Tuesday, December 31, 2013

ನೆರೆಯವನು

ಇಬ್ನ್ ಅಬ್ಬಾಸ್(ರ) ವರದಿ ಮಾಡಿದ್ದಾರೆ, ಪ್ರವಾದಿ(ಸ.ಅ)ರು ಹೀಗೆ ಹೇಳಿದ್ದನ್ನು ನಾನು ಕೇಳಿದ್ದೇನೆ; "ಸತ್ಯ ವಿಶ್ವಾಸಿಯು ತನ್ನ ನೆರೆಯವನು ಹಸಿದ ಹೊಟ್ಟೆಯಲ್ಲಿ ಮಲಗುವಾಗ ತಾನು ಹೊಟ್ಟೆ ತುಂಬಾ ಉಂಡು ಮಲಗುವವನಾಗಿರುವುದಿಲ್ಲ."

[ಮಿಶ್ಕಾತ್] 

ಆರಂಭದ ಸ್ಥಿತಿಗೇ ಮರಳುವುದು

ಅಬೂ ಹುರೈರಾ(ರ) ವರದಿ ಮಾಡಿದ್ದಾರೆ, ಪ್ರವಾದಿ (ಸ.ಅ) ಹೇಳಿದರು: ಇಸ್ಲಾಮ್ ಅಪರಿಚಿತತೆಯ ವ್ಯವಸ್ಥೆಯಲ್ಲಿ ಆರಂಭವಾಗಿದೆ.ಅದು ಆರಂಭದ ಸ್ಥಿತಿಗೇ ಮರಳುವುದು.ಆದ್ದರಿಂದ ಅಪರಿಚಿತರಿಗೆ ಶುಭವಾಗಲಿ.

(ಮುಸ್ಲಿಮ್) 

ಶೈತಾನನು ಅವನನ್ನು ಸ್ಪರ್ಶಿಸುತ್ತಾನೆ

ಅಬೂ ಹುರೈರಾ (ರ) ವರದಿ ಮಾಡಿದ್ದರೆ, ಪ್ರವಾದಿ(ಸ.ಅ)ರು ಹೇಳಿದರು ಆದಮರ ಮಕ್ಕಳ ಪೈಕಿ ಪ್ರತಿಯೊಬ್ಬನೂ ಹುಟ್ಟುವಾಗಲೂ ಶೈತಾನನು ಅವನನ್ನು ಸ್ಪರ್ಶಿಸುತ್ತಾನೆ. ಶೈತಾನನು ಆ ರೀತಿ ಮುಟ್ಟುವಾಗ ಅವನು ಜೋರಾಗಿ ಅರಚುತ್ತಾನೆ. ಮರ್ಯಮ್ ಮತ್ತು ಅವರ ಪುತ್ರನ ಹೊರತು.

[ಮುತ್ತಫಕುನ್ ಅಲೈಹಿ]

ಅಜ್ಞಾನಿಯಂತೆ

ಅಬ್ದುಲ್ಲಾ ಇಬ್ನ್ ಮಸ್‌ಊದ್(ರ) ವರದಿ ಮಾಡಿದ್ದರೆ, ಪ್ರವಾದಿ (ಸ.ಅ)ರು ಹೇಳಿದರು ಅವನು ನಮ್ಮವನಲ್ಲ ಯಾರು ತನ್ನ ಕೆನ್ನೆಗೆ ಹೊಡೆದು, ಬಟ್ಟೆಯನ್ನು ಸೀಳುವನೋ. ಯಾರು ಅಜ್ಞಾನಿಯಂತೆ ಡಂಗುರಸಾರಿ ಅಳುವನೋ.

[ಬುಖಾರಿ, ಮುಸ್ಲಿಂ] 

ಗೋರಿಗಳನ್ನು ಆರಾಧನಾಲಯಗಳಾಗಿ ಮಾಡುವುದು - ತಪ್ಪು

ಪ್ರವಾದಿ(ಸ.ಅ)ರು ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ- ಎಚ್ಚರಿಕೆ! ನಿಮಗಿಂತ ಹಿಂದಿನ ಜನರು ತಮ್ಮ ಪ್ರವಾದಿಗಳ ಮತ್ತು ಸಜ್ಜನ ವ್ಯಕ್ತಿಗಳ ಗೋರಿಗಳನ್ನು ಆರಾಧನಾಲಯಗಳಾಗಿ ಮಾಡುತ್ತಿದ್ದರು. ಎಚ್ಚರಿಕೆ! ನೀವು ಅವರ ಗೋರಿಗಳನ್ನು ಆರಾಧನಾಲಯಗಳಾಗಿ ಮಾಡದಿರಿ. ನಾನು ನಿಮ್ಮನ್ನು ಅದರಿಂದ ತಡೆಯುತ್ತೇನೆ.

[ಮುಸ್ಲಿಮ್]

ಮೂರು ಕೆಲಸಗಳಿಂದ ದೂರವಿರಿ

ಪ್ರವಾದಿ(ಸ.ಅ)ರು ಹೇಳಿದರು ಶಾಪಕ್ಕೆ ಗುರಿಯಾಗುವ ಮೂರು ಕೆಲಸಗಳಿಂದ ದೂರವಿರಿ.
1. ರಸ್ತೆಗಳಲ್ಲಿ
2. ಜಲಾಶಯಗಳಲ್ಲಿ
3. ನೆರಳಲ್ಲಿ, ಮಲ ವಿಸರ್ಜಿಸುವುದು.

[ಅಬೂ ದಾವೂದ್, ಇಬ್ನ್ ಮಾಜಃ]

ಅದಾನ್ ಹೇಳುವವರ ಮಹತ್ವ

ಪ್ರವಾದಿವರ್ಯರಲ್ಲಿ (ಸ.ಅ)ರಲ್ಲಿ ಓರ್ವ ವ್ಯಕ್ತಿ ಹೀಗೆ ಹೇಳಿದರು- ಅಲ್ಲಾಹನ ಸಂದೇಶವಾಹಕರೇ! ಅದಾನ್ ಹೇಳುವವರು ನಮಗಿಂತ ಹೆಚ್ಚು ಮಹತ್ವ ಪಡೆಯುವರು. ಆಗ ಪ್ರವಾದಿ (ಸ.ಅ)ರು ಹೇಳಿದರು- ನೀನೂ ಆತ ಹೇಳಿದಂತೆ ಹೇಳು. ಅದು ಮುಗಿದ ನಂತರ ದುಆ ಮಾಡು. ನಿನಗೂ ನೀಡಲಾಗುವುದು. (ವರದಿ ಅಬ್ದುಲ್ಲಾ ಬಿನ್ ಅಮ್ರ್(ರ))

[ಅಬೂ ದಾವೂದ್] 

ಮಕ್ಕಳನ್ನು ಪ್ರೀತಿಸಿ

ಒಬ್ಬ ಗ್ರಾಮೀಣ ಅರಬನು ಪ್ರವಾದಿ(ಸ.ಅ)ರ ಬಳಿಗೆ ಬಂದನು, "ತಾವು ತಮ್ಮ ಮಕ್ಕಳನ್ನು ಮುದ್ದಿಸುತ್ತೀರಿ ಮತ್ತು ಪ್ರೀತಿಸುತ್ತೀರಿ. ನಾವೆಂದೂ ನಮ್ಮ ಮಕ್ಕಳನ್ನು ಮುದ್ದಿಸುವುದಿಲ್ಲ" ಎಂದು ಹೇಳಿದನು. ಆಗ ಪ್ರವಾದಿ(ಸ.ಅ)ರು ಹೇಳಿದರು "ಅಲ್ಲಾಹನು ನಿಮ್ಮ ಮನದಿಂದ ಕರುಣೆಯನ್ನು ಕಿತ್ತು ಕೊಂಡಿದ್ದರೆ ನಾನೇನು ಮಾಡಲಿ!." (ವರದಿ ಆಯಿಶಾ(ರ))

[ಬುಖಾರಿ]  

ಅರಫಾ ದಿನದ ದುಆ

ಪ್ರವಾದಿ(ಸ.ಅ)ರು ಹೇಳಿದರು, ದುಆಗಳ ಪೈಕಿ ಅತ್ಯಂತ ಶ್ರೇಷ್ಟವಾದುದು ಅರಫಾ ದಿನದ ದುಆ ಆಗಿದೆ. ನಾನು ಹಾಗೂ ನನ್ನ ಪೂರ್ವ ಪ್ರವಾದಿಗಳು ಹೇಳಿದ ಮಾತುಗಳಲ್ಲಿ ಅತ್ಯಂತ ಉನ್ನತವಾದುದು.

ರಾತ್ರಿ ನಮಾಝ್'ನ ಕುರಿತು ವಿಚಾರಿಸಿದೆ

ಮಸ್ರೂಕ್ [ರ] ಅವರಿಂದ ವರದಿಯಾಗಿದೆ. ನಾನು ಆಯಿಶಾ [ರ] ಪ್ರವಾದಿವರ್ಯರ [ಸ] ರಾತ್ರಿ ನಮಾಝ್'ನ ಕುರಿತು ವಿಚಾರಿಸಿದೆ. ಅವರು [ರ] ಹೇಳಿದರು - ಕೆಲವೊಮ್ಮೆ ಏಳು, ಕೆಲವೊಮ್ಮೆ ಒಂಬತ್ತು, ಕೆಲವೊಮ್ಮೆ ಹನ್ನೊಂದು ರಕಅತ್'ಗಳನ್ನು ಪ್ರವಾದಿ [ಸ] ಫಜ್ರ್'ನ ಸುನ್ನತ್'ಗಳ ಹೊರತಾಗಿ ನಿರ್ವಹಿಸುತ್ತಿದ್ದರು.

