Friday, September 23, 2016

ಇಸ್ಲಾಮಿನ ತಳಹದಿ


ಇಸ್ಲಾಮಿನ ತಳಹದಿಯು 5 ವಸ್ತುಗಳಲ್ಲಿದೆ. ಅಲ್ಲಾಹನ ಹೊರತು ಬೇರಾರೂ ಆರಾಧ್ಯರಿಲ್ಲ ಹಾಗೂ ಮುಹಮ್ಮದ್(ಸ) ಅಲ್ಲಾಹನ ದಾಸರೂ ಸಂದೇಶವಾಹಕರೂ ಆಗಿರುವರೆಂದು ಸಾಕ್ಷ್ಯ ಹೇಳುವುದು, ನಮಾಝನ್ನು ಸಂಸ್ಥಾಪಿಸುವುದು, ಝಕಾತ್ ನೀಡುವುದು, ಹಜ್ಜ್ ನಿರ್ವಹಿಸುವುದು ಮತ್ತು ರಮಝಾನ್ ತಿಂಗಳ ಉಪವಾಸ ಆಚರಿಸುವುದು. (ಹಝ್ರತ್ ಅಬ್ದುಲ್ಲಾ ಬಿನ್ ಉಮರ್ [ರ]) 
[ಬುಖಾರಿ]

ಪಥಭ್ರಷ್ಟ ನಂಭಿಕೆಗಳು


ಅಬೂ ಹುರೈರಾ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು: ಆದಮನ ಪುತ್ರನು ನನ್ನನ್ನು ನಿರಾಕರಿಸುತ್ತಾನೆ. ಅದು ಅವನಿಗೆ ಭೂಷಣವಲ್ಲ. ಅವನು ನನ್ನನ್ನು ಬಯ್ಯುತ್ತಾನೆ. ಅದು ಅವನಿಗೆ ಭೂಷಣವಲ್ಲ. ಅವನು ನನ್ನನ್ನು ನಿರಾಕರಿಸುವುದು ಹೇಗೆಂದರೆ - ಆತ ನನ್ನನ್ನು ಮರಣಾನಂತರ ಖಂಡಿತ ಜೀವಂತ ಗೊಳಿಸಲಾರನು. ನನ್ನನ್ನು ಪ್ರಥಮ ಸಲ ಸೃಷ್ಟಿಸಿದಂತೆ ಪ್ರಥಮ ಸಲ ಸೃಷ್ಟಿಸುವುದು ಅವನನ್ನು ಜೀವಂತ ಗೊಳಿಸುವುದಕ್ಕಿಂತ ಸುಲಭವಲ್ಲ ಎನ್ನುವುದಾಗಿದೆ. ನನ್ನನ್ನು ಬಯ್ಯುವುದು  ಹೇಗೆಂದರೆ - ಅಲ್ಲಾಹನು ಮಗನನ್ನು ಹೊಂದಿದ್ದಾನೆ ಎನ್ನುವುದಾಗಿದೆ. ವಾಸ್ತವದಲ್ಲಿ ನಾನು ಏಕೈಕನು ನಿರಪೇಕ್ಷನೂ ಆಗಿರುವೆನು. ನನಗೆ ಯಾವ ಪುತ್ರನೂ ಇಲ್ಲ ಮತ್ತು ನಾನು ಯಾರ ಪುತ್ರನೂ ಅಲ್ಲ. ನನಗೆ ಸರಿಸಮಾನರೂ ಯಾರೂ ಇಲ್ಲ. ಇಬ್ನು ಅಬ್ಬಾಸ್ [ರ] ಅವರ ವರದಿಯಲ್ಲಿ ಈ ರೀತಿಯಿದೆ - ಅವನು ನನ್ನನ್ನು  ಬಯ್ಯುವುದು  ಹೇಗೆಂದರೆ - ನನಗೆ ಮಗನಿದ್ದಾನೆ ಎನ್ನುವುದಾಗಿದೆ. ನಾನು ಯಾರನ್ನಾದರೂ ನನ್ನ ಪತ್ನಿ ಅಥವಾ ಪುತ್ರನಾಗಿಸುವುದರಿಂದ ಪರಿಶುದ್ದನಾಗಿರುವೆನು. 
[ಬುಖಾರಿ]

ಪ್ರಕೃತಿ ಧರ್ಮ


ಪ್ರವಾದಿ[ಸ] ಹೀಗೆ ಹೇಳಿರುವರು: "ಪ್ರತಿಯೊಂದು ಮಗುವೂ ಪ್ರಕೃತಿ ಧರ್ಮದಲ್ಲಿ ಹುಟ್ಟುತ್ತದೆ. ಆ ಬಳಿಕ ಅದರ ಹೆತ್ತವರು ಅದನ್ನು ಯಹೂದಿಯಾಗಿ, ಕ್ರೈಸ್ತನಾಗಿ ಅಥವಾ ಬಹುದೇವಾರಾಧಕರಾಗಿ ಮಾಡಿ ಬಿಡುತ್ತಾರೆ." (ಹಝ್ರತ್ ಅಬೂ ಹುರೈರಾ [ರ]) 
[ಮುಸ್ಲಿಮ್]

ಪ್ರವಾದಿವರ್ಯರ[ಸ] ವಿಶೇಷತೆಗಳು


ಪ್ರವಾದಿವರ್ಯರು[ಸ] ಹೀಗೆ ಹೇಳಿರುವರು: "ಇತರ ಪ್ರವಾದಿಗಳಿಗೆ ಹೋಲಿಸಿದರೆ ನನಗೆ ಆರು ವಿಷಯಗಳಿಲ್ಲಿ ಶ್ರೇಷ್ಠತೆಯನ್ನು ದಯಪಾಲಿಸಲಾಗಿದೆ. ನನಗೆ ವಿಶಾಲಾರ್ಥದ ಸಮಗ್ರ ವಚನಗಳನ್ನು ನೀಡಲಾಗಿದೆ. ವರ್ಚಸ್ಸಿನ ಮೂಲಕ ನನಗೆ ಸಹಾಯ ಮಾಡಲಾಗಿದೆ. ಗನೀಮತ್ (ಯುದ್ಧದಿಂದ ಬಂದ) ಸಂಪತ್ತನ್ನು ನನ್ನ ಪಾಲಿಗೆ ಧರ್ಮಬದ್ಧಗೊಳಿಸಲಾಗಿದೆ. ನನ್ನ ಪಾಲಿಗೆ ಸಂಪೂರ್ಣ ಭೂಮಿಯನ್ನು ಪವಿತ್ರವಾಗಿ ಹಾಗೂ ಆರಾಧನಾಲಯವಾಗಿ ಮಾಡಲಾಗಿದೆ. ನನ್ನನ್ನು ಎಲ್ಲ ಸೃಷ್ಟಿಗಳ ಕಡೆಗೆ ಸಂದೇಶವಾಹಕನಾಗಿ ಕಳುಹಿಸಲಾಗಿದೆ ಮತ್ತು ನನ್ನೊಂದಿಗೆ ಪ್ರವಾದಿಗಳ ಸರಣೆಯನ್ನು ಮುಕ್ತಾಯಗೊಳಿಸಲಾಗಿದೆ. (ಹಝ್ರತ್ ಅಬೂ ಹುರೈರಾ [ರ]) 
[ಮುಸ್ಲಿಮ್]

