Friday, April 11, 2014

ಅಲ್ಲಾಹನನ್ನು ಭೇಟಿಯಾಗಲು ಆಗ್ರಹಿಸುವವರನ್ನು



ಅಲ್ಲಾಹನನ್ನು ಭೇಟಿಯಾಗುವುದು ಸತ್ಯವಿಶ್ವಾಸಿಗೆ ಲಭಿಸುವ ಅತೀ ದೊಡ್ಡ ಅನುಗ್ರಹವಾಗಿದೆ. ಪರಲೋಕದಲ್ಲಿ ಸತ್ಯವಿಶ್ವಾಸಿಗಳಿಗಾಗಿ ಸಿದ್ದಗೊಳಿಸಲಾಗುವ ಅನುಗ್ರಹಗಳಲ್ಲಿ ಅತ್ಯುನ್ನತವಾದುದು ಅಲ್ಲಾಹನ ಪವಿತ್ರವಾದ ಮುಖವನ್ನು ದರ್ಶಿಸುವುದಾಗಿದೆ. ಹಾಗೆ ಅಲ್ಲಾಹನನ್ನು ಭೇಟಿಯಾಗಲು ಆಗ್ರಹಿಸುವವರನ್ನು ಅವನು ಮೆಚ್ಚುತ್ತಾನೆ. ಇಲ್ಲಿಯ ಉದ್ದೇಶ ಮರಣವನ್ನು ಆಗ್ರಹಿಸುವುದು ಎಂಬುದಲ್ಲ ಬದಲಾಗಿ ಮರಣ ಗೊಳ್ಳಲ್ಲು ತಯಾರಾಗುವುದಾಗಿದೆ.

ಉಬಾದತ್ ಇಬ್ನ್ ಸಾಮಿತ್ [ರ]ರವರಿಂದ ವರದಿ: ಪ್ರವಾದಿ [ಸ]ರವರು ಹೇಳಿದರು: "ಯಾರಾದರೂ ಅಲ್ಲಾಹನನ್ನು ಭೇಟಿಯಾಗಲು ಆಗ್ರಹಿಸುವುದಾದರೆ ಅಲ್ಲಾಹನು ಅವನನ್ನೂ ಭೇಟಿಯಾಗಲೂ ಆಗ್ರಹಿಸುತ್ತಾನೆ. ಯಾರಾದರೂ ಅಲ್ಲಾಹನನ್ನು ಭೇಟಿಯಾಗುವುದನ್ನು ದ್ವೇಷಿಸುವುದಾದರೆ ಅಲ್ಲಾಹನೂ ಅವನನ್ನು ದ್ವೇಷಿಸುತ್ತಾನೆ. ಆಇಶಾ [ರ] ಅಥವಾ ಬೇರೆ ಪತ್ನಿಯರು ಹೇಳಿದರು: ಮರಣವು ನಮಗೆ ಅಪ್ರಿಯವಾಗಿದೆ. ಇಲ್ಲಿಯ ಉದ್ದೇಶ ಅದಲ್ಲ ಬದಲಾಗಿ ಸತ್ಯವಿಶ್ವಾಸಿಗೆ ಮರಣಾಸನ್ನವಾದಾಗ ಅಲ್ಲಾಹನ ತೃಪ್ತಿ ಮತ್ತು ಅನುಗ್ರಹವಿದೆ ಎಂಬ ಶುಭವಾರ್ತೆಯನ್ನು ನೀಡಲಾಗುವುದು, ಆ ಸಂಧರ್ಭದಲ್ಲಿ ಅವನು ಮರಣವನ್ನಲ್ಲದೆ ಇನ್ನೇನನ್ನೂ ಇಷ್ಟಪಡಲಾರನು. ಹಾಗೆ ಅವನು ಅಲ್ಲಾಹನನ್ನು ಭೇಟಿಯಾಗಲು ಆಗ್ರಹಿಸುತ್ತಾನೆ. ಸತ್ಯನಿಷೇಧಿಗೆ ಮರಣಾಸನ್ನವಾದಾಗ ಅಲ್ಲಾಹನ ಶಿಕ್ಷೆ ಮತ್ತು ಕೂಪವಿದೆ ಎಂಬ ಹಾಗೆ ಅವನು ಅಲ್ಲಾಹನನ್ನು ಭೇಟಿಯಾಗಲು ಅಪ್ರಿಯಪಡುತ್ತಾನೆ. ಅಲ್ಲಾಹನೂ ಅವನನ್ನು ಭೇಟಿಯಾಗಲು ಅಪ್ರಿಯಪಡುತ್ತಾನೆ. 
[ಬುಖಾರಿ]

No comments:

Post a Comment