Tuesday, May 8, 2018

ಬದ್ರ್ ಯುದ್ಧದ ಕುರಿತು ಕುರಾನ್ ಏನು ಹೇಳುತ್ತದೆ?


121. (ಪ್ರವಾದಿಯವರೇ) ಸತ್ಯವಿಶ್ವಾಸಿಗಳಿಗೆ ಯುದ್ಧ ಶಿಬಿರಗಳನ್ನು ವ್ಯವಸ್ಥೆಗೊಳಿಸಿ ಕೊಡಲಿಕ್ಕಾಗಿ ನೀವು ನಿಮ್ಮ ಮನೆಯವರಿಂದ ಮುಂಜಾನೆಯೇ (ಹೊರಟು) ಹೋದ ಸಂಧರ್ಭ(ವನ್ನು ಸ್ಮರಿಸಿರಿ). ಅಲ್ಲಾಹು (ಎಲ್ಲವನ್ನು) ಆಲಿಸುವವನೂ ಅರಿಯುವವನೂ ಆಗಿರುತ್ತಾನೆ.
122. ನಿಮ್ಮ ಪೈಕಿ ಎರಡು ತಂಡಗಳು ಭೀರುತನ ತೋರಿಸಲಿಚ್ಚಿಸಿದಾಗ ಅಲ್ಲಾಹು ಅವರ ಸಹಾಯಕ್ಕಿದ್ದನು. ಸತ್ಯವಿಶ್ವಾಸಿಗಳು ಅಲ್ಲಾಹನ ಮೇಲೆಯೇ ಭರವಸೆಯಿಡಲಿ.
123. ಮತ್ತು ನೀವು ಬದ್ರ್ (ರಣಾಂಗಣ)ನಲ್ಲಿ ದುರ್ಬಲರಾಗಿದ್ದಾಗ ಅಲ್ಲಾಹು ನಿಮಗೆ ಸಹಾಯ ಮಾಡಿದ್ದನು. ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ. ನೀವು ಕೃತಜ್ಜತೆ ತೋರಿಸುವವರಾಗಬಹುದು.
124. (ಪ್ರವಾದಿಯವರೇ) ನೀವು ಸತ್ಯವಿಶ್ವಾಸಿಗಳೊಡನೆ "ನಿಮ್ಮ ಪ್ರಭು ಮೂರು ಸಾವಿರ ಮಲಕ್ಗಳನ್ನು ಇಳಿಸಿ ನಿಮಗೆ ಸಹಾಯ ಮಾಡಿದರೆ ಸಾಲದೇ" ಎಂದು ಹೇಳಿದ್ದ ಸಂದರ್ಭ(ವನ್ನು ಸ್ಮರಿಸಿರಿ).
125. ನೀವು ಸಹನೆ ಕೈಗೊಂಡರೆ ಮತ್ತು (ಅಲ್ಲಾಹನನ್ನು) ಭಯಪಟ್ಟರೆ ಅವರು (ಶತ್ರುಗಳು) ಕ್ಷಣದಲ್ಲಿ ನಿಮ್ಮ ಬಳಿ ಬಂದರೂ ನಿಮ್ಮ ಪ್ರಭು (ವಿಶೇಷ) ಗುರುತು ಹಾಕಲ್ಪಟ್ಟ ಐದು ಸಾವಿರ ಮಲಕ್ಗಳಿಂದ ನಿಮಗೆ ಸಹಾಯ ಮಾಡುವನು.