[ಬುಖಾರಿ] 

ಲಂಚ

ಅಲ್ಲಾಹನ ರಸೂಲ್(ಸ.ಅ)ರು ಲಂಚ ಕೊಡುವ ಮತ್ತು ಲಂಚ ಪಡೆಯುವ (ಇಬ್ಬರನ್ನೂ) ಶಪಿಸಿರುವರು.

[ತಿರ್ಮಿದಿ]

ಗೋರಿ

ಇಬ್ನ್ ಅಬ್ಬಾಸ್(ರ) - ವರದಿ ಮಾಡಿದ್ದಾರೆ, ಅಲ್ಲಾಹನ ಪ್ರವಾದಿ(ಸ.ಅ)ರು ಗೋರಿಗಳನ್ನು ಸಂದರ್ಶಿಸುವ ಮಹಿಳೆಯರನ್ನು, ಅವುಗಳ ಮೇಲೆ ಮಸೀದಿಗಳನ್ನು ನಿರ್ಮಿಸುವವರನ್ನು ಮತ್ತು ಗೋರಿಗಳಲ್ಲಿ ದೀಪ ಬೆಳಗಿಸುವವರನ್ನು ಶಪಿಸಿರುವರು.

[ಅಬೂ ದಾವೂದ್, ತಿರ್ಮಿದಿ, ನಸಾಈ] 

ಸಲಾತ್

ಅಬೂ ಹುಮೈದ್ ಸ್ಸಾಇದೀ(ರ) ಅವರಿಂದ ವರದಿ, ನಾವು ಪ್ರವಾದಿ ವರ್ಯರಲ್ಲಿ ಈ ರೀತಿ ವಿಚಾರಿಸಿದೆವು-ಅಲ್ಲಾಹನ ಸಂದೇಶವಾಹಕರೇ! ನಾವು ತಮ್ಮ ಮೇಲೆ ಹೇಗೆ ಸಲಾತ್ ಹೆಳಬೇಕು? ಪ್ರವಾದಿ(ಸ.ಅ) ಹೇಳಿದರು:ಹೀಗೆಹೇಳಿರಿ,
'ಅಲ್ಲಾಹುಮ್ಮಸಲ್ಲಿಅಲಾ ಮುಹಮ್ಮದಿನ್ ವ ಅಝ್ ವಾಜಿಹೀ ವದುರ್ರಿಯ್ಯತಿಹೀ ಕಮಾ ಸಲ್ಲೈತ ಅಲಾ ಇಬ್ರಾಹೀಮ ವಬಾರಿಕ್ ಅಲಾ ಮುಹಮ್ಮದಿನ್ ವ ಅಝ್ ವಾಜಿಹೀ ವದುರ್ರಿಯ್ಯತಿಹೀ ಕಮಾ ಬಾರಕ್ತ ಅಲಾ ಇಬ್ರಾಹೀಮ ಇನ್ನಕ ಹಮೀದುಮ್ಮಜೀದ್.' (' ಓ ಅಲ್ಲಾಹ್!! ಮಹಮ್ಮದರ, ಅವರ ಪತ್ನಿಯರ ಮತ್ತು ಮಕ್ಕಳ ಮೇಲೆ ಕರುಣೆ ವರ್ಷಿಸು. ನೀನು ಇಬ್ರಾಹೀಮರ ಮೇಲೆ ಕರುಣೆ ವರ್ಷಿಸಿದಂತೆ ಮತ್ತು ಮುಹಮ್ಮದರ, ಅವರ ಪತ್ನಿಯರಮತ್ತು ಮಕ್ಕಳ ಮೇಲೆ ಅನುಗ್ರಹ ವರ್ಷಿಸು.ನೀನು ಇಬ್ರಾಹೀಮರ ಮೇಲೆ ವರ್ಷಿಸಿದಂತೆ. ಖಂಡಿತವಾಗಿಯೂ ನೀನು ಸ್ತುತ್ಯರ್ಹನೂ ಮಹಾನನೂ ಆಗಿರುವೆ'

[ಮುತಫಕುನ್ ಅಲೈಹಿ]

ಉಮ್ರಾ

ಅಬೂ ಹುರೈರಾ ವರದಿ ಮಾಡಿದ್ದಾರೆ, ಪ್ರವಾದಿ(ಸ.ಅ)ರು ಹೇಳಿದರು, ಒಂದು ಉಮ್ರಾ ಇನ್ನೊಂದು ಉಮ್ರಾದವರೆಗೆ ಅವುಗಳ ನಡುವಿನ ಪಾಪಗಳಿಗೆ ಪರಿಹಾರವಾಗಿದೆ. ಸ್ವೀಕಾರ ಯೋಗ್ಯ ಹಜ್ಜ್‌ಗೆ ಸ್ವರ್ಗವಲ್ಲದೆ ಬೇರೆ ಪ್ರತಿಫಲವಿಲ್ಲ.

[ಬುಖಾರಿ, ಮುಸ್ಲಿಮ್] 

ಪರೋಕ್ಷ ಕಾರ್ಯ

ಅಲ್ಲಾಹನ ರಸೂಲ್(ಸ.ಅ)ರು ಹೇಳಿದರು. "ಯಾರಾದರೂ ಪರೋಕ್ಷ ಕಾರ್ಯಗಳನ್ನು ಹೇಳಿಕೊಡುವವರನ್ನು ಸಮೀಪಿಸಿ ಅವನಲ್ಲಿ ಯಾವುದಾದರೂ ವಿಷಯದ ಬಗ್ಗೆ ವಿಚಾರಿಸಿದರೆ ಅವನ ನಲ್ವತ್ತು(40) ದಿವಸದ ನಮಾಝನ್ನು ಅಲ್ಲಾಹನು ಸ್ವೀಕರಿಸಲಾರನು."

[ಮುಸ್ಲಿಮ್] 

ಅಲ್ಲಾಹನು ದಾಸನನ್ನು ಅತೀವ ಇಷ್ಟ ಪಡುವನು

ಯಾವಾಗ ದಾಸನು ಅಲ್ಲಾಹನಲ್ಲಿ ದುಆ ಮಾಡಲು ತನ್ನ ಕೈ ಎತ್ತುವನೋ ಅಲ್ಲಾಹನು ದಾಸನನ್ನು ಅತೀವ ಇಷ್ಟ ಪಡುವನು.

(ತಿರ್ಮಿದಿ) 

ವಿದ್ಯಾರ್ಜನೆಗಾಗಿ ಮನೆಯಿಂದ ಹೊರಡುವವನು

ಪ್ರವಾದಿ ಮಹಮ್ಮದ್(ಸ.ಅ)ರು ಹೇಳಿದರು ಯಾರು ವಿದ್ಯಾರ್ಜನೆಗಾಗಿ ಮನೆಯಿಂದ ಹೊರಡುತ್ತಾನೋ ಅವನು ಹಿಂತಿರುಗಿ ಬರುವ ತನಕ ಅಲ್ಲಾಹನ ಮಾರ್ಗದಲ್ಲಿರುತ್ತಾನೆ.

[ತಿರ್ಮಿದಿ, ದಾರಿಮಿ]

ಪತಿ ಮತ್ತು ಪತ್ನಿ ನಮಾಝ್ ಮಾಡಲು ಪ್ರೋತ್ಸಹಿಸುವರು

ಅಬೂಹುರೈರಾ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ರಾತ್ರಿ ಎದ್ದು ನಮಾಝ್ ಮಾಡುವ ಮತ್ತು ಪತ್ನಿಯನ್ನೂ ನಮಾಝ್'ಗಾಗಿ ಎಬ್ಬಿಸುವ, ಅವಳೊಂದು ವೇಳೆ ಏಳದಿದ್ದರೆ ಅವಳ ಮುಖಕ್ಕೆ ನೀರು ಚುಮುಕಿಸಿ ಎಬ್ಬಿಸುವ ಮೇಲೆ ಅಲ್ಲಾಹನು ಕರುಣಿ ತೋರಲಿ. ರಾತ್ರಿ ಎದ್ದು ನಮಾಝ್ ಮಾಡುವ ಮತ್ತು ಪತ್ನಿಯನ್ನೂ ನಮಾಝ್'ಗಾಗಿ ಎಬ್ಬಿಸುವ, ಅವನೊಂದು ವೇಳೆ ಏಳದಿದ್ದರೆ ಅವನ ಮುಖಕ್ಕೆ ನೀರು ಚುಮುಕಿಸಿ ಎಬ್ಬಿಸುವ ಮೇಲೆ ಅಲ್ಲಾಹನು ಕರುಣಿ ತೋರಲಿ.  
[ಅಬೂ ದಾವೂದ್, ನಸಾಈ]  

ಅಲ್ಲಾಹನ ದ್ಸಿಕ್ರ್ ಮಾಡುವ – ಜೀವಂತ

ಪ್ರವಾದಿ(ಸ.ಅ)ರವರು ಹೇಳಿದರು; ಅಲ್ಲಾಹನ ದ್ಸಿಕ್ರ್ ಮಾಡುವ ಮತ್ತು ಅಲ್ಲಾಹನ ದ್ಸಿಕ್ರ್ ಮಾಡದ ಎರಡು ಹೃದಯಗಳ ನಡುವಿನ ತುಲನೆಯು ಹೀಗಿದೆ ಒಂದು ಜೀವಂತವಾಗಿದೆ ಮತ್ತೊಂದು ಮರಣ ಹೊಂದಿದೆ.

