Monday, December 30, 2013

ಹಸಿವು

ಒಮ್ಮೆ ಇಬಾದ್ ಬಿನ್ ಶರ್ಜೀಲ್ ಎಂಬೋರ್ವ ತಿರಾ ಬಡವ್ಯಕ್ತಿ ಒಂದು ತೋಟದೊಳಗೆ ನಗ್ಗಿ ಕಳವು ಹಣ್ಣುಗಳನ್ನು ತಿಂದನು. ತೋಟದ ಮಾಲಕನು ಆತನಿಗೆ ಧಳಿಸಿ ಆತನು ದರಿಸಿದ್ದ ಬಟ್ಟೆಬರೆಗಳನ್ನು ಕಿತ್ತುಕೊಂಡನು. ಈ ವಿಷಯ ಪ್ರವಾದಿವರ್ಯ [ಸ]ರಿಗೆ ತಿಳಿದಾಗ ಅವರು ತೋಟದ ಮಾಳಕನೊಡನೆ ಹೇಳಿದರು: "ಅವನು ಬುದ್ದಿ ಇಲ್ಲದವನು. ನೀವು ಅವನಿಗೆ ಬುದ್ದಿ ಹೇಳಬೇಕಿತ್ತು. ಅವನು ಹಸಿದಿದ್ದನು. ನೀವು ಅವನಿಗೆ ತಿನ್ನಲು ಕೊಡಬೇಕಿತ್ತು. ನೀವೀಗ ಅವನ ಬಟ್ಟೆಬರೆಗಳನ್ನು ಅವನಿಗೆ ಮರಳಿಸಿರಿ ಮತ್ತು ಒಂದಿಷ್ಟು ದವಸ ಧಾನ್ಯಗಳನ್ನು ಅವನಿಗೆ ದಾನ ಮಾಡಿರಿ.

[ಅಬೂ ದಾವೂದ್]   

No comments:

Post a Comment