ಪ್ರವಾದಿ ಮುಹಮ್ಮದ್ (ಸ) ಹೇಳಿದರು: "ಊಹೆಯ ಬಗ್ಗೆ ಎಚ್ಚರ ವಹಿಸಿರಿ.
ಯಾಕೆಂದರೆ ಖಂಡಿತವಾಗಿಯೂ ಊಹೆಯು ಅತಿದೊಡ್ಡ ಸುಳ್ಳು ವಾರ್ತೆ.
ನೀವು ಬೇರೊಬ್ಬನ ತಪ್ಪುಗಳನ್ನು ಹುಡುಕಬಾರದು.
ನೀವು ಬೇರೊಬ್ಬನ ಖಾಸಗಿ ವಿಚಾರಗಳನ್ನು ಕೆಡಕಬಾರದು.
ನೀವು ಬೇರೊಬ್ಬನು ಆಸೆಪಡುವುದನ್ನು ಅವನಿಗೆ ಸಿಗದಂತೆ ಮಾಡಲು ಸ್ಪರ್ಧಿಸಬಾರದು.
ನೀವು ಬೇರೊಬ್ಬನಲ್ಲಿರುವ ಅನುಗ್ರಹವು ನಿವಾರಣೆಯಾಗಲು ಅಸೂಯೆ ಪಡಬಾರದು.
ನೀವು ಪರಸ್ಪರ ದ್ವೇಷಿಸಬಾರದು.
ನೀವು ಪರಸ್ಪರ ಮುಖ ನೋಡದೆ ತಿರುಗಿ ನಡೆಯಬಾರದು.
"ಓ ಅಲ್ಲಾಹನ ದಾಸರೇ! ನೀವು ಪರಸ್ಪರ ಸಹೋದರರಂತೆ ಬಾಳಿರಿ."
[ಅಲ್ ಬುಖಾರಿ ಮತ್ತು ಮುಸ್ಲಿಮ್]
No comments:
Post a Comment