ಪ್ರವಾದಿಯ ಅನುಸರೆಣೆ


ಪ್ರವಾದಿ[ಸ] ಹೀಗೆ ಹೇಳಿರುವರು: "ನನ್ನ ಅನುಸರಣೆ ಮಾಡಿದವನು ವಾಸ್ತವದಲ್ಲಿ ಅಲ್ಲಾಹನ ಅನುಸರಣೆ ಮಾಡಿದನು. ನನ್ನ ಆಜ್ಜೋಲ್ಲಂಘನೆ ಮಾಡಿದವನು ವಾಸ್ತವದಲ್ಲಿ ಅಲ್ಲಾಹನ ಆಜ್ಜೋಲ್ಲಂಘನೆ  ಮಾಡಿದನು. (ಹಝ್ರತ್ ಅಬೂ ಹುರೈರಾ [ರ]) 
[ಬುಖಾರಿ]

ದೂರವಿಡಬೇಕಾದ ಮೂರು ವಿಷಯಗಳು

* ಕೆಟ್ಟವರ ಸಹವಾಸ
* ಸ್ವಾರ್ಥ 
* ದುರಾಳತನ

ಮರೆಯಬಾರದ ಮೂರು ವಿಷಯಗಳು


* ಸಾಲ
* ಕರ್ತವ್ಯ 
* ಖಾಯಿಲೆ

ಸದಾ ನೆನಪಿಟ್ಟುಕೊಳ್ಳಬೇಕಾದ ಮೂರು ವಿಷಯಗಳು


* ಆಸೆ
* ನಾಲಿಗೆ 
* ಕಾಮ

ಮುಕ್ತಿ ಮಾರ್ಗ


ಪ್ರವಾದಿ [ಸ]ರವರು ಹೇಳಿದರು: ನನ್ನ ಆತ್ಮ ಯಾರ ಕೈಯಲ್ಲಿದೆಯೋ ಆತನಾಣೆ! ಈ ಜನತೆಯ ಯಾರೇ ಆಗಲಿ, ಆತ ಯಹೂದಿಯಾಗಿರಲಿ ಕ್ರೈಸ್ತನಾಗಿರಲಿ, ನನ್ನ ಬಗ್ಗೆ ಕೇಳಿಯೂ ನಾನು ತಂದಿರುವುದನ್ನು ನಂಬದೆಯೇ ತೀರಿಕೊಂಡರೆ ಅವನು ನರಕದಲ್ಲಿ ಪ್ರವೇಶ ಪಡೆಯುವನು. (ವರದಿ: ಅಬೂ ಹುರೈರಾ [ರ]) 
[ಮುಸ್ಲಿಮ್]

ವಿಶ್ವವಿಮೋಚಕ


ಪ್ರವಾದಿ[ಸ] ಹೀಗೆ ಹೇಳಿರುವರು: "ನನ್ನ ಮತ್ತು ನಿಮ್ಮ ಉದಾಹರಣೆ ಹೇಗಿದೆಯೆಂದರೆ, ಒಬ್ಬ ವ್ಯಕ್ತಿ ಹೊತ್ತಿಸಿದಾಗ ಪತಂಗಗಳು ಮತ್ತು ಹಾತೆಗಳು ಬಂದು ಅದರಲ್ಲಿ ಬೀಳತೊಡಗುತ್ತದೆ. ಅವನು ಅವುಗಳನ್ನು ದೂರ ಅಟ್ಟುತ್ತಿದ್ದಾನೆ. ನಾನು ಕೂಡಾ ನಿಮ್ಮ ಸೊಂಟ ಹಿಡಿದು ನಿಮ್ಮನ್ನು (ನರಕದ) ಅಗ್ನಿಯಿಂದ ದೂರ ಸರಿಸುತ್ತಿದ್ದೇನೆ. ನೀವಾದರೋ ನನ್ನ ಕೈಯಿಂದ ತಪ್ಪಿಸಿಕೊಂಡು ಹೋಗುತ್ತಿದ್ದೀರಿ. (ಹಝ್ರತ್ ಜಾಬಿರ್ [ರ]) 
[ಮುಸ್ಲಿಮ್]


ಪ್ರವಾದಿ [ಸ] ಹೇಳಿದರು: ನನ್ನ ಮತ್ತು ಯಾವ ವಸ್ತುವಿನ ಜೊತೆ ಅಲ್ಲಾಹನು ನನ್ನನ್ನು ಕಳುಹಿಸಿದನೋ ಅದರ ಉಪಮೆಯು ಒಬ್ಬ ವ್ಯಕ್ತಿಯಂತಿದೆ. ಅವನು ತನ್ನ ಜನಾಂಗದ ಬಳಿ ಬಂದು ಹೀಗೆ ಹೇಳಿದನು - ಓ ನನ್ನ ಜನಾಂಗದ ಜನರೇ! ನಾನು (ನಿಮ್ಮ ಶತ್ರುಗಳ) ಒಂದು ಸೈನ್ಯವನ್ನು ಕಣ್ಣಾರೆ ಕಂಡಿದ್ದೇನೆ. ನಾನು ಸ್ಪಷ್ಟ ಎಚ್ಚರಿಕೆ ನೀಡುವವನಾಗಿದ್ದೇನೆ. ನೀವು ವಿಮೋಚನೆಯ ದಾರಿ ಕಂಡುಕೊಳ್ಳಿ. ಅವನ ಜನಾಂಗದ ಕೆಲವರು ಅವನ ಮಾತನ್ನು ನಂಬಿದರು, ತಮ್ಮ ಮನೆಗಳಿಂದ ರಾತ್ರಿಯೇ ಹೊರಟು ವಿಮೋಚನೆ ಹೊಂದಿದರು. ಜನಾಂಗದ ಕೆಲವರು ಅವರ ಮಾತನ್ನು ನಂಬಲಿಲ್ಲ. ಮನೆಯಲ್ಲೇ ಇದ್ದು ಬಿಟ್ಟರು. ಬೆಳಗಾಗುತ್ತಲೇ ಆ ಸೈನ್ಯವು ಅವರ ಮೇಲೆ ದಾಳಿ ಮಾಡಿ ಅವರನ್ನು ನಾಶಮಾಡಿತು. ಅವರನ್ನು ಸಮೂಲ ನಾಶ ಮಾಡಿತು. ಇದುವೇ ನನ್ನ ಮಾತನ್ನು ನಂಬಿ ನಾನು ತಂದ ಧರ್ಮದ ಅನುಸರಣೆಯನ್ನು ಕೈಗೊಂಡವನ ಉಪಮೆ. ನನ್ನನ್ನು ಅನುಸರಿಸದೆ ಇರುವ ಮತ್ತು ನಾನು ತಂದ ಸತ್ಯವನ್ನು ನಿರಾಕರಿಸಿದವನ ಉಪಮೆಯೂ ಇದುವೆ. (ವರದಿ: ಹ. ಅಬೂ ಮೂಸಾ [ರ]) 
[ಬುಖಾರಿ, ಮುಸ್ಲಿಮ್]  

ಅನುಕರುಣೆ


ಪ್ರವಾದಿ[ಸ] ಅವರು ಮಹಿಳೆಯರ ಅನುಕರುಣೆ ಮಾಡುವ ಪುರುಷರ ಅನುಕರಣೆ ಮಾಡುವ ಸ್ತ್ರೀಯರನ್ನು ಶಪಿಸಿರುವರು. (ಹ. ಅಬ್ನು ಅಬ್ಬಾಸ್ [ರ]) 
[ಬುಖಾರಿ]

