ಅಬೂಕತಾದ [ರ] ಪ್ರವಾದಿಯವರ [ಸ] ಕುರಿತು ಹೀಗೆನ್ನುತ್ತಾರೆ - ಪ್ರವಾದಿವರ್ಯರು [ಸ] ತಮ್ಮ ಉಪನ್ಯಾಸದಲ್ಲಿ, ಅಲ್ಲಾಹನ ಮೇಲೆ ಭರವಸೆ ಇಡುವುದು ಹಾಗೂ ಅವನ ಮಾರ್ಗದಲ್ಲಿ ಜಿಹಾದ್ ಮಾಡುವುದು ಅತ್ಯುತ್ತಮ ಕರ್ಮವೆಂದು ವರ್ಣೆಸಿದರು. ಆಗ ಒಬ್ಬ ವ್ಯಕ್ತಿ ಎದ್ದು ನಿಂತು, ಅಲ್ಲಾಹನ ಸಂದೇಶವಾಹಕರೇ! ನಾನು ಅಲ್ಲಾಹನ ಮಾರ್ಗದಲ್ಲಿ ನನ್ನ ಪ್ರಾಣವನ್ನು ಅರ್ಪಿಸಿದರೆ ನನ್ನ ಗತ ಪಾಪಗಳೆಲ್ಲ ಕ್ಷಮಿಸಲ್ಪಡುವುದೇ ಎಂದು ಕೇಳಿದನು. ಪ್ರವಾದಿ [ಸ] ಹೇಳಿದರು - ಹೌದು! ನೀನು ಅಲ್ಲಾಹನ ಮಾರ್ಗದಲ್ಲಿ ಹೋರಾಡುವಾಗ ಪಲಾಯನ ಮಾಡದೆ ಶತ್ರುಗಳ ವಿರುದ್ಧ ಸ್ಥಿರಚಿತ್ತೆಯನ್ನು ಪ್ರದರ್ಶಿಸಿದರೆ ಮತ್ತು ಅಲ್ಲಾಹನಿಂದ ಪುಣ್ಯಗಳಿಸುವ ಉದ್ದೇಶದಿಂದ ಹೋರಾಡುವಾಗ ವಧಿಸಲ್ಪಟ್ಟರೆ ನಿನ್ನ ಎಲ್ಲ ಪಾಪಗಳೂ ಕ್ಷಮಿಸಲ್ಪಡುವುವು. ಸ್ವಲ್ಪ ಹೊತ್ತಿನ ಬಳಿಕ ಪ್ರವಾದಿ [ಸ], ಅವನೊಂದಿಗೆ, ನೀನೀಗ ಕೇಳಿದ ಪ್ರಶ್ನೆ ಯಾವುದು ಎಂದು ಕೇಳಿದರು. ಅವನು ಹೀಗೆಂದನು - ಅಲ್ಲಾಹನ ಮಾರ್ಗದಲ್ಲಿ ಹೋರಾಡುವಾಗ ವಧಿಸಲ್ಪಟ್ಟರೆ ನನ್ನ ಗತ ಪಾಪಗಳೆಲ್ಲ ಕ್ಷಮಿಸಲ್ಪಡುವುದೇ ಎಂದು ನಾನು ಕೇಳಿದ್ದೆ. ಪ್ರವಾದಿ [ಸ] ಹೇಳಿದರು - ಹೌದು. ನೀನು ವೈರಿಗಳ ವಿರುದ್ಧ ಪಲಾಯನ ಮಾಡದೆ ಸ್ಥಿರವಾಗಿ ನಿಂತು ಅಲ್ಲಾಹನ ಪುಣ್ಯಗಳಿಸುವ ಉದ್ದೇಶದಿಂದ ಹೋರಾಡಿದರೆ ನಿನ್ನ ಎಲ್ಲ ಪಾಪಗಳೂ ಕ್ಷಮಿಸಲ್ಪಡುವುವು. ಆದರೆ ನಿನ್ನ ಮೇಲೆ ಯಾರದಾದರೂ ಸಾಲವಿದ್ದರೆ ಅದು ಕ್ಷಮಿಸಲ್ಪಡಲಾರದು. ನನಗೆ ಜಿಬ್ರೀಲ್ [ಅ] ಈಗಷ್ಟೆ ಅದನ್ನು ತಿಳಿಸಿದರು.
[ಮುಸ್ಲಿಮ್]
No comments:
Post a Comment