ಹ. ಆಯಿಶಾ (ರ) ವರದಿ: ಉಮ್ಮು ಹಬೀಬ(ರ) ಮತ್ತು ಉಮ್ಮು ಸಲಮ(ರ) ಪ್ರವಾದಿಯವರಲ್ಲಿ(ಸ) ಒಂದು ಕ್ರೈಸ್ತ ದೇವಾಲಯದ ಕುರಿತು ಹೇಳುತ್ತಿದ್ದರು. ಅದರಲ್ಲಿ ಚಿತ್ರಗಳಿದ್ದು, ಅದನ್ನು ಅವರು ಇಥಿಯೋಪಿಯಾದಲ್ಲಿ ನೋಡಿದ್ದರು. ಪ್ರವಾದಿ(ಸ) ಹೇಳಿದರು: ಅವರಲ್ಲಿ ಸಜ್ಜನ ವ್ಯಕ್ತಿಗಳು ಯಾರಾದರೂ ತೀರಿಕೊಂಡರೆ ಅವರ ಗೋರಿಯ ಮೇಲೆ ಮಸೀದಿ ನಿರ್ಮಿಸುತ್ತಿದ್ದರು ಮತ್ತು ಇಂತಹ ಚಿತ್ರಗಳನ್ನು ಬಿಡಿಸುತ್ತಿದ್ದರು. ಕಿಯಾಮತ್'ನ ದಿನದಂದು ಈ ಮಂದಿ ಅಲ್ಲಾಹನ ದೃಷ್ಟಿಯಲ್ಲಿ ಅತ್ಯಂತ ನಿಕೃಷ್ಟ ವ್ಯಕ್ತಿಗಳಾಗಿರುವರು.
[ಸಹೀಹ್ ಬುಖಾರಿ]
No comments:
Post a Comment