126. ಮತ್ತು ಅಲ್ಲಾಹು ಅದನ್ನು (ಮಲಕ್ಗಳನ್ನು ಇಳಿಸಿ ಸಹಾಯ ಮಾಡುವುದನ್ನು) ನಿಮಗೊಂದು ಶುಭವಾರ್ತೆಯಾಗಿ ಮತ್ತು ನೀವು ಮನಃಶ್ಯಾಂತಿ ಹೊಂದಲಿಕ್ಕಾಗಿ ವಿನಾ ಮಾಡಿರುವುದಿಲ್ಲ. ಸಹಾಯವಾದರೋ, ಪ್ರತಾಪ ಶಾಲಿಯೂ ವಿವೇಕಪೂರ್ಣನೂ ಆದ ಅಲ್ಲಾಹನ ವತಿಯಿಂದಲ್ಲದೆ (ಬೇರೆಲ್ಲಿಂದಲೂ) ಅಲ್ಲ.
127. ಸತ್ಯನಿಷೇಧಿಗಳ ಒಂದು ಭಾಗವನ್ನು ಕತ್ತರಿಸಲಿಕ್ಕಾಗಿ ಅಥವಾ ಅವರನ್ನು ಅಪಮಾನಗೊಳಿಸಿ ನಿರಾಶರನ್ನಾಗಿ ಮಾಡಿ ಹಿಮ್ಮೆಟ್ಟಿಸಲಿಕ್ಕಾಗಿ (ಅವನು ನಿಮಗೆ ಸಹಾಯವನ್ನು ಒದಗಿಸುವನು).
[ಕುರ್ಆನ್, 3 (ಅಲ್ ಇಮ್ರಾನ್): 121-127]



7. () ಎರಡು ತಂಡಗಳ ಪೈಕಿ ಒಂದನ್ನು ನಿಮಗೆ ಅಧೀನಗೊಳಿಸುವೆನು ಎಂದು ಅಲ್ಲಾಹು ನಿಮ್ಮೊಡನೆ ವಾಗ್ದಾನ ಮಾಡಿದ್ದ ಸಂದರ್ಭ(ವನ್ನು ಸ್ಮರಿಸಿರಿ). ಬಲವಿಲ್ಲದುದು ನಿಮಗಾಗಬೇಕೆಂದು (ನಿಮ್ಮ ಅಧೀನವಾಗಬೇಕೆಂದು) ನೀವು ಆಶಿಸುತ್ತಿದ್ದಿರಿ. ಆದರೆ ನನ್ನ ಮಾತುಗಳ ಮೂಲಕ ಸತ್ಯವನ್ನು ಸತ್ಯವಾಗಿ ಮಾಡಲು ಮತ್ತು ಸತ್ಯ ನಿಷೇಧಿಗಳ ಬುಡ ಕತ್ತರಿಸಲು ಅಲ್ಲಾಹು ಇಚ್ಚಿಸಿದ್ದನು.
8. (ಅದು) ಸತ್ಯವನ್ನು ಸತ್ಯವಾಗಿ ಮಾಡಲಿಕ್ಕೆ ಮತ್ತು ವಿಧ್ಯವನ್ನು ವಿಧ್ಯವಾಗಿ ಮಾಡಲಿಕ್ಕಾಗಿದೆ. ಅಪರಾಧಿಗಳು ಇಷ್ಟಪಡದಿದ್ದರೂ ಸರಿ.
9. ನೀವು ನಿಮ್ಮ ಪ್ರಭುವಿನೊಡನೆ ಸಹಾಯ ಯಾಚಿಸಿದ್ದ ಸಂದರ್ಭ(ವನ್ನು ಸ್ಮರಿಸಿರಿ). ಆಗ ಅವನು "ನಾನು ನಿಮಗೆ ಸರದಿಯಂತೆ ಬರುವ ಸಾವಿರ ಮಲಕ್ಗಳಿಂದ ಸಹಾಯ ನೀಡಲಿದ್ದೇನೆ" ಎಂದು ಉತ್ತರಿಸಿದನು.
