ಬದ್ರ್ ಯುದ್ಧವು ಇಸ್ಲಾಮ್ ಮತ್ತು ಮುಸ್ಲಿಮರಿಗೆ ಶಕ್ತಿ ಹಾಗೂ ಕೀರ್ತಿ ತಂದು ಕೊಟ್ಟ ಇಸ್ಲಾಮೀ ಚರಿತ್ರೆಯ ಒಂದು ಘಟನೆಯಾಗಿದೆ. ಮುಸ್ಲಿಮರ ವಿರುದ್ಧ ಯುದ್ಧದ ಸಿದ್ಧತೆಗಾಗಿ ಹಣ ಸಂಗ್ರಹದ ಉದ್ದೇಶದಿಂದ ಕುರೈಶರು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆಂಬ ವಿಷಯ ಪ್ರವಾದಿ [ಸ] ಯವರಿಗೆ ತಿಳಿಯಿತು. ಆ ಪ್ರಯತ್ನದಿಮ ಅವರನ್ನು ತಡೆದು ಆರ್ಥಿಕವಾಗಿ ದುರ್ಬಲಗೊಳಿಸುವುದು ಅನಿವಾರ್ಯವಾಗಿತ್ತು. ಹಿಜಿರಾ ಎರಡನೇ ವರ್ಷ ರಮಳಾನಿನಲ್ಲಿ ಸಿರಿಯಾಕ್ಕೆ ತೆರಳಿದ್ದ ನಲ್ವತ್ತು ಮಂದಿ ವ್ಯಾಪಾರಿಗಳನ್ನೊಳಗೊಂಡ ಅಬೂ ಸುಫ್ಯಾನ್ ರವರ ನೇತೃತ್ವದ ತಂಡವೊಂದು ಹಿಂತಿರುಗುತ್ತಿದೆಯೆಂಬ ಸುದ್ಧಿ ಪ್ರವಾದಿ [ಸ]ಯವರ ಕಿವಿಗೆ ಬಿತ್ತು. ಪ್ರವಾದಿ [ಸ]ರು ೩೧೩ ಸಹಾಬಿಗಳೊಂದಿಗೆ ಅವರನ್ನು ತಡೆಯಲು ಹೊರಟರು. ಪ್ರವಾದಿ [ಸ] ಮತ್ತು ಸಹಾಬಿಗಳಿಗೆ ಯುದ್ಧ ಮಾಡುವ ಉದ್ದೇಶವಿಲ್ಲದ್ದರಿಂದ ಅವರ ಬಳಿ ಆಯುಧ ಸಾಮಾಗ್ರಿಗಳಿರಲಿಲ್ಲ.
ಪ್ರವಾದಿ [ಸ] ಮತ್ತು ಸಹಾಬಿಗಳು ಹೊರಟಿರುವ ವಿಷಯ ಅಬೂ ಸುಫ್ಯಾನರಿಗೆ ಗೊತ್ತಾಯಿತು. ಅವರು ಮಕ್ಕಾದವರೊಂದಿಗೆ ಸಹಾಯಕ್ಕಾಗಿ ಸೇನೆಯನ್ನು ಕಳುಹಿಸಿಕೊಡುವಂತೆ ಹೇಳಿದರು. ಅಬೂ ಜಹಲನ ನೇತೃತ್ವದಲ್ಲಿ ಹಲವು ಪ್ರಮುಖರನ್ನೊಳಗೊಂಡ ಸಾವಿರ ಸೈನಿಕರು ಶಸ್ತ್ರಸಜ್ಜಿತರಾಗಿ ಹೊರಟರು. ಆದರೆ, ಸೈನ್ಯವು ತಲುಪುದಕ್ಕಿಂತ ಮೊದಲೇ ಅಬೂ ಸುಫ್ಯಾನರು ಬೇರೊಂದು ಮಾರ್ಗದ ಮೂಲಕ ಸುರಕ್ಷಿತವಾಗಿ ಮಕ್ಕಾಕ್ಕೆ ತಲುಪಿದರು. ಈ ವಿಷಯ ಗೊತ್ತಾದರೂ ಅಬೂ ಜಹಲ್ ಮತ್ತು ಸೇನೆ ಹಿಂತಿರುಗಲು ಸಿದ್ಧರಿರಲಿಲ್ಲ. ಅವರು ಮುಸ್ಲಿಮರನ್ನು ಸಂಪೂರ್ಣವಾಗಿ ನಾಶಪಡಿಸುವ ಪ್ರತಿಜ್ಜೆ ಕೈಗೊಂಡರು. ರಮಳಾನ್ ೧೭ರಂದು ಬದ್ರ್ ಎಂಬ ಸ್ಥಳದಲ್ಲಿ ಶತ್ರು ಸೈನ್ಯ ಹಾಗೂ ಮುಸ್ಲಿಮ್ ಸೈನ್ಯ ಠಿಕಾಣಿ ಹೂಡಿತು. ಮುಸ್ಲಿಮರ ಬಳಿ ಅರಬಿಗಳ ಸಂಪ್ರಾದಯದಂತೆ ಕೇವಲ ಖಡ್ಗವನ್ನು ಹೊರತುಪಡಿಸಿ ಬೇರೆ ಆಯುಧಗಳಿರಲಿಲ್ಲ.