[ಬುಖಾರಿ]

ಒಬ್ಬರು ಸಸಂತೋಷ ಮಾಡುವಷ್ಟು ನಮಾಝ್ ಮಾಡಲಿ

ಅನಸ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ನಿಮ್ಮ ಪೈಕಿ ಒಬ್ಬರು ಸಸಂತೋಷ ಮಾಡುವಷ್ಟು ನಮಾಝ್ ಮಾಡಲಿ ಮತ್ತು ಸುಸ್ತಾಗಿ ಬಿಟ್ಟಾಗ ಕುಲಿತುಬಿಡಲಿ.     

[ಮುತ್ತಫಕುನ್ ಅಲೈಹಿ]

ವಿತ್ರ್ ನಮಾಝ್ ಮಾಡಿರಿ

ಇಬ್ನ್ ಉಮರ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಸುಬ್'ಹ್'ಗೆ (ಪ್ರಭಾತ) ಮುಂಚೆ ಬೇಗನೇ ವಿತ್ರ್ ನಮಾಝ್ ಮಾಡಿರಿ. 

[ಮುಸ್ಲಿಮ್]   

ಮಸೀದಿ

ಅಲ್ಲಾಹನ ರಸೂಲ್(ಸ.ಅ)ರು ಹೇಳಿದರು ಅಲ್ಲಾಹನ ಬಳಿ ಸ್ಥಳಗಳ ಪೈಕಿ ಅತ್ಯಂತ ಪ್ರಿಯವಾದ ಸ್ಥಳ ಮಸೀದಿಯಾಗಿದೆ ಮತ್ತು ಅಲ್ಲಾಹನ ಬಳಿ ಅತ್ಯಂತ ಅಪ್ರಿಯವಾದ ಸ್ಥಳ ಪೇಟೆಯಾಗಿದೆ.
[ಮುಸ್ಲಿಮ್]

ಒಂದು ದುಆ

ಪ್ರವಾದಿ(ಸ.ಅ)ರು ಹೇಳಿದರು- ಎಲ್ಲಾ ಅಂಬಿಯಾ(ಅ.ಸ)ಗಳಿಗೆ ಉತ್ತರ ನಿರಾಕರಿಸದ ಒಂದು ದುಆ ದೊರೆಯುತ್ತದೆ. ಎಲ್ಲಾ ಅಂಬಿಯಾ(ಅ.ಸ)ಗಳು ತಮ್ಮ ಜೀವಿತಕಾಲದಲ್ಲಿ ಆ ದುಆವನ್ನು ಉಪಯೋಗಿಸಿದ್ದಾರೆ. ಆದರೆ ನಾನು(ಸ.ಅ) ಆ ದುಆವನ್ನು ಉಪಯೋಗಿಸಿಲ್ಲ. ಯಾಕೆಂದರೆ ಪುನರುತ್ಥಾನದ ದಿನ ನಾನು(ಸ.ಅ) ಆ ದುಆವನ್ನು ಉಪಯೋಗಿಸಿ ಆ ವ್ಯಕ್ತಿಗಳಿಗೆ ಅಲ್ಲಾಹನ ಬಳಿ ಶಿಫಾರಸು ಮಾಡಲಿಕ್ಕಿರುವೆನು, ಯಾರು ಅಲ್ಲಾಹನೊಂದಿಗೆ ಆರಾಧನೆಯಲ್ಲಿ ಇತರರನ್ನು ಸಮಾನರನ್ನಾಗಿಸದೆ ಮರಣಹೊಂದಿರುವರೋ.
[ಬುಖಾರಿ, ಮುಸ್ಲಿಮ್]

ಮಧ್ಯ ರಾತ್ರಿಯ ನಮಾಝ್

ಅಬೂ ಹುರೈರಾ [ರ] ಅವರಿಂದ ವರದಿಯಾಗಿದೆ. ಪ್ರವಾದಿವರ್ಯರು [ಸ] ಹೀಗೆ ಹೇಳುವುದನ್ನು ನಾನು ಕೆಳಿದ್ದೇನೆ ಕಡ್ಡಾಯ ನಮಾಝ್'ಗಳ ನಂತರ ಅತ್ಯಂತ ಶ್ರೇಷ್ಠ ನಮಾಝ್ ಮಧ್ಯ ರಾತ್ರಿಯ ನಮಾಝ್ ಆಗಿದೆ. 

[ಅಹ್ಮದ್]    

ರಾತ್ರಿಯ ಅಂತಿಮ ಹಂತ

ಅಬೂ ಉಮಾಮ [ರ] ಅವರಿಂದ ವರದಿಯಾಗಿದೆ. ಅವರು ಪ್ರವಾದಿವರ್ಯರು [ಸ] ಹೀಗೆ ವಿಚಾರಿಸಿದರು - ಯಾವ ಪ್ರಾರ್ಥನೆ ಹೆಚ್ಚು ಸ್ವೀಕ್ರತವಾಗುತ್ತದೆ? ಪ್ರವಾದಿ [ಸ] ಹೇಳಿದರು - ದ ನಮಾಝ್'ಗಳ ನಂತರ. 

[ತಿರ್ಮಿದಿ]   

ಶ್ರೀಮಂತರ ಮೇಲೆ ಬಕ್ರೀದ್ ಕುರ್ಬಾನಿಯ ನಿರ್ಬಂಧತೆ

ಅಬೂ ಹುರೈರಾ(ರ.ಅ)ರವರು ಹೇಳುತ್ತಾರೆ, ಅಲ್ಲಾಹನ ರಸೂಲ್(ಸ.ಅ) ಹೇಳಿದರು; ಯಾವನಾದರೂ ಹಣ ಇರುವ ಶ್ರೀಮಂತ ಕುರ್ಬಾನಿ(ಪ್ರತೀ ವರ್ಷ) ಮಾಡುವುದಿಲ್ಲ ವಾದಲ್ಲಿ ಅವನು ನಮ್ಮ ಈದ್ ಗಾಹ್ ನ ಹತ್ತಿರ ಬರುವುದೇ ಬೇಡ.
[ಇಬ್ನು ಮಾಜಃ] 

ನಮಾಝ್

ಬುರೈದಾ(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು-ನಮ್ಮ ಮತ್ತು ಸತ್ಯನಿಶೇಧಿಗಳ ಮಧ್ಯೆ ಇರುವ ಒಡಂಬಡಿಕೆಯು ನಮಾಝ್ ಆಗಿದೆ. ಯಾರು ಅದನ್ನು ತೊರೆದನೋ ಅವನು ಕುಫ್ರ್(ಸತ್ಯನಿಶೇಧ) ಕೈ ಗೊಂಡನು.
(ಅಹ್ಮದ್, ತಿರ್ಮಿದಿ, ನಸಾಈ, ಇಬ್ನು ಮಾಜಃ) 

ಜನಾಬತ್ ಸ್ಥಿತಿಯಲ್ಲಿದ್ದಾಗ ಏನಾದರೂ ತಿನ್ನಲು ಬಯಸಿದರೆ

ಪ್ರವಾದಿ(ಸ.ಅ)ರು ಜನಾಬತ್ ಸ್ಥಿತಿಯಲ್ಲಿದ್ದಾಗ ಏನಾದರೂ ತಿನ್ನಲು ಅಥವಾ ಮಲಗಲು ಬಯಸಿದರೆ ನಮಾಝ್‌ಗೆ ವುಝೂ ಮಾಡುವಂತೆ ವುಝೂ ಮಾಡುತ್ತಿದ್ದರು.
[ಮುತ್ತಫಕುನ್ ಅಲೈಹಿ]

