ನಾವು ಪ್ರವಾದಿವರ್ಯರ [ಸ] ಸನ್ನಿದಿಯಲ್ಲಿ ಬೆಳಗ್ಗಿನ ನಮಯ ಕುಳಿತುಕೊಂಡಿದ್ದೆವು. ಅಷ್ಟರಲ್ಲಿ ಕೆಲವರು ಖಡ್ಗ ಹಿಡಿದುಕೊಂಡು ದಪ್ಪ ಕಂಬಳಿ ಹೊದ್ದುಕೊಂಡು ಬಂದರು. ಅವರ ಶರೀರದ ಹೆಚ್ಚಿನ ಭಾಗ ತೆರೆದಿತ್ತು. ಅವರಲ್ಲಿ ಹೆಚ್ಚಿನವರೆಲ್ಲರೂ
ಮುದರ್ ಗೋತ್ರದವರಾಗಿದ್ದರು.
ಅವರ ದಾರಿದ್ರ್ಯವನ್ನು
ನೋಡಿ ಪ್ರವಾದಿವರ್ಯರ ಮುಖ ಬೇಸರದಿಂದ ಕಳೆಗುಂದಿತು. ತರುವಾಯ ಅವರು ಮನೆಗೆ ಹೋಗಿ ಹೊರ
ಬಂದರು. ಬಿಲಾಲ್ರನ್ನು [ರ] ಕರೆದು ಅದಾನೆ ಹೇಳುವಂತೆ ಆಜ್ಜಾಪಿಸಿದರು.
(ನಮಾಝ್ನ ಸಮಯವಾಗಿತ್ತು) ಬಿಲಾಲ್ ಅದಾನ್ ಹೇಳಿದರು. ತರುವಾಯ ಇಕಾಮತ್ ಹೇಳಿದರು. ಪ್ರವಾದಿ [ಸ] ನಮಾಝ್ ಮಾಡಿಸಿದರು. ಸಮಾಝ್ನ ಬಳಿಕ ಉಪನ್ಯಾಸ ನೀಡುತ್ತಾ ಸೂರಃ ಅನ್ನಿಸಾದ ಮೊದಲ ಆಯತ್ ಪಠಿಸಿದರು. ಅನಂತರ ಹೀಗೆಂದರು - "ಜನರು
ಅಲ್ಲಾಹನ ಮಾರ್ಗದಲ್ಲಿ ದಾನ ಧರ್ಮ ಮಾಡಬೇಕು." ಎಲ್ಲಿಯವರೆಗೆಂದರೆ ಪ್ರವಾದಿ [ಸ] ಹೇಳಿದರು -
"ಒಬ್ಬನ ಬಳಿ ಅರ್ಥ ಖರ್ಜೂರವಿದ್ದರೆ ಅವನು ಅದನ್ನೇ ನೀಡಲಿ."
ಉಪನ್ಯಾಸ ಕೇಳೀದ ಬಳಿಕ ಒಬ್ಬನು ತನ್ನ ಕೈಯಲ್ಲಿ ಒಂದು ಚೀಲ ಹಿಡಿದು ಕೊಂಡು ಬಂದನು. ಅದು ಕೈಯಲ್ಲಿ ನಿಲ್ಲುತ್ತಿರಲಿಲ್ಲ.
ತರುವಾಯ ಜನರು ಒಬ್ಬರ ನಂತರ ಒಬ್ಬರಂತೆ ದಾನ ನೀಡಲು ಆರಂಭಿಸಿದರು. ಎಲ್ಲಿಯವರೆಗೆಂದರೆ ನಾನು ಆಹಾರ ಮತ್ತು ವಸ್ತ್ರಗಳ ಎರಡು ರಾಶಿಗಳನ್ನು ನೋಡಿದೆ. ಜನರು ಈ ರೀತಿ ದಾನ ಮಾಡವುದನ್ನು ಕಂಡು ಪ್ರವಾದಿಯವರ [ಸ] ಮುಖ ಸ್ವರ್ಣ ಮಿಶ್ರಿತ ನೀರು ಚಿಮುಕಿಸಿದಂತೆ ಅರಳಿತು. ತರುವಾಯ ಪ್ರವಾದಿ [ಸ] ಹೇಳೀದರು -
"ಯಾರು ಇಸ್ಲಾಮಿನಲ್ಲಿ ಯಾವುದಾದರೂ ಉತ್ತಮ ಸಂಪ್ರದಾಯವನ್ನು ಜಾರಿಗೆ ತಂದನೋ ಅವನಿಗೆ ಅದರ ಪುಣ್ಯ ಫಲ ಲಭಿಸುವುದು. ಯಾರು ಈ ಉತ್ತಮ ಸಂಪ್ರದಾಯದಂತೆ ಅನಂತರ ನಡೆಯುವರೋ ಅವರ ಪುಣ್ಯ ಫಲವೂ ಅವನಿಗೆ ಲಭಿಸುವುದು. ಆದರೆ ಅವರ ಪುಣ್ಯಫಲದಲ್ಲಿ ಏನೂ ಕಡಿತವಾಗದು. ಅದೇ ರೀತಿ ಯಾರು ಇಸ್ಲಾಮಿನಲ್ಲಿ ಯಾವುದಾದರೂ ಕೆಟ್ಟ ಸಂಪ್ರದಾಯವನ್ನು ಜಾರಿಗೊಳಿಸುತ್ತಾನೋ
ಅದರ ಪಾಪ ಅವನ ಮೇಲಿರುವುದು. ಅನಂತರ ಯಾರು ಆ ಸಂಪ್ರದಾಯದಂತೆ ನಡೆಯುವರೋ ಅವರ ಪಾಪಗಳನ್ನೂ ಅವನ ಕರ್ಮಪತ್ರದಲ್ಲಿ ಬರೆಯಲಾಗುವುದು. ಆದರೆ ಅವರ ಪಾಪಗಳಲ್ಲಿ ಏನೂ ಕಡಿತವುಂಟಾಗದು. (ವರದಿ: ಜರೀರ್ ಬಿನ್ ಅಬ್ದುಲ್ಲಾ [ರ])
[ಮುಸ್ಲಿಮ್]