Tuesday, May 8, 2018

ವಹೀಯ ಆರಂಭ


ಉಮ್ಮುಲ್ ಮೂಮಿನೀನ್ ಆಯಿಶಾ[] ಹೇಳಿದರು: ಪ್ರವಾದಿವರ್ಯರ[] ಮೇಲೆ ದಿವ್ಯವಾಣೆಯು ಮೊದಮೊದಲು ಉತ್ತಮ ಕನಸಿನ ರೂಪದಲ್ಲಿ ಬರುತ್ತಿತ್ತು. ರಾತ್ರಿ ಮಲಗಿದಾಗ ಅವರು ಕನಸು ಕಾಣುತ್ತಿದ್ದರು. ಅದು ಹಗಲಿನ ಬೇಳಕಿನಂತೆ ಸಾಕ್ಷಾತ್ಕಾರಗೊಳ್ಳುತ್ತಿತ್ತು. ಅನಂತರ ಅವರು ಏಕಾಂತ ಪ್ರಿಯರಾದರು. ಹಿರಾ ಗುಹೆಯಲ್ಲಿ ಒಂಟಿಯಾಗಿರ ತೊಡಗಿದರು. ಮನೆಗೆ ಮರಳಲು ಮನಸ್ಸಾಗುವವರೆಗೆ ಅನೇಕ ರಾತ್ರಿಗಳಲ್ಲಿ ಆರಾಧನೆಯಲ್ಲಿ ತಲ್ಲೀನರಾಗಿರುತ್ತಿದ್ದರು. ಅದು ಮುಗಿದಾಗ ಖದೀಜಾರ ಬಳಿಗೆ ಮರಳಿ ಅಷ್ಟೇ ಆಹಾರವನ್ನು ಪುನಃ ಕೊಂಡೊಯ್ಯುತ್ತಿದ್ದರು. ಕೊನೆಗೊಂದು ದಿನ ಹಿರಾಗುಹೆಯಲ್ಲಿದ್ದಾಗ ದಿವ್ಯವಾಣೆ ಬಂತು. ಜೀಬ್ರೀಲ್ [] ಬಂದು ಅವರೊಡನೆ "ಓದು" ಎಂದು ಹೇಳಿದರು. ಅವರು ನನಗೆ ಓದಲುಬರುವುದಿಲ್ಲವೆಂದು ಹೇಳಿದರು.

ಪ್ರವಾದಿ[] ಹೇಳುತ್ತಾರೆ: ತರುವಾಯ ಜೀಬ್ರೀಲ್ ನನ್ನನ್ನು ಹಿಡಿದು ಬಿಗಿದಪ್ಪಿದರು. ನನಗೆ ನಿತ್ರಾಣವಾಯಿತು. ಅನಂತರ ಅವರು ನನ್ನನ್ನು ಬಿಟ್ಟುಬಿಟ್ಟರು. ಪುನಃ ಎರಡನೆಯ ಬಾರಿ "ಓದು" ಎಂದು ಹೇಳಿದರು. ನಾನು ಓದು ಬಲ್ಲವನಲ್ಲವೆಂದು ಹೇಳಿದೆ. ಅವರು ಪುನಃ ನನ್ನನ್ನು ಹಿಡಿದು ಬಿಗಿದಪ್ಪಿದರು. ನನ್ನ ಶಕ್ತಿಯೇ ಕುಂದಿಹೋಯಿತು. ಪುನಃ ಓದು ಎಂದರು. ಆಗಲೂ ನಾನು ಓದು ಬಲ್ಲವನಲ್ಲವೆಂದು ಹೇಳಿದೆ. ಅವರು ಮೂರನೇ ಬಾರಿ ನನ್ನನ್ನು ಬಿಗಿದಪ್ಪಿದರು. ತರುವಾಯ ಬಿಟ್ಟುಬಿಟ್ಟು, "(ಸಂದೇಶವಾಹಕರೇ) ಓದಿರಿ, ನಿಮ್ಮನ್ನು ಸೃಷ್ಟಿಸಿದ ಪ್ರಭುವಿನ ನಾಮದೊಂದಿಗೆ. ಅವನು, ಹೆಪ್ಪುಗಟ್ಟಿದ ರಕ್ತದ ಒಂದು ಪಿಂಡದಿಂದ ಮಾನವನನ್ನು ಸೃಷ್ಟಿಸಿದನು. ಓದಿರಿ, ಮತ್ತು ನಿಮ್ಮ ಪ್ರಭು ಮಹಾ ಉದಾರಿ ಎಂಬ ಸೂಕ್ತಗಳನ್ನು ಕೇಳಿಸಿ ಹೊರಟು ಹೋದರು. ಪ್ರವಾದಿವರ್ಯರ[] ಹೃದಯ ಭಯದಿಂದ ಬಡಿಯುತ್ತಿತ್ತು.

