Tuesday, May 15, 2018

ಜನರೊಂದಿಗೆ ಅನುಕಂಪ


ನಾವು ಪ್ರವಾದಿವರ್ಯರ [] ಸನ್ನಿದಿಯಲ್ಲಿ ಬೆಳಗ್ಗಿನ ನಮಯ ಕುಳಿತುಕೊಂಡಿದ್ದೆವು. ಅಷ್ಟರಲ್ಲಿ ಕೆಲವರು ಖಡ್ಗ ಹಿಡಿದುಕೊಂಡು ದಪ್ಪ ಕಂಬಳಿ ಹೊದ್ದುಕೊಂಡು ಬಂದರು. ಅವರ ಶರೀರದ ಹೆಚ್ಚಿನ ಭಾಗ ತೆರೆದಿತ್ತು. ಅವರಲ್ಲಿ ಹೆಚ್ಚಿನವರೆಲ್ಲರೂ ಮುದರ್ ಗೋತ್ರದವರಾಗಿದ್ದರು. ಅವರ ದಾರಿದ್ರ್ಯವನ್ನು ನೋಡಿ ಪ್ರವಾದಿವರ್ಯರ ಮುಖ ಬೇಸರದಿಂದ ಕಳೆಗುಂದಿತು. ತರುವಾಯ ಅವರು ಮನೆಗೆ ಹೋಗಿ ಹೊರ ಬಂದರು. ಬಿಲಾಲ್ರನ್ನು [] ಕರೆದು ಅದಾನೆ ಹೇಳುವಂತೆ ಆಜ್ಜಾಪಿಸಿದರು. (ನಮಾಝ್ ಸಮಯವಾಗಿತ್ತು) ಬಿಲಾಲ್ ಅದಾನ್ ಹೇಳಿದರು. ತರುವಾಯ ಇಕಾಮತ್ ಹೇಳಿದರು. ಪ್ರವಾದಿ [] ನಮಾಝ್ ಮಾಡಿಸಿದರು. ಸಮಾಝ್ ಬಳಿಕ ಉಪನ್ಯಾಸ ನೀಡುತ್ತಾ ಸೂರಃ ಅನ್ನಿಸಾದ ಮೊದಲ ಆಯತ್ ಪಠಿಸಿದರು. ಅನಂತರ ಹೀಗೆಂದರು - "ಜನರು ಅಲ್ಲಾಹನ ಮಾರ್ಗದಲ್ಲಿ ದಾನ ಧರ್ಮ ಮಾಡಬೇಕು." ಎಲ್ಲಿಯವರೆಗೆಂದರೆ ಪ್ರವಾದಿ [] ಹೇಳಿದರು - "ಒಬ್ಬನ ಬಳಿ ಅರ್ಥ ಖರ್ಜೂರವಿದ್ದರೆ ಅವನು ಅದನ್ನೇ ನೀಡಲಿ."
ಉಪನ್ಯಾಸ ಕೇಳೀದ ಬಳಿಕ ಒಬ್ಬನು ತನ್ನ ಕೈಯಲ್ಲಿ ಒಂದು ಚೀಲ ಹಿಡಿದು ಕೊಂಡು ಬಂದನು. ಅದು ಕೈಯಲ್ಲಿ ನಿಲ್ಲುತ್ತಿರಲಿಲ್ಲ. ತರುವಾಯ ಜನರು ಒಬ್ಬರ ನಂತರ ಒಬ್ಬರಂತೆ ದಾನ ನೀಡಲು ಆರಂಭಿಸಿದರು. ಎಲ್ಲಿಯವರೆಗೆಂದರೆ ನಾನು ಆಹಾರ ಮತ್ತು ವಸ್ತ್ರಗಳ ಎರಡು ರಾಶಿಗಳನ್ನು ನೋಡಿದೆ. ಜನರು ರೀತಿ ದಾನ ಮಾಡವುದನ್ನು ಕಂಡು ಪ್ರವಾದಿಯವರ [] ಮುಖ ಸ್ವರ್ಣ ಮಿಶ್ರಿತ ನೀರು ಚಿಮುಕಿಸಿದಂತೆ ಅರಳಿತು. ತರುವಾಯ ಪ್ರವಾದಿ [] ಹೇಳೀದರು - "ಯಾರು ಇಸ್ಲಾಮಿನಲ್ಲಿ ಯಾವುದಾದರೂ ಉತ್ತಮ ಸಂಪ್ರದಾಯವನ್ನು ಜಾರಿಗೆ ತಂದನೋ ಅವನಿಗೆ ಅದರ ಪುಣ್ಯ ಫಲ ಲಭಿಸುವುದು. ಯಾರು ಉತ್ತಮ ಸಂಪ್ರದಾಯದಂತೆ ಅನಂತರ ನಡೆಯುವರೋ ಅವರ ಪುಣ್ಯ ಫಲವೂ ಅವನಿಗೆ ಲಭಿಸುವುದು. ಆದರೆ ಅವರ ಪುಣ್ಯಫಲದಲ್ಲಿ ಏನೂ ಕಡಿತವಾಗದು. ಅದೇ ರೀತಿ ಯಾರು ಇಸ್ಲಾಮಿನಲ್ಲಿ ಯಾವುದಾದರೂ ಕೆಟ್ಟ ಸಂಪ್ರದಾಯವನ್ನು ಜಾರಿಗೊಳಿಸುತ್ತಾನೋ ಅದರ ಪಾಪ ಅವನ ಮೇಲಿರುವುದು. ಅನಂತರ ಯಾರು ಸಂಪ್ರದಾಯದಂತೆ ನಡೆಯುವರೋ ಅವರ ಪಾಪಗಳನ್ನೂ ಅವನ ಕರ್ಮಪತ್ರದಲ್ಲಿ ಬರೆಯಲಾಗುವುದು. ಆದರೆ ಅವರ ಪಾಪಗಳಲ್ಲಿ ಏನೂ ಕಡಿತವುಂಟಾಗದು. (ವರದಿ: ಜರೀರ್ ಬಿನ್ ಅಬ್ದುಲ್ಲಾ []) 
[ಮುಸ್ಲಿಮ್]

