ಪ್ರವಾದಿ [ಸ] ಮರಣಸನ್ನನಾಗಿದ್ದ ತನ್ನ ಪ್ರಿಯ ಪುತ್ರ
ಇಬ್ರಾಹೀಮ್'ರ ಬಳಿಗೆ ಬಂದಾಗ ಅವರ ಕಣ್ಣುಗಳಿಂದ
ಕಣ್ಣೇರುಗಳರಿಯುತ್ತಿತ್ತು. ಇದನ್ನು ಕಂಡು ಪ್ರಮುಖ ಸ್ವಹಾಬಿವರ್ಯರಾದ ಅಬ್ದುಲ್ ರಹ್ಮಾನ್ ಬಿನ್
ಔಫ್ [ರ]ರವರು ಪ್ರವಾದಿಯವರೊಂದಿಗೆ [ಸ] ಕೇಳಿದರು, "ಅಲ್ಲಾಹನ
ಸಂದೇಶವಾಹಕರೇ! ನೀವೂ ಸಹ...? ಪ್ರವಾದಿವರ್ಯರು [ಸ] ಉತ್ತರಿಸಿದರು,
"ಓ ಔಫನ ಪುತ್ರನೇ, ನಿಜವಾಗಿಯೂ ಇದು
ಕಾರುಣ್ಯವಾಗಿದೆ". ಪ್ರವಾದಿ [ಸ] ಬಳಿಕ ಪುನಃ ಒಂದಿಷ್ಟು ಅತ್ತ ನಂತರ ಹೇಳಿದರು,
"ಕಣ್ಣುಗಳು ಅಳುತ್ತಿವೆ, ಹೃದಯವು
ದುಖಿಃಸುತ್ತದೆ, ಆದರೆ ನಮ್ಮ ಪಾಲಕಪ್ರಭುವು ಸಂತೃಪ್ತಿಪಡುವುದರ ಹೊರತು
ಬೇರೆನನ್ನೂ ನಾನು ಹೇಳಲಾರೆ. ಓ ಇಬ್ರಾಹೀಮ್! ನಿನ್ನ ಅಗಲುವಿಕೆಯಿಂದ ನಿಜವಾಗಿಯೂ ನಾವು
ದುಃಖಿತರಾಗಿದ್ದೇವೆ."
[ಸಹೀಹ್ ಬುಖಾರಿ]
No comments:
Post a Comment