ನಿಮ್ಮ ಈಮಾನ್ ಪೂರ್ತಿಯಾಗದು

ಒಮ್ಮೆ ಉಮರ್(ರ)ರವರು ಪ್ರವಾದಿ(ಸ.ಅ)ರೊಂದಿಗೆ ಹೇಳಿದರು: ಓ ಅಲ್ಲಾಹನ ಸಂದೇಶವಾಹಕರೇ, ನನ್ನ ಸ್ವಶರೀರವನ್ನು ಹೊರತುಪಡಿಸಿದರೆ ಇತರ ಎಲ್ಲವುಗಳಿಗಿಂತಲೂ ನನಗೆ ಪ್ರೀತಿ ಪಾತ್ರರು ತಾವಾಗಿರುವಿರಿ. ಆಗ ಪ್ರವಾದಿ(ಸ.ಅ)ರು ಹೇಳಿದರು: ನನ್ನ ಆತ್ಮವು ಯಾರ ಕೈಯಲ್ಲಿದೆಯೋ ಅವನಾಣೆ! ನಿಮ್ಮ ಸ್ವಶರೀರಕ್ಕಿಂತಲೂ ಹೆಚ್ಚಾಗಿ ನೀವು ನನ್ನನ್ನು ಪ್ರೀತಿಸುವ ತನಕ ನಿಮ್ಮ ಈಮಾನ್ ಪೂರ್ತಿಯಾಗದು. ಆಗ ಉಮರ್(ರ)ರವರು ಪ್ರವಾದಿ(ಸ.ಅ)ರೊಂದಿಗೆ ಹೇಳಿದರು: ಅಲ್ಲಾಹನಾಣೆ ಖಂಡಿತವಾಗಿಯೂ ಈಗ(ಇನ್ನು ಮುಂದೆ) ನನ್ನ ಸ್ವಶರೀರಕ್ಕಿಂತಲೂ ಹೆಚ್ಚು ಪ್ರೀತಿ ಪಾತ್ರರು ತಾವಾಗಿರುವಿರಿ. ಆಗ ಪ್ರವಾದಿ(ಸ.ಅ)ರು ಹೇಳಿದರು: ಓ ಉಮರ್ ಈಗ ಸರಿಯಾಯಿತು.(ಅರ್ಥಾತ್ ತಮ್ಮ ಈಮಾನ್ ಪರಿಪೂರ್ಣವಾಯಿತು.)
[ಬುಖಾರಿ]

ಸತ್ಯ ನಿಷೇಧಿಗಳಲ್ಲಿ ಒಳಗೊಂಡವನಾಗಿರುವನು

ಪ್ರವಾದಿ(ಸ.ಅ)ರು ಹೇಳುತ್ತಾರೆ: ಯಾರು ನಮ್ಮ ಧರ್ಮದಲ್ಲಿ ಸ್ವತಃ ತಾನಾಗಿಯೇ ಯಾವುದಾದರೂ ಹೊಸ ಕಾರ್ಯಗಳು ಶುರುಮಾಡಿಕೊಂಡರೆ, ಆ ಕಾರ್ಯ ನಾನು ಮತ್ತು ನನ್ನ ಸಹಾಬಾಗಳು ಮಾಡಿದಂತಹ ಕಾರ್ಯ ವಾಗಿಲ್ಲದಿದ್ದರೆ, ಆ ವ್ಯಕ್ತಿ ಸತ್ಯ ನಿಷೇಧಿಗಳಲ್ಲಿ ಒಳಗೊಂಡವನಾಗಿರುವನು. ಮತ್ತು ಧರ್ಮದಲ್ಲಿ ಎಲ್ಲಾ ಹೊಸ ಕಾರ್ಯಗಳು ಬಿದ್‌ಅತ್‌ಆಗಿದೆ. ಬಿದ್‌ಅತ್‌ಗಳೆಲ್ಲವೂ ಕೂಡ ಕೆಟ್ಟ ಕೆಲಸವಾಗಿದೆ. ಕೆಟ್ಟ ಕೆಲಸಗಳೆಲ್ಲವೂ ನರಕಕ್ಕೇ ಕೊಂಡು ಹೋಗುವಂತದ್ದಾಗಿದೆ.
[ಬುಖಾರಿ, ಮುಸ್ಲಿಮ್]

ಇಂತಿಂತಹ ವ್ಯಕ್ತಿ ನಿನಾಗಬಾರದು

ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ [ರ] ಅವರಿಂದ ವರದಿಯಾಗಿದೆ. ಪ್ರವಾದಿವರ್ಯರು [ಸ] ನನ್ನನ್ನುದ್ದೇಶಿಸಿ ಹೀಗೆ ಹೇಳಿದರು - ಅಬ್ದುಲ್ಲಾ! ಇಂತಿಂತಹ ವ್ಯಕ್ತಿಯಂತೆ ನಿನಾಗಬಾರದು. ಆತ ರಾತ್ರಿ ನಮಾಝ್ ಮಾಡುತ್ತಿದ್ದನು. ಈಗ ಆತ ಅದನ್ನು ತೊರೆದಿರುವನು. 

[ಮುತ್ತಫಕುನ್ ಅಲೈಹಿ]

13 ರಕಅತ್ ನಮಾಝ್ ನಿರ್ವಹಿಸುತ್ತಿದ್ದರು

ಆಯಿಶಾ [ರ] ಅವರಿಂದ ವರದಿಯಾಗಿದೆ. ಪ್ರವಾದಿವರ್ಯರು [ಸ] ರಾತ್ರಿ 13 ರಕಅತ್ ನಮಾಝ್ ನಿರ್ವಹಿಸುತ್ತಿದ್ದರು. ಐದು ರಕಅತ್ ವಿತ್ರ್ [ಬೆಸ ಸಂಖ್ಯೆ] ಆಗಿ ನಿರ್ವಹಿಸುತ್ತಿದ್ದರು. ಅದರ ಕೊನೆಯ ರಕಅತ್'ನಲ್ಲಿ ಮಾತ್ರ ಕುಳಿತು ಕೊಳ್ಳುತ್ತಿದ್ದರು. 

[ಮುತ್ತಫಕುನ್ ಅಲೈಹಿ]

ಎರಡು ಲಘುವಾದ ರಕಅತ್'ಗಳಿಂದ ಆರಂಬಿಸುತ್ತಿದ್ದರು

ಆಯಿಶಾ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ರಾತ್ರಿನಮಾಝ್'ಗೆ ನಿಂತಾಗ (ತಹಜ್ಜುದ್ ಆರಂಬಿಸುವಾಗ) ತಮ್ಮ ನಮಾಝ್'ನ್ನು ಎರಡು ಲಘುವಾದ ರಕಅತ್'ಗಳಿಂದ ಆರಂಬಿಸುತ್ತಿದ್ದರು.        

[ಮುಸ್ಲಿಮ್]

ರಾತ್ರಿಯ ಕಿರಾಅತ್

ಅಬೂ ಹುರೈರಾ (ರ) ಅವರಿಂದ ವರದಿಯಾಗಿದೆ, ಪ್ರವಾದಿ(ಸ) ರಾತ್ರಿಯ ಕಿರಾಅತ್ (ಕುರಾನ್ ಪಟನ) ಕೆಲವೂಮ್ಮೆ ಉನ್ನತ ಸ್ವರದಲ್ಲಿ ಮತ್ತು ಇನ್ನು ಕೆಲವೊಮ್ಮೆ ಮೇಲುದನಿಯಲ್ಲಿ ಇರುತ್ತಿತ್ತು. 
[ಅಬೂ ದಾವೂದ್]  

ನಿರಂತರವಾಗಿ ಮಾಡುವ - ಸತ್ಕರ್ಮ

ಮಸ್ರೂಕ್ [ರ] ಅವರಿಂದ ವರದಿಯಾಗಿದೆ. ನಾನು ಆಯಿಶಾ [ರ] ಈ ರೀತಿ ವಿಚಾರಿಸಿದೆ - ಪ್ರವಾದಿವರ್ಯರಿಗೆ [ಸ] ಯಾವ ಕರ್ಮವು ಹೆಚ್ಚು ಪ್ರಿಯವಾಗಿದೆ? ಆಯಿಶಾ [ರ] ಹೇಳಿದರು - ಒಂದು ಸತ್ಕರ್ಮವನ್ನು ನಿರಂತರವಾಗಿ ಮಾಡುವುದು. ನಾನು ಕೇಳಿದೆ - ಪ್ರವಾದಿವರ್ಯರು [ಸ] ರಾತ್ರಿ ತಹಜ್ಜುದ್'ಗೆ ಯಾವ ಸಮಯದಲ್ಲಿ ನಿಲ್ಲುತ್ತಿದ್ದರು? ಆಯಿಶಾ [ರ] ಹೇಳಿದರು - ಅವರು ಕೋಳಿಯ ಕೂಗು ಕೇಳಿದಾಗ ನಿಲ್ಲುತ್ತಿದ್ದರು. 