ಸತ್ಯವಿಶ್ವಾಸದ ಪರಿಣಾಮಗಳು


ಪ್ರವಾದಿ[ಸ] ಹೀಗೆ ಹೇಳಿರುವರು: "ಈಮಾನ್‌ಗೆ (ಸತ್ಯವಿಶ್ವಾಸಕ್ಕೆ) ಎಪ್ಪತ್ತಕ್ಕಿಂತ ಹೆಚ್ಚು ಶಾಖೆಗಳಿವೆ. ಈ ಪೈಕಿ ಲಾ ಇಲಾಹ ಇಲ್ಲಲ್ಲಾಹ್ (ಅಲ್ಲಾಹನ ಹೊರತು ಅನ್ಯ ಆರಾಧ್ಯರಿಲ್ಲ) ಎಂದುಚ್ಚರಿಸುವುದು ಅತ್ಯಂತ ಶ್ರೇಷ್ಠ ಶಾಖೆಯಾಗಿದೆ ಮತ್ತು ರಸ್ತೆಯಲ್ಲಿರುವ ಕಂಟಕವನ್ನು ನಿವಾರಿಸುವುದು ಕನಿಷ್ಠ ಮಟ್ಟದ ಶಾಖೆಯಾಗಿದೆ ಹಾಗೂ ಲಜ್ಜೆಯು ಈಮಾನಿನ ಒಂದು (ಪ್ರಮುಖ) ಶಾಖೆಯಾಗಿದೆ. (ಹಝ್ರತ್ ಅಬೂ ಹುರೈರಾ [ರ]) 
[ಮುಸ್ಲಿಮ್]

ಸತ್ಯವಿಶ್ವಾಸದ ಬೇಡಿಕೆಗಳು


ಪ್ರವಾದಿ[ಸ] ಹೀಗೆ ಹೇಳಿರುವರು: "ಅಲ್ಲಾಹನ ಮೇಲೆ ಮತ್ತು ಪರಲೋಕದ ಮೇಲೆ ವಿಶ್ವಾಸವಿರುವವನು ಮಾತಾಡಿದರೆ ಒಳ್ಳೆಯ ಮಾತನ್ನೇ  ಆಡಬೇಕು, ಇಲ್ಲವಾದರೆ ಮೌನವಾಗಿರಬೇಕು. ಅಲ್ಲಾಹನ ಮೇಲೆ ಮತ್ತು ಪರಲೋಕದ ಮೇಲೆ ವಿಶ್ವಾಸವುಳ್ಳವನು ತನ್ನ ನೆರೆಯವರಿಗೆ ಕಿರುಕುಳ ನೀಡಬಾರದು. ಅಲ್ಲಾಹನ ಮೇಲೆ ಮತ್ತು ಪರಲೋಕದ ಮೇಲೆ ವಿಶ್ವಾಸವಿರುವಾತನು ತನ್ನ ಅತಿಧಿಯನ್ನು ಗೌರವಿಸಬೇಕು. (ಹಝ್ರತ್ ಅಬೂ ಹುರೈರಾ [ರ]) 
[ಬುಖಾರಿ]

ಜಾಣರ ಲಕ್ಷಣ


ಪ್ರವಾದಿ[ಸ] ಹೀಗೆ ಹೇಳಿರುವರು: "ತನ್ನ ಸ್ವೇಚ್ಚೆಯನ್ನು (ಅಲ್ಲಾಹನ) ಅಧೀನಗೊಳಿಸಿಕೊಂಡು, ಮರಣನಂತರ ಜೀವನಕ್ಕಾಗಿ ಕೆಲಸ ಮಾಡುವವನೇ ಜಾಣ. ತನ್ನ ಸ್ವೇಚ್ಚೆಗಳ ಗುಲಾಮನಾಗಿ, ಆ ಬಳಿಕ ಅಲ್ಲಾಹನಿಂದ ತಪ್ಪಾದ ನಿರೀಕ್ಷೆಗಳನ್ನಿಟ್ಟುಕೊಳ್ಳುವವನೇ ಮೂರ್ಖ." (ಶದ್ದಾದ್ ಬಿನ್ ಔಸ್ [ರ]) 
[ತಿರ್ಮಿದಿ]

ಅದ್‌ದಿನರಿಯ (ಸಹಾಬಿ - ಹೆಂಗಸು)

ಅವರ ಗಂಡ, ಅಣ್ಣ ಮತ್ತು ತಂದೆಯನ್ನು ಒಂದು ಯುದ್ಧದಲ್ಲಿ ಕಳೆದುಕೊಂಡರು.

ಸಹಾಬಿಗಳು ಬಂದು ಹೇಳಿದರು: ನಿಮ್ಮ ಗಂಡ, ಅಣ್ಣ ಮತ್ತು ತಂದೆ
ಯುದ್ಧದಲ್ಲಿ ಮರಣಹೊಂದಿದರು.

ಅವಳು ಕೇಳಿದರು: ಪ್ರವಾದಿ [ಸ]ರವರು ಹೇಗಿದ್ದಾರೆ?

ಪ್ರವಾದಿ[ಸ]ರವರು ನೀವು ಹೇಗೆ ನೋಡಲು ಇಷ್ಟ ಪಡುತ್ತಿರೋ ಹಾಗೆಯೇ ಇದ್ದಾರೆ.
ಅವಳು ಹೇಳಿದರು: ನನಗೆ ತೋರಿಸಿ ಎಂದು ಕೇಳಿದಳು.

ಅವರು ಪ್ರವಾದಿ [ಸ]ರವರನ್ನು ತೋರಿಸಿದರು
ಆಗ ಅವಳು ಹೇಳಿದಳು: ಎಲ್ಲಾ ನಷ್ಟವೂ ನಿಮಗೆ ಹೋಲಿಸಿದರೆ, ಅದೂ ತೀರಾ ಚಿಕ್ಕದಾಗಿದೆ.
ಅದು ದೊಡ್ಡ ವಿಷಯವೇ ಅಲ್ಲ.
ಎಲ್ಲಾ ನಷ್ಟವೂ ನಿಮಗೆ ಹೋಲಿಸಿದರೆ, ಅದೂ ತೀರಾ ಚಿಕ್ಕದಾಗಿದೆ.
ಎಲ್ಲಿಯವರೆಗೆಂದರೆ ನೀವು ಸೌಖ್ಯದಲ್ಲಿ ಇದ್ದರೆ.

ನೋಡಿ ಸಹಾಬಗಳ ಪ್ರೀತಿಯನ್ನು ಎಷ್ಟು ದೊಡ್ಡ ನಷ್ಟ ಅನುಭವಿಸಿದರೂ
ಅವರು ಪ್ರವಾದಿ[ಸ]ರವರನ್ನು ಎಲ್ಲರಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು.
ಅಲ್ಲಾಹು ನಮಗೂ ಪ್ರವಾದಿ [ಸ]ರವರನ್ನು ಪ್ರೀತಿಸುವಂತೆ ಮತ್ತು
ಅವರು ಕಳುಹಿಸಿದ ಕುರಾನ್ ಮತ್ತು ಸುನ್ನತ್ ನ ದಾರಿಯಂತೆ
ನಡೆಯಲು ತೌಫೀಕ್ ನೀಡಲಿ, ಆಮೀನ್

ಸುಮಾನು ಬಿನ್ ಉಸಾಲ್ [ರ]