ಪ್ರವಾದಿ [ಸ]ಯವರು ಮತ್ತು ಮುಸ್ಲಿಮರು ಅಲ್ಲಾಹನೊಂದಿಗೆ ಸಹಾಯ ಯಾಚಿಸಿದರು. ಉಭಯ ಸೈನ್ಯವು ಪರಸ್ಪರ ಮುಖಾಮುಖಿಯಾಯಿತು. ಘನಘೋರ ಹೋರಾಟ ನಡೆಯುತ್ತದೆ.
ಮುಸ್ಲಿಮರಿಗೆ ಸಹಾಯ ಮಾಡಿದನು. ಶತ್ರು ಸೈನ್ಯಕ್ಕೆ ಭಾರೀ ಸೋಲಾಯಿತು. ಅಬೂ ಜಹಲ್, ಉತ್ಬಹ್, ಶೈಬತ್, ವಲೀದ್ ಮೊದಲಾದ ಪರಾಕ್ರಮಿಗಳು ಸೇರಿದಂತೆ ೭೦ ಜನರು ಹತರಾದರು. ಎಪ್ಪತ್ತು ಮಂದಿಯನ್ನು ಸೆರೆಹಿಡಿಯಲಾಯಿತು. ಮುಸ್ಲಿಮರ ೧೪ ಮಂದಿ ಹುತಾತ್ಮರಾದರು. ಹೀಗೆ ಹುತಾತ್ಮ (ಶಹೀದ್)ರಾದವರಲ್ಲಿ ಉಬೈದತ್ ಬಿನುಲ್ ಹಾರಿಸ್, ಉಮೈರ್ ಬಿನ್ ಅಬೂ ವಖಾಸ್, ಸಅದ್ ಬಿನ್ ಖೈಸಮ ಮೊದಲಾದವರು ಪ್ರಮುಖರಾಗಿದ್ದಾರೆ.
ಬದ್ರ್ ಯುದ್ಧದ ವಿಜಯವು ಮುಸ್ಲಿಮರಿಗೆ ಒಂದು ಅಸ್ತಿತ್ವವನ್ನು ನೀಡಿತು. ಮಕ್ಕಾದ ಮುಶ್ರಿಕಾರಿಗೆ ಮುಸ್ಲಿಮರ ಕುರಿತು ಭಯ ಹುಟ್ಟಿತು. ಇದರಿಂದ ಮದೀನಾದ ಮುಸ್ಲಿಮರನ್ನು ಸಾಕ್ಷರರನ್ನಾಗಿ ಮಾಡಲು ಸಾಧ್ಯವಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ಇದು ಅಲ್ಲಾಹನ ಭಯವಿರಿಸಿಕೊಂಡ ಜೀವಿಸಿದರೆ ಅವರ ಸಹಾಯ ದೊರೆಯುತ್ತದೆಯೆಂದು ಮುಸ್ಲಿಮರಿಗೆ ವೇದ್ಯವಾಗಲು ಕಾರಣವಾಯಿತು.
No comments:
Post a Comment