಿಂದ ಬಳಲಿರುವಾಗ ಅದರ ನೀರು ಕುಡಿಯುವರು. ಪ್ರವಾದಿ [ಸ] ರ ಸಮುದಾಯ ಅಲ್ಲಿಗೆ ತಲುಪುವಾಗ ಅವರು [ಸ] ಅದರ ಮಧ್ಯದಲ್ಲಿ ಅಸೀನರಾಗಿ ಅವರ ಸ್ವಾಗತಕ್ಕಾಗಿ ಕಾಯುತ್ತಿರುವರು. ತರುವಾಯ ಸ್ವರ್ಗ ಪ್ರವೇಶಿಸುವ ತನಕ ಅವರಿಗೆ ದಾಹವಾಗುವುದಿಲ್ಲ.

ಅನಂತರ ಪ್ರಥಮವಾಗಿ ಪ್ರವಾದಿ [ಸ]ರೇ ಸಿರಾತ್ ಸೇತುವೆಯನ್ನು ದಾಟುವರು ಹಾಗೂ ಸ್ವರ್ಗ ಪ್ರವೇಶಿಸುವರು ಹದೀಸ್ ಗ್ರಂಥಗಳಿಂದ ತಿಳಿದು ಬರುತ್ತದೆ.

ಪ್ರವಾದಿ [ಸ] ಸ್ವರ್ಗದ ಬಾಗಿಲನ್ನು ತಟ್ಟುತ್ತಾರೆ. ಕಾವಲು ಭಟರು ಹೇಳುತ್ತಾರೆ: "ನೀವು ಯಾರು? "ಮುಹಮ್ಮದ್" ಓಹೋ ಹಾಗಾದರೆ ತೆರೆಯುತ್ತೇನೆ. ನಿಮಗಿಂತ ಮುಂಚೆ ಮತ್ತಾರಿಗೂ ತೆರೆಯಬಾರದೆಂದು ನನಗೆ ಆಜ್ಜೆ ನೀಡಲಾಗಿದೆ. ತರುವಾಯ ಬಾಗಿಲು ತೆರೆಯುತ್ತದೆ.

ವಸೀಲಾ ಎಂಬುದು ಸ್ವರ್ಗದಲ್ಲಿನ ಒಂದು ಸ್ಥಾನವಾಗಿದೆ. ಅದು ಅಲ್ಲಾಹನ ದಾಸರ ಪೈಕಿ ಒಬ್ಬರಿಗೆ ಮಾತ್ರ ದೊರಕುವುದು. ಆ ವ್ಯಕ್ತಿ ನಾನೇ ಆಗಿರುವೆನೆಂದು ನಾನು ನಿರೀಕ್ಷಿಸುತ್ತೇನೆ ಎಂದು ಪ್ರವಾದಿ [ಸ] ಹೇಳುವವರು. 
[ಮುಸ್ಲಿಮ್]

No comments:

Post a Comment