Monday, December 30, 2013

ಶುಚಿತ್ವ

ಪ್ರವಾದಿ [ಸ]ರ ಸಂಗಾತಿ ಅನಸ್ ಬಿನ್ ಮಾಲಿಕ್ [ರ] ಹೇಳುತ್ತಾರೆ: "ಒಂದು ದಿನ ನಾವು ದೇವದೂತರ (ಪ್ರವಾದಿ ಮುಹಮ್ಮದ್ (ಸ)) ಜೊತೆ ಮಸಿದಿಯಲ್ಲಿದ್ದೆವು. ಅಲ್ಲಿಗೆ ಬಂದ ಮರಳುಗಾಡಿನ ಹಳ್ಳಿಗನೊಬ್ಬ ಮಸೀದಿಯೊಳಗೇ ಮೂತ್ರ ವಿಸರ್ಜನೆ ಮಾದಲಾರಂಭಿಸಿದ. ಮಾನ್ಯ ದೇವದೂತರ ಸಂಗಾತಿಗಳೆಲ್ಲಾ ಇದನ್ನು ಕಂಡು "ನಿಲ್ಲಿಸು, ನಿಲ್ಲಿಸು" ಎಂದು ಕೂಗತೊಡಗಿದರು. ಆದರೆ ದೇವದೂತರು, "ಅವನನ್ನು ಮಧ್ಯದಲ್ಲಿ ತಡೆಯಬೇಡಿ. ಅವನ ಪಾಡಿಗೆ ಬಿಟ್ಟುಬಿಡಿ" ಎಂದು ಆದೇಶಿಸಿದರು. ಆತನು ಮೂತ್ರ ವಿಸರ್ಜಿಸಿ ಮುಗಿಸಿದ ಬಳಿಕ ಅಲ್ಲಾಹನ ದೂತರು ಆತನನ್ನು ತಮ್ಮ ಬಳಿಗೆ ಕರೆದು, ಮಸೀದಿಗಲಿರುವುದು ಅಲ್ಲಾಹನನ್ನು ಸ್ಮರಿಸುವುದಕ್ಕೆ ಹಾಗೂ ಕುರಾನ್'ನ ಅಧ್ಯಯಾನ ನಡೆಸುವುದಕ್ಕೆ" ಎಂದು ಉಪದೇಶಿಸಿದರು. ಆ ಬಳಿಕ ಅವರು ತಮ್ಮ ಸಂಗಾತಿಗಳೊಡನೆ ನೀರು ತರಳು ಹೇಳಿದರು ಮತ್ತು ಆ ಸ್ಥಳವನ್ನು ಶುಚೀಕರಿಸಿದರು.

[ಬುಖಾರಿ, ಮುಸ್ಲಿಮ್]   

No comments:

Post a Comment