ಅಬೂ
ಹುರೈರಾ [ರ] ಹೇಳುತ್ತಾರೆ - ಒಮ್ಮೆ ನನಗೆ ಬಹಳ ಹಸಿವಾಯಿತು. ಹಾಗಿರುವಾಗ ನನ್ನ ಭೇಟಿ ಉಮರ್ ರೊಂದಿಗಾಯಿತು. ನಾನು ಅವರಲ್ಲಿ ಪವಿತ್ರ ಕುರ್ ಆನಿನ ಒಂದು ಸೂಕ್ತವನ್ನು ಪಠಿಸಿಕೊಡುವಂತೆ
ಕೋರಿದೆ. ಅವರು ಮನೆಗೆ ಹೋಗಿ ನನಗೆ ಅದನ್ನು ಓದಿ ಕೇಳಿಸಿದರು. ಅಲ್ಲಿಂದ ಹೊರಟು ಸ್ವಲ್ಪ ದೂರ ಹೋಗಿದ್ದೆನಷ್ಟೆ.
ಹಸಿವಿನ ಬೇಗೆಯಿಂದ ನಾನು ಬೋರಲಾಗಿ ಬಿದ್ದು ಬಟ್ಟೆ. ಆಗ ಪ್ರವಾದಿ [ಸ] ನನ್ನ ತಲೆ ಭಾಗದಲ್ಲಿ ನಿಂತು 'ಅಬೂ ಹುರೈರಾ' ಎಂದು ಕರೆದರು. ನಾನು ಹೇಳಿದೆ. ಅಲ್ಲಾಹನ ಸಂದೇಶವಾಹಕರೆ! ನಾನು ಹಾಜರುದ್ದೇನೆ. ಪ್ರವಾದಿ [ಸ] ನನ್ನ ಕೈ ಹಿಡಿದು ಎಬ್ಬಿಸಿದರು. ನನ್ನ ಕಷ್ಟವನ್ನು ಅವರು ಗ್ರಹಿಸಿಕೊಂಡರು.
ಅವರು ನನ್ನನ್ನು ಅವರ ಮನೆಗೆ ಕರೆದೊಯ್ದರು. ನನಗೆ ಒಂದು ದೊಡ್ಡ ಲೋಟೆಯಲ್ಲಿ ಹಾಲು ಕೊಡುವಂತೆ ಅಜ್ಜಾಪಿಸಿದರು.
ನಾನದನ್ನು ಕುಡಿದಾಗ ಇನ್ನೂ ಕುಡಿಯಿರಿ ಎಂದರು. ನಾನು ಪುನಃ ಕುಡಿದೆ. ಮೂರನೆ ಸಲವೂ ಕುಡಿಯುವಂತೆ ಆದೇಶಿಸಿದರು. ನಾನು ಕುಡಿದೆ. ನನ್ನ ಹೊಟ್ಟೆ ತುಂಬಿ ಬಾಣದಂತೆ ನೇರವಾಯಿತು.
ತರುವಾಯ
ನಾನು ಉಮರ್ ರನ್ನು [ರ] ಭೇಟಿಯಾಗಿ ನನ್ನ ಅನುಭವವನ್ನು ಅವರಿಗೆ ನೆನಪಿಸಿದೆ. ನಾನು ಹೇಳಿದೆ. ನಾನು ನಿಮ್ಮಲ್ಲಿ ಒಂದು ಸೂಕ್ತ ಓದುವಂತೆ ಹೇಳಿದೆ. ಅದನ್ನೋದಳು ನಿಮಗಿಂತ ನನಗೆ ಹೆಚ್ಚು ತಿಳಿದಿತ್ತು. (ಹಸಿವಿನ ಬೇಗೆಯಿಂದಾಗಿ ನನಗಾದ ವಿವಶಾವಶ್ಥೆಯನ್ನು
ನಿಮ್ಮ ಗಮನಕ್ಕೆ ತರಬಯಸಿದ್ದೆ. ಅದಕ್ಕಾಗಿ ಕುರಾನ್ ಸೂಕ್ತದ ಕುರಿತು ಸಂದೇಹ ವ್ಯಕ್ತಪಡಿಸಿದ್ದೆ.
ಆ ವಿಷಯವನ್ನು ಈಡೇರಿಸಲು ಅಲ್ಲಾಹನು ನಿಮಗಿಂತ ಉತ್ತಮ ವ್ಯಕ್ತಿಯನ್ನು
ನನಗೆ ಒದಗಿಸಿದನು.) ಆಗ ಉಮರ್ [ರ] ಹೇಳಿದರು - ಅಲ್ಲಾಹನಾಣೆ! ನಾನದನ್ನು ಗ್ರಹಿಸುತ್ತಿದ್ದರೆ
ನಿಮ್ಮನ್ನು ನಿನ್ನ ಮನೆಗೆ ಕರೆದು ಸತ್ಕರಿಸುವುದು
ಉತ್ತಮ ತರಾ ಕೆಂಪು ಒಂಟೆಗಳು ಲಭಿಸುವುದಕ್ಕಿಂತ
ನನಗೆ ಹೆಚ್ಚು ಪ್ರಿಯವಾಗುತ್ತಿತ್ತು.
[ಸಹೀಹ್
ಬುಖಾರಿ, ಅಧ್ಯಾಯ ಆಹಾರ]
No comments:
Post a Comment