Thursday, September 15, 2016

ಕಅಬಾ ಪುನನಿರ್ಮಾಣ - ಪ್ರವಾದಿ ಮುಹಮ್ಮದ್ [ಸ]ರವರ ಪ್ರವಾದಿತ್ವದ ಮೊದಲು

ಕಅಬಾದ ಕಟ್ಟಡವು ದುರ್ಬಲಗೊಂಡಿತ್ತು. ಮೊದಲೊಮ್ಮೆ ನಡೆದ ಅಗ್ನಿಅನಾಹುತ ಹಾಗೂ ನೆರೆಯು ಅದಕ್ಕೆ ಕಾರಣವಾಗಿತ್ತು. ಕುರೈಶಿಗಳು ಅದನ್ನು ಪುನರ್ ನಿರ್ಮಿಸಲು ತೀರ್ಮಾನಿಸಿದರು. ಉತ್ತಮ ಮಾರ್ಗದಲ್ಲಿ ಸಂಪಾದಿಸಿದ ಹಣ ಸಂಗ್ರಹಿಸಿ ಕಅಬಾವನ್ನು ಕೆಡವಿ ಕಾಮಗಾರಿ ಆರಂಭಿಸಿದರು. ಅಂದು ಪ್ರವಾದಿ []ಯವರಿಗೆ ೩೫ರ ಹರೆಯ, "ಹಜರುಲ್ ಅಸ್ವದ್"ನ್ನು ಇಡಬೇಕಾದ ಸಂದರ್ಭದಲ್ಲಿ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಳ್ಳಳು ಕುರೈಶ್ ಗಳ ಪ್ರತಿಯೊಂದು ವಂಶವು ಹಕ್ಕು ಪ್ರತಿಪಾದಿಸಿತು. ವಿವಾದವು ಸ್ವಲ್ಪ ಹೊತ್ತು ಮುಂದುವರಿಯಿತು. ಅಂತಿಮವಾಗಿ ಗುಂಪಿನಲ್ಲಿದ್ದ ಗೌರವಾನಿತ್ವರಾದ ಅಬೂ ಉಮಯ್ಯಃ ಹೇಳಿದರು "ನಾವು ಇನ್ನು ಚರ್ಚಿಸುವ್ ಅಗತ್ಯವಿಲ್ಲ. ಇನ್ನು ಇಲ್ಲಿಗೆ ಮೊದಲು ಆಗಮಿಸುವ ವ್ಯಕ್ತಿಯು ಕೊಡುವ ತೀರ್ಮಾನವನ್ನು ನಾವೆಲ್ಲರೂ ಒಮ್ಮತದಿಂದ ಅಂಗೀಕರಿಸೋಣ. ಸೂಚನೆ ಎಲ್ಲರಿಗೂ ಒಪ್ಪಿಗೆಯಾಯಿತು.      

ನಿರ್ಧಾರಕ್ಕೆ ಹೆಚ್ಚು ಹೊತ್ತು ಕಳೆಯಲಿಲ್ಲ. ಅಲ್ಲಿಗೆ "ಅಲ್ ಅಮೀನ್" ಆಗಮಿಸುತ್ತಾರೆ ಎಲ್ಲರಿಗೂ ಸಂತೋಷವಾಯಿತು. ಪ್ರವಾದಿ []ಯವರು ಒಂದು ಬಟ್ಟೆಯನ್ನು ನೆಲದ ಮೇಲೆ ಹಾಸಿದರು. ಹಜರುಲ್ ಅಸ್ವದನ್ನು ಅದರ ಮೇಲಿಟ್ಟರು ಅನಂತರ ಅವರು ಎಲ್ಲಾ ವಂಶದವರೊಂದಿಗೆ ಬಟ್ಟೆಯ ಒಂದೊಂದು ತುದಿಯನ್ನು ಹಿಡಿದು ಎತ್ತುವಂತೆ ಸುಚೂಸಿದರು. ಪ್ರವಾದಿ []ಯವರು ಅವರ ಕೈಗಳಿಂದ ಬಟ್ಟೆಯ ಮೇಲಿದ್ದ ಹಜರುಲ್ ಅಸ್ವದನ್ನು ಎತ್ತಿಕೊಂಡು ಯಥಾಸ್ಥಾನದಲ್ಲಿಟ್ಟರು. ಅದರೊಂದಿಗೆ ಯುದ್ಧದಲ್ಲಿ ಕೊನೆಗೋಳ್ಳುತ್ತಿದ್ದ ಜನಗವು ಸುಲಭವಾಗಿ ಬಗೆಹರಿಯಿತು. ಹೀಗೆ ಪ್ರವಾದಿ []ಯವರು ಪ್ರತಿಯೊಂದು ಸಾಮಾಜಿಕ ಸಮಸ್ಯೆಯಲ್ಲಿ ಪಾಲ್ಗೊಂಡು ಜನರ ಸಮಸ್ಯೆಯನ್ನು ಬಗೆಹರಿಸಿದರು.  

No comments:

Post a Comment