 ಅವರು ಖದೀಜಾ[] ಬಿಂತಿ ಖುವೈಲಿದ್ ಬಳಿಗೆ ಹೋಗಿ ನನಗೆ ಹೊದಿಸಿರಿ ಎಂದರು. ಅವರು ಹೋದಿಸಿದರು. ಅವರ ಭಯ ದೂರವಾದಾಗ ಖದೀಜಾರಲ್ಲಿ[] ನಡೆದ ವೃತ್ತಾಂತವನ್ನು ವಿವರಿಸಿ, ನನಗೆ ನನ್ನ ಪ್ರಾಣದ ಭಯವಾಗುತ್ತದೆ ಎಂದು ಹೇಳೀದರು. ಖದೀಜಾ [] ಹೇಳಿದರು, ಖಂಡಿತ ಸಾಧ್ಯವಿಲ್ಲ. ಅಲ್ಲಾಹನಾಣೆ! ಆತ ತಮ್ಮನ್ನೆಂದೂ ಅವಮಾನಿಸಲಾರನು. ಏಕೆಂದರೆ, ತಾವು ಕುಟುಂಬ ಸಂಭಂದವನ್ನು ಜೋಡಿಸುತ್ತೀರಿ. ಇತರರಿಗಾಗಿ ಕಷ್ಟ ಸಹಿಸುತ್ತೀರಿ. ಬಡವರಿಗೂ ದರಿದ್ರರಿಗೂ ಉಣೆಸುತ್ತೀರಿ. ಅತಿಥಿಗಳನ್ನು ಸತ್ಕರಿಸುತ್ತೀರಿ. ಜನರ ಸಂಕಷ್ಟಗಳನ್ನು ನೀಗಿಸಲು ನೆರವಾಗುತ್ತೀರಿ.

ತರುವಾಯ ಖದೀಜಾರು [] ಪ್ರವಾದಿವರ್ಯರನ್ನು [] ವರಕ ಬಿನ್ ನೌಫಲ್ ಬಿನ್ ಅಸದ್ ಬಿನ್ ಅಬ್ದುಲ್ ಉಝ್ಝಾರ ಬಳಿಗೆ ಕರೆದೊಯ್ದುರು. ಅವರು ಖದೀಜಾರ [] ದೊಡ್ಡಪ್ಪನ ಪುತ್ರರಾಗಿದ್ದರು. ಅಜ್ಜಾನ ಕಾಲದಲ್ಲಿ ಕ್ರೈಸ್ತ ಧರ್ಮಾವಲಂಬಿಯಾಗಿದ್ದರು. ಹಿಬ್ರೂ ಭಾಷೆ ಬಲ್ಲವರಾಗಿದ್ದರು. ಅತಿ ವೃದ್ದಾಪ್ಯಕ್ಕೆ ತಲಪಿದ್ದು ಅಂಧತ್ವವೂ ಭಾದಿಸಿತ್ತು. ಅವರ ಬಳಿ ಖದೀಜಾ ಹೇಳಿದರು. ಅಣ್ಣಾ! ನಿಮ್ಮ ಭ್ರಾತೃಜನ ಮಾತನ್ನೊಮ್ಮೆ ಕೇಳಿನೋಡಿ. ವರಕಾ ಹೇಳಿದರು, ಭ್ರಾತೃಜಾ! ನೀನೇನು ಕಂಡೆ ಹೇಳು. ಪ್ರವಾದಿ[] ಏನನ್ನು ಕಂಡಿದ್ದರೋ ಅದನ್ನು ಅವರಿಗೆ ವಿವರಿಸಿ ಹೇಳಿದರು

 ವರಕಾ ಹೇಳಿದರು, "ಇದು ಮೂಸಾರ ಬಳಿಗೆ ಬರುತ್ತಿದ್ದ ಅದೇ ಪ್ರತಿಷ್ಠಿತ ದೇವಚರ ಆಗಿದೆ. ಅಕಟಾ! ನಾನು ಅಂದು ಯುವಕನಾಗಿರುತ್ತಿದ್ದರೆ! ನಿನ್ನ ಜನಾಂಗವು ನಿನ್ನನ್ನು ಹೊರ ಹಾಕುವ ಕಾಲದಲ್ಲಿ ನಾನು ಬದುಕಿರುತ್ತಿದ್ದರೆ! ಪ್ರವಾದಿ []ಕೇಳಿದರು, ಜನರು ನನ್ನನ್ನು ಹೊರಹಾಕುವರೇ? ವರಕಾ ಹೇಳೀದರು, ಹೌದು. ಹಿಂದೆ ಯಾರೆಲ್ಲ ನಿನ್ನಂತೆ ಧರ್ಮ ಮತ್ತು ಗ್ರಂಥದೊಂದಿಗೆ ಬಂದಿದ್ದಾರೋ ಅವರನ್ನೆಲ್ಲ ದ್ವೇಷಿಸಲಾಯಿತು. ಒಂದು ವೇಳೆ ನಿನ್ನ ಪ್ರವಾದಿತ್ವದ ಕಾಲದಲ್ಲಿ ನಾನು ಬದುಕಿ ಉಳಿದರೆ ಖಂಡಿತವಾಗಿಯೂ ನಿನಗೆ ಸಹಾಯ ಮಾಡುವೆನು. ಬಳಿಕ ವರಕಾ ಹೆಚ್ಚು ಕಾಲ ಬದುಕಲಿಲ್ಲ. ಮರಣ ಹೊಂದಿದರು. ದಿವ್ಯವಾಣೆ ಅವತೀರ್ಣಗೊಳ್ಳುವುದು ಕೆಲ ಕಾಲ ಸ್ಥಗಿತಗೊಂಡಿತು
[ಸಹೀಹ್ ಬುಖಾರಿ, ಅಧ್ಯಾಯ 1, ಪ್ರಾವಾದಿ ಮುಹಮ್ಮದ್ರಿಗೆ[] ದಿವ್ಯವಾಣೆಯ ಅವತರಣದ ಆರಂಭ]

No comments:

Post a Comment