[ಮುತ್ತಫಕುನ್ ಅಲೈಹಿ] 

ಫಜ್ರ್ ನಮಾಝ್

ಆಯಿಶಾ [ರ] ಅವರಿಂದ ವರದಿಯಾಗಿದೆ. ಪ್ರವಾದಿವರ್ಯರು [ರ] ಫಜ್ರ್'ನ ಎರಡು ರಕಅತ್'ಗಿಂತ ಹೆಚ್ಚು ಯಾವ ಐಚ್ಚಿಕ ನಮಾಝ್'ನ್ನು ಪಾಲಿಸುತ್ತಿರಲಿಲ್ಲ.   
[ಮುತ್ತಫಕುನ್ ಅಲೈಹಿ]  

ಅದು ಸುನ್ನತ್ ಎಂದು ತಿಲಿಯದರಲಿ

ಅಬ್ದುಲ್ಲಾ ಬಿನ್ ಮುಗಫ್ಫಲ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಮುಗ್ರಿಬ್ ನಮಾಝ್'ಗಿಂತ ಮುಂಚೆ ಎರಡು ರಕಅತ್ ನಮಾಝ್ ಮಾಡಿರಿ. ಮೂರನೆಯ ಸಲ ಜನರು ಅದನ್ನು ಸುನ್ನತ್ ಎಂದು ತಿಲಿಯದರಲಿ ಎಂದು ಹೀಗೆ ಹೇಳಿದರು ಬಯಸುವವರು. 
[ಮುತ್ತಫಕುನ್ ಅಲೈಹಿ]

ಆಕಾಶ ತೆರೆಯುವ ಸಮಯ

ಅಬ್ದುಲ್ಲಾ ಬಿನ್ ಸಾಇಬ್ [ರ] ಅವರಿಂದ ವರದಿಯಾಗಿದೆ. ಪ್ರವಾದಿವರ್ಯರು [ಸ] ಮಧ್ಯಾಹ್ನ ಸೂರ್ಯ ಇಳಿಮುಖವಾದಾಗ ಝುಹುರ್'ಗಿಂತ ಮುಂಚೆ ನಾಲ್ಕು ರಕಅತ್ ನಮಾಝ್ ಮಾಡಿ ಹೀಗೆ ಹೇಳುತ್ತಿದ್ದರು - ಇದು ಆಕಾಶ  ತೆರೆಯುವ ಸಮಯವಾದುದರಿಂದ ನನ್ನ ಸತ್ಕರ್ಮ ಅದರಲ್ಲಿ ಏರಲಿ ಎಂದು ನಾನು ಇಷ್ಟಪಡುತ್ತೇನೆ.  
[ತಿರ್ಮಿದಿ] 

ಅಲ್ಲಾಹನನ್ನು ಸ್ಮರಿಸುವವರಲ್ಲಿ ಸೇರು

ಅಮ್ರ್ ಬಿನ್ ಅಬಸ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಪ್ರಭುವು ತನ್ನ ದಾಸನಿಗೆ ರಾತ್ರಿಯ ಅಂತಿಮ ಹಂತದ ಮಧ್ಯಮ ಘಳಿಗೆಗಳಲ್ಲಿ ಬಹಳ ನಿಕಟವಾಗುತ್ತಾನೆ. ನಿನಗೆ ಸಾಧ್ಯವಿದ್ದರೆ ಆ ಸಮಯದಲ್ಲಿ ಅಲ್ಲಾಹನನ್ನು ಸ್ಮರಿಸುವವರಲ್ಲಿ ಸೇರು.

[ತಿರ್ಮಿದಿ] 

ಪ್ರತಿಯೊಂದು ರಾತ್ರಿಯಲ್ಲೂ ಇದೆ

ಜಾಬಿರ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ ರಾತ್ರಿಯಲ್ಲಿ ಒಂದು ಘಳಿಗೆಯಿದೆ. ಅದು ಒಬ್ಬ ಮುಸ್ಲಿಮನಿಗೆ ದೊರೆತು, ಅದರಲ್ಲಿ ಅವನು ಅಲ್ಲಾಹನಲ್ಲಿ ಇಹಲೋಕದ ಅಥವಾ ಪರಲೋಕದ ಯಾವುದೇ ಒಳಿತನ್ನು ಯಾಚಿಸಿದರೆ ಅಲ್ಲಾಹನು ಅವನಿಗೆ ಅದನ್ನು ದಯಪಾಲಿಸದೆ ಇರುವುದಿಲ್ಲ. ಈ ಘಳಿಗೆ ಪ್ರತಿಯೊಂದು ರಾತ್ರಿಯಲ್ಲೂ ಇದೆ. 
[ಮುಸ್ಲಿಮ್]


ಪ್ರಾರ್ಥನೆಗೆ ಉತ್ತರಿಸುವೆನು

ಅಬೂಹುರೈರಾ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ನಮ್ಮ ಮಂಗಳಮಯನೂ ಸರ್ವೋನ್ನತನೂ ಆದ ಪ್ರಭು ಮೂರನೆಯ ಒಂದು ರಾತ್ರಿ ಉಳಿದಿರುವಾಗ ಭೂಮಿಯ ಆಕಾಶದ ಕಡೆಗೆ ಇಳಿಯುತ್ತಾನೆ. "ಯಾರು ನನ್ನಲ್ಲಿ ಪ್ರಾರ್ಥಿಸುತ್ತಾನೆ, ನಾನು ಅವನ ಪ್ರಾರ್ಥನೆಗೆ ಉತ್ತರಿಸುವೆನು. ಯಾರು ನನ್ನಲ್ಲಿ ಬೇಡುತ್ತಾನೆ, ನಾನು ಅವನಿಗೆ ನೀಡುವೆನು. ಯಾರು ನನ್ನ ಕ್ಷಮೆ ಯಾಚಿಸುತ್ತಾನೆ, ನಾನು ಅವನನ್ನು ಕ್ಷಮಿಸುವೆನು" ಎಂದು ಹೇಳುತ್ತಾರೆ. 

[ಮುತ್ತಫಕುನ್ ಅಲೈಹಿ] 

ಧರ್ಮವು ಸುಲಭವಾಗಿದೆ

ಅಬೂಹುರೈರಾ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಖಂಡಿತವಾಗಿಯೂ ಧರ್ಮವು ಸುಲಭವಾಗಿದೆ. ಯಾರು ಧರ್ಮದ ಕಟಿಣತೆಯನ್ನುಂಟು ಮಾಡುತ್ತಾನೋ, ಅದು ಅವನನ್ನು ಸೋಲಿಸುತ್ತದೆ. ಆದ್ದರಿಂದ ಸಂತುಲಿತನಾಗಿ ವರ್ತಿಸಿರಿ. ನಿಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ಕೆಲಸ ಮಾಡಿರಿ. ಬೆಳ್ಳಗ್ಗೆ, ಸಂಜೆ ಮತ್ತು ರಾತ್ರಿಯ ಕೊನೆಯ ಭಾಗದ ಕೆಲವು ಕ್ಷಣಗಳಲ್ಲಿ ಶುಭ ಕೋರಿರಿ ಮತ್ತು ಸಹಾಯ ಯಾಚಿಸಿರಿ. 

[ಬುಖಾರಿ]  

ಕರ್ಮಗಳ ಪೈಕಿ ಅತ್ಯಂತ ಪ್ರಿಯಾವಾದ ಕರ್ಮ

ಆಯಿಶಾ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಅಲ್ಲಾಹನ ಬಳಿ ಕರ್ಮಗಳ ಪೈಕಿ ಅತ್ಯಂತ ಪ್ರಿಯಾವಾದ ಕರ್ಮ ನಿತ್ಯ ಅನುಷ್ಠಾನ ಮಾಡುವ ಕರ್ಮವಾಗಿದೆ. ಅದು ಕಡಿಮೆಯಾಗಿದ್ದರೂ ಸರಿಯೆ. 
[ಮುತ್ತಫಕುನ್ ಅಲೈಹಿ]

ರಾತ್ರಿಯ ಕೊನೆಯ ನಮಾಝ್

ಇಬ್ನ್ ಉಮರ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ರಾತ್ರಿಯ ವೇಳೆ ವಿತ್ರ್'ನ್ನು ನಿಮ್ಮ ಕೊನೆಯ ನಮಾಝ್ ಆಗಿ ಮಾಡಿರಿ.  

[ಮುಸ್ಲಿಮ್]     

ವಿತ್ರ್ ನಮಾಝ್

ಇಬ್ನ್ ಉಮರ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ರಾತ್ರಿಯ ನಮಾಝ್ ಎರಡೆರಡು ರಕಅತ್ ಆಗಿದೆ. ಇನ್ನು ನಿಮ್ಮ ಪೈಕಿ ಯಾರಿಗಾದರೂ ಸುಬಹ್ ಆಗುವುದೆಂದು ಭಯವಾದರೆ ಒಂದು ರಕಅತ್ ನಿರ್ವಹಿಸಲಿ. ಅದು ಅವನು ಮಾಡಿದ ನಮಾಝ್'ನ್ನು ವಿತ್ರ್ [ಬೆಸ ಸಂಖ್ಯೆ] ಮಾಡುವನು. 
[ಮುತ್ತಫಕುನ್ ಅಲೈಹಿ]  

ಪ್ರವಾದಿ [ಸ] ಹೇಳಿದರು: ರಾತ್ರಿಯ ವೇಳೆ ವಿತ್ರನ್ನು ನಿಮ್ಮ ಕೊನೆಯ ನಮಾಝ್ ಆಗಿ ಮಾಡಿರಿ. [ವರದಿ: ಇಬ್ನು ಉಮರ್ (ರ)] 
[ಸಹೀಹ್ ಮುಸ್ಲಿಮ್]

ಪ್ರವಾದಿ [ಸ] ರಾತ್ರಿಯ ಎಲ್ಲಾ ಭಾಗಗಳಲ್ಲಿ ವಿತ್ರ್ ನಮಾಝ್ ನಿರ್ವಹಿಸಿದ್ದಾರೆ. ರಾತ್ರಿಯ ಮೊದಲ ಭಾಗದಲ್ಲಿ, ರಾತ್ರಿಯ ಕೊನೆಯ ಭಾಗದಲ್ಲಿ ಮತ್ತು ತಮ್ಮ ಕೊನೆಯ ವಯಸ್ಸಿನಲ್ಲಿ ರಾತ್ರಿಯ ಅಂತಿಮ ಭಾಗದಲ್ಲಿ ವಿತ್ರ್ ನಿರ್ವಹಿಸಿದ್ದರು. [ವರದಿ: ಆಯಿಷಾ (ರ)] 
[ಬುಖಾರಿ, ಮುಸ್ಲಿಮ್]

ಸುನ್ನತ್ ನಮಾಝ್

ಜಾಬಿರ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ನಿಮ್ಮ ಪೈಕಿ ಯಾರಾದರೂ ಮಸೀದಿಯಲ್ಲಿ ನಮಾಝ್ ಮಾಡಿದರೆ, ತನ್ನ ನಮಾಝ್'ನ ಸ್ವಲ್ಪ ಭಾಗವನ್ನು ಮನೆಗಾಗಿ ಕಾದಿರಿಸಬೇಕು. ಅವನ ನಮಾಝ್'ನ ಕಾರಣ ಅಲ್ಲಾಹನು ಆ ಮನೆಯಲ್ಲಿ ಒಳಿತನ್ನು ಉಂಟು ಮಾಡುವನು. 

