Monday, January 27, 2014

ಅಲ್ಲಾಹುವೇ ಶಾಂತಿ (ಅಸ್ಸಲಾಮು) ಆಗಿರುವನು

ಇಬ್ನ್ ಮಸ್ ಊದ(ರ) ರು ವರದಿ ಮಾಡಿರುವರು: "ಪ್ರವಾದಿ(ಸ.ಅ)ರ ಹಿಂದಿನಿಂದ ನಾವು ನಮಾಝ್ ಮಾಡುತ್ತಿದ್ದಾಗಲೆಲ್ಲಾ"ಅಸ್ಸಲ್ಲಾಮು ಅಲಾ ಫುಲಾನಿನ್ ವ ಫುಲಾನ್(ದಾಸರ ಕಡೆಯಿಂದ ಶಾಂತಿಯು ಅಲ್ಲಾಹುವಿನ ಮೇಲಿರಲಿ. ಶಾಂತಿಯು ಆ ಜನರ ಅಂಥವರ ಮೇಲಿರಲಿ) ಎಂದು ನಾವು ಹೇಳುತ್ತಿದ್ದೆವು. ಆಗ ಪ್ರವಾದಿ (ಸ.ಅ)ರು ನಮಗೆ ಹೀಗೆ ನಿರ್ದೇಶಿಸಿದರು."ಅಲ್ಲಾಹುವಿನ ಮೇಲೆ ಶಾಂತಿಯಿರಲಿ ಎಂದು ಹೇಳುವುದು ಬೇಡ , ಯಾಕೆಂದರೆ ಅಲ್ಲಾಹುವೇ ಶಾಂತಿ (ಅಸ್ಸಲಾಮು) ಆಗಿರುವನು. 
[ಬುಖಾರಿ, ಮುಸ್ಲಿಂ]

ದಾನ ಧರ್ಮವು ಅಲ್ಲಾಹನ ಅನುಗ್ರಹವನ್ನು ವೃದ್ಧಿಸುತ್ತದೆ

ಪ್ರವಾದಿ(ಸ.ಅ)ರು ಹೇಳಿದರು: ಅಲ್ಲಾಹನು ಹೇಳುತ್ತಾನೆ ಓ ಆದಮರ ಪುತ್ರರೇ, ಖರ್ಚು ಮಾಡಿರಿ ನಾನು ನಿಮಗಾಗಿ ಖರ್ಚು ಮಾಡುವೆನು. 
[ಸಹೀಹ್ ಬುಖಾರಿ]

ಸುನ್ನತ್‌ಗಳಿಂದ ದೂರ ಸರಿಯುವಿಕೆ

ಪ್ರವಾದಿ(ಸ.ಅ)ರು ಹೇಳಿದರು: ಯಾರು ನನ್ನ ಸುನ್ನತ್‌ಗಳನ್ನು ಮುರಿಯುವನೋ ಅವನು ನನ್ನವನಲ್ಲ. 
[ಸಹೀಹ್ ಬುಖಾರಿ]

ಇಸ್ಲಾಮಿನಲ್ಲಿ ಕಾರ್ಮಿಕರ ಹಕ್ಕು

ಪ್ರವಾದಿ(ಸ.ಅ)ರು ಹೇಳಿದರು ಕಾರ್ಮಿಕರ ಬೆವರು ಒಣಗುವುದಕ್ಕೆ ಮುಂಚಿತವಾಗಿ ಅವರ ಕೂಲಿಯನ್ನು ಕೊಟ್ಟುಬಿಡಿ. 
[ಇಬ್ನ್ ಮಾಜ]

