Friday, September 16, 2016

ಹಸನುಲ್ ಬಸ್ರಿ [ರ]

"ಹಿಜರಿ 200ನೇ ಸಮಯದಲ್ಲಿ ಮಹಾನ್ ಪಂಡಿತನಾದ ಹಸನುಲ್ ಬಸ್ರಿ [ರಹ್ಮತುಲ್ಲಾಹಿ ಅಲೈಹಿ]ರವರಲ್ಲಿ
ಓರ್ವನು ಬಂದು ಸಲಹೆಯನ್ನು ಕೇಳುತ್ತಾನೆ. ನನಗೆ ಕೆಲವು ವರ್ಷಗಳು ಆಯಿತು ಮಕ್ಕಳು ಆಗದೆ.
ನನಗೆ ನೀವು ಉಪದೇಶ ಮಾಡಿರಿ ಆಗ ಅವರು ಅಲ್ಲಾಹನಲ್ಲಿ ಇಸ್ತಿಹ್ಫಾರ್ (ಪಶ್ಚಾತಾಪ) ಮಾಡಿರಿ ಏನ್ನುತ್ತಾರೆ.
ಆಗ ಅವನು ಅಲ್ಲಿಯೇ ಕುಳಿತುಕೊಳ್ಳುತ್ತಾನೆ "

"ಮತ್ತೊಬ್ಬನು ಬಂದು ನಾನು ತುಂಬಾ ಕಷ್ಟದಲ್ಲಿ ಇದ್ದೇನೆ ಎನ್ನುತ್ತಾರೆ
ಆಗಲೂ ಶೈಕ್ ಹೇಳುತ್ತಾರೆ ಅಲ್ಲಾಹನಲ್ಲಿ ಇಸ್ತಿಹ್ಫಾರ್ (ಪಶ್ಚಾತಾಪ) ಮಾಡಿರಿ.
ಆಗ ಅವನು ಅಲ್ಲಿಯೇ ಕುಳಿತುಕೊಳ್ಳುತ್ತಾನೆ "

"ಮತ್ತೊಬ್ಬನು ಬಂದು ನಮ್ಮಲ್ಲಿ ಮಳೆಯ ಕೊರತೆ ಇದೆ.
ತುಂಬಾ ಕಾಲ ಕಳೆಯಿತು ಮಳೆ ಬಾರದೆ.
ನೀವು ನಮಗೆ ಉಪದೇಶ ಮಾಡಿರಿ.
ಆಗಲೂ ಶೈಕ್ ಹೇಳುತ್ತಾರೆ ಅಲ್ಲಾಹನಲ್ಲಿ ಇಸ್ತಿಹ್ಫಾರ್ (ಪಶ್ಚಾತಾಪ) ಮಾಡಿರಿ ಏನ್ನುತ್ತಾರೆ. "

"ಮೊದಲು ಕೇಳಿದ ವ್ಯಕ್ತಿ ಶೈಕ್ ನಲ್ಲಿ ಕೇಳುತ್ತಾರೆ ಮೂರು ಬೇರೆ ಬೇರೆ
ಪ್ರಶ್ನೆಗೆ ಒಂದೇ ಉತ್ತರವೇ, ಆಗ ಶೈಕ್ ಕೇಳುತ್ತಾರೆ ನೀವು ಕುರಾನ್
ಓದುವುದಿಲ್ಲವೇ ಆಗ ಅವನು ಹೇಳುತ್ತಾನೆ ಒದುತ್ತೇನೆ ಎಂದು
ಆಗ ಕುರಾನಿನ ವಚನ ಪಠಿಸುತ್ತಾರೆ: ಆಗ ನಾನು (ನೂಹ್) ಹೇಳಿದನು: ನೀವು ನಿಮ್ಮ ಪ್ರಭುವಿನೊಂದಿಗೆ ಇಸ್ತಿಗ್ಫಾರ್ ಮಾಡಿರಿಖಂಡಿತವಾಗಿಯೂ ಅವನು ಅತ್ಯಂತ ಕ್ಷಮಿಸುವವನಾಗಿದ್ದಾನೆಅವನು ನಿಮಗೆ ಮಳೆ ಹೇರಳವಾಗಿ ಸುರಿಸುವನುಸಂಪತ್ತು ಮತ್ತು ಸಂತತಿಗಳ ಮೂಲಕ ಅವನು ನಿಮ್ಮನ್ನು ಪೋಷಿಸುವನು.
ಅವನು ನಿಮಗೆ ತೋಟಗಳನ್ನು ಮತ್ತು ಅವನು ನಿಮಗೆ ನದಿಗಳನ್ನು ಮಾಡಿಕೊಡುವನು
[ಕುರಾನ್, 71: 10-12]

No comments:

Post a Comment