ಪ್ರವಾದಿ [ಸ] ನಜ್ದ್ ನ ಕಡೆ ಸವಾರರ ಒಂದು ತುಕಡಿಯನ್ನು ರವಾನಿಸಿತು. ಅದು ಹನೀಫಾ ಗೋತ್ರದ ಒಬ್ಬ ವ್ಯಕ್ತಿಯನ್ನು ದಸ್ತಗಿರಿ ಮಾಡಿ ತಂದಿತು. ಅವರ ಹೆಸರು ಸುಮಾನು ಬಿನ್ ಉಸಾಲ್ ಆಗಿತ್ತು. ಅವರನ್ನು ಮಸೀದಿಯ ಕಂಬಗಳ ಪೈಕಿ ಒಂದಕ್ಕೆ ಕಟ್ಟಿಹಾಕಲಾಗಿತ್ತು. ಪ್ರವಾದಿ [ಸ] ಅವರ ಬಳಿಗೆ ಬಂದು ವಿಚಾರಿಸಿದರು - "ಸುಮಾಮ ಏನು ಸಮಾಚಾರ?" ಅವರು ಹೇಳಿದರು, ಚೆನಾಗಿದ್ದೇನೆ. ಮುಹಮ್ಮದರೇ, ನೀವು ನನ್ನನ್ನು ವಧಿಸಿದರೆ ತನ್ನ ಜನಾಂಗದ ನಾಯಕನೊಬ್ಬನನ್ನು ವಧಿಸಿದಂತಾಗುವುದು. ಒಂದು ವೇಳೆ ಉಪಕಾರ ಮಾಡಿದರೆ ಒಬ್ಬ ಕೃತಜ್ಞನಿಗೆ ಉಪಕಾರ ಮಾಡಿದಂತಾಗುವುದು. ನಿಮಗೆ ಸಂಪತ್ತು ಬೇಕಾದರೆ ಎಷ್ಟು ಬೇಕೋ ಕೇಳಿ. ಪ್ರವಾದಿ [ಸ]ಅವರನ್ನು ಅದೇ ಸ್ಥಿತಿಯಲ್ಲಿ ಬಿಟ್ಟುಬಿಟ್ಟರು. ಮರುದಿನ ಬಂದು ವಿಚಾರಿಸಿದರು - 'ಸುಮಾಮ ಏನು ಸಮಾಚಾರ?' ಅವರು ಹೀಗೆ ಉತ್ತರಿಸಿದರು.

"ನಾನು ನನ್ನ ವಿಚಾರವನ್ನು ನಿನ್ನೆ ತಿಳಿಸಿರುವೆನು. ನೀವು ಉಪಕಾರ ಮಾಡಿದರೆ ಒಬ್ಬ ಕೃತಜ್ಞವ್ಯಕ್ತಿಗೆ ಉಪಕಾರ ಮಾಡಿದಂತಾಗುವುದು. "ಪ್ರವಾದಿ [ಸ] ಅವರನ್ನು ಮತ್ತದೇ ಸ್ಥಿತಿಯಲ್ಲಿ ಬಿಟ್ಟು ಹೋದರು. ಮೂರನೆಯ ದಿನ ಮತ್ತೆ ಬಂದಾಗ ಹೀಗೆ ವಿಚಾರಿಸಿದರು - "ಸುಮಾಮ ಏನು ಸಮಾಚಾರ?" ಸುಮಾಮ ಹೇಳಿದರು - "ನನ್ನ ವಿಚಾರವನ್ನು ನಾನು ಈ ಹಿಂದೆ ತಿಳಿಸಿರುವೆನು." ಪ್ರವಾದಿ [ಸ] ಹೇಳಿದರು - "ಸುಮಾಮರ ಬಂಧನವನ್ನು ಬಿಚ್ಚಿರಿ." ಸೆರೆಯಿಂದ ಮುಕ್ತರಾಗಿ ಅವರು ಮಸೀದಿಯ ಬಳಿ ಬಂದು ಖರ್ಜೂರದ ತೋಟಕ್ಕೆ ಹೋಗಿ ಸ್ನಾನ ಮಾಡಿ ಮಸೀದಿಗೆ ಪ್ರವೇಶಿಸಿ ಹೀಗೆ ಹೇಳಿದರು - 'ಅಶ್ ಹದು ಅಲ್ಲಾ ಇಲಾಹ ಇಲ್ಲಲ್ಲಾಹು ಅನ್ನ ಮುಹಮ್ಮದರ್ರಸೂಲುಲ್ಲಾಹ್' (ಅಲ್ಲಾಹನಲ್ಲದೆ ಆರಾಧ್ಯರಿಲ್ಲವೆಂದೂ ಮುಹಮ್ಮದರು ಅಲ್ಲಾಹನ ಸಂದೇಶವಾಕರಾಗಿರುವರೆಂದೂ ಸಾಕ್ಷ್ಯವಹಿಸಿದರು.)

ಮುಹಮ್ಮದರೇ [ಸ], ಈ ಹಿಂದೆ ತಮ್ಮ ಮುಖಕ್ಕಿಂತ ಹೆಚ್ಚು ದ್ವೇಷದ ಮುಖ ಈ ಭೂಮುಖದ ಮೇಲೆ ನನಗೆ ಬೇರೆ ಇರಲಿಲ್ಲ. ಆದರೆ ಇಂದು ತಮ್ಮ ಮುಖಕ್ಕಿಂತ ಹೆಚ್ಚು ಪ್ರಿಯವಾದ ಮುಖ ಬೇರೆ ಇಲ್ಲ. ಅಲ್ಲಾಹನಾಣೆ! ಮೊದಲು ತಮ್ಮ ಧರ್ಮಕ್ಕಿಂತ ಹೆಚ್ಚು ನಾನು ದ್ವೇಷಿಸುವ ಧರ್ಮ ಬೇರೆ ಇರಲಿಲ್ಲ. ಆದರೆ ಇಂದು ತಮ್ಮ ಧರ್ಮಕ್ಕಿಂತ ಪ್ರಾಯವಾದ ಧರ್ಮ ಬೇರೆ ಇಲ್ಲ.  ಅಲ್ಲಾಹನಾಣೆ! ಮೊದಲು ಎಲ್ಲ ನಗರಗಳಲ್ಲಿ ತಮ್ಮ ನಗರಕ್ಕಿಂತ ಹೆಚ್ಚು ನಾನು ದ್ವೇಷಿಸುವ ನಗರ ಬೇರೆ ಇರಲಿಲ್ಲ. ಆದರೆ ಇಂದು ಎಲ್ಲ ನಗರಗಳಿಗಿಂತ ನನಗೆ ಪ್ರಿಯವಾದ ನಗರವಾಗಿದೆ. ತಮ್ಮ ಸೇನಾ ತುಕಡಿ ನನ್ನನ್ನು ಬಂಧಿಸಿದಾಗ ನಾನು ಉಮ್ರಾ ಮಾಡುವ ಉದ್ದೇಶದಿಂದ ಹೋಗುತ್ತಿದ್ದೆ. ಈ ನಾನೇನು ಮಾಡಬೇಕು ತಿಳಿಸಿ. ಪ್ರವಾದಿ [ಸ]ರವರು ಅವರಿಗೆ ಶುಭವಾರ್ತೆ ನೀಡಿ ಉಮ್ರಾ ಮಾಡಿರಿ ಎಂದು ಹೇಳಿದರು. ಅವರು ಮಕ್ಕಾ ತಲುಪಿದಾಗ ಯಾರೋ ಹೇಳಿದರು, "ನೀನು ಕರ್ಮಭ್ರಷ್ಟನಾಗಿರುವೆಯಾ?" ಅವರು ಹೇಳಿದರು - ಇಲ್ಲ, ನಾನು ಇಸ್ಲಾಮ್ ಸ್ವೀಕರಿಸಿ ಅಲ್ಲಾಹನ ಸಂದೇಶವಾಹಕರ ಜೊತೆ ಸೇರಿದ್ದೇನೆ. ಅಲ್ಲಾಹನಾಣೆ! ಪ್ರವಾದಿ [ಸ] ಅನುಮತಿ ನೀಡುವ ತನಕ ಯಮಾಮದಿಂದ ಒಂದು ಗೋದಿ ಕಾಳೂ  ನಿಮ್ಮ ಬಳಿ ಬರಲಾರದು. (ವರದಿ: ಹ. ಅಬೂ ಹುರೈರಾ [ರ]) 
[ಬುಖಾರಿ, ಮುಸ್ಲಿಮ್]