[ಮುಸ್ಲಿಮ್]  

ಜುಮುಅದ ಸಮಯ

ಹ. ಅಬೂ ಬುರ್ದಾ ಬಿನ್ ಅಬೂ ಮೂಸಾ [ರ] ಅವರಿಂದ ವರದಿಯಾಗಿದೆ. ನಾನು ನನ್ನ ತಂದೆಯವರು ಹೀಗೆ ಹೇಳುವುದನ್ನು ಕೇಳಿರುವೆನು - ಜುಮುಅದ ಸಮಯದ ಕುರಿತು ಪ್ರವಾದಿ [ಸ] ಹೇಳಿದರು - ಅದು ಇಮಾಮ್ ಕುಳಿತುಕೊಳ್ಳುವುದರಿಂದ (ವೇದಿಕೆಯ ಮೇಲೆ) ನಮಾಝ್ ನಿರ್ವಹಿಸಿ ಆಗುವ ತನಕ ಇದೆ. 

[ಮುಸ್ಲಿಮ್]    

ಅತ್ಯುತ್ತಮ ದಿನ

ಅಬೂಹುರೈರಾ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಸೂರ್ಯ ಉದಿಸಿದ ದಿನಗಳ ಪೈಕಿ ಅತ್ಯುತ್ತಮ ದಿನ ಜುಮುಅ [ಶುಕ್ರವಾರ) ಆಗಿದೆ. ಅಂದು ಆದಮ್ [ಅ] ಸ್ರಷ್ಟಿಯಾದರು. ಅಂದು ಸ್ವರ್ಗಕ್ಕೆ ಪ್ರವೇಶಿಸಲ್ಪಟ್ಟರು. ಅಂದೇ ಸ್ವರ್ಗದಿಂದ ಹೊರಹಾಕಲ್ಪಟ್ಟರು. ಶುಕ್ರವಾರ ದಿನವೇ ಕಿಯಾಮತ್ (ಪುನರುತ್ಥಾನ) ಸ್ಥಾಪಿತವಾಗುವುದು.

[ಮುಸ್ಲಿಮ್]   

ಸ್ಥಳವನ್ನು ಬದಲ್ಲಯಿಸಲಿ

ಇಬ್ನ್ ಉಮರ್'ರಿಂದ [ರ] ವರದಿಯಾಗಿದೆ. ನಿಮ್ಮ ಪೈಕಿ ಯಾರಾದರೂ ಜುಮುಅ ದಿವಸ ತೂಕಡಿಸಿದರೆ ಅವನು ನನ್ನ ಸ್ಥಳವನ್ನು ಬದಲ್ಲಯಿಸಲಿ. 

[ತಿರ್ಮಿದಿ]

ಜುಮುಅ

ತಾರಿಕ್ ಬಿನ್ ಶಿಹಾಬ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಜುಮುಅ ಪ್ರತಿಯೊಬ್ಬ ಮುಸ್ಲಿಮನ ಮೇಲೆ ಜಮಾಅತ್ ಸಹಿತ ಹಕ್ಕು ಮತ್ತು ಕಡ್ಡಾಯವಾಗಿದೆ. ನಾಲ್ಕು ವಿಧದ ಜನರ ಹೊರತು. ಇತರರ ಒಡೆತನದಲ್ಲಿರುವ ಗುಲಾಮನ ಮೇಲೆ, ಮಹಿಳೆಯ ಮೇಲೆ, ಮಕ್ಕಳ ಮೇಲೆ ಮತ್ತು ಹೋಗಿಯ ಮೇಲೆ. 

[ಅಬೂ ದಾವೂದ್]  

ಸದಾ ಹಿಂದೆ ಇರುವ ವ್ಯಕ್ತಿ

ಸಮ್ರ್ ಬಿನ್ ಜುಂದುಬ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಖುತ್'ಬಾದ ವೇಳೆ ಹಾಜರಾಗಿ ಇಮಾಮರ ಸಮೀಪ ಕುಳಿತು ಕೊಳ್ಳಿರಿ. ಏಕೆಂದರೆ ಸದಾ ಹಿಂದೆ ಇರುವ ವ್ಯಕ್ತಿ ಸ್ವರ್ಗದಲ್ಲೂ ಹಿಂದೆ ಬೀಳುವನು ಅವನು ಅದರ ಪ್ರವೇಶ ಪಡೆದರೂ.

[ಅಬೂ ದಾವೂದ್]

ಖುತ್ಬಾ ನೀಡುವಾಗ ಸುಮ್ಮನ್ನಿರಬೇಕು

ಅಬೂಹುರೈರಾ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಇಮಾಮ್ ಖುತ್ಬಾ (ಪ್ರವಚನ) ನೀಡುತ್ತಿರುವಾಗ ನೀನು ನನ್ನ ಬಲಿ ಕುಳಿತು ಕೊಂಡವನಿಗೆ "ಸುಮ್ಮನಿರು" ಎಂದು ಹೇಳಿದರು ಕೂಡಾ ನೀನು ನಿರರ್ಥಕ ಕಾರ್ಯವಾಗಿದೆ.     

[ಮುತ್ತಫಕುನ್ ಅಲೈಹಿ]

ಶುಕ್ರವಾರದ ದಿನ

ಅಬೂಹುರೈರಾ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಶುಕ್ರವಾರದ ದಿನವಾದರೆ ಮಲಕ್'ಗಳು ಮಸೀದಿಯ ಬಾಗಿಲಲ್ಲಿ ನಿಂತು ಹೊಳ್ಳುತ್ತಾರೆ. ಅವರು ಮೊದಲು ಬರುವವರನ್ನು ಬರೆಯುತ್ತಾರೆ. ಪ್ರಥಮವಾಗಿ ಬಂದವರ ಉದಾಹರಣೆ ಒಂಟೆಯನ್ನು ಬಲಿ ನೀಡಿದವನಂತಿದೆ. ಅನಂತರ ಬಂದವನು ಹಸುವನ್ನು ಬಲಿ ನೀಡಿದವನಂತಿದೆ. ಆ ಬಳಿಕ ಬಂದವನು ಆಡನ್ನು ಬಲಿ ನೀಡಿದಂತೆ.  ಅನಂತರ ಬಂದವನು ಕೋಳಿಯನ್ನು ಬಲಿ ನೀಡಿದಂತೆ. ಅನಂತರ ಬಂದವನು ಕೋಳಿಯ ಮೊಟ್ಟೆ ದಾನ ನೀಡಿದಂತೆ. ಇಮಾಮ್ (ವೇದಿಕೆಯೇರಲು) ಹೊರಟಾಗ ಅವರು ತಮ್ಮ ಕಡತವನ್ನು ಮಡಚಿ ಪ್ರವಚನವನ್ನು ಆಲಿಸುತಾರೆ. 

[ಮುತ್ತಫಕುನ್ ಅಲೈಹಿ]

ಜುಮುಅ ತೊರೆಯುವುದು

ಹ. ಇಬ್ನ್ ಉಮರ್ ಮತ್ತು ಅಬೂ ಹುರೈರಾ [ರ] ಅವರಿಂದ ವರದಿಯಾಗಿದೆ. ಪ್ರವಾದಿವರ್ಯರು [ಸ] ಈ ವೇದಿಕೆಯ ಹಲಗೆಯ ಮೇಲಿನಿಂದ ಹೇಳಿರುವುದನ್ನು ನಾವು ಕೇಳಿರುವೆವು - ಒಂದೋ ಜನಾಂಗಗಳು ತಮ್ಮ ಜುಮುಅವನ್ನು ತೊರೆಯುವುದನ್ನು ಬಿಟ್ಟು ಬಿಡುವರು ಅನ್ಯಥಾ ಅಲ್ಲಾಹನು ಅವರ ಹ್ರದಯಗಳಿಗೆ ಮುದ್ರೆಯೊತ್ತಿ ಬಿಡುವನು. ಆ ಬಳಿಕ ಅವರು ಅಲಕ್ಷ್ಯರಾಗಿ ಬಿಡುವರು. 

