ಅಲ್ಲಾಹನ ಸಂದೇಶವಾಹಕರು [ಸ] ಹೇಳಿದರು: "ಇಹಲೋಕದಲ್ಲಿ ಸುಖದಲ್ಲಿ ಹಾಗೂ ಅನಾಯಾಸಕರವಾದ ಜೀವನವನ್ನು ಜೀವಿಸಿದ್ದ ನರಕವಾಸಿಯೊಬ್ಬನನ್ನು ಪರಲೋಕದಲ್ಲಿ ಕೇವಲ (ಒಂದೇ) ಒಂದು ಬಾರಿ ನರಕದಲ್ಲೊಮ್ಮೆ ಅಲ್ಪವಾಗಿ ಇಳಿಸಲಾಗುವುದು. ನಂತರ ಆತನಲ್ಲಿ ಕೇಳಲ್ಪಡುವುದು. "ಓ ಆದಮನೆ ಪುತ್ರನೇ, (ಐಹಿಕ ಜೀವನದಲ್ಲಿ) ನೀನು ಯಾವಲಾದರೂ ನೆಮ್ಮದಿರುವೆಯಾ? ಆತನು ಉತ್ತರಿಸುವನು, "ಅಲ್ಲಾಹನಾಣೆ, ಇಲ್ಲ ನನ್ನ ಪ್ರಭು!" ನಂತರ ಇಹಲೋಕದಲ್ಲಿ ಬಹುಕಷ್ಟಯುತವಾದ ಜೀವನವನ್ನು ಜೀವಿಸಿದ್ದ ಸ್ವರ್ಗವಾಸಿಯೊಬ್ಬನನ್ನು ಪುನರುತ್ಥಾನ ದಿನದಂದು ಸ್ವರ್ಗದಲ್ಲೊಮ್ಮೆ ಅಲ್ಪವಾಗಿ ಇಳಿಸಲಾಗುವುದು. ನಂತರ ಆತನಲ್ಲಿ ಕೇಳಲ್ಪಡುವುದು. "ಓ ಆದಮನ ಪುತ್ರನೇ, (ಐಹಿಕ ಜೀವನದಲ್ಲಿ) ನೀನು ಯಾವುದಾದರೂ ವ್ಯಥೆ ಅಥವಾ ಸಂಕಟಗಳನ್ನು ಅನುಭವಿಸಿರುವೆಯಾ? ಆತನು ಉತ್ತರಿಸಲಿರುವನು, "ಅಲ್ಲಾಹನಾಣೆ! ನಾನು ಯಾವುದೇ ವ್ಯಥೆ ಅಥವಾ ಸಂಕಟಗಳನ್ನು ಅನುಭವಿಸಿಲ್ಲ.
[ಸಹೀಹ್ ಮುಸ್ಲಿಮ್]
No comments:
Post a Comment