10. ಅಲ್ಲಾಹು ಅದನ್ನು ಒಂದು ಶುಭವಾರ್ತೆಯಾಗಿ ವಿನಾ ಮಾಡಿರುವುದಿಲ್ಲ. ಮೂಲಕ ನಿಮ್ಮ ಮನಸ್ಸುಗಳು ಸಮಾಧಾನ ಹೊಂದಲಿಕ್ಕಾಗಿದೆ. ಸಹಾಯವು ಅಲ್ಲಾಹನ ಕಡೆಯಿಂದಲ್ಲದೆ (ಇನ್ನಾರ ಕಡೆಯಿಂದಲೂ) ಇಲ್ಲ. ನಿಶ್ಚಯವಾಯಿಯೂ ಅಲ್ಲಾಹು ಪ್ರತಾಪಶಾಲಿಯೂ ವಿವೇಕಪೂರ್ಣನೂ ಆಗಿರುತ್ತಾನೆ.
11. ಅವನು ತನ್ನ ಕಡೆಯ ಮನಃಶ್ಯಾಂತಿಯಾಗಿ ನಿಮ್ಮನ್ನು ತೂಕಡಿಕೆಯಿಂದ ಆವರಿಸಿಕೊಂಡ ಸಂದರ್ಭ(ವನ್ನು ಸ್ಮರಿಸಿರಿ). ನಿಮ್ಮನ್ನು ಶುದ್ದೀಕರಿಸಿ ಮೂಲಕ ಶೈತಾನನ ಮಲಿನತೆಯನ್ನು ನಿಮ್ಮಿಂದ ನೀಗಿಸಲಿಕ್ಕಾಗಿ ಮತ್ತು ನಿಮ್ಮ ಹೃದಯಗಳಿಗೆ ದೃಢತೆಯುಂಟು ಮಾಡಿ ಮೂಲಕ ನಿಮ್ಮ ಪಾದಗಳನ್ನು ಸ್ಥಿರಗೊಳಿಸಲಿಕ್ಕಾಗಿ ಅವರು ನಿಮಗೆ ಆಕಾಶದಿಂದ (ಮಳೆ) ನೀರನ್ನು ಸುರಿಸಿಕೊಟ್ಟ (ಸಂದರ್ಭವನ್ನೂ ಸ್ಮರಿಸಿರಿ).
12. ನಿಮ್ಮ ಪ್ರಭೂ (ಬದ್ರ್ ರಣಾಂಗಣದಲ್ಲಿ) ಮಲಕ್ಗಳಿಗೆ "ನಾನು ನಿಮ್ಮೊಂದಿಗೆದ್ದೇನೆ, ಆದುದರಿಂದ ನೀವು ಸತ್ಯವಿಶ್ವಾಸಗಳನ್ನು ಸ್ಥಿರವಾಗಿ ನಿಲ್ಲಿಸಿರಿ (ಮತ್ತು ಅವರಿಗೆ ತಿಳಿಸಿರಿ) ನಾನು ಸತ್ಯನಿಷೇಧಿಗಳ ಹೃದಯಗಳಲ್ಲಿ ಭಯವನ್ನಿರಿಸುವೆನು. ಆದುದರಿಂದ ನೀವು (ಅವರ) ಕೊರಳುಗಳ ಮೇಲೆ ಕಡಿಯಿರಿ ಮತ್ತು ಅವರ ಬೆರಳುಗಳನ್ನೆಲ್ಲಾ ಕತ್ತರಿಸಿರಿ. ಎಂದು ಸಂದೇಶ ನೀಡುತ್ತಿದ್ದ ಸಂದರ್ಭ(ವನ್ನು ಸ್ಮರಿಸಿರಿ).