[ಮುಸ್ಲಿಮ್]

ಜಾಣ್ಮೆಯ ಸಂಕೇತ

ಅಮ್ಮಾರ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಈ ರೀತಿ ಹೇಳಿರುವುದನ್ನು ನಾನು ಕೇಳಿದ್ದೇನೆ - ಒಬ್ಬ ವ್ಯಕ್ತಿ ದೀರ್ಘ ನಮಾಝ್ ಮಾಡಿ ಸಂಕ್ಷಿಪ್ತ ಖುತ್'ಬ ಮಾಡುವುದು ಅವನ ಜಾಣ್ಮೆಯ ಸಂಕೇತವಾಗಿದೆ. ಆದ್ದರಿಂದ ನಮಾಝ್'ನ್ನು ದೀರ್ಘ ಗೊಳಿಸಿರಿ ಮತ್ತು ಖುತ್'ಬಾವನ್ನು ಸಂಕ್ಷಿಪ್ತಗೊಳಿಸಿರಿ. ಖಂಡಿತ ಕೆಲವು ಭಾಷಣಗಳು ಮಾಂತ್ರಿಕವಾಗಿರುತ್ತವೆ. 

[ಮುಸ್ಲಿಮ್]

ಜುಮುಅದ ನಮಾಝ್

ಜಾಬಿರ್ ಬಿನ್ ಸಮ್ರ [ರ] ಅವರಿಂದ ವರದಿಯಾಗಿದೆ. ಪ್ರವಾದಿವರ್ಯರ [ಸ] ಎರಡು ಖುತುಬಾಗಳು ಇರುತ್ತಿದ್ದುವು. ಅವುಗಳ ಮಧ್ಯೆ ಕುಳಿತು ಕೊಳ್ಳುತ್ತಿದ್ದರು. ಕುರಾನ್ ಪಟಿಸುತ್ತಿದ್ದರು ಮತ್ತು ಜನರಿಗೆ ಉಪದೇಶ ಮಾಡುತ್ತಿದ್ದರು. ಪ್ರವಾದಿವರ್ಯರ [ಸ] ನಮಾಝ್ ಮಧ್ಯಮ ತರದ್ದಾಗಿತ್ತು ಮತ್ತು ಅವರ ಖುತುಬಾ ಕೂಡಾ ಮಧ್ಯಮ ತರದ್ದಾಗಿತ್ತು. 

[ಮುಸ್ಲಿಮ್] 

ದೊಡ್ಡ ಪುಣ್ಯ ಸಿಗದೇ ಹೋಯಿತು

ಅಬೂ ಹುರೈರಾ [ರ] ಅವರಿಂದ ವರದಿಯಾಗಿದೆ. ಯಾರಿಗೆ ಸಿಕ್ಕಿತೋ ಅವನಿಗೆ ಖಂಡಿತ ರಕ್ಅತ್ ಸಿಕ್ಕಿತು. ಯಾರಿಗೆ ಫಾತಿಹಾ ಓದಲು ಸಿಗಲಿಲ್ಲವೋ ಖಂಡಿತ ಅವನಿಗೆ ದೊಡ್ಡ ಪುಣ್ಯ ಸಿಗದೇ ಹೋಯಿತು.

[ಮಲಿಕ್]  

ಇಮಾಮನ್ನು ಅನುಸರಿಸಿ

ಅನಸ್ [ರ] ಅವರಿಂದ ವರದಿಯಾಗಿದೆ. ಒಂದು ದಿನ ಪ್ರವಾದಿವರ್ಯರು [ಸ] ನಮಗೆ ನಮಾಝ್ ಮಾಡಿಸಿದರು. ಅವರು [ಸ] ತಮ್ಮ ನಮಾಝ್'ನ್ನು ಪೂರ್ಣಗೊಳಿಸಿದ ನಂತರ ನಮ್ಮ ಕಡೆಗೆ ತಿರುಗಿ ಹೀಗೆ ಹೇಳಿದರು - ಜನರೇ! ನಾನು ನಿಮ್ಮ ಇಮಾಮ್ ಆಗಿದ್ದೇನೆ. ಆದ್ದರಿಂದ ನೀವು ರುಕೂಹ್'ನಲ್ಲಿ, ಸುಜೂದ್'ನಲ್ಲಿ, ನಿಲ್ಲುವಕೆಯಲ್ಲಿ ಮತ್ತು ತಿರುಗುವಿಕೆಯಲ್ಲಿ ನನಗಿಂತ ಮುಂದುವರಿಯದಿರಿ. ನಾನು ನಿಮ್ಮನ್ನು ನನ್ನ ಮುಂದಿನಿಂದಲೂ ಹಿಂದಿನಿಂದಲೂ ನೋಡುತ್ತೇನೆ.

[ಮುಸ್ಲಿಮ್]  

ನಿಫಾಕ್'ನಿಂದ ಮುಕ್ತಿ

ಅನಸ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಯಾರು ಅಲ್ಲಾಹನಿಗಾಗಿ ನಲ್ವತ್ತು ದಿನ "ತಕ್'ಬೀರ್ ತಹ್ರೀಮದ ಜತೆ ಜಮಾಅತ್'ನಲ್ಲಿ ನಮಾಝ್ ಮಾಡಿದನೋ, ಅವನಿಗೆ ಎರಡು ಮುಕ್ತಿಗಳನ್ನು ಬರೆಯಲಾಗುತ್ತದೆ. ಒಂದು ನರಕದ ಅಗ್ನಿಯಿಂದ ಮುಕ್ತಿ. ಮತ್ತೊಂದು ನಿಫಾಕ್ (ಕಾಪಟ್ಯ)ನಿಂದ ಮುಕ್ತಿ. 
 [ತಿರ್ಮಿದಿ]   

ಜಮಾಅತ್ ನಮಾಝ್ ಪ್ರತಿಫಲ

ಅಬೂ ಹುರೈರಾ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಒಬ್ಬನು ಚೆನ್ನಾಗಿ ವುಝೂ ಮಾಡಿ ನಮಾಝ್'ಗಾಗಿ ಹೋದಾಗ ಜನರು ನಮಾಝ್ ಮಾಡಿ ಮುಗಿಸಿದ್ದಾರೆ ಅವನಿಗೂ ಅಲ್ಲಾಹನು ಜಮಾಅತ್ ಸಹಿತ ನಮಾಝ್ ಮಾಡಿದವನಿಗೆ ಕೊಡುವ ಪ್ರತಿಫಲವನ್ನೇ ಕೊಡುತ್ತಾನೆ. ಅದರಿಂದ ಅವರ ಪುಣ್ಯಗಳಲ್ಲಿ ಯಾವುದೇ ಕಡಿತ ಉಂಟಾಗುವುದಿಲ್ಲ. 

[ಅಬೂ ದಾವೂದ್, ನಸಾಈ]  

ಪರಿಪೂರ್ಣವಾದ ನಮಾಝ್

ಅನಸ್ [ರ] ಅವರಿಂದ ವರದಿಯಾಗಿದೆ. ನಾನು ಪ್ರವಾದಿವರ್ಯರಿಗಿಂತ [ಸ] ಲಘುವಾದ ಮತ್ತು ಅವರಿಗಿಂತ ಪರಿಪೂರ್ಣವಾದ ನಮಾಝ್'ನ್ನು ಯಾವ ಇಮಾಮ್'ನ ಹಿಂದೆಯೂ ಮಾಡಲಿಲ್ಲ. ಅವರು [ಸ] ಮಗುವಿನ ಅಳು ಕೇಳುತ್ತಲೇ, ಅದರ ತಾಯಿಯ ಕಷ್ಟ ಭಯದಿಂದ ನಮಾಝ್'ನ್ನು ಹ್ರಸ್ವಗೊಳಿಸುತ್ತಿದ್ದರು. 

[ಮುತ್ತಫಕುನ್ ಅಲೈಹಿ

ಸ್ವಂತ ಮಾಡುವ ನಮಾಝ್ ಧೀರ್ಘಗೊಳಿಸಲಿ

ಅಬೂ ಹುರೈರಾ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ನಿಮ್ಮ ಪೈಕಿ ಯಾರಾದರೂ ಜನರಿಗೆ ನಮಾಝ್ ಮಾಡಿಸುವಾಗ ಆತ ನಮಾಝನ್ನು ಹ್ರಸ್ವಗೊಳಿಸಲಿ. ಏಕೆಂದರೆ ಅವರಲ್ಲಿ ರೋಗಿಗಳು, ಬಲಹೀನರು ಮತ್ತು ಮುದುಕರಿದ್ದಾರೆ. ನಿಮ್ಮ ಪೈಕಿ ಯಾರಾದರೂ ತಾನಾಗಿಯೇ ನಮಾಝ್ ಮಾಡಿದರೆ ಅವನು ಬಯಸುವಷ್ಟು ಅದನ್ನು ಧೀರ್ಘಗೊಳಿಸಲಿ.

[ಮುತ್ತಫಕುನ್ ಅಲೈಹಿ]

ಉತ್ತಮವಾಗಿ ನಮಾಝ್ ಮಾಡಿಸಿದರೆ

ಅಬೂ ಹುರೈರಾ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಇಮಾಮರು ನಿಮಗೆ ನಮಾಝ್ ನಮಾಝ್ ಮಾಡಿಸುವರು. ಅವರು ಉತ್ತಮವಾಗಿ ನಮಾಝ್ ಮಾಡಿಸಿದರೆ ಅದು ನಿಮಗೇ ಒಳಿತಾಗಿದೆ. ಅವರು ಪ್ರಮಾದವೆಸಗಿದರೆ ನಿಮಗಂತು ಪುಣ್ಯವಿದೆ ಮತ್ತು ಅವರ ಮೇಲೆ ಅದರ ದೋಷವಿದೆ. 

