ಅಬೂಹುರೈರಾ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು -
ನಮ್ಮ ಮಂಗಳಮಯನೂ ಸರ್ವೋನ್ನತನೂ ಆದ ಪ್ರಭು ಮೂರನೆಯ ಒಂದು ರಾತ್ರಿ ಉಳಿದಿರುವಾಗ ಭೂಮಿಯ ಆಕಾಶದ
ಕಡೆಗೆ ಇಳಿಯುತ್ತಾನೆ. "ಯಾರು ನನ್ನಲ್ಲಿ ಪ್ರಾರ್ಥಿಸುತ್ತಾನೆ, ನಾನು ಅವನ
ಪ್ರಾರ್ಥನೆಗೆ ಉತ್ತರಿಸುವೆನು. ಯಾರು ನನ್ನಲ್ಲಿ ಬೇಡುತ್ತಾನೆ, ನಾನು
ಅವನಿಗೆ ನೀಡುವೆನು. ಯಾರು ನನ್ನ ಕ್ಷಮೆ ಯಾಚಿಸುತ್ತಾನೆ, ನಾನು
ಅವನನ್ನು ಕ್ಷಮಿಸುವೆನು" ಎಂದು ಹೇಳುತ್ತಾರೆ.
[ಮುತ್ತಫಕುನ್ ಅಲೈಹಿ]
No comments:
Post a Comment