ಅಬೂ ತಾಲಿಬ್‌ರವರ ಮರಣ ಸಂದರ್ಭ

ಅಬೂ ತಾಲಿಬ್ ರ ನಿಧನದ ಸಮಯ ಬಂಧಾಗ ಪ್ರವಾದಿ [ಸ] ಅವರ ಬಳಿಗೆ ಹೋದರು. ಆಗ ಅವರ ಬಳಿ ಅಬೂಜಹಲ್ ಕೂಡಾ ಇದ್ದ. ಪ್ರವಾದಿ [ಸ] ಹೇಳಿದರು - "ಚಿಕ್ಕಪ್ಪಾ, "ಲಾ ಇಲಾಹ ಇಲ್ಲಲ್ಲಾಹ್" (ಅಲ್ಲಾಹನಲ್ಲದೆ ಅನ್ಯ ಆರಾಧ್ಯರಿಲ್ಲ) ಎಂದು ಹೇಳಿರಿ. ಅದರಿಂದ ಅಲ್ಲಾಹನ ಸನ್ನಿಧಿಯಲ್ಲಿ ನನಗೆ ಮಾತುಕತೆ ನಡೆಸುವ ಅವಕಾಶ ಒದಗೀತು." ಇದನ್ನು ಕೇಳಿ ಅಬೂಜಹಲ್ ಮತ್ತು ಅಬ್ದುಲ್ಲಾ ಬಿನ್ ಉಮಯ್ಯ ಹೀಗೆ ಹೇಳಿದರು - "ಅಬೂ ತಾಲಿಬರೇ, ನೀವು ಅಬ್ದುಲ್ ಮುತ್ತಲಿಬರ ಹಿರಿಯರ ಧರ್ಮವನ್ನು ತೊರೆಯುವಿರಾ?" ಅವರು ಇದೇ ರೀತಿ ತಮ್ಮ ಮಾತುಗಳಿಂದ ಅಬೂತಾಲಿಬರನ್ನು ಕೆರಳಿಸುತ್ತಿದ್ದರು. ಅಬೂತಾಲಿಬ್ ಹೇಳಿದ ಕೊನೆಯ ಮಾತು ಹೀಗಿತ್ತು - "ನಾನು ಅಬ್ದುಲ್ ಮುತ್ತಲಿಬ್ ರ ಹಾದಿಯಲ್ಲೇ ಸ್ಥಿರವಾಗಿರುವೆನು." ಪ್ರವಾದಿ [ಸ] ಹೇಳಿದರು - "ನನ್ನನ್ನು ಅದರಿಂದ ತಡೆಯುವ ತನಕ ನಾನು ನಿಮ್ಮ ಕ್ಷಮೆಗಾಗಿ ಪ್ರಾರ್ಥಿಸುತ್ತಿರುವೆನು." (ವರದಿ: ಹ. ಇಬ್ನು ಮುಸಯ್ಯಿಬ್ [ರ] ತಮ್ಮ ತಂದೆಯವರಿಂದ) 
[ಬುಖಾರಿ]

ರೊಮ್‌ನ ದೊರೆಗೆ ಪ್ರವಾದಿ[ಸ]ರವರ ಪತ್ರ

ಪ್ರವಾದಿ [ಸ] ಸೀಝರ್ (ರೊಮ್‌ನ ದೊರೆ)ಗೆ ಪತ್ರ ಬರೆದು ಇಸ್ಲಾಮಿನ ಆಹ್ವಾನ ನೀಡಿದರು. ಆ ಪತ್ರವನ್ನು ಪ್ರವಾದಿ [ಸ] ದಿಹ್ಯಾ ಕಲ್ಬೀಯವರ [ರ] ಮೂಲಕ ಕಳುಹಿಸಿದರು. ಅದನ್ನು ಬಸ್ರಾದ ರಾಜ್ಯಪಾಲರಿಗೆ ತಲುಪಿಸಿದರು ಮತ್ತು ಆವರು ಸೀಝರ್'ಗೆ ತಲುಪಿಸಲು ಹೇಳಿದರು. ಪತ್ರದ ಒಕ್ಕಣೆ ಹೀಗಿತ್ತು.

ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ
ಅಲ್ಲಾಹನ ದಾಸ ಮತ್ತು ಸಂದೇಶವಾಹಕ ಮುಹಮ್ಮದರ ವತಿಯಿಂದ ರೊಮ್‌ನ ಅಧಿಪತಿಯಾದ ಹರ್ಕುಲಿಸ್'ಗೆ

ಯಾರು ಸನ್ಮಾರ್ಗವನ್ನು ಅನುಸರಿಸುತ್ತಾನೋ ಅವನ ಮೇಲೆ ಶಾಂತಿಯಿರಲಿ.
ತರುವಾಯ ನಾನು ನಿಮಗೆ ಇಸ್ಲಾಮಿನ ಆಹ್ವಾನ ನೀಡುತ್ತೇನೆ. ಇಸ್ಲಾಮ್ ಸ್ವೀಕರಿಸಿರಿ. ಸುರಕ್ಷಿತರಾಗಿರುವಿರಿ. ಇಸ್ಲಾಮ್ ಸ್ವೀಕರಿಸಿರಿ ಅಲ್ಲಾಹನು ನಿಮಗೆ ಇಮ್ಮಡಿ ಪ್ರತಿಫಲ ದಯಪಾಲಿಸುವನು. ನೀವು ಮುಖ ತಿರುಗಿಸಿದರೆ ನಿಮ್ಮ ಮೇಲೆ ಅರೀಸಿಗಳ ಪಾಪವೂ ಇರುವುದು. 

"ಗ್ರಂಥದವರೇ, ನಿಮ್ಮ ಮತ್ತು ನಿಮ್ಮೊಳಗೆ ಸಮಾನವಾಗಿರುವ ವಿಷಯಗಳ ಕಡೆಗೆ ಬನ್ನಿರಿ-ನಾವು ಅಲ್ಲಾಹನ ಹೊರತು ಇತರ ಯಾರ ಆರಾಧನೆಯನ್ನೂ ಮಾಡದಿರೋಣ. ಅವನೊಂದಿಗೆ ಯಾರನ್ನೂ ಸಹಭಾಗಿಯಾಗಿ ಮಾಡದಿರೋಣ ಮತ್ತು ನಿಮ್ಮ ಪೈಕಿ ಯಾರೂ ಯಾರನ್ನೂ ತನ್ನ ಪ್ರಭುವಾಗಿಸದಿರೋಣ. ಈ ಕರೆಯನ್ನು ಸ್ವೀಕರಿಸಾಲು ಅವರು ಹಿಂಜರಿದರೆ ನಾವಂತು ಮುಸ್ಲಿಮರು (ಕೇವಲ ಅಲ್ಲಾಹನ ದಾಸ್ಯ-ಆರಾಧನೆ ಮತ್ತು ಅನುಸರಣೆ ಮಾಡುವವರು) ಎಂದು ಸ್ಪಷ್ಟವಾಗಿ ಹೇಳಿಬಿಡಿರಿ. (ಕುರಾನ್, 3: 64)
(ವರದಿ: ಹ. ಇಬ್ನು ಅಬ್ಬಾಸ್ [ರ]) 
[ಬುಖಾರಿ, ಮುಸ್ಲಿಮ್]    

