ಹ. ಖಾಲಿದ್ ಬಿನ್ ವಲೀದ್ [ರ] ಹೇಳುತ್ತಾರೆ - ನನಗೂ ಅಮ್ಮಾರ್ರಿಗೂ
ಜಗಳವಾಯಿತು. ನಾನು ಕಟು ಮಾತುಗಳನ್ನಾಡಿದೆ. ಅಮ್ಮಾರ್ ಪ್ರವಾದಿಯವರ [ಸ] ಬಳಿಗೆ ನನ್ನ ಬಗ್ಗೆ ದೂರು
ನೀಡಲು ಹೋದರು. ನಾನು ಅಮ್ಮಾರ್ರ ಬಗ್ಗೆ ದೂರು ನೀಡಲು ಹೋದೆ. ಪ್ರವಾದಿಯವರ [ಸ] ಮುಂದೆಯೂ ನಾನು ಅಮ್ಮಾರ್ರನ್ನು
ಬೈಯುತ್ತಾ ಇದ್ದೆ. ನನ್ನ ಬೈಗುಳ ಹೆಚ್ಚಾಗುತ್ತಲೇ ಹೋಯಿತು. ಪ್ರವಾದಿ [ಸ] ಮೌನವಾಗಿದ್ದರು. ಏನೂ ಮಾತಾಡಲಿಲ್ಲ.
ಇದರಿಂದಾಗಿ ಅಮ್ಮಾರ್ ಅಳತೊಡಗಿದರು. ಅವರು ಪ್ರವಾದಿವರ್ಯರೊಡನೆ, ಅಲ್ಲಾಹನ ಸಂದೇಶವಾಹಕರೇ! ತಾವು ನೋಡುವುದಿಲ್ಲವೆ?
ಹೇಗೆ ಬೈಯುತ್ತಿದ್ದಾರೆ ಇವರು! ಎಂದು ಹೇಳಿದರು. ಆಗ ಪ್ರವಾದಿ [ಸ] ತಲೆಯಿತ್ತಿ ಹೀಗೆಂದರು - ಯಾರು
ಅಮ್ಮಾರ್ರೊಂದಿಗೆ ವೈರ ಕಟ್ಟೀಕೊಳ್ಳುತ್ತಾನೋ ಅಲ್ಲಾಹನು ಅವನ ವೈರಿಯಾಗುವನು. ಯಾರು ಅಮ್ಮಾರ್ರನ್ನು
ದ್ವೇಷಿಸುವನೋ ಅವನು ಅಲ್ಲಾಹ್ ದ್ವೇಷಿಸುವನು.
ಖಾಲಿದ್ ಹೇಳುತ್ತಾರೆ - ಪ್ರವಾದಿವರ್ಯರ ಈ ಮಾತು ಕೇಳಿ ನಾನು ಹೊರಗೆ
ಬಂದಾಗ ನನ್ನ ಅತಿ ದೊಡ್ಡ ಆಗ್ರಹ ಅಮ್ಮಾರ್ ಹೇಗಾದರೂ ನನ್ನಿಂದ ಪ್ರಸನ್ನರಾಗಿ ನನ್ನ ತಪ್ಪನ್ನು ಮನ್ನಿಸಲಿ
ಎಂದಾಗಿತ್ತು. ಹಾಗೆಯೇ ನಾನು ಅವರನ್ನು ಒಲಿಸಿದೆ. ಅವರಲ್ಲಿ ಕ್ಷಮಾಪಣೆ ಮಾಡಿದೆ. ಅವರು ನನ್ನನ್ನು
ಕ್ಷಮಿಸಿ, ನನ್ನಿಂದ ಪ್ರಸನ್ನರಾದರು.
[ಮಿಶ್ಕಾತ್]
No comments:
Post a Comment