ಜಬಲ ಬಿನ್ ಸುಹೈಮ್ ಹೇಳುತ್ತಾರೆ - ನಾವು ಅಬ್ದುಲ್ಲಾ ಬಿನ್ ಝಬೈರ್
ಬೆಂಬಲಿಗರಾಗಿದ್ದೆವು. ಅದೇ ಸಂದರ್ಭದಲ್ಲಿ ನಾವು ಬರಗಾಲಕ್ಕೆ ತುತ್ತಾದೆವು. ನಮಗೆ ಸ್ವಲ್ಪ ಖರ್ಜೂರ
ಸಿಕ್ಕಿತು. ನಾವು ಅದನ್ನು ತಿನ್ನುತ್ತಾ ಇದ್ದಾಗ ಅಲ್ಲಿಂದ ಅಬ್ದುಲ್ಲಾ ಬಿನ್ ಉಮರ್ [ರ] ಹಾದು ಹೋದರು.
ಅವರು ಹೇಳಿದರು - ನಿಮ್ಮ ಪೈಕಿ ಯಾರೂ ಎರಡು ಖರ್ಜೂರಗಲನ್ನು ಒಟ್ಟಿಗೆ ತಿನ್ನಬಾರದು. ಯಾಕೆಂದರೆ ಹಾಗೆ
ತಿನ್ನುವುದರಿಂದ ಪ್ರವಾದಿ [ಸ] ತಡೆದಿದ್ದಾರೆ.
[ಬುಖಾರಿ, ಮುಸ್ಲಿಮ್]
ಪ್ರವಾದಿ [ಸ] ಹೇಳಿದರು - ಅಶ್ಅರ್ ಗೋತ್ರದವರು ಜೀಹಾದ್ಗೆ ತೆರಳಿದಾಗ,
ಅವರ ಬಳಿ ಆಹಾರವೂ ಕಡಿಮೆಯಿರುವಾಗ ಅಥವಾ ಮದೀನಾದಲ್ಲಿ ಅವರ ಬಳಿ ಆಹಾರ ಧಾನ್ಯದ ಕೊರತೆಯೂ ಇರುವಾಗ ಯಾರ
ಬಳಿ ಏನೆಲ್ಲ ಇರುತ್ತಿತ್ತೋ ಅದನ್ನು ತಂದು ಒಂದು ಕಡೆ ಹಾಕುತ್ತಿದ್ದರು. ತರುವಾಯ ಅದನ್ನು ಸಮಾನವಾಗಿ
ಹಂಚಿ ತಿನ್ನುತ್ತಿದ್ದರು.
ಪ್ರವಾದಿಯವರು [ಸ] ಅವರ ಗುಣಗಾನ ಮಾಡುತ್ತಾ ಅವರು ನನ್ನವರು ಮತ್ತು
ನಾನು ಅವರವನು ಎಂದು ಹೇಳುತ್ತಾರೆ. (ವರದಿ: ಅಬೂ ಮೂಸಾ ಅಶ್ಅರೀ [ರ])
[ಬುಖಾರಿ, ಮುಸ್ಲಿಮ್]
No comments:
Post a Comment