Tuesday, May 8, 2018

ಬದ್ರ್ ಯುದ್ಧ ಏಕೆ ಸಂಭವಿಸಿತು?


ಅಲ್ಲಾಹನಲ್ಲದೆ ಆರಾಧನೆಗೆ ಬೇರೆ ಆರಾಧ್ಯರಿಲ್ಲ. ಆರಾಧನೆಗೆ ಅಲ್ಲಾಹನೇ ಅರ್ಹನು. ಭೂಮಿಯಲ್ಲಿ ಇದನ್ನು ಸಂಸ್ಥಾಪಿಸುವುದಕ್ಕಾಗಿ ಅಲ್ಲಾಹನನ್ನು ಮಾತ್ರ ಆರಾಧಿಸಿರಿ ಎಂದು ಸಹನೆಯ, ತಾಳ್ಮೆಯ ಹಾಗೂ ಶಾಂತಿಯ ಪ್ರತೀಕರಾದ ಪ್ರವಾದಿ ಮುಹಮ್ಮದ್ []ರವರು ಮಕ್ಕಾ ನಿವಾಸಿಗಳೊಂದಿಗೆ ಹೇಳಿದಾಗ ಮಕ್ಕಾ ನಿವಾಸಿಗಳಿಂದ ತೀವ್ರ ಮಾನಸಿಕ ಹಾಗೂ ಶಾರೀರಿಕ ಪೀಡನೆಗಳನ್ನು ಸಹಿಸಬೇಕಾಗಿ ಬಂತು. ಪೀಡನೆ ಅತಿಯಾದಾಗ ಪ್ರವಾದಿ []ರು ಅಲ್ಲಾಹುವಿನ ಅನುಮತಿಯೊಂದಿಗೆ ಮಕ್ಕಾದಿಂದ ಮದೀನಾಕ್ಕೆ ಯಾತ್ರೆ ಕೈಗೊಳ್ಳುತ್ತಾರೆ.

ಅಲ್ಲಿಯೂ ಪ್ರವಾದಿ []ರವರನ್ನು ಅಕ್ರಮಿಸಲು ಸಜ್ಜಾದಾಗ ತೌಹೀದ್ (ಏಕದೇವತ್ವ) ಸ್ಥಾಪನೆಗಾಗಿ ವಿಶ್ವಾಸ ಸ್ವಾತಂತ್ರ್ಯಕಾಗಿ ಪ್ರವಾದಿ []ರವರಿಗೆ ಖಡ್ಗ ತೆಗೆಯಬೇಕಾಗಿ ಬಂತು. "ಶಹಾದತ್" ಕಲಿಮಾದ ಸ್ಥಾಪನೆಯೇ ಪವಿತ್ರ ಯುದ್ಧಕ್ಕಾಗಿ ಪ್ರವಾದಿ []ರವರಿಗೆ ಯುದ್ಧಕ್ಕಾಗಿ ಪ್ರೇರಣೆ ನೀಡಿರುವುದು ಎಂದು ಚರೆತ್ರೆಯು ನಮಗೆ ಕಲಿಸುತ್ತದೆ.

No comments:

Post a Comment