ಕಿಸ್ರಾದ ದೊರೆಗೆ ಪ್ರವಾದಿ[ಸ]ರವರ ಪತ್ರ

ಪ್ರವಾದಿ [ಸ] ಕಿಸ್ರಾನ ಹೆಸರಿನ ಪತ್ರವನ್ನು ಅಬ್ದುಲ್ಲಾ ಬಿನ್ ಹುದುಫಾ ಸಹ್ಮೀಯವರ ಕೈಯಲ್ಲಿ ಕಳುಹಿಸಿಕೊಟ್ಟರು. ಅದನ್ನು ಬಹ್ರೈನ್ ನ ರಾಜ್ಯಪಾಲರಿಗೆ ತಲುಪಿಸಲು ಆದೇಶಿಸಿದರು (ಅವರು ಅದನ್ನು ಕಿಸ್ರಾ ತಲುಪಿಸುವರು) ಬಹ್ರೈನ್ ನ ರಾಜ್ಯಪಾಲರು ಅದನ್ನು ಕಿಸ್ರಾಗೆ ತಲುಪಿಸಿದರು. ಕಿಸ್ರಾ ಅದನ್ನು ಓದಿದ ನಂತರ ಹರಿದೆಸದರು. ಇಬ್ನು ಮುಸಯ್ಯಿಬ್ (ಹದೀಸ್ ನ ಓರ್ವ ವರದಿಗಾರ) ಹೀಗೆ ಹೇಳಿದರು - ಪ್ರವಾದಿ [ಸ] ಕಿಸ್ರಾ ಮತ್ತು ಅವನ ಅನುಯಾಯಿಗಳಿಗೆ "ಅವರು ಛಿದ್ರ ವಿಛಿದ್ರಗೊಂಡು ಚೂರುಚೂರಾಗಲಿ" ಎಂದು ಶಾಪ ಹಾಕಿದರು. (ವರದಿ: ಹ. ಇಬ್ನು ಅಬ್ಬಾಸ್ [ರ]) 
[ಬುಖಾರಿ]     

ಪ್ರವಾದಿ[ಸ]ರವರ ಅಧಿಪತಿಗಳಿಗೆ ಪತ್ರ

ಪ್ರವಾದಿ [ಸ] ಕಿಸ್ರಾ, ಸೀಝರ್, ನಜ್ಜಾಸಿ ಮತ್ತಿತರ ನಿರಂಕುಶ ಅಧಿಪತಿಗಳಿಗೆ ಪತ್ರ ಬರೆದು ಅವರನ್ನು ಅಲ್ಲಾಹನ (ವಿಧೇಯತೆ ಅರ್ಥಾತ್ ಇಸ್ಲಾಮ್) ಕಡೆಗೆ ಆಹ್ವಾನಿಸಿದ್ದರು. ಇಲ್ಲಿ ನಜ್ಜಾಸಿ ಎಂದು ಹೇಳಿರುವುದು ಪ್ರವಾದಿ [ಸ] (ಮದೀನಾದಲ್ಲಿ ಪರೋಕ್ಷ) ಜನಾಝಾ ನಮಾಝ್ ಮಾಡಿಸಿದ ನಜ್ಜಾಸಿಯಲ್ಲ. (ವರದಿ: ಹ. ಅನಸ್ [ರ]) 
[ಮುಸ್ಲಿಮ್]   

ಪ್ರವಾದಿ [ಸ]ರವರು ಉಪಯೋಗಿಸುತ್ತಿದ್ದ 12 ಆಹಾರ ವಸ್ತುಗಳು

    *    ಜವೆಗೋದಿ
    *    ಖರ್ಜೂರ
    *    ಅಂಜೂರ
    *    ದ್ರಾಕ್ಷಿ ಹಣ್ಣು
    *    ಮಕರಂದ (ಜೇನು ತುಪ್ಪ)
    *    ಕಲ್ಲಂಗಡಿ
    *    ಹಾಲು
    *    ಮಶ್ರೂಮ್
    *    ದಾಳಿಂಬೆ
    *    ಆಲಿವ್ ಎಣ್ಣೆ
    *    ಹುಳಿರಸ
    *    ನೀರು

ಸಹಭಾಗಿತ್ವ

ಪ್ರವಾದಿ [ಸ] ಹೇಳಿದರು: ಮಂಗಳಮಯನೂ ಮಹಾನನೂ ಆದ ಅಲ್ಲಾಹನು ಹೇಳುತ್ತಾನೆ, ನಾನು ಎಲ್ಲ ಸಹಭಾಗಿತ್ವಗಳಿಗಿಂತ ಹೆಚ್ಚು ಸಹಭಾಗಿತ್ವದಿಂದ ನಿರಪೇಕ್ಷನಾಗಿರುವೆನು. ಒಬ್ಬನು ಒಂದು ಕಾರ್ಯದಲ್ಲಿ ನನ್ನ ಜೊತೆ ಸಹಭಾಗಿಯಾಗಿ ಮಾಡಿದರೆ ನಾನು ಅವನನ್ನು ಅವನ ಸಹಭಾಗಿತ್ವವನ್ನು ಬಿಟ್ಟು ಬಿಡುತ್ತೇವೆ. (ವರದಿ: ಹ. ಅಬೂ ಹುರೈರಾ [ರ]) 
[ಮುಸ್ಲಿಮ್]    

ಪರಲೋಕದ ಜೀವನದ ಪ್ರಾಮುಖ್ಯತೆ

ಪ್ರವಾದಿ [ಸ] ಹೇಳಿದರು: "ಓ ಅಲ್ಲಾಹ್! ಜೀವನವಂತು ಪರಲೋಕದ ಜೀವನವಾಗಿದೆ." (ವರದಿ: ಹ. ಅನಸ್ [ರ]) 
[ಬುಖಾರಿ]

ಬೆಳಿಗ್ಗೆ ಸಂಜೆ ಮಸೀದಿಗೆ ಹೋಗುವ ವ್ಯಕ್ತಿ

ಪ್ರವಾದಿ [ಸ] ಹೇಳಿದರು: ಬೆಳಿಗ್ಗೆ ಸಂಜೆ ಮಸೀದಿಗೆ ಹೋಗುವ ವ್ಯಕ್ತಿಗೆ ಅಲ್ಲಾಹನು ಸ್ವರ್ಗದಲ್ಲಿ ಪ್ರತಿ ಬೆಳಿಗ್ಗೆ ಮತ್ತು ಸಂಜೆ ಅವನ ಆತಿಥ್ಯದ ವ್ಯವಸ್ಥೆ ಮಾಡುವನು. (ವರದಿ: ಹ. ಅಬೂ ಹುರೈರಾ [ರ]) 
[ಬುಖಾರಿ, ಮುಸ್ಲಿಮ್]  

ಪ್ರಭುವಿನ ಜೊತೆ ರಹಸ್ಯ ಸಂಭಾಷಣೆ

ಪ್ರವಾದಿ [ಸ] ಹೇಳಿದರು: ನಿಮ್ಮ ಪೈಕಿ ಯಾರಾದರೂ ನಮಾಝ್ ಮಾಡುವಾಗ ನಿಜವಾದ ಅವನು ತನ್ನ ಪ್ರಭುವಿನ ಜೊತೆ ರಹಸ್ಯ ಸಂಭಾಷಣೆ ನಡೆಸುತ್ತಾರೆ. (ವರದಿ: ಹ. ಅನಸ್ ಬಿನ್ ಮಾಲೀಕ್ [ರ]) 
[ಮುಸ್ಲಿಮ್]

ಕಾಯಂ ಮಾಡುವ ಇಬಾದತ್

ಪ್ರವಾದಿ [ಸ] ಹೇಳಿದರು: ಧರ್ಮ (ಆರಾಧನೆ ಮತ್ತು ಕರ್ಮ) ಅನುಯಾಯಿಯು ಅದನ್ನು ಕಾಯಂ ಆಗಿ ಪಾಲಿಸಿದರೆ ಅಲ್ಲಾಹನಿಗೆ ಹೆಚ್ಚು ಪ್ರಿಯವಾಗಿದೆ. (ವರದಿ: ಹ. ಆಯಿಶಾ [ರ]) 
[ಬುಖಾರಿ, ಮುಸ್ಲಿಮ್]  

