Saturday, May 12, 2018

ತಾಳ್ಮೆ ಮತ್ತು ಸಾಂತ್ವನ

ಹ. ಅನಸ್ [ರ] ಹೇಳುತ್ತಾರೆ - ಅಬೂತಲ್ಹರಿಗೆ ಉಮ್ಮು ಸಲೈಮ್‌ರಿಂದ ಒಬ್ಬ ಪುತ್ರ ಜನಿಸಿದ್ದನು. (ಅಬೂತಲ್ಹ ಪ್ರಯಾಣದಲ್ಲಿದ್ದಾಗ) ಅವನ ನಿಧನವಾಯಿತು. ಉಮ್ಮು ಸಲೈಮ್‌ರು ಮನೆಯವರೊಂದಿಗೆ, ನೀವಾರೂ ಮಗುವಿನ ನಿಧನ ವಾರ್ತೆಯನ್ನು ಅಬೂತಲ್ಹರಿಗೆ ನೀಡವಾರದೆಂದೂ ನಾನೇ ನೀಡುವೆನೆಂದೂ ತಿಳಿಸಿದರು. ಅಬೂತಲ್ಹ ಬಂದಾಗ ಮೊಟ್ಟ ಮೊದಲು ರಾತ್ರಿಯ ಊಟ ಬಡಿಸಿದರು. ಅವರು ಊಟ ಮಾಡಿ ಅಲ್ಲೇ ಉಳಕೊಂಡರು. ಸ್ವಲ್ಪ ದಣೆವಾರಿದ ಬಳಿಕ ಉಮ್ಮು ಸುಲೈಮ್ ಹೇಳಿದರು - ಅಬೂತಲ್ಹ! ಯಾರಾದರೂ ಒಂದು ವಸ್ತುವನ್ನು ಬಬ್ಬನ ಬಳಿ ಇಟ್ಟಿದ್ದು ಅದನ್ನು ಅವನು ಮರಳಿ ಕೇಳಿದರೆ ನೀಡಲು ನಿರಾಕರಿಸುವ ಹಕ್ಕು ಅವನಿಗೆ ಇದೆಯೇ? ಅಬೂತಲ್ಹ ಹೇಳಿದರು - ಇಲ್ಲ, ಅವನು ನಿರಾಕರಿಸುವಂತಿಲ್ಲ. ಆಗ ಉಮ್ಮು ಸುಲೈಮ್ ಹೇಳಿದರು - ಈ ಮಗುವನ್ನು ಕೊಂಡು ಹೋಗಿ ದಫನ ಮಾಡಿರಿ. ಅದು ಅಲ್ಲಾಹನ ಅಮಾನತ್ತಾಗಿತ್ತು. ಅಲ್ಲಾಹನು ಅದನ್ನು ಮರಳಿ ಪಡೆದನು. ಪರಲೋಕದಲ್ಲಿ ಪುಣ್ಯ ಲಭಿಸಬೇಕಾದರೆ ನೀವು ತಾಳ್ಮೆ ವಹಿಸಬೇಕು. 
[ರಿಯಾದುಸ್ಸಾಲಿಹೀನ್ - ಮುಸ್ಲಿಮ್]

No comments:

Post a Comment