Sunday, May 13, 2018

ಪ್ರವಾದಿವರ್ಯರ [ಸ] ಅನುಸರಣೆಯ ಮಹತ್ವ



ಹ. ಜಾಬಿರ್ [ರ] ಹೇಳುತ್ತಾರೆ - ಪ್ರವಾದಿಯವರು [ಸ] ಮಕ್ಕಾ ವಿಜಯದ ವರ್ಷ ರಮಝಾನ್ ತಂಗಳಲ್ಲಿ ಮಕ್ಕಾದ ಆಕ್ರಮಣ ಮಾಡಲಿಕ್ಕಾಗಿ ಹೊರಟು ಕುರಾಉಲ್ ಗುಮೈ ಎಂಬಲ್ಲಿಗೆ ತಲುಪಿದರು. ಪ್ರವಾದಿ [ಸ] ಮತ್ತು ಯೋಧರು ಅಂಧು ಉಪವಾಸ ಆಚರಿಸಿದ್ದರು. ಪ್ರಸ್ತುತ ಸ್ಥಳಕ್ಕೆ ತಲುಪಿದಾಗ ಪ್ರವಾದಿ [ಸ] ನೀರು ತರಿಸಿ ಮೇಲೆತ್ತಿ ಎಲ್ಲರೂ ನೋಡುವ ಹಾಗೆ ಕುಡಿದರು. (ಅರ್ಥಾತ್ ಉಪವಾಸ ಮುರಿದರು) ಆ ಬಳೀಕವೂ ಕೆಲವು ಮಂದಿ ಉಪವಾಸದಿಂದಿದ್ದಾರೆ. (ಅಂದರೆ ಅವರು ಉಪವಾಸ ಮುರಿಯಲಿಲ್ಲ) ಎಂದು ಅವರೊಂದಿಗೆ ಹೇಳಲಾದಾಗ ಪ್ರವಾದಿ [ಸ] ಅವರು ಅವಿಧೇಯರು ಎಂದು ಹೇಳಿದರು. 
[ಮುಸ್ಲಿಮ್]

1 comment:

  1. ರಮಝಾನ್ ತಂಗಳಲ್ಲಿ
    ....... ಅಥವಾ ತಿಂಗಳಲ್ಲಿ ?

    ReplyDelete