ಬೈತುಲ್ ಮಹ್‌ಮೂರ್


ಬೈತುಲ್ ಮಹ್ ಮೂರ್'ನ ಮೇಲಾಣೆ!
[ಕುರಾನ್, 52: 4]

1.ಇದು ಏಳನೆಯ ಆಕಾಶದಲ್ಲಿ ಇದೆ.
2. ಇದು ಭೂಮಿಯ ಕಹ್ಬಗೆ ಸಮಾನವಾಗಿದೆ.
3. ಇದಕ್ಕೆ ಪ್ರತಿ ದಿನ 7೦,೦೦೦ ಮಲಕ್'ಗಳು ಬಂದು ನಮಾಝ್ ಮಾಡುತ್ತಾರೆ ಅವರು ನಂತರ ಅದರ ಕಡೆಗೆ ಬರುವುದಿಲ್ಲ.

ಆಕಾಶದಲ್ಲಿರುವ ಮಕ್ಕಾದ ಕಅಬಾ ಭವನಕ್ಕೆ ನೇರ ಇರುವ ಮನೆ ಯಾಗಿದೆ, ಇದನ್ನು ಮಲಕ್'ಗಳು ಎಡೆಬಿಡದೆ ಬೇಟಿಕೊಡುತ್ತಿರುತ್ತಾರೆ.

