Saturday, May 12, 2018

ಅರ್ಪಣಾ ಮನೋಭಾವ


. ಅನಸ್ [] ಹೇಳುತ್ತಾರೆ - ಅಬೂ ಸುಫ್ಯಾನರ ನಲ್ವತ್ತು ತಂಡಗಳ ತುಕ್ಕಡಿಯು ಆಧುನಿಕ ಶಸ್ತ್ರಾಸ್ತ ಮತ್ತು ಆಹಾರ ಸಾಮಗ್ರಿಗಳೊಂದಿಗೆ ಸಿರಿಯಾದಿಂದ ಮಕ್ಕಾಕ್ಕೆ ಹೊರಟಿದೆಯೆಂದು ತಿಳಿದಾಗ, ಪ್ರವಾದಿ [] ಸಹಾಬಿಗಳ ಜೊತೆ ಸಮಾಲೋಚನೆ ನಡೆಸಿದರು. ಆಗ ಸಅದ್ ಬಿನ್ ಉಬಾದ [] ಎದ್ದು ನಿಂತು ಹೀಗೆಂದರು - ತಾವು ನಮಗೆ ಸಮುದ್ರದಲ್ಲಿ ಕುದುರೆಗಳನ್ನು ಒಡಿಸಿರಿ ಎಂಬ ಅಪ್ಪಣೆ ಕೊಟ್ಟರೆ ನಾವು ಹಿಂದುಮುಂದು ನೋಡದೆ ಸಮುದ್ರಕ್ಕೆ ನಮ್ಮ ಕುದುರೆಗಳೊಂದಿಗೆ ಧುಮುಕುವೆವು. ಬರ್ಕುಲ್ ಗುಮಾದ್ವರೆಗೆ ಕುದುರೆ ಸವಾರಿ ಮಾಡಿ ಹೋಗಿ ವೈರಿಗಳೊಂದಿಗೆ ಕಾದಾಡಬೇಕೆಂದು ನಮಗೆ ಅಪ್ಪಣೆ ಕೊಟ್ಟರೆ ನಾವು ಅದನ್ನೂ ಪಾಲಿಸುವೆವು.
[ಮುಸ್ಲಿಮ್]

ತಾರಿಕ್ ಬಿನ್ ಶಿಹಾಬ್ ಹೇಳುತ್ತಾರೆ - ನಾನು ಅಬ್ದುಲ್ಲಾ ಬಿನ್ ಮಸ್ಊದ್ [] ಹೀಗೆ ಹೇಳುವುದಾಗಿ ಕೇಳಿದ್ದೇನೆ. ನಾನು ಮಿಕ್ದಾದ್ ಬಿನ್ ಅಸ್ವದ್ ಒಂದು ವಿಶೇಷ ಸಾಧನೆಯನ್ನು ನೋಡಿದ್ದೇನೆ. ಇತರೆಲ್ಲ ಸಾಧನೆಗಳಿಗಿಂತಲೂ ಪ್ರಿಯವಾಗಿರುವ ಸಾಧನೆಯು ನನ್ನಿಂದಾಗುತ್ತಿದ್ದರೆ! ಅದೇನೆಂದರೆ ಪ್ರವಾದಿಯವರು [] ಮಕ್ಕಾದ ಬಹುದೇವಾರಾಧಕರೊಂದಿಗೆ ಹೋರಾಡುವ ಕರೆಕೊಟ್ಟಾಗ ಮಿಕ್ದಾದ್ ಮುಂದೆ ಬಂದು ಹೀಗೆಂದರು - ಅಲ್ಲಾಹನ ಸಂದೇಶವಾಹಕರೇ! . ಮೂಸಾರ [] ಜನಾಂಗವು ಅವರೊಂದಿಗೆ, ನೀವು ನಿಮ್ಮ ಪ್ರಭೂ ಹೋಗಿ ವೈರಿಗಳೊಂದಿಗೆ ಕಾದಾಡಿರಿ ಎಂದು ಹೇಳಿದಂತೆ ನಾವು ತಮ್ಮೊಂದಿಗೆ ಖಂಡಿತ ಹೇಳಲಾರೆವು. ನಾವಂತೂ ತಮ್ಮ ಬಲಭಾಗದಲ್ಲೂ ಎಡಭಾಗದಲ್ಲೂ ಮುಂದೆಯೂ ಹಿಂದೆಯೂ ನಿಂತು ವೈರಿಗಳೊಂದಿಗೆ ಹೋರಾಡವೆವು. ಮಿಕ್ದಾದ್ ಮಾತನ್ನು ಹೇಳಿದಾಗ ಪ್ರವಾದಿಯವರ [] ಮುಖ ಸಂತೋಷದಿಂದ ಅರಳಿತು
[ಮುಸ್ನದ್ ಅಹ್ಮದ್]

No comments:

Post a Comment