Wednesday, April 23, 2014

ಧೌರ್ ಗುಹೆಯಲ್ಲಿ ಪ್ರವಾದಿ [ಸ]ರವರ ಅನುಭವಗಳು


ನೂರು ಒಂಟೆಯ ಅಭಿಲಾಷೆಯಿಂದ ಜನರು ವಿವಿಧ ದಿಕ್ಕುಗಳಲ್ಲಿ ಹುಡುಕಾಟ ತೊಡಗಿದರು. ಕೆಲವರು ಪ್ರವಾದಿ [ಸ]ರವರ ಮತ್ತು ಅಬೂಬಕರ್ [ರ]ರವರ ಅಡಗಿ ಕುಳಿತಿರುವ ಗುಹೆಯ ದ್ವಾರದ ಬಳಿಗೆ ತಲುಪಿದರು.

ಆಗ ಅಬೂಬಕರ್ [ರ]ರವರು ಹೇಳಿದರು: ಇದೋ ಶತ್ರುಗಳು ನಮ್ಮ ಮುಂದಿದ್ದಾರೆ. ಅವರೊಮ್ಮೆ ಬಗ್ಗಿ ನೋಡಿದರೆ ನಾವು ಹಿಡಿಯಲ್ಪಡುವೆವು. ಆಗ ಪ್ರವಾದಿ [ಸ]ರವರು ಹೇಳಿದರು: "ಅಬೂಬಕರ್ [ರ]ರವರೇ, ಶಾಂತರಾಗಿರಿ. ನೀವು ದುಃಖಿಸದಿರಿ, ಅಲ್ಲಾಹನು ನಮೊಂದಿಗಿದ್ದಾನೆ. ಆಗ ಅಬೂಬಕರ್ [ರ], ಪ್ರವಾದಿಯವರೇ ನನ್ನ ವಿಷಯದಲ್ಲಿ ಯೋಚಿಸಲಿಲ್ಲ ನಾನು ದುಃಖಕ್ಕೀಡಾಗಿರುವುದು. ಬದಲಾಗಿ ತಮಗೇನಾದರೂ ಸಂಭವಿಸುವುದೋ ಎಂದು ಯೋಚಿಸುತ್ತಾ ನಾನು ದುಃಖಿಸುತ್ತಿದ್ದೇನೆ ಎಂದರು. ನೋಡಿರಿ, ಆ ಸ್ನೇಹಿತನ ಉನ್ನತಿ ಪ್ರಸ್ತುತಃ ಘಟನೆಯನ್ನು ಅಲ್ಲಾಹನು ಈ ರೀತಿ ಜಗತ್ತಿನ ಮುಂದೆ ಅನಾವರಣ ಗೊಳಿಸಿದನು. ನೀವು ಅವರಿಗೆ (ದೇವದೂತರಿಗೆ) ನೆರವಾಗದಿದ್ದರೆ, (ನಿಮಗೆ ತಿಳಿದಿರಲಿ,) ಧಿಕ್ಕಾರಿಗಳು ಅವರನ್ನು (ನಾಡಿನಿಂದ) ಹೊರಹಾಕಿದಾಗ ಅಲ್ಲಾಹನು ಅವರಿಗೆ ನೆರವಾಗಿರುವನು. (ಅಂದು) ಅವರು (ದೂತರು) ಇಬ್ಬರಲ್ಲಿ ಎರಡನೆಯವರಾಗಿದ್ದರು. ಅವರಿಬ್ಬರೂ ಗುಹೆಯಲ್ಲಿದ್ದಾಗ, ಅವರು (ದೂತರು) ತಮ್ಮ ಸಂಗಾತಿಯೊಡನೆ, ‘‘ಅಂಜಬೇಡ, ಖಂಡಿತವಾಗಿಯೂ ಅಲ್ಲಾಹನು ನಮ್ಮ ಜೊತೆಗಿದ್ದಾನೆ.’’ಎಂದಿದ್ದರು. ಕೊನೆಗೆ ಅಲ್ಲಾಹನು ಅವರಿಗೆ ಮನಃಶಾಂತಿಯನ್ನು ಇಳಿಸಿಕೊಟ್ಟನು ಮತ್ತು ನಿಮಗೆ ಕಾಣಿಸದ ಪಡೆಗಳ ಮೂಲಕ ಅವರಿಗೆ ಬಲ ಒದಗಿಸಿದನು. ಅಲ್ಲದೆ ಅವನು ಧಿಕ್ಕಾರಿಗಳ ಮಾತನ್ನು ಸೋಲಿಸಿದನು, ಅಲ್ಲಾಹನ ಮಾತೇ ಮೇಲಾಯಿತು. ಅಲ್ಲಾಹನು ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ. 
[ಕುರಾನ್, 9: 40]

ಮೊದಲು ತಿರ್ಮಾನಿಸಿದಂತೆ ಅಬ್ದುಲ್ಲಾಹ್ ಮಕ್ಕಾದ ವಿವರಗಳನ್ನು ರಾತ್ರಿ ಹೊತ್ತು ಗುಹೆಗೆ ತಲುಪಿಸುತ್ತಿದ್ದರು. ಅಬ್ದುಲ್ಲಾಹ್ ರ ಕಾಲಿನ ಹೆಚ್ಚೆಗಳನ್ನು ಮರೆಮಾಚಲಿಕ್ಕಾಗಿ ಆಮೀರ್ ಇಬ್ನ್ ಫುಹೈರ ಆಡುಗಳನ್ನು ಆ ದಾರಿಯಾಗಿ ತಂದು ಗುಹೆಯೊಳಗೆ ಪ್ರವೇಶಿಸಿ ಪ್ರವಾದಿ [ಸ]ರವರಿಗೂ ಅಬೂ ಬಕ್ಕರ್ [ರ]ರವರಿಗೂ ಹಾಲನ್ನು ನೀಡುತ್ತಿದ್ದರು. ನಂತರ ಮೊದಲ ನಿಶ್ಚಯಿಸಿರುವುದಕ್ಕನುಸಾರ ದಾರಿ ತೋರಿಸಲು ಅಬ್ದುಲ್ಲಾಹ್ ಇಬ್ನ್ ಉರೈಖತ್ ಕೂಡಾ ತಲುಪಿದರು. ಹಾಗೆ ಮೂರು ದಿನದ ಗುಹಾ ವಾಸದ ಬಳಿಕ ಅವರು ಯಥ್ ರಿಬ್ [ಮದೀನಾ]ನ ಕಡೆಗೆ ಯಾತ್ರೆ ಹೊರಟರು.

No comments:

Post a Comment