ಜನ್ನಾತುಲ್ ಫಿರ್‌ದೌಸ್


ಖಂಡಿತವಾಗಿಯೂ ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರಿಗೆ ಅತಿಥಿ ಸತ್ಕಾರವಾಗಿ ಸ್ವರ್ಗೋದ್ಯಾನಗಳಿವೆ.
[ಕುರಾನ್,  18: 107]

ಉನ್ನತವಾದ ಸ್ವರ್ಗವನ್ನು ವಾರೀಸಾಗಿ ಪಡೆಯುವವರು. ಅವರು ಅದರಲ್ಲಿ ಶಾಶ್ವತವಾಗಿ ಸೃಷ್ಟಿಸಿದೆವು.
[ಕುರಾನ್, 23: 11]

ಸ್ವರ್ಗದಲ್ಲಿ ಮೂರು ಶ್ರೇಣಿಗಳಿವೆ. ಅಲ್ಲಾಹನು ಅದನ್ನು ಅವನ ಮಾರ್ಗದಲ್ಲಿ ಜಿಹಾದ್ ಮಾಡುವವರಿಗಾಗಿ ಸಿದ್ದಗೊಳಿಸಿರುತ್ತಾನೆ. ಪ್ರತಿಯೊಂದು ಶ್ರೇಣಿಯ ಮಧ್ಯೆ ಎಷ್ಟು ಅಂತರವಿರುವುದೆಂದರೆ ಅದು ಪರಸ್ಪರ ಆಕಾಶ ಮತ್ತು ಭೂಮಿಯಷ್ಟು ದೂರವಾಗಿರುವುದು. ಆದ್ದರಿಂದ ನೀವು ಅಲ್ಲಾಹುನಿಂದ ಬೇಡುವುದಿದ್ದರೆ ಫಿರ್ ದೌಸ್'ನ್ನು ಬೇಡಿರಿ. ಏಕೆಂದರೆ ಅದು ಸ್ವರ್ಗದ ಪ್ರಥಮ ಶ್ರೇಣಿಯಲ್ಲಿದೆ. ಅದರ ಮೇಲ್ಬಾಗದಲ್ಲಿ ಅಲ್ಲಾಹನ ಅರ್ಶ್ ಇದೆ. ಅದರಿಂದ ಸ್ವರ್ಗದ ಕಾಲುವೆಗಳು ಚಿಮ್ಮುತ್ತಿರುತ್ತದೆ.
[ಬುಖಾರಿ]

Sunday, May 13, 2018

ಮಕ್ಕಳಿಗೆ ಸಲಾಮ್


. ಅನಸ್ [] ಅವರ ಒಬ್ಬ ಶಿಷ್ಯ ಹೀಗೆ ಹೇಳಿದನು - . ಅನಸ್ [] ಅವರು ಕೆಲವು ಮಕ್ಕಳ ಬಳಿಯಿಂದ ಸಾಗುತ್ತಿದ್ದಾಗ ಅವರಿಗೆ ಸಲಾಮ್ ಹೇಳಿದರು ಮತ್ತು ಪ್ರವಾದಿವರ್ಯರು [] ಮಕ್ಕಳಿಗೆ ಸಲಾಮ್ ಹೇಳುತ್ತಿದ್ದರೆಂದೂ ಹೇಳಿದರು.  
[ಬುಖಾರಿ, ಮುಸ್ಲಿಮ್]

ಸಹ ಪ್ರಾಯಾಣೆಕನ ಸೇವೆ


ಹ. ಅನಸ್ [ರ] ಹೇಳುತ್ತಾರೆ - ನಾನು ಹ. ಜರೀರ್‌ರೊಂದಿಗೆ ಒಂದು ಪ್ರಯಾಣಕ್ಕೆ ಹೊರಟೆ. ಪ್ರಯಾಣದಲ್ಲಿ ಅವರು ನನ್ನ ಸೇವೆಗೈಯುತ್ತಿದ್ದರು. ನಾನು ಅವರನ್ನು ತಡೆದೆ. ಆದರೆ ಅವರು ಒಪ್ಪದೆ ಹೀಗೆಂದರು - ನಾನು ಅನ್ಸಾರ್‌ಗಳನ್ನು (ಮದೀನಾ ವಾಸಿಗಳು) ಪ್ರವಾದಿವರ್ಯರ [ಸ] ಸೇವೆ ಮಾಡುತ್ತಿರುವುದಾಗಿ ಕಂಡಿದ್ದೇನೆ. ಆಗ ಇನ್ನು ಮುಂದೆ ಅನ್ಸಾರ್‌ಗಳ ಪೈಕಿ ಯಾರೊಂದಿಗೆ ಪ್ರಯಾಣ ಮಾಡಿದರೂ ಅವರ ಸೇವೆಗೈಯುವೆನೆಂದು ಶಪಥ ಮಾಡಿದ್ದೇನೆ. 
[ಬುಖಾರಿ, ಮುಸ್ಲಿಮ್]

ಪ್ರವಾದಿವರ್ಯರ [ಸ] ಅನುಸರಣೆಯ ಮಹತ್ವ



ಹ. ಜಾಬಿರ್ [ರ] ಹೇಳುತ್ತಾರೆ - ಪ್ರವಾದಿಯವರು [ಸ] ಮಕ್ಕಾ ವಿಜಯದ ವರ್ಷ ರಮಝಾನ್ ತಂಗಳಲ್ಲಿ ಮಕ್ಕಾದ ಆಕ್ರಮಣ ಮಾಡಲಿಕ್ಕಾಗಿ ಹೊರಟು ಕುರಾಉಲ್ ಗುಮೈ ಎಂಬಲ್ಲಿಗೆ ತಲುಪಿದರು. ಪ್ರವಾದಿ [ಸ] ಮತ್ತು ಯೋಧರು ಅಂಧು ಉಪವಾಸ ಆಚರಿಸಿದ್ದರು. ಪ್ರಸ್ತುತ ಸ್ಥಳಕ್ಕೆ ತಲುಪಿದಾಗ ಪ್ರವಾದಿ [ಸ] ನೀರು ತರಿಸಿ ಮೇಲೆತ್ತಿ ಎಲ್ಲರೂ ನೋಡುವ ಹಾಗೆ ಕುಡಿದರು. (ಅರ್ಥಾತ್ ಉಪವಾಸ ಮುರಿದರು) ಆ ಬಳೀಕವೂ ಕೆಲವು ಮಂದಿ ಉಪವಾಸದಿಂದಿದ್ದಾರೆ. (ಅಂದರೆ ಅವರು ಉಪವಾಸ ಮುರಿಯಲಿಲ್ಲ) ಎಂದು ಅವರೊಂದಿಗೆ ಹೇಳಲಾದಾಗ ಪ್ರವಾದಿ [ಸ] ಅವರು ಅವಿಧೇಯರು ಎಂದು ಹೇಳಿದರು. 
[ಮುಸ್ಲಿಮ್]

Saturday, May 12, 2018

ಅರ್ಪಣಾ ಮನೋಭಾವ


. ಅನಸ್ [] ಹೇಳುತ್ತಾರೆ - ಅಬೂ ಸುಫ್ಯಾನರ ನಲ್ವತ್ತು ತಂಡಗಳ ತುಕ್ಕಡಿಯು ಆಧುನಿಕ ಶಸ್ತ್ರಾಸ್ತ ಮತ್ತು ಆಹಾರ ಸಾಮಗ್ರಿಗಳೊಂದಿಗೆ ಸಿರಿಯಾದಿಂದ ಮಕ್ಕಾಕ್ಕೆ ಹೊರಟಿದೆಯೆಂದು ತಿಳಿದಾಗ, ಪ್ರವಾದಿ [] ಸಹಾಬಿಗಳ ಜೊತೆ ಸಮಾಲೋಚನೆ ನಡೆಸಿದರು. ಆಗ ಸಅದ್ ಬಿನ್ ಉಬಾದ [] ಎದ್ದು ನಿಂತು ಹೀಗೆಂದರು - ತಾವು ನಮಗೆ ಸಮುದ್ರದಲ್ಲಿ ಕುದುರೆಗಳನ್ನು ಒಡಿಸಿರಿ ಎಂಬ ಅಪ್ಪಣೆ ಕೊಟ್ಟರೆ ನಾವು ಹಿಂದುಮುಂದು ನೋಡದೆ ಸಮುದ್ರಕ್ಕೆ ನಮ್ಮ ಕುದುರೆಗಳೊಂದಿಗೆ ಧುಮುಕುವೆವು. ಬರ್ಕುಲ್ ಗುಮಾದ್ವರೆಗೆ ಕುದುರೆ ಸವಾರಿ ಮಾಡಿ ಹೋಗಿ ವೈರಿಗಳೊಂದಿಗೆ ಕಾದಾಡಬೇಕೆಂದು ನಮಗೆ ಅಪ್ಪಣೆ ಕೊಟ್ಟರೆ ನಾವು ಅದನ್ನೂ ಪಾಲಿಸುವೆವು.
[ಮುಸ್ಲಿಮ್]

ತಾರಿಕ್ ಬಿನ್ ಶಿಹಾಬ್ ಹೇಳುತ್ತಾರೆ - ನಾನು ಅಬ್ದುಲ್ಲಾ ಬಿನ್ ಮಸ್ಊದ್ [] ಹೀಗೆ ಹೇಳುವುದಾಗಿ ಕೇಳಿದ್ದೇನೆ. ನಾನು ಮಿಕ್ದಾದ್ ಬಿನ್ ಅಸ್ವದ್ ಒಂದು ವಿಶೇಷ ಸಾಧನೆಯನ್ನು ನೋಡಿದ್ದೇನೆ. ಇತರೆಲ್ಲ ಸಾಧನೆಗಳಿಗಿಂತಲೂ ಪ್ರಿಯವಾಗಿರುವ ಸಾಧನೆಯು ನನ್ನಿಂದಾಗುತ್ತಿದ್ದರೆ! ಅದೇನೆಂದರೆ ಪ್ರವಾದಿಯವರು [] ಮಕ್ಕಾದ ಬಹುದೇವಾರಾಧಕರೊಂದಿಗೆ ಹೋರಾಡುವ ಕರೆಕೊಟ್ಟಾಗ ಮಿಕ್ದಾದ್ ಮುಂದೆ ಬಂದು ಹೀಗೆಂದರು - ಅಲ್ಲಾಹನ ಸಂದೇಶವಾಹಕರೇ! . ಮೂಸಾರ [] ಜನಾಂಗವು ಅವರೊಂದಿಗೆ, ನೀವು ನಿಮ್ಮ ಪ್ರಭೂ ಹೋಗಿ ವೈರಿಗಳೊಂದಿಗೆ ಕಾದಾಡಿರಿ ಎಂದು ಹೇಳಿದಂತೆ ನಾವು ತಮ್ಮೊಂದಿಗೆ ಖಂಡಿತ ಹೇಳಲಾರೆವು. ನಾವಂತೂ ತಮ್ಮ ಬಲಭಾಗದಲ್ಲೂ ಎಡಭಾಗದಲ್ಲೂ ಮುಂದೆಯೂ ಹಿಂದೆಯೂ ನಿಂತು ವೈರಿಗಳೊಂದಿಗೆ ಹೋರಾಡವೆವು. ಮಿಕ್ದಾದ್ ಮಾತನ್ನು ಹೇಳಿದಾಗ ಪ್ರವಾದಿಯವರ [] ಮುಖ ಸಂತೋಷದಿಂದ ಅರಳಿತು
[ಮುಸ್ನದ್ ಅಹ್ಮದ್]

