ಇಸ್ಲಾಮಿನ ಮಾರ್ಗದಲ್ಲಿ ಖರ್ಚು ಮಾಡುವುದು ತುಂಬಾ ಪ್ರಾಮುಖ್ಯತೆಯಿರುವ
ವಿಷಯವಾಗಿದೆ. ದಅವತ್ ಪ್ರತಿಯೋರ್ವ ಮುಸ್ಲಿಮನ ಮೇಲಿರುವ ಬಾಧ್ಯತೆಯಾಗಿದೆ, ಪ್ರತಿಯೋರ್ವ ವ್ಯಕ್ತಿಯೂ ಅವರವರ ಸಾಮರ್ಥ್ಯಕ್ಕನುಸಾರವಾಗಿ ದಅವತ್ ಮಾಡಬೇಕಾಗಿದೆ.
ಸಂಪತ್ತು ಇರುವವರು ದಅವಾ ಚಟುವಟಿಕೆಗಳಿಗೆ ಬೇಕಾದ ಸಹಾಯವನ್ನು ಮಾಡುವುದು, ದಅವತ್ ಮಾಡುವವರಿಗೆ ಸಹಾಯ ಮಾಡುವುದು ಎಂಬಿತ್ಯಾದಿ ಕಾರ್ಯಗಳನ್ನು ಮಾಡುತ್ತಾ ಧನಿಕರು
ಅವರು ಭಾಧ್ಯತೆಯನ್ನು ನಿರ್ವಹಿಸ ಬೇಕಾದುದು ಅನಿವಾರ್ಯವಾಗಿದೆ.
ಪರಲೋಕದಲ್ಲಿ; ಎಲ್ಲಿಂದ ಧನ
ಸಂಪಾದಿಸಿದೆ, ಹೇಗೆ ಖರ್ಚು ಮಾಡಿದೆ ಎಂಬ ಪ್ರಶ್ನೆಗೆ ವ್ಯಕ್ತವಾದ
ಉತ್ತರವನ್ನು ನೀಡದೆ ಯಾರೊಬ್ಬರಿಗೂ ತಣ್ಣ ಕಾಲಿನ ಒಂದು ಹೆಜ್ಜೆಯನ್ನೂ ಮುಂದಿಡಲು ಸಾಧ್ಯವಿಲ್ಲ.
ಒಂದು ಹದೀಸನ್ನು ನೋಡಿರಿ:
ಅಬೂ ಬರ್'ಝ ಅಲ್ ಅಸ್'ಲಮಿ
[ರ]ರವರಿಂದ ವರದಿ: ರಸೂಲಿಲ್ಲಾಹಿ [ಸ]ರವರು ಹೇಳಿದರು: 'ಅಂತ್ಯ ದಿನದಂದು [ನಾಲ್ಕು
ಪ್ರಶ್ನೆಯನ್ನು ಕೇಳಿ ಅದಕ್ಕೆ ಉತ್ತರಿಸುವ ವರೆಗೆ] ಯಾರೊಬ್ಬರಿಗೂ ತನ್ನ ಕಾಲನ್ನು ಮುಂದಿಡಲು
ಸಾಧ್ಯವಲ್ಲ,
[ಅವುಗಳು]: ತನ್ನ ವಯಸ್ಸನ್ನು ಯಾಕಾಗಿ ವ್ಯಯಿಸಿದೆ, ತನ್ನ
ಜ್ಜಾನ [ಇಲ್ಮ್]ದಿಂದ ಏನು ಮಾಡಿದೆ, ತನ್ನ ಸಂಪತ್ತನ್ನು ಹೇಗೆ ಸಂಪಾದಿಸಿದೆ ಮತ್ತು
ಯಾವುದಕ್ಕೆ ಖರ್ಚು ಮಾಡಿದೆ ಹಾಗೂ ತನ್ನ ಶರೀರವನ್ನು ಯಾವುದಕ್ಕಾಗಿ ಉಪಯೋಗಿಸಿದೆ."
[ತಿರ್ಮಿದಿ]
ಅಲ್ಲಾಹನ ಮಾರ್ಗದಲ್ಲಿ ಸ್ವದಖ [ದಾನ] ನೀಡುವವರ
ಉಪಮೆಯನ್ನು ನೋಡಿರಿ:
ತಮ್ಮ ಸಂಪತ್ತನ್ನು ಅಲ್ಲಾಹನ ಮಾರ್ಗದಲ್ಲಿ ಖರ್ಚು
ಮಾಡುವವರ ಉದಾಹರಣೆಯು, ಒಂದೊಂದು ತೆನೆಯಲ್ಲೂ ತಲಾ ನೂರು ಕಾಳುಗಳು ಇರುವ ಏಳೇಳು
ತೆನೆಗಳನ್ನು ಮೊಳೆಯಿಸುವ ಒಂದು ಕಾಳಿನಂತಿದೆ. ಅಲ್ಲಾಹನು ತಾನಿಚ್ಛಿಸಿದವರಿಗೆ ಅಭಿವೃದ್ಧಿಯನ್ನು
ನೀಡುತ್ತಾನೆ. ಅಲ್ಲಾಹನು ಬಹಳ ವೈಶಾಲ್ಯ ಉಳ್ಳವನೂ ಜ್ಞಾನಿಯೂ ಆಗಿದ್ದಾನೆ.
[ಕುರಾನ್, 2: 261]
No comments:
Post a Comment