13. ಅದು ಅವರು (ಸತ್ಯನಿಷೇದಿಗಳು) ಅಲ್ಲಾಹು ಮತ್ತು ಅವನ ಸಂದೇಶವಾಹಕರೊಂದಿಗೆ (ಸ್ಪರ್ಧಿಸಿ) ಪ್ರತ್ಯೇಕ ಗೊಂಡಿರುವುದರಿಂದಾಗಿದೆ. ಯಾರಾದರೂ ಅಲ್ಲಾಹು ಮತ್ತು ಅವನ ಸಂದೇಶವಾಹಕರೊಂದಿಗೆ (ಸ್ಪರ್ಧಿಸಿ) ಪ್ರತ್ಯೇಕ ಗೊಂಡರೆ ಖಂಡಿತವಾಗಿಯೂ ಅಲ್ಲಾಹು ಕಠಿಣ ಶಿಕ್ಷಾ ಕ್ರಮ ಕೈಗೊಳ್ಳುವವನಾಗಿದ್ದಾನೆ.
14. ( ಸತ್ಯನಿಷೇಧಿಗಳೇ ನಿಮಗೆ) ಅದೇ (ಶಿಕ್ಷೆ). ಆದುದರಿಂದ ನೀವು ಅದನ್ನು ಸವಿಯಿರಿ ಮತ್ತು ಸತ್ಯನೆಷೇಧಿಗಳಿಗೆ ನರಕ ಶಿಕ್ಷೆಯಿದೆಯೆಂಬುದನ್ನು (ತಿಳಿದು ಕೊಳ್ಳಿರಿ).
15. ಸತ್ಯವಿಶ್ವಾಸಿಗಳೇ, ಸತ್ಯನಿಷೇಧಿಗಳು ಯುದ್ದಕ್ಕೆ ಸಿದ್ಧರಾಗಿ ಬರುವುದನ್ನು ನೀವು ಕಂಡರೆ ಅವರಿಗೆ ನೀವು ಬೆನ್ನು ತಿರುಗಿಸಬೇಡಿರಿ. (ಅವರಿಂದ ಹಿಮ್ಮೆಟ್ಟಿ ಓಡ ಬೇಡಿರಿ).
16. ಯಾವುದಾದರೂ ಯುದ್ಧ (ತಂತ್ರ)ಕ್ಕಾಗಿ ತಿರುಗಿ ಹೋಗುವವನಾಗಿ ಅಥವಾ(ತನ್ನದೇ ಪಕ್ಷದ) ಯಾವುದಾದರೂ ತಂಡದೊಂದಿಗೆ ಸೇರಿಕೊಳ್ಳುವವನಾಗಿ ಹೊರತು ಅಂದು ಯಾರಾದರೂ ಅವರಿಗೆ ತನ್ನ ಬೆನ್ನನ್ನು ತಿರುಗಿಸಿದರೆ ಖಂಡಿತವಾಗಿಯೂ ಅವನು ಅಲ್ಲಾಹನ ಕೋಪದೊಂದೆಗೆ ಮರಳುವನು ಮತ್ತು ಅವನ ವಾಸಸ್ಥಾನವು ನರಕವಾಗಿದೆ.
17. ನಿಜವಾಗಿ ನೀವು ಅವರನ್ನು ವಧಿಸಲಿಲ್ಲ, ಆದರೆ ಅಲ್ಲಾಹು ಅವರನ್ನು ವಧಿಸಿದನು ಮತ್ತು ನೀವು ಎಸೆದಾಗ ನಿಜವಾಗಿ ನೀವು ಎಸೆದುದಲ್ಲ, ಆದರೆ ಅಲ್ಲಾಹು ಎಸೆದನು. (ಅದು) ಅವನು ತನ್ನ ಕಡೆಯ ಉತ್ತಮವಾದ ಒಂದು ಪರಿಕ್ಷಿಸಲಿಕ್ಕಾಗಿದೆ. ನಿಶ್ಚಯವಾಗಿಯೂ ಅಲ್ಲಾಹು ಆಲಿಸುವವನೂ ಅರಿಯುವವನೂ ಆಗಿರುತ್ತಾನೆ.
[ಕುರ್ಆನ್, 8 (ಅಲ್ ಅನ್ಫಾಲ್ ): 7-17]

No comments:

Post a Comment