ಸಮಗ್ರ ಮತ್ತು ಸಾರ್ವಕಾಲಿಕ ಸಂದೇಶ


ಅನಸ್ [] ಹೇಳುತ್ತಾರೆ - ಅಬ್ದುಲ್ಲಾ ಬಿನ್ ರವಾಹರು [] ಸಹಾಬಿಗಳ ಪೈಕಿ ಯಾರಾದರೂ ಸಿಕ್ಕಿದರೆ ಅವರೊಂದಿಗೆ, "ಬನ್ನಿ ನಾವು ಸ್ವಲ್ಪ ಹೊತ್ತು ನಿಮ್ಮ ಪಭುವಿನ ಮೇಲೆ ವಿಶ್ವಾಸ್ವವಿಡೊಣ" ಎನ್ನುತ್ತಿದ್ದರು. ಒಂದು ದಿನ ಅವರು ಒಬ್ಬರೊಂದಿಗೆ ಇದೇ ಮಾತನ್ನು ಹೇಳಿದಾಗ ಅವರು ಕೋಪಗೊಂಡು ಪ್ರವಾದಿಯವರ [] ಬಳಿಗೆ ಹೋಗಿ ಹೀಗೆಂದರು: ಅಲ್ಲಾಹನ ಸಂದೇಶವಾಹಕರೇ! ಇಬ್ನು ರವಾಹರನ್ನು ನೋಡಿ! ಅವರು ತಮ್ಮ ವಿಶ್ವಾಸದಿಂದ ಸರಿದು ಸ್ವಲ್ಪ ಹೊತ್ತು ವಿಶ್ವಾಸ ತಾಳಬೇಕೆಂಬ ಕರೆ ಕೊಡುತ್ತಿದ್ದಾರೆ. ಆಗ ಪ್ರವಾದಿ [] ಹೇಳಿದರು - ಅಲ್ಲಾಹನು ಇಬ್ನು ರವಾಹರ ಮೇಲೆ ಅನುಗ್ರಹ ಸುರಿಸಲಿ. ಅವರು ನಿಮಗೆ ಮಲಕ್ಗಳ ಹೆಮ್ಮೆ ಪಡುವಂತಹ ಧಾರ್ಮಿಕ ಕೂಟದ ಕಡೆಗೆ ಕರೆ ನೀಡುತ್ತಿದ್ದಾರೆ. ಅಂತಹ ಸಭೆಗಳನ್ನು ಇಬ್ನು ರವಾಹ ಬಹಳ ಇಷ್ಟಪಡುತ್ತಾರೆ
[ಮುಸ್ನದ್ ಅಹ್ಮದ್]

ಧಾರ್ಮಿಕ ಸಭೆಗಳ ಮಹತ್ವ


ಪ್ರವಾದಿಯವರು [ಸ] ಮಸೀದಿಯಲ್ಲಿ ತಮ್ಮ ಸಂಗಾತಿಗಳ ಒಂದು ತಂಡದ ಬಳಿಗೆ ಹೋದರು. ನೀವು ಇಲ್ಲಿ ಒಟ್ಟಾಗಿ ಏಕೆ ಕುಳಿತುಕೊಂಡಿದ್ದೀರಿ ಮತ್ತು ಏನು ಮಾಡುತ್ತಿದ್ದೀರಿ ಎಂದು ಕೇಳೀದರು. ಸಹಾಬಿಗಳು ಹೇಳಿದರು - ನಾವಿಲ್ಲಿ ಕುಳಿತು ಅಲ್ಲಾಹನನ್ನು ಸ್ಮರಿಸುತ್ತಿದ್ದೇವೆ, ಅವನು ನಮಗೆ ಇಸ್ಲಾಮಿನ ಹಾದಿಯನ್ನು ತೋರಿಸಿ, ಈಮಾನ್ ಅನುಗ್ರಹ ದಯಪಾಲಿಸುವ ಮೂಲಕ ನಮ್ಮ ಮೇಲೆ ಮಾಡಿದ ಉಪಕಾರಕ್ಕಾಗಿ ಅವನಿಗೆ ಕೃತಜ್ಜತೆ ಸಲ್ಲಿಸುತ್ತಿದ್ದೇನೆ. ಆಗ ಪ್ರವಾದಿ [ಸ] ಕೇಳಿದರು - ಅಲ್ಲಾಹನಾಣೆ! ನೀವು ಅದಕ್ಕಾಗಿಯೇ ಕುಳಿತಿರುವಿರಾ? ಸಹಾಬಿಗಳು ಹೇಳಿದರು - ಹೌದು! ಅಲ್ಲಾಹನಾಣೆ! ನಾವು ಅದೇ ಉದ್ದೇಶಕ್ಕಾಗಿ ಇಲ್ಲಿ ಕುಳಿತಿದ್ದೇವೆ. ಆಗ ಪ್ರವಾದಿ [ಸ] ಹೇಳೀದರು - ನಾನು ಆಣೆ ಹಾಕಿಸಿದ್ದು ನೀವು ಸುಳ್ಳುಗಾರರೆಂದಲ್ಲ. ಬದಲಾಗಿ ಹ. ಜಿಬ್ರೀಲ್ [ಅ] ನನ್ನ ಬಳಿಗೆ ಬಂದು ಅಲ್ಲಾಹನು ನಿಮ್ಮ ಬಗ್ಗೆ ಮಲಕ್‌ಗಳ (ದೇವಚರರ) ಸಭೆಯಲ್ಲಿ ಹೆಮ್ಮೆ ಪಡುತ್ತಿದ್ದಾನೆ ಎಂದು ತಿಳಿಸಿದರು. (ವರದಿ: ಮುಆವಿಯಾ [ರ]) 
[ಮುಸ್ಲಿಮ್, ನಸಾಈ, ತಿರ್ಮಿದಿ]

