ಉಬಾದತ್ ಇಬ್ನ್ ಸಾಮಿತ್ [ರ]ರವರಿಂದ ವರದಿ: ಪ್ರವಾದಿ
[ಸ]ರವರು ಹೇಳಿದರು: "ಯಾರಾದರೂ ಅಲ್ಲಾಹನನ್ನು ಭೇಟಿಯಾಗಲು ಆಗ್ರಹಿಸುವುದಾದರೆ ಅಲ್ಲಾಹನು
ಅವನನ್ನೂ ಭೇಟಿಯಾಗಲೂ ಆಗ್ರಹಿಸುತ್ತಾನೆ. ಯಾರಾದರೂ ಅಲ್ಲಾಹನನ್ನು ಭೇಟಿಯಾಗುವುದನ್ನು
ದ್ವೇಷಿಸುವುದಾದರೆ ಅಲ್ಲಾಹನೂ ಅವನನ್ನು ದ್ವೇಷಿಸುತ್ತಾನೆ. ಆಇಶಾ [ರ] ಅಥವಾ ಬೇರೆ ಪತ್ನಿಯರು
ಹೇಳಿದರು: ಮರಣವು ನಮಗೆ ಅಪ್ರಿಯವಾಗಿದೆ. ಇಲ್ಲಿಯ ಉದ್ದೇಶ ಅದಲ್ಲ ಬದಲಾಗಿ ಸತ್ಯವಿಶ್ವಾಸಿಗೆ
ಮರಣಾಸನ್ನವಾದಾಗ ಅಲ್ಲಾಹನ ತೃಪ್ತಿ ಮತ್ತು ಅನುಗ್ರಹವಿದೆ ಎಂಬ ಶುಭವಾರ್ತೆಯನ್ನು ನೀಡಲಾಗುವುದು, ಆ ಸಂಧರ್ಭದಲ್ಲಿ ಅವನು ಮರಣವನ್ನಲ್ಲದೆ ಇನ್ನೇನನ್ನೂ ಇಷ್ಟಪಡಲಾರನು. ಹಾಗೆ ಅವನು
ಅಲ್ಲಾಹನನ್ನು ಭೇಟಿಯಾಗಲು ಆಗ್ರಹಿಸುತ್ತಾನೆ. ಸತ್ಯನಿಷೇಧಿಗೆ ಮರಣಾಸನ್ನವಾದಾಗ ಅಲ್ಲಾಹನ ಶಿಕ್ಷೆ
ಮತ್ತು ಕೂಪವಿದೆ ಎಂಬ ಹಾಗೆ ಅವನು ಅಲ್ಲಾಹನನ್ನು ಭೇಟಿಯಾಗಲು ಅಪ್ರಿಯಪಡುತ್ತಾನೆ. ಅಲ್ಲಾಹನೂ
ಅವನನ್ನು ಭೇಟಿಯಾಗಲು ಅಪ್ರಿಯಪಡುತ್ತಾನೆ.
[ಬುಖಾರಿ]
No comments:
Post a Comment