Friday, September 16, 2016

ಶಿಫಾರಸ್ಸು ಕೇಳಿ ಜನರು ಪ್ರವಾದಿಗಳೊಡನೆ ಹೋಗುವರು

ಅನಸ್ ಬಿನ್ ಮಾಲಿಕ್ [] ಹೇಳುತ್ತಾರೆ - ಪ್ರವಾದಿ [] ಹೇಳಿದರು - ಪುನರುತ್ಥಾನ ದಿವಸ ಬಂದರೆ, ಮನುಷ್ಯರೆಲ್ಲ ಸೇರಿ ಆದಮ್ [] ಬಳಿಗೆ ಹೋಗಿ ಹೇಳುವರು - ನಿಮ್ಮ ಪ್ರಭುವಿನೊಂದಿಗೆ ನಮಗಾಗಿ ಶಿಫಾರಸು ಮಾಡಿ. ಅವರು ಹೇಳುವರು - ನಾನು ಅದಕ್ಕೆ ಅರ್ಹನಲ್ಲ. ನೀವು ಇಬ್ರಾಹೀಂ ಹತ್ತಿರ ಹೋಗಿರಿ. ಅವರು ಕರುಣಾಳುವಾದ ಪ್ರಭುವಿನ ಆಪ್ತ ಮಿತ್ರರಾಗಿದ್ದಾರೆ. ಅವರು ಹೇಳುವರು - ನಾನು ಅದಕ್ಕೆ ಅರ್ಹನಲ್ಲ. ನೀವು ಮೂಸಾ [] ಬಳಿಗೆ ಹೋಗಿರಿ. ಅವರ ಅಲ್ಲಾಹನ ಕಲೀಮ್ (ನೇರವಾಗಿ ಮಾತಾಡಿದವರು) ಆಗಿದ್ದಾರೆ.

ಹಾಗೆ ಅವರು ಮೂಸಾ [] ಬಳಿಗೆ ಹೋಗುವರು. ಹಾಗೆ ಅವರು ಮೂಸಾ [] ಬಳಿಗೆ ಹೋಗುವರು. ಅವರು ಹೇಳುವರು - ನಾನು ಅದಕ್ಕೆ ಅರ್ಹನಲ್ಲ. ನೀವು ಈಸಾ [] ಬಳಿಗೆ ಹೋಗಿರಿ. ಅವರು ಅಲ್ಲಾಹನ ಆಜ್ಜೆ ಮತ್ತು ವಚನವಾಗಿದ್ದಾರೆ. ಹೀಗೆ ಅವರು ಈಸಾ []ರವರ ಬಳಿಗೆ ಹೋಗುವರು. ಅವರು ಹೇಳುವರು - ನಾನು ಅದಕ್ಕೆ ಅರ್ಹನಲ್ಲ. ನೀವು ಮುಹಮ್ಮದ್ []ರವರ ಬಳಿಗೆ ಹೋಗಿರಿ. ಹಾಗೆ ಅವರು ನನ್ನ ಬಳಿಗೆ ಬರುವರು. ಆಗ, ನಾನದನ್ನು ಮಾಡುವೆನೆಂದು ನಾನು ಹೇಳುವೆ.

ನಾನು ಶಿಫಾರಸು ಮಾಡಲಿಕ್ಕಾಗಿ ನನ್ನ ಪ್ರಭುವಿನ ಅನುಮತಿ ಕೇಳುವೆ. ನನಗೆ ಅನುಮತಿ ಸಿಗುವುದು. ಸಂದರ್ಭದಲ್ಲಿ ಅಲ್ಲಾಹನನ್ನು ಸ್ತುತಿಸಬೇಕಾದ ಸ್ತುತಿ ವಚನಗಳನ್ನು ಅವನು ನನ್ನ ಮನಸ್ಸಿಗೆ ಹಾಕುವನು. ಈಗ ಅದು ನನಗೆ ನೆನಪಾಗುವುದಿಲ್ಲ. ಹಾಗೆ ನಾನು ಸ್ತುತಿ ವಚನಗಳಿಂದ ಅವನನ್ನು ಸ್ತುತಿಸುವೆ. ನಾನವನ ಮುಂದೆ ಸಾಷ್ಟಾಂಗದಲ್ಲಿ ಬೀಳುವೆ. ಆಗ ಹೇಳಲಾಗುವುದು. ಮುಹಮ್ಮದ್[]! ನಿನ್ನ ತಲೆಯೆತ್ತು. ನಿನ್ನ ಮಾತು ಆಲಿಸಲಾಗುವುದು. ಕೇಳು, ನೀಡಲಾಗುವುದು. ಶಿಫಾರಸು ಮಾಡು, ಸ್ವೀಕರಿಸಲಾಗುವುದು. ಆಗ ನಾನು ಹೇಳುವೆ - ಪ್ರಭೂ! ನನ್ನ ಸಮುದಾಯ, ನನ್ನ ಸಮುದಾಯ! ಆಗ ಅಲ್ಲಾಹನಿಂದ ಉತ್ತರ ಬರುವುದು - ಯಾರಾದರೂ ಹೃದಯದಲ್ಲಿ ಬಾರ್ಲಿಯಷ್ಟಾದರೂ ಈಮಾನ್ ಇದ್ದಾರೆ ಹೋಗಿ ಅವರನ್ನು ನರಕದಿಂದ ವಿಮೋಚಿಸು. ನಾನು ಹೋಗಿ ಹಾಗೆಯೇ ಮಾಡುವೆ.  