ಕಿಯಾಮತ್‌ನಂದು ಏಬ್ಬಿಸಲ್ಪಡುವನು

ಪ್ರವಾದಿ [ಸ] ಹೇಳಿದರು: ಪ್ರತಿಯೊಬ್ಬ ದಾಸನು ಯಾವ ಸ್ಥಿತಿಯಲ್ಲಿ ಮರಣ ಹೊಂದಿದನೋ ಅವನನ್ನು ಅದೇ ಸ್ಥಿತಿಯಲ್ಲಿ ಕಿಯಾಮತ್ ದಿನದಂದು ಎಬ್ಬಿಸಲಾಗುವುದು. (ವರದಿ: ಹ. ಜಾಬಿರ್ [ರ]) 
[ಮುಸ್ಲಿಮ್]  

ಪುಣ್ಯಕಾರ್ಯ

ಪ್ರವಾದಿ [ಸ] ಹೇಳಿದರು: ಪ್ರತಿಯೊಂದು ಪುಣ್ಯಕಾರ್ಯವು ದಾನವಾಗಿದೆ. (ವರದಿ: ಹ. ಜಾಬೀರ್ ಬಿನ್ ಅಬ್ದುಲ್ಲಾ [ರ]) 
[ಬುಖಾರಿ]

ಯಾರು ಉತ್ತಮ?

ಒಮ್ಮೆ ಪ್ರವಾದಿವರ್ಯರ [ಸ] ಬಳಿ ಹಳ್ಳಿಗ ಬಂದು ಹೀಗೆ ವಿಚಾರಿಸಿದ: 'ಯಾವ ವ್ಯಕ್ತಿ ಉತ್ತಮನಾಗಿದ್ದಾನೆ?' ಪ್ರವಾದಿ [ಸ] ಹೇಳಿದರು - "ಯಾರಿಗೆ ದೀರ್ಘಾಯುಷ್ಯ ಲಭಿಸಿ ಅವನ ಕರ್ಮಗಳು ಉತ್ತಮವಾದುದೋ ಅವನು ಭಾಗ್ಯಶಾಲಿಯಾಗಿದ್ದಾನೆ." ಆ ವ್ಯಕ್ತಿ ಪ್ರಶ್ನಿಸಿದ "ಅಲ್ಲಾಹನ ಸಂದೇಶವಾಹಕರೇ, ಯಾವ ಕರ್ಮವು ಉತ್ತಮವಾಗಿದೆ?" ಪ್ರವಾದಿ [ಸ] ಹೇಳಿದರು - "ನೀವು ಇಹಲೋಕ ತ್ಯಜಿಸುವಾಗ ನಿಮ್ಮ ನಾಲಗೆಯ ಅಲ್ಲಾಹನ ಸ್ಮರಣೆಯಲ್ಲಿ ನಿರತವಾಗಿರುವುದು." (ವರದಿ: ಹ. ಅಬ್ದುಲ್ಲಾ ಬಿನ್ ಬುಸ್ರ್ [ರ]) 
[ಅಹ್ಮದ್, ತಿರ್ಮಿದಿ]  

ಮನೆಮಂದಿಗೆ ಕರ್ಚು ಮಾಡುವ ದಿನಾರ್

ಪ್ರವಾದಿ [ಸ] ಹೇಳಿದರು: "ಒಂದು ದೀನಾರನ್ನು ನೀವು ಅಲ್ಲಾಹನ ಮಾರ್ಗದಲ್ಲಿ (ಹೋರಾಟದಲ್ಲಿ) ಖರ್ಚು ಮಾಡುತ್ತೀರಿ. ಒಂದು ದೀನಾರನ್ನು ನೀವು ಜೀತ ವಿಮುಕ್ತಿಗೆ ಮಾಡುತ್ತೀರಿ. ಒಂದು ದೀನಾರನ್ನು ನೀವು ಬಡವರಿಗೆ ದಾನ ಮಾಡಲು ಖರ್ಚು ಮಾಡುತ್ತೀರಿ ಮತ್ತು ಒಂದು ದೀನಾರನ್ನು ನಿಮ್ಮ ಮನೆಮಂದಿಗಯ ಮೇಲೆ ಕರ್ಚು ಮಾಡುತ್ತೀರಿ. ಆ ಪೈಕಿ ಅತ್ಯಧಿಕ ಪುಣ್ಯವಿರುವುದು ನೀವು ನಿಮ್ಮ ಮನೆಮಂದಿಗೆ ಖರ್ಚು ಮಾಡುವ ದೀನಾರ್'ಗಾಗಿದೆ. (ವರದಿ: ಹ. ಅಬೂ ಹುರೈರಾ [ರ]) 
[ಮುಸ್ಲಿಮ್]

ಒಂದು ವಚನ

ಪ್ರವಾದಿವರ್ಯರು [ಸ] ತಮ್ಮ ಪಿತೃ ಸೋದರರಾದ ಅಬೂತಾಲಿಬರ ಮುಂದೆ ಈ ರೀತಿ ಹೇಳಿದ್ದರು: ನಾನು ಅವರಿಗೆ (ಕುರೈಶರಿಗೆ) ಕೇವಲ ಒಂದು ವಚನವನ್ನು ಭೋಧಿಸುತ್ತಿದ್ದೇನೆ. ಅದೆಂತಹ ವಚನವೆಂದರೆ ಅದರ ಮೂಲಕ ಸಂಪೂರ್ಣ ಅರಬ್ ಜಗತ್ತು ಅವರಿಗೆ ವಿಧೇಯವಾಗುವುದು ಮತ್ತು ಸಂಪೂರ್ಣ ಅರಬೇತರ ಜಗತ್ತು ಅವರಿಗೆ ಅಧೀನವಾಗುವುದು." 
[ಮುಸ್ನದ್ ಅಹ್ಮದ್]   

ಅನರ್ಹರಿಗೆ ಅಧಿಕಾರ

ಪ್ರವಾದಿ[ಸ] ಹೀಗೆ ಹೇಳಿರುವರು: "ಅಮಾನತ್ (ವಿಶ್ವಸ್ಥ ವಸ್ತು) ಹಾಳುಗೆಡವಲ್ಪಟ್ಟರೆ, ನೀವು ಪುನರುತ್ಥಾನ ದಿನವನ್ನು ನಿರೀಕ್ಷಿಸಿರಿ." 
ಒಬ್ಬರು ಪ್ರಶ್ನಿಸಿದರು ಅಮಾನತ್ ಹೇಗೆ ಹಾಳುಗೆಡೆವಲ್ಪಡುತ್ತದೆ?’ 
ಪ್ರವಾದಿ[ಸ] ಹೇಳಿದರು: "ಆಡಳಿತ ವ್ಯವಹಾರಗಳು ಅನರ್ಹ ವ್ಯಕ್ತಿಗಳ ಕೈಗೆ ಒಪ್ಪಿಸಲ್ಪಟ್ಟರೆ ನೀವು ಪುನರುತ್ಥಾನ ದಿನವನ್ನು ನಿರೀಕ್ಷಿಸಿರಿ." 
(ಹಝ್ರತ್ ಅಬೂ ಹುರೈರಾ [ರ]) 
[ಬುಖಾರಿ]