ಏಳು ಕಡೆಗಳಲ್ಲಿ ನಮಾಝ್ ಮಾಡುವುದರಿಂದ ಪ್ರವಾದಿ (ಸ.ಅ) ತಡೆದಿರುವರು

1. ಹೊಲಸು ಬೀಳುವ ಸ್ಥಳಗಳಲ್ಲಿ,
2. ಪ್ರಾಣಿಗಳನ್ನು ಕೊಯ್ಯುವ ಸ್ಥಳಗಳಲ್ಲಿ;
3. ಗೋರಿಗಳಲ್ಲಿ(ಗೋರಿಗಳ ಮೇಲೆ),
4. ನಾಲ್ಕು ರಸ್ತೆಗಳು ಕೂಡುವಲ್ಲಿ(ನಡುಬೀದಿಯಲ್ಲಿ)
5. ಬಚ್ಚಲು ಮನೆಯಲ್ಲಿ,
6. ಒಂಟೆಗಳನ್ನು ಕಟ್ಟುವ ಸ್ಥಳಗಳಲ್ಲಿ,
7. ಕಅಬಾದ ಮಾಡಿನ ಮೇಲೆ
[ವರದಿ:ಇಬ್ನು ಉಮರ್ (ರ) - ಉಲ್ಲೇಖ: ತಿರ್ಮಿದಿ-ಇಬ್ನು ಮಾಜ]

ಅಲ್ಲಾಹನಿಗೆ ಸಕಲ ಜೀವಿಗಳ ಪೈಕಿ ಮೂವರು ಕೆಟ್ಟವರಾಗಿದ್ದಾರೆ

ಹ. ಇಬ್ನು ಅಬ್ಬಾಸ್ [ರ] ಹೇಳುತ್ತಾರೆ - ಅಲ್ಲಾಹನ ಪ್ರವಾದಿ [ಸ] ಆದೇಶಿಸಿದರು. "ಅಲ್ಲಾಹನಿಗೆ ಸಕಲ ಜೀವಿಗಳ ಪೈಕಿ ಮೂವರು ಕೆಟ್ಟವರಾಗಿದ್ದಾರೆ. ಹರಮ್ ಪ್ರದೇಶದಲ್ಲಿ ಅಕ್ರಮವೆಸಗುವವನು, ಇಸ್ಲಾಮಿನಲ್ಲಿ ಅಜ್ಜಾನ ಜನ್ಯ ವಿಧಾನಗಳನ್ನು ಪಾಲಿಸುವವನು ಹಾಗೂ ಅಕ್ರಮ ಕೊಲೆ ಮಾಡ ಬಯಸುವವನು" 
[ಬುಖಾರಿ]

ಧರ್ಮದಲ್ಲಿ ವಿಶಾಲತೆ ಮತ್ತು ಉನ್ನತಿ ಹೊಂದುತ್ತಿರುವನು

ಹ. ಇಬ್ನು ಉಮರ್ [ರ] ಹೇಳುತ್ತಾರೆ - ಅಲ್ಲಾಹನ ಪ್ರವಾದಿ ಹ. ಮುಹಮ್ಮದ್ [ಸ] ಹೇಳುತ್ತಾರೆ - "ಒಬ್ಬ ಮುಸ್ಲಿಮನು ಅಕ್ರಮವಾಗಿ ಇನ್ನೊಬ್ಬನ ರಕ್ತ ಹರಿಸದವರೆಗೆ ಅವನು ಧರ್ಮದಲ್ಲಿ ವಿಶಾಲತೆ ಮತ್ತು ಉನ್ನತಿ ಹೊಂದುತ್ತಿರುವನು. 
[ಬುಖಾರಿ]

ಪ್ರವಾದಿ ಮುಹಮ್ಮದ್ [ಸ] ಶಾಪವೆಸಗುವವರಾಗಿರಲಿಲ್ಲ

ಹ. ಅನಸ್ ಬಿನ್ ಮಾಲಿಕ್ [ರ] ಹೇಳುತ್ತಾರೆ - ಪ್ರವಾದಿ ಮುಹಮ್ಮದ್ [ಸ] ನಿರ್ಲಜ್ಜರಾಗಿರಲಿಲ್ಲ. ಯಾರಿಗೂ ಅವಹೇಳನ, ಶಾಪವೆಸಗುವವರಾಗಿರಲಿಲ್ಲ. ಒಂದು ವೇಳೆ ಯಾರ ಮೇಲಾದರೂ ಕೋಪ ಬಂದರೆ "ಇದೇನಾಯಿತು! ಅವನ ಮೇಲೆ ಮರಳು" ಎಂದಿಷ್ಟೇ ಹೇಳುತ್ತಿದ್ದರು. 
[ಬುಖಾರಿ]

ಹಿರಿಯರನ್ನು ಗೌರವಿಸದವನು ನಮ್ಮವನಲ್ಲ

ಪ್ರವಾದಿ (ಸ) ಹೇಳಿದರು  "ಚಿಕ್ಕವರೊಂದಿಗೆ ಕರುಣೆ ತೋರಿಸದ ಹಾಗೂ ಹಿರಿಯರನ್ನು ಗೌರವಿಸದವನು ನಮ್ಮವನಲ್ಲ". 
[ಹದೀಸ್]

ವಿವಾಹ ವಿಮೋಚನೆ

ಪ್ರವಾದಿ (ಸ) ಹೇಳಿದರು "ಅಲ್ಲಾಹನ ಅನುಮತಿಸಿದ ಕಾರ್ಯಗಳಲ್ಲಿ ಅತ್ಯಂತ ಅಪ್ರಿಯವಾದುದು ವಿವಾಹ ವಿಮೋಚನೆಯಾಗಿದೆ". 
[ಹದೀಸ್]

ಪ್ರತಿಯೊಬ್ಬರ ಹೊಣೆಗಾರಿಕೆ

ಪ್ರವಾದಿ (ಸ) ಹೇಳಿದರು ನೀವೆಲ್ಲರೂ ಆಡಳಿತರರಾಗಿರುವಿರಿ. ನೀವು ನಿಮ್ಮ ಪ್ರಜೆಗಳ ಕುರಿತು ವಿಚಾರನೆಗೊಳಗಾಗುತ್ತೀರಿ. ಪ್ರತಿಯೋರ್ವ ಪುರುಷನು ತನ್ನ ಮನೆಯ ಆಡಳಿತಗಾರನಾಗಿದ್ದಾನೆ. ಮಹಿಳೆ ಪತಿಗ್ರಹ ಹಾಗೂ ಸಂತಾನಗಳ ಮುಖ್ಯಸ್ಥೆ. ನಿಮ್ಮಲ್ಲಿ ಎಲ್ಲರೂ ಅವರವರ ಪ್ರಜೆಗಳಿಗೆ ಹೊಣೆಗಾರರಾಗಿರುವಿರಿ". 
[ಹದೀಸ್]

ನಿಷಿದ್ದ ಸಂಪಾದನೆಯ ಪರಿಣಾಮ

ಒಬ್ಬ ವ್ಯಕ್ತಿಯ ಕುರಿತು ಹೀಗೆಂದರೆಂದು ಹದೀಸ್ ವರದಿಗಾರರು ಹೇಳಿದ್ದಾರೆ: ಅವನು (ಹಜ್ಜ್ ಗಾಗಿ) ಬಹಳ ದೀರ್ಘ ಪ್ರಯಾಣ ಮಾಡುತ್ತಾನೆ. (ಪ್ರಯಾಣದಿಂದಾಗಿ) ಅವನ ಕೂದಲುಗಳು ಕೆದರಿಕೊಂಡು ಧೂಳಿನಿಂದಾವೃತವಾಗಿದೆ. ಅವನು ಬಾನಿನೆಡೆಗೆ ಕೈಗಳನ್ನೆತ್ತಿ, "ನನ್ನ ಪ್ರಭೂ! ನನ್ನ ಪ್ರಭೂ!" ಎಂದು ಪ್ರಾರ್ಥಿಸುತ್ತಾನೆ. ಆದರೆ ವಾಸ್ತವದಲ್ಲಿ ಅವನ ಅನ್ನ, ಪಾನೀಯ ಮತ್ತು ಅವನ ವಸ್ತ್ರ ಎಲ್ಲವೂ ನಿಷಿದ್ಧ ಸಂಪಾದನೆಗಳಾಗಿವೆ. ಅವನು ನಿಷಿದ್ಧ ಆಹಾರದಿಂದ ಪೋಷಿಸಲ್ಪಟ್ಟಿದ್ದಾನೆ. ಹೀಗಿರುತ್ತಾ ಅವನ ಪ್ರರ್ಥನೆಯು ಸ್ವೀಕೃತವಾಗುವುದಾದರೂ ಹೇಗೆ? (ಹ.ಅಬೂ ಹುರೈರಾ(ರ)) 
[ಮುಸ್ಲಿಮ್]

ಕೋಮುವಾದದೆಡೆಗೆ ಆಹ್ವಾನಿಸುವವ

ಮುಹಮ್ಮದ್ (ಸ) ಹೇಳಿದರು: "ಕೋಮುವಾದದೆಡೆಗೆ ಆಹ್ವಾನಿಸುವ ಮತ್ತು ಕೋಮುವಾದಕ್ಕಾಗಿ ಹೋರಾಡುವ ಪತಾಕೆಯ ಅಡಿಯಲ್ಲಿ ಯಾರಾದರೂ ಮರಣದೊಂದಿದರೆ ಅದು ಇಸ್ಲಾಮೇತರ ಮರಣವಾಗಿದೆ" 
[ಮುಸ್ಲಿಮ್]  

ತಾಳ್ಮೆ – ಉತ್ತಮ ದಾನ

ಮುಹಮ್ಮದ್ (ಸ) ಹೇಳಿದರು: "ತಾಳ್ಮೆಗಿಂತಲೂ ದೊಡ್ಡ ಮತ್ತು ಉತ್ತಮವಾದ ದಾನ ಬೇರೊಂದಿಲ್ಲ." 
[ಅಲ್ ಬುಖಾರಿ, ಮುಸ್ಲಿಮ್]

ಶ್ರೇಷ್ಠವಾದ ಹೋರಾಟ - ಜೀಹಾದ್

ಮುಹಮ್ಮದ್ (ಸ) ಹೇಳಿದರು: "ಸರ್ವಾಧಿಕಾರಿಯ ಮುಂದೆ ಸತ್ಯವನ್ನು ಬಹಿರಂಗವಾಗಿ ಹೇಳುವುದೇ ಶ್ರೇಷ್ಠವಾದ ಹೋರಾಟ." 
[ಅಬೂ ದಾವೂದ್]

ಕೊಟ್ಟ ದಾನವನ್ನು ವಾಪಸು ಪಡೆಯುವವನು

ಮುಹಮ್ಮದ್ (ಸ) ಹೇಳಿದರು: "ಕೊಟ್ಟ ದಾನವನ್ನು ವಾಪಸು ಪಡೆಯುವವನು ವಾಂತಿ ಮಾಡಿದ್ದನ್ನು ತಿನ್ನುವವನಿಗೆ ಸಮಾನನಾಗಿದ್ದಾನೆ." 
[ಅಲ್ ಬುಖಾರಿ, ಮುಸ್ಲಿಮ್]

ಬೃಹ್ಮಚರ್ಯೆಯನ್ನು ಇಸ್ಲಾಮ್ ವಿರೋಧಿಸುತ್ತದೆ

ಮುಹಮ್ಮದ್ (ಸ)ರವರು ವಿವಾಹವಾಗಲು ಆದೇಶಿಸಿದ್ದಾರೆ ಮತ್ತು ಬೃಹ್ಮಚರ್ಯೆಯನ್ನು ವಿರೋಧಿಸಿದ್ದಾರೆ. 
[ಅಹ್ಮದ್]

Tuesday, January 21, 2014

ಇಬ್'ಲೀಸ್

ಇಬ್'ಲೀಸ್ ಎಂದರೆ ಅತ್ಯಂತ ಹತಾಶ ಎಂದರ್ಥ. ಇಲ್ಲಿ ಆ ಪದವು ಸಾಂಕೇತಿಕವಾಗಿ, ಅಲ್ಲಾಹನ ಆಜ್ಜೆಯನ್ನು ಉಲ್ಲಂಘಿಸಿ ಆದಮ್ [ಅ] ಮತ್ತು ