Friday, May 11, 2018

ಪ್ರವಾದಿಯ [ಸ] ಅನುಸರಣೆ ಮತ್ತು ತುಷ್ಟೀಕರಣ


ಹ. ಖಾಲಿದ್ ಬಿನ್ ವಲೀದ್ [ರ] ಹೇಳುತ್ತಾರೆ - ನನಗೂ ಅಮ್ಮಾರ್‌ರಿಗೂ ಜಗಳವಾಯಿತು. ನಾನು ಕಟು ಮಾತುಗಳನ್ನಾಡಿದೆ. ಅಮ್ಮಾರ್ ಪ್ರವಾದಿಯವರ [ಸ] ಬಳಿಗೆ ನನ್ನ ಬಗ್ಗೆ ದೂರು ನೀಡಲು ಹೋದರು. ನಾನು ಅಮ್ಮಾರ್‌ರ ಬಗ್ಗೆ ದೂರು ನೀಡಲು ಹೋದೆ. ಪ್ರವಾದಿಯವರ [ಸ] ಮುಂದೆಯೂ ನಾನು ಅಮ್ಮಾರ್‌ರನ್ನು ಬೈಯುತ್ತಾ ಇದ್ದೆ. ನನ್ನ ಬೈಗುಳ ಹೆಚ್ಚಾಗುತ್ತಲೇ ಹೋಯಿತು. ಪ್ರವಾದಿ [ಸ] ಮೌನವಾಗಿದ್ದರು. ಏನೂ ಮಾತಾಡಲಿಲ್ಲ. ಇದರಿಂದಾಗಿ ಅಮ್ಮಾರ್ ಅಳತೊಡಗಿದರು. ಅವರು ಪ್ರವಾದಿವರ್ಯರೊಡನೆ, ಅಲ್ಲಾಹನ ಸಂದೇಶವಾಹಕರೇ! ತಾವು ನೋಡುವುದಿಲ್ಲವೆ? ಹೇಗೆ ಬೈಯುತ್ತಿದ್ದಾರೆ ಇವರು! ಎಂದು ಹೇಳಿದರು. ಆಗ ಪ್ರವಾದಿ [ಸ] ತಲೆಯಿತ್ತಿ ಹೀಗೆಂದರು - ಯಾರು ಅಮ್ಮಾರ್‌ರೊಂದಿಗೆ ವೈರ ಕಟ್ಟೀಕೊಳ್ಳುತ್ತಾನೋ ಅಲ್ಲಾಹನು ಅವನ ವೈರಿಯಾಗುವನು. ಯಾರು ಅಮ್ಮಾರ್‌ರನ್ನು ದ್ವೇಷಿಸುವನೋ ಅವನು ಅಲ್ಲಾಹ್ ದ್ವೇಷಿಸುವನು.
ಖಾಲಿದ್ ಹೇಳುತ್ತಾರೆ - ಪ್ರವಾದಿವರ್ಯರ ಈ ಮಾತು ಕೇಳಿ ನಾನು ಹೊರಗೆ ಬಂದಾಗ ನನ್ನ ಅತಿ ದೊಡ್ಡ ಆಗ್ರಹ ಅಮ್ಮಾರ್ ಹೇಗಾದರೂ ನನ್ನಿಂದ ಪ್ರಸನ್ನರಾಗಿ ನನ್ನ ತಪ್ಪನ್ನು ಮನ್ನಿಸಲಿ ಎಂದಾಗಿತ್ತು. ಹಾಗೆಯೇ ನಾನು ಅವರನ್ನು ಒಲಿಸಿದೆ. ಅವರಲ್ಲಿ ಕ್ಷಮಾಪಣೆ ಮಾಡಿದೆ. ಅವರು ನನ್ನನ್ನು ಕ್ಷಮಿಸಿ, ನನ್ನಿಂದ ಪ್ರಸನ್ನರಾದರು. 
[ಮಿಶ್ಕಾತ್]

No comments:

Post a Comment