ಜ್ಜಾನದ ಗಳಿಕೆ ಮತ್ತು ಪ್ರಚಾರದ ಆಸಕ್ತಿ

ನಮ್ಮಲ್ಲಿ ಪ್ರತಿಯೊಬ್ಬನಿಗೂ ಪ್ರತಿದಿನವೂ ಪ್ರವಾದಿಯವರ [ಸ] ಸಭೆಯಲ್ಲಿ ನೇರವಾಗಿ ಧರ್ಮದ ಜ್ಜಾನವನ್ನು ಕಲಿಯಲಿಕ್ಕಾಗಿ ಹಾಜರುಗಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಬಳಿ ಹೊಲ ಮತ್ತು ತೋಟಗಳಿದ್ದು ನಾವು ಅದರಲ್ಲೇ ತಲ್ಲೀನರಾಗಿರುತ್ತಿದ್ದೆವು. ಆದರೆ ಪ್ರವಾದಿಯವರ [ಸ] ಸಭೆಯಲ್ಲಿ ಹಾಜರಾಗಿರುವವರು ಹಾಜರಾಗದವರಿಗೆ ಸಭಯ ಕಾರ್ಯಕಲಾಪಗಳನ್ನು ತಿಳಿಸುತ್ತಿದ್ದರು. ಅವರು ತಪ್ಪಾಗಿ ವಿವರಿಸುತ್ತಿರಲಿಲ್ಲ. ಸಂಪೂರ್ಣ ವಿಷಯವನ್ನು ಹಾಜರಿಲ್ಲದವರಿಗೆ ತಿಳಿಸುತ್ತಿದ್ದರು. (ವರದಿ: ಹ. ಬರಾಹ್ ಬಿನ್ ಅಝೀಬ್) 
[ಬೈಹಕಿ]

