ಪ್ರವಾದಿ
[ಸ] ಸೀಝರ್ (ರೊಮ್ನ ದೊರೆ)ಗೆ ಪತ್ರ ಬರೆದು ಇಸ್ಲಾಮಿನ ಆಹ್ವಾನ ನೀಡಿದರು. ಆ ಪತ್ರವನ್ನು
ಪ್ರವಾದಿ [ಸ] ದಿಹ್ಯಾ ಕಲ್ಬೀಯವರ [ರ] ಮೂಲಕ ಕಳುಹಿಸಿದರು. ಅದನ್ನು ಬಸ್ರಾದ ರಾಜ್ಯಪಾಲರಿಗೆ
ತಲುಪಿಸಿದರು ಮತ್ತು ಆವರು ಸೀಝರ್'ಗೆ ತಲುಪಿಸಲು ಹೇಳಿದರು. ಪತ್ರದ ಒಕ್ಕಣೆ ಹೀಗಿತ್ತು.
ಪರಮ
ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ
ಅಲ್ಲಾಹನ
ದಾಸ ಮತ್ತು ಸಂದೇಶವಾಹಕ ಮುಹಮ್ಮದರ ವತಿಯಿಂದ ರೊಮ್ನ ಅಧಿಪತಿಯಾದ ಹರ್ಕುಲಿಸ್'ಗೆ
ಯಾರು
ಸನ್ಮಾರ್ಗವನ್ನು ಅನುಸರಿಸುತ್ತಾನೋ ಅವನ ಮೇಲೆ ಶಾಂತಿಯಿರಲಿ.
ತರುವಾಯ
ನಾನು ನಿಮಗೆ ಇಸ್ಲಾಮಿನ ಆಹ್ವಾನ ನೀಡುತ್ತೇನೆ. ಇಸ್ಲಾಮ್ ಸ್ವೀಕರಿಸಿರಿ. ಸುರಕ್ಷಿತರಾಗಿರುವಿರಿ.
ಇಸ್ಲಾಮ್ ಸ್ವೀಕರಿಸಿರಿ ಅಲ್ಲಾಹನು ನಿಮಗೆ ಇಮ್ಮಡಿ ಪ್ರತಿಫಲ ದಯಪಾಲಿಸುವನು. ನೀವು ಮುಖ
ತಿರುಗಿಸಿದರೆ ನಿಮ್ಮ ಮೇಲೆ ಅರೀಸಿಗಳ ಪಾಪವೂ ಇರುವುದು.
"ಗ್ರಂಥದವರೇ, ನಿಮ್ಮ ಮತ್ತು ನಿಮ್ಮೊಳಗೆ ಸಮಾನವಾಗಿರುವ
ವಿಷಯಗಳ ಕಡೆಗೆ ಬನ್ನಿರಿ-ನಾವು ಅಲ್ಲಾಹನ ಹೊರತು ಇತರ ಯಾರ ಆರಾಧನೆಯನ್ನೂ ಮಾಡದಿರೋಣ. ಅವನೊಂದಿಗೆ
ಯಾರನ್ನೂ ಸಹಭಾಗಿಯಾಗಿ ಮಾಡದಿರೋಣ ಮತ್ತು ನಿಮ್ಮ ಪೈಕಿ ಯಾರೂ ಯಾರನ್ನೂ ತನ್ನ ಪ್ರಭುವಾಗಿಸದಿರೋಣ.
ಈ ಕರೆಯನ್ನು ಸ್ವೀಕರಿಸಾಲು ಅವರು ಹಿಂಜರಿದರೆ ನಾವಂತು ಮುಸ್ಲಿಮರು (ಕೇವಲ ಅಲ್ಲಾಹನ
ದಾಸ್ಯ-ಆರಾಧನೆ ಮತ್ತು ಅನುಸರಣೆ ಮಾಡುವವರು) ಎಂದು ಸ್ಪಷ್ಟವಾಗಿ ಹೇಳಿಬಿಡಿರಿ. (ಕುರಾನ್, 3: 64)
(ವರದಿ: ಹ. ಇಬ್ನು ಅಬ್ಬಾಸ್ [ರ])
[ಬುಖಾರಿ, ಮುಸ್ಲಿಮ್]
No comments:
Post a Comment