ಸಂಬಂಧ ಕೆಡಿಸುವ ವಿಷಯಗಳು

ಪ್ರವಾದಿ[ಸ] ಹೀಗೆ ಹೇಳಿರುವರು: ಕೆಟ್ಟ ಗುಮಾನಿಗಳಿಂದ ದೂರವಿರಿ. ಏಕೆಂದರೆ ಕೆಟ್ಟ ಗುಮಾನಿಯು ಅತ್ಯಂತ ಕೆಟ್ಟ ಸುಳ್ಳಾಗಿದೆ. ಜನರ ದೋಷಗಳನ್ನು ಹುಡುಕಬೇಡಿ, ಪರಸ್ಪರರ ಮೇಲೆ ಅಸೂಯೆ ಪಡಬೇಡಿ, ಪರಸ್ಪರರ ಮೇಲೆ ಹಗೆತನವಿಟ್ಟುಕೊಳ್ಳಬೇಡಿ, ಅಲ್ಲಾಹನ ದಾಸರೇ! ಪರಸ್ಪರ ಸಹೋದರರಾಗಿರಿ." (ಹಝ್ರತ್ ಅಬೂ ಹುರೈರಾ [ರ]) 
[ಬುಖಾರಿ]  

ಅಕ್ರಮ ದಾಸ್ತಾನು

ಪ್ರವಾದಿ[ಸ] ಹೀಗಿ ಹೇಳಿರುವರು: "ಪಾಪಿಯಾದವನು ಮಾತ್ರ ಅಕ್ರಮ ದಾಸ್ತಾನು ಮಾಡುತ್ತಾನೆ." (ಹಝ್ರತ್ ಮಹ್‌ಮರ್ ಬಿನ್ ಅಬ್ದುಲ್ಲಾ [ರ]) 
[ಮುಸ್ಲಿಮ್]

Thursday, September 22, 2016

ಅಕ್ರಮ ತಡೆಯಿರಿ

ಪ್ರವಾದಿ[] ಹೀಗೆ ಹೇಳಿರುವರು: "ಜನರು ಅಕ್ರಮಿಯನ್ನು ನೋಡಿಯೂ ಅವನ ಕೈ ಹಿಡಿಯದೆ ಹೋದರೆ ಅಲ್ಲಾಹನು ಅವರ ಮೇಲೆ ಸಾರ್ವತ್ರಕ ಶಿಕ್ಷೆಯನ್ನಿಸುವನು." (ವರದಿ ಹಝ್ರತ್ ಅಬೂಬಕರ್ ಸಿದ್ದೀಕ್ []) 
[ತಿರ್ಮಿದಿ]

ನಾನು ಪ್ರವಾದಿ[ಸ] ಅವರೋಡನೆ ಕೋಮುವಾದ ಅಂದರೇನು? ಎಂದು ಪ್ರಶ್ನಿಸಿದೆ.  ಅದಕ್ಕವರು ಹೇಳಿದರು: "ನೀನು ಅನ್ಯಾಯದ ವಿಷಯದಲ್ಲಿ ನಿನ್ನ ಜನಾಂಗಕ್ಕೆ  ಸಹಾಯ ಮಾಡಿದರೆ ಅದುವೇ ಕೋಮುವಾದ." (ವರದಿ: ವಾಯಿಲ್ ಬಿನ್ ಅಸ್‌ಕಹ್) 
[ಅಬೂ ದಾವೂದ್]

ಲಜ್ಜಾಹೀನತೆ

ಪ್ರವಾದಿ[] ಹೀಗೆ ಹೇಳಿದರು: "ನಿಮ್ಮಲ್ಲಿ ನಾಚಿಕೆ ಇಲ್ಲದೆ ಹೋದಾಗ ನಿಮಗಿಷ್ಟವಿದ್ದಂತೆ ಮಾಡಿರಿ ಎಂಬುದು ಗತ ಪ್ರವಾದಿಗಳಿಂದ ಜನರಿಗೆ ದೊರೆತ ಬೋಧನೆಗಳ ಪೈಕಿ ಒಂದಾಗಿದೆ." (ವರದಿ: ಅಬ್ದುಲ್ಲಾ ಬಿನ್ ಮಸ್ಊದ್ ()] 
[ಬುಖಾರಿ

Wednesday, September 21, 2016

ಕೆಡುಕನ್ನು ತಡೆಯುವ ವಿಧಾನ

ನಿಮ್ಮ ಪೈಕಿ ಯಾರಾದರೂ ಒಂದು ಕೆಡುಕನ್ನು ಕಂಡರೆ ಅವನು ಅದನ್ನು ತನ್ನ ಕೈಯಿಂದ ನಿವಾರಿಸಲಿ. ಅವನಿಗೆ ಹಾಗೆ ಮಾಡಲಸಾಧ್ಯವಾದರೆ ಅದಕ್ಕೆ ತನ್ನ ನಾಲಗೆಯನ್ನು ಬಳಸಲಿ. ಅದೂ ಸಾಧ್ಯವಾಗದಿದ್ದರೆ ಮನಸ್ಸಿನಿಂದಾದರೂ ಅದರ ನಿವಾರಣೆಗೆ ಯತ್ನಿಸಬೇಕು ಮತ್ತು ಇದು ಈಮಾನಿನ (ಸತ್ಯವಿಶ್ವಾಸದ) ಅತ್ಯಂತ ದುರ್ಬಲ ಮಟ್ಟವಾಗಿದೆ
[ಮುಸ್ಲಿಮ್]

ಒಳಿತಿನ ಉಪದೇಶ

ಪರಸ್ಪರ ಒಳಿತಿನ ಉಪದೇಶ ಮಾಡಿರಿ ಮತ್ತು ಪರಸ್ಪರರನ್ನು ಕೆಡುಕಿನಿಂದ ತಡೆಯಿರಿ
[ಅಬೂ ದಾವೂದ್]

ಒಳಿತನ್ನು ಅಜ್ಜಾಪಿಸಿರಿ ಕೆಡುಕಿನಿಂದ ತಡೆಯಿರಿ
[ಕುರಾನ್, 31: 17]

ಕೊನೆಯ ಪ್ರವಾದಿಯನ್ನು ಅನುಸರಿಸಬೇಕು

ಪ್ರವಾದಿವರ್ಯರು []ರು ರೀತಿ ಹೇಳಿರುವರು: "ಮೂಸಾ [] ಅವರೂ ಇಂದು ಜೀವಂತವಿರುತ್ತಿದ್ದರೆ ಅವರಿಗೂ ನನ್ನನ್ನು ಅನುಸರಿಸುವುದರ ಹೊರತು ಅನ್ಯ ಮಾರ್ಗವಿರಲಿಲ್ಲ
[ಅಹ್ಮದ್, ಬೈಹುಕಿ]

ಕ್ರೈಸ್ತರು ಪ್ರವಾದಿ[ಸ]ರವರನ್ನು ನಂಭಬೇಕು

ಪ್ರವಾದಿ ಮುಹಮ್ಮದ್ []ರವರು ರೀತಿ ಹೇಳಿರುವರು: "ಮುಹಮ್ಮದರ [] ಪ್ರಾಣವು ಯಾರ ಕೈಯಲ್ಲಿದೆಯೋ ಅವನಾಣೆ. ಸಮುದಾಯದಲ್ಲಿ ಯಾವ ವ್ಯಕ್ತಿಗಾದರೂ - ಉದಾ: ಯಾವ ಯಹೂದಿ ಅಥವಾ ಕ್ರೈಸ್ತನಿಗೆ - ನನ್ನ ಪ್ರವಾದಿತ್ವದ ಸಂದೇಶವು ತಲುಪಿದ್ದು ಅದರ ಹೊರತಾಗಿಯೂ ಅವನು ನಾನು ತಂದಿರುವ ಧರ್ಮದ ಮೇಲೆ ವಿಶ್ವಾಸವಿರಿಸದೆ ಸತ್ತು ಹೋದರೆ ಅವನು ಖಂಡಿತ ನರಕವಾಸಿಯಾಗುವನು
[ಮುಸ್ಲಿಮ್]