ಅನಸ್ [ರ] ಹೇಳುತ್ತಾರೆ - ಪ್ರವಾದಿ [ಸ] ಹೀಗೆ ಹೇಳುವುದನ್ನು ನಾನು ಕೇಳಿದೆ - ಪುನರುತಥಾನ ದಿನದಂದು ಶಿಫಾರಸ್ಸು ಮಾಡಲು ನನಗೆ ವಹಿಸಿಕೊಡಲಾಗುವುದು. ಆಗ ನಾನು ಬಿನ್ನವಿಸುವೆ - ಪ್ರಭೂ! ಒಂದು ಸಾಸಿವೆ ಕಾಲಿನಷ್ಟಾದರೂ ಈಮಾನ್ ಯಾರ ಹೃದಯದಲ್ಲಾದರೂ ಇದ್ದರೆ ಅಂತಹವರನ್ನು ನೀನು ಸ್ವರ್ಗದಲ್ಲಿ ಪ್ರವೇಶಗೊಳಿಸು. ಹಾಗೆ ಅವರೂ ಸ್ವರ್ಗದಲ್ಲಿ ಪ್ರವೇಶಿಸುವರು. ತರುವಾಯ ನಾನು ಅಪೇಕ್ಷಿಸುವೆ - ಯಾರಾದರೂ ಹೃದಯದಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಈಮಾನ್ ಇದ್ದರೆ ಅಂತಹವರನ್ನು ನೀನು ಸ್ವರ್ಗದಲ್ಲಿ ಪ್ರವೇಶಗೊಳಿಸು. ಅನಸ್ ಹೇಳುತ್ತಾರೆ - ಪ್ರವಾದಿ [ಸ] ಇದನ್ನು ಹೇಳುವಾಗ ಈಮಾನಿನ ಅತ್ಯಲ್ಪ ಪ್ರಮಾಣವನ್ನು ಸೂಚಿಸಲು ಎರಡು ಬೆರಳುಗಳನ್ನು ಸೇರಿಸಿ ತೋರಿಸಿದ ಆ ದೃಶ್ಯ ಈಗಲೂ ನನ್ನ ಕಣ್ಣ ಮುಂದಿದೆ.
[ಸಹೀಹ್ ಬುಖಾರಿ, ಅಧ್ಯಾಯ - ತೌಹೀದ್ (ಏಕದೇವತ್ವ)]
No comments:
Post a Comment