ಅಲ್ಲಾಹನಲ್ಲದೆ ಆರಾಧನೆಗೆ ಬೇರೆ ಆರಾಧ್ಯರಿಲ್ಲ. ಆರಾಧನೆಗೆ ಅಲ್ಲಾಹನೇ ಅರ್ಹನು. ಈ ಭೂಮಿಯಲ್ಲಿ ಇದನ್ನು ಸಂಸ್ಥಾಪಿಸುವುದಕ್ಕಾಗಿ ಅಲ್ಲಾಹನನ್ನು ಮಾತ್ರ ಆರಾಧಿಸಿರಿ ಎಂದು ಸಹನೆಯ, ತಾಳ್ಮೆಯ ಹಾಗೂ ಶಾಂತಿಯ ಪ್ರತೀಕರಾದ ಪ್ರವಾದಿ ಮುಹಮ್ಮದ್ [ಸ]ರವರು ಮಕ್ಕಾ ನಿವಾಸಿಗಳೊಂದಿಗೆ ಹೇಳಿದಾಗ ಮಕ್ಕಾ ನಿವಾಸಿಗಳಿಂದ ತೀವ್ರ ಮಾನಸಿಕ ಹಾಗೂ ಶಾರೀರಿಕ ಪೀಡನೆಗಳನ್ನು ಸಹಿಸಬೇಕಾಗಿ ಬಂತು. ಪೀಡನೆ ಅತಿಯಾದಾಗ ಪ್ರವಾದಿ [ಸ]ರು ಅಲ್ಲಾಹುವಿನ ಅನುಮತಿಯೊಂದಿಗೆ ಮಕ್ಕಾದಿಂದ ಮದೀನಾಕ್ಕೆ ಯಾತ್ರೆ ಕೈಗೊಳ್ಳುತ್ತಾರೆ.
ಅಲ್ಲಿಯೂ ಪ್ರವಾದಿ [ಸ]ರವರನ್ನು ಅಕ್ರಮಿಸಲು ಸಜ್ಜಾದಾಗ ತೌಹೀದ್ನ (ಏಕದೇವತ್ವ) ಸ್ಥಾಪನೆಗಾಗಿ ವಿಶ್ವಾಸ ಸ್ವಾತಂತ್ರ್ಯಕಾಗಿ ಪ್ರವಾದಿ [ಸ]ರವರಿಗೆ ಖಡ್ಗ ತೆಗೆಯಬೇಕಾಗಿ ಬಂತು. "ಶಹಾದತ್" ಕಲಿಮಾದ ಸ್ಥಾಪನೆಯೇ ಈ ಪವಿತ್ರ ಯುದ್ಧಕ್ಕಾಗಿ ಪ್ರವಾದಿ [ಸ]ರವರಿಗೆ ಯುದ್ಧಕ್ಕಾಗಿ ಪ್ರೇರಣೆ ನೀಡಿರುವುದು ಎಂದು ಚರೆತ್ರೆಯು ನಮಗೆ ಕಲಿಸುತ್ತದೆ.
No comments:
Post a Comment