ತಾಳ್ಮೆ ಮತ್ತು ಸಾಂತ್ವನ

ಹ. ಅನಸ್ [ರ] ಹೇಳುತ್ತಾರೆ - ಅಬೂತಲ್ಹರಿಗೆ ಉಮ್ಮು ಸಲೈಮ್‌ರಿಂದ ಒಬ್ಬ ಪುತ್ರ ಜನಿಸಿದ್ದನು. (ಅಬೂತಲ್ಹ ಪ್ರಯಾಣದಲ್ಲಿದ್ದಾಗ) ಅವನ ನಿಧನವಾಯಿತು. ಉಮ್ಮು ಸಲೈಮ್‌ರು ಮನೆಯವರೊಂದಿಗೆ, ನೀವಾರೂ ಮಗುವಿನ ನಿಧನ ವಾರ್ತೆಯನ್ನು ಅಬೂತಲ್ಹರಿಗೆ ನೀಡವಾರದೆಂದೂ ನಾನೇ ನೀಡುವೆನೆಂದೂ ತಿಳಿಸಿದರು. ಅಬೂತಲ್ಹ ಬಂದಾಗ ಮೊಟ್ಟ ಮೊದಲು ರಾತ್ರಿಯ ಊಟ ಬಡಿಸಿದರು. ಅವರು ಊಟ ಮಾಡಿ ಅಲ್ಲೇ ಉಳಕೊಂಡರು. ಸ್ವಲ್ಪ ದಣೆವಾರಿದ ಬಳಿಕ ಉಮ್ಮು ಸುಲೈಮ್ ಹೇಳಿದರು - ಅಬೂತಲ್ಹ! ಯಾರಾದರೂ ಒಂದು ವಸ್ತುವನ್ನು ಬಬ್ಬನ ಬಳಿ ಇಟ್ಟಿದ್ದು ಅದನ್ನು ಅವನು ಮರಳಿ ಕೇಳಿದರೆ ನೀಡಲು ನಿರಾಕರಿಸುವ ಹಕ್ಕು ಅವನಿಗೆ ಇದೆಯೇ? ಅಬೂತಲ್ಹ ಹೇಳಿದರು - ಇಲ್ಲ, ಅವನು ನಿರಾಕರಿಸುವಂತಿಲ್ಲ. ಆಗ ಉಮ್ಮು ಸುಲೈಮ್ ಹೇಳಿದರು - ಈ ಮಗುವನ್ನು ಕೊಂಡು ಹೋಗಿ ದಫನ ಮಾಡಿರಿ. ಅದು ಅಲ್ಲಾಹನ ಅಮಾನತ್ತಾಗಿತ್ತು. ಅಲ್ಲಾಹನು ಅದನ್ನು ಮರಳಿ ಪಡೆದನು. ಪರಲೋಕದಲ್ಲಿ ಪುಣ್ಯ ಲಭಿಸಬೇಕಾದರೆ ನೀವು ತಾಳ್ಮೆ ವಹಿಸಬೇಕು. 
[ರಿಯಾದುಸ್ಸಾಲಿಹೀನ್ - ಮುಸ್ಲಿಮ್]

ವಚನ ಪಾಲನೆ


ಪ್ರವಾದಿ [ಸ] ಹೇಳಿದರು - ನನ್ನ ಕಾಲದವರು ಅತ್ಯುತ್ತಮ ಜನರಾಗಿದ್ದಾರೆ. (ಅಂದರೆ ಸಹಾಬಿಗಳು) ಆ ಬಳಿಕ ನನ್ನ ಕಾಲದ ನಂತರ ಬರುವವರು ಉತ್ತಮರಾಗಿರುವವರು. (ಅರ್ಥಾತ್ ಸಹಾಬಿಗಳಿಂದ ತರಬೇತಿ ಪಡೆದ ತಾಬಿಹ್‌ಗಳು) ಆ ಬಳಿಕ ಉತ್ತಮರು ಅವರ ನಂತರದವರಾಗಿರುವರು. (ಅರ್ಥಾತ್ ತಾಬಿಹ್‌ಗಳ ಒಡನಾಟದಲ್ಲಿರುವ ತಬವುತ್ತಾಬಿಹ್‌ಗಳು) ಅನಂತರ ಬರುವವರು - ಅವರ ಸಾಕ್ಷ್ಯವು ಆಣೆಯನ್ನೂ ಮೀರಿಸುವುದು ಮತ್ತು ಆಣೆಯು ಸಾಕ್ಷ್ಯವನ್ನೂ ಮೀರಿಸುವುದು. (ಅರ್ಥಾತ್ ಅವರು ಸುಳ್ಳು ಸಾಕ್ಷ್ಯ ನುಡಿಯುವರು, ಸುಳ್ಳು ಆಣೆ ಹಾಕುವರು. ಅವರ ದೃಷ್ಟಿಯಲ್ಲಿ ಸಾಕ್ಷಿ ಮತ್ತು ವಾಗ್ದಾನಗಳಿಗೆ ಬೆಲೆಯೇ ಇರಲಾರದು). (ವರದಿ: ಅಬ್ದುಲ್ಲಾ ಬಿನ್ ಮಸ್‌ಊದ್ [ರ]) 
[ಮುಸ್ನದ್ ಅಹ್ಮದ್]