ಮರಳಿ ಬಂದು ನಾನು ಅದೇ ಸ್ತುತಿ ವಚನಗಳಿಂದ ಅಲ್ಲಾಹನನ್ನು ಸ್ತುತಿಸುತ್ತಾ ಸಾಷ್ಟಾಂಗವೆರಗುವೆ. ಆಗ ಅಲ್ಲಾಹ್ ಹೇಳುವನು - ಮುಹಮ್ಮದ್! ತಲೆಯೆತ್ತು. ನಿನ್ನ ಮಾತನ್ನು ಆಲಿಸಲಾಗುವುದು. ಕೇಳು, ನೀಡಲಾಗುವುದು. ಶಿಫಾರಸು ಮಾಡು ಸ್ವೀಕರಿಸಲಾಗುವುದು. ಆಗ ನಾನು ಹೇಳುವೆ - ಪ್ರಭೂ! ನನ್ನ ಸಮುದಾಯ, ನನ್ನ ಸಮುದಾಯ! ಆಗ ಅಲ್ಲಾಹನು ಹೇಳುವನು: ಯಾರದೇ ಹೃದಯದಲ್ಲಿ ಸಾಸಿವೆ ಕಾಳಿನಷ್ಟೂ ಈಮಾನ್ ಇದ್ದರೆ ಅಂತಹವರನ್ನು ನರಕದಿಂದ ವಿಮೋಚಿಸು. ನಾನು ಹೋಗಿ ಹಾಗೆಯೇ ಮಾಡುವೆ.  

ಮರಳಿ ಬಂದು ನಾನು ಪುನಃ ಅದೇ ಸ್ತುತಿ ವಚನಗಳಿಂದ ಅಲ್ಲಾಹನನ್ನು ಸ್ತುತಿಸಿ ಸಾಷ್ಟಾಂಗವೆರಗುವೆ. ಆಗ ಅಲ್ಲಾಹನು ಹೇಳುವನು - ಹೇಳುವನು - ಮುಹಮ್ಮದ್! ತಲೆಯೆತ್ತು. ನಿನ್ನ ಮಾತನ್ನು ಆಲಿಸಲಾಗುವುದು. ಕೇಳು, ನೀಡಲಾಗುವುದು. ಶಿಫಾರಸು ಮಾಡು ಅಂಗೀಕರಿಸಲಾಗುವುದು. ಆಗ ನಾನು ಹೇಳುವೆ - ನನ್ನ ಸಮುದಾಯ, ನನ್ನ ಸಮುದಾಯ! ಆಗ ಅಲ್ಲಾಹನು ಹೇಳುವನು - ಯಾರಾದರೂ ಹೃದಯದಲ್ಲಿ ಸಾಸಿವೆ ಕಾಳಿಗಿಂತಲೂ ಕಡಿಮೆ, ಅತಿ ಕಡಿಮೆ, ಇನ್ನೂ ಕಡಿಮೆ ಪ್ರಮಾಣದಲ್ಲಿ ಈಮಾನ್ ಇದ್ದರೆ ಅಂತಹವರನ್ನು ನೀನು ಹೋಗಿ ನರಕದಿಂದ ಹೊರ ತಾ! ನಾನು ಹೋಗಿ ಹಾಗೆಯೇ ಮಾಡುವೆ.  

ಅನಸ್ []ರಿಂದ ಇನ್ನೊಂದು ವರದಿ ಹೀಗಿದೆ - ತರುವಾಯ ನಾಲ್ಕನೆಯ ಬಾರಿಯೂ, ನಾನು ಮರಳಿ ಬಂದು ಅದೇ ಅದೇ ಸ್ತುತಿ ವಚನಗಳಿಂದ ಅಲ್ಲಾಹನನ್ನು ಸ್ತುತಿಸುವೆ ಮತ್ತು ಅವನ ಮುಂದೆ ಸಾಷ್ಟಾಂಗವೆರಗುವೆ. ಆಗ ಅಲ್ಲಾಹ್ ಹೇಳುವನು - ಮುಹಮ್ಮದ್! ತಲೆಯೆತ್ತು. ನಿನ್ನ ಮಾತನ್ನು ಆಲಿಸಲಾಗುವುದು. ಕೇಳು, ನೀಡಲಾಗುವುದು. ಶಿಫಾರಸು ಮಾಡು ಸ್ವೀಕರಿಸಲಾಗುವುದು. ಆಗ ನಾನು ಹೇಳುವೆ - ಅಲ್ಲಾಹನಲ್ಲದೆ ಅನ್ಯ ಆರಾಧ್ಯರಿಲ್ಲ (ಲಾ ಇಲಾಹ ಇಲ್ಲಲ್ಲಾಹ್) ಎಂದು ಹೇಳಿದವರನ್ನೆಲ್ಲ ನರಕದಿಂದ ವಿಮೋಚಿಸಲು ನನಗೆ ಅನುಮತಿ ನೀಡು. ಆಗ ಅಲ್ಲಾಹನು ಹೇಳುವನು - ನನ್ನ ಪ್ರತಾಪ, ನನ್ನ ಮಹಾನತೆ, ನನ್ನ ಮೇಲೆ ಮತ್ತು ನನ್ನ ದೊಡ್ಡಸ್ತಿಕೆಯಾಣೆ! ಅಲ್ಲಾಹನಲ್ಲದೆ ಅನ್ಯ ಆರಾಧ್ಯರಿಲ್ಲವೆಂದು ಹೇಳಿದ ಎಲ್ಲರನ್ನೂ ಖಂಡಿತವಾಗಿಯೂ ನರಕದಿಂದ ವಿಮೋಚಿಸುವೆ
[ಸಹೀಹ್ ಬುಖಾರಿ, ಅಧ್ಯಾಯ ತೌಹೀದ್ (ಏಕದೇವತ್ವ)] 

No comments:

Post a Comment