[ಬುಖಾರಿ]  

ನಮಾಝ್ ಮಾಡಿಸಲಿ

ಅಬೂ ಮಸ್ಊದ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು. ಅಲ್ಲಾಹನ ಗ್ರಂಥವನ್ನು ಹೆಚ್ಚು ಕಲಿತವರು ಸಮುದಾಕಕ್ಕೆ ನಮಾಝ್ ಮಾಡಿಸಲಿ. ಒಂದು ವೇಳೆ ಕುರ್'ಆನಿನ ಜ್ಜಾನದಲ್ಲಿ ಎಲ್ಲರೂ ಸಮಾನರಾಗಿದ್ದರೆ ಸುನ್ನತನ್ನು (ಪ್ರವಾದಿ ಚರ್ಯೆಯನ್ನು) ಹೆಚ್ಚು ಕಲಿತವನು ಇಮಾಮತ್ ಮಾಡಲಿ. ಒಂದು ವೇಳೆ ಸುನ್ನತ್'ನ ಜ್ಜಾನದಲ್ಲಿ ಎಲ್ಲರೂ ಸಮಾನರಾಗಿದ್ದರೆ ಮೊದಲು ಹಿಜ್ರತ್ ಮಾಡಿದವ ಇಮಾಮತ್ ಮಾಡಲಿ. ಒಂದು ವೇಳೆ ಹಿಜ್ರತ್ ಮಾಡುವುದರಲ್ಲಿ ಎಲ್ಲರೂ ಸಮಾನರಾಗಿದ್ದರೆ ಅವರ ಪೈಕಿ ಪ್ರಾಯದಲ್ಲಿ ಹಿರಿಯನಾದವನು ಇಮಾಮತ್ ಮಾಡಲಿ. ಒಬ್ಬರ ಅಧಿಕಾರದಲ್ಲಿರುವ ಜಾಗದಲ್ಲಿ ಇನ್ನೊಬ್ಬನು ಇಮಾಮತ್ ಮಾಡದಿರಲಿ ಮತ್ತು ಅವನ ಮನೆಯಲ್ಲಿ ಅವನ ಪೀಟದಲ್ಲಿ ಅವನ ಅನುಮತಿಯಿಲ್ಲದೆ ಕೂರದಿರಲಿ.
[ಮುಸ್ಲಿಮ್] 

ಇಮಾಮತ್

ಅಬೂ ಸಈದ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಮೂರು ಮಂದಿ ಇರುವಾಗ ಅವರಲ್ಲಿ ಒಬ್ಬರು ಇಮಾಮತ್ ಆಗಲಿ. ಅವರಲ್ಲಿ ಹೆಚ್ಚು ಕಲಿತವರು ಇಮಾಮತ್'ಗೆ ಹೆಚ್ಚು ಅರ್ಹರಾಗಿದ್ದಾರೆ.

[ಮುಸ್ಲಿಮ್]

ಅದಾನ್ ಹೇಳುವವರು

ಇಬ್ನ್ ಅಬ್ಬಾಸ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ನಿಮ್ಮಲ್ಲಿ ಉತ್ತಮರು ಅದಾನ್ ಹೇಳಬೇಕು ಮತ್ತು ನಿಮ್ಮ ಪೈಕಿ ಹೆಚ್ಚು ಓದಿದವರು ಇಮಾಮತ್ ಮಾಡಬೇಕು.
[ಅಬೂ ದಾವೂದ್]   

ಕಿಯಾಮತ್'ನ ಚಿಹ್ನೆ

ಸಲಾಮ ಬಿಂತಿ ಹುರ್ರಿ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಕಿಯಾಮತ್'ನ ಚಿಹ್ನೆಗಳ ಪೈಕಿ ಒಂದು ಎನೆಂದರೆ ಮಸೀದಿಯವರು ಇಮಾಮತನ್ನು ನೀಗಿಸುವರು. ಅವರು ತಮಗೆ ನಮಾಝ್ ಮಾಡಿಸಬಲ್ಲ ಇಮಾಮರನ್ನು ಪಡೆಯಲಾರರು. 

[ಅಹ್ಮದ್, ಅಬೂ ದಾವೂದ್, ಇಬ್ನ್ ಮಾಜಃ]  

ಕಡ್ಡಾಯವಾಗಿದೆ

ಅಬೂ ಹುರೈರಾ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ನಿಮ್ಮ ಮೇಲೆ ಜಿಹಾದ್ ಕಡ್ಡಾಯವಾಗಿದೆ. ಪ್ರತಿಯೊಬ್ಬ ನಾಯಕನ ಜತೆಗೆ ಅವನು ಒಳ್ಳೆಯನಾಗಿರಲಿ, ಕೆಟ್ಟವನಾಗಿರಲಿ, ಅವನು ಮಹಾ ಪಾಪಕರ್ಯಗಳನ್ನು ಎಸಗುವವನೇ ಆಗಿರಲಿ, ನಿಮ್ಮ ಮೇಲೆ ನಮಾಝ್ ಕಡ್ಡಾಯವಾಗಿದೆ. ಪ್ರತಿಯೊಬ್ಬ ಮುಸ್ಲಿಮನ ಹಿಂದೆ ಅವನು ಒಳ್ಳೆಯವನಾಗಿರಲಿ, ಕೆಟ್ಟವನಾಗಿರಲಿ, ಅವನು ಅವನು ಮಹಾ ಪಾಪಕರ್ಯಗಳನ್ನು ಎಸಗುವವನೇ ಆಗಿರಲಿ, ನಿಮ್ಮ ಮೇಲೆ ಜನಾಝ ನಮಾಝ್ ಕಡ್ಡಾಯವಾಗಿದೆ. ಪ್ರತಿಯೊಬ್ಬ ಮುಸ್ಲಿಮನ ಹಿಂದೆ ಅವನು ಒಳ್ಳೆಯವನಾಗಿರಲಿ, ಕೆಟ್ಟವನಾಗಿರಲಿ, ಅವನು ಅವನು ಮಹಾ ಪಾಪಕರ್ಯಗಳನ್ನು ಎಸಗುವವನೇ ಆಗಿರಲಿ.

[ಅಬೂ ದಾವೂದ್] 

ಮೂರು ಮಂದಿಯ ನಮಾಝ್

ಇಬ್ನ್ ಅಬ್ಬಾಸ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಮೂರು ಮಂದಿಗೆ ಅವರ ನಮಾಝ್ ಅವರ ತಲೆಗಳಿಂದ ಒಂದು ಗೇಣೂ ಉನ್ನತವಾಗುವುದಿಲ್ಲ. ಒಬ್ಬನು ಒಂದು ಗೋತ್ರದ ಇಮಾಮ್ ಆಗಿದ್ದು ಅವನು ಅವರಿಗೆ ಅಪ್ರಿಯವಾಗಿದ್ದಾಗ. ಇನ್ನೊಬ್ಬಳು ಸ್ತ್ರೀ ಆಕೆಯ ಪತಿ ಕುಪಿತವಾಗಿರುವ ಸ್ಥಿತಿಯಲ್ಲಿ ರಾತ್ರಿ ಕಳೆದಾಗ. ಮತ್ತೊಬ್ಬರು ಪರಸ್ಪರ ಕೋಪಗೊಂಡ ಇಬ್ಬರು ಸೋದರರು.

[ಇಬ್ನು ಮಾಜಃ]

ಇಮಾಮರ ಹಿಂದೆ ನಿಲ್ಲುವ ಕ್ರಮಗಳು

ಜಾಬಿರ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ನಮಾಝ್ ಮಾಡಲು ನಿಂತರು. ನಾನು ಬಂದು ಪ್ರವಾದಿವರ್ಯರ [ಸ] ಎಡಭಾಗದಲ್ಲಿ ನಿಂತೆ. ಪ್ರವಾದಿ [ಸ] ನನ್ನ ಕೈ ಹಿಡಿದು ನನ್ನನ್ನು ತಮ್ಮ ಬಲಭಾಗದಲ್ಲಿ ನಿಲ್ಲಿಸಿದರು. ಅನಂತರ ಜಬ್ಬಾರ್ ಬಿನ್ ಸಖ್ರ್ [ರ] ಬಂದು ಪ್ರವಾದಿವರ್ಯರು [ಸ] ಎಡಭಾಗದಲ್ಲಿ ನಿಂತರು. ಪ್ರವಾದಿ [ಸ] ನಮ್ಮಿಬ್ಬರ ಕೈಹಿಡಿದು ನಮ್ಮನ್ನು ಸರಿಸಿದರು. ನಮ್ಮನ್ನು ತಮ್ಮ ಹಿಂದೆ ನಿಲ್ಲಿಸಿದರು. 

[ಮುಸ್ಲಿಮ್]   

ನಮಾಝ್'ನಲ್ಲಿ ಸಮಾಧಾನ ವಹಿಸಿರಿ

ಪ್ರವಾದಿ (ಸ) ಹೇಳಿದರು; "ನಮಾಝ್'ನಲ್ಲಿ ಸಮಾಧಾನ ವಹಿಸಿರಿ"

[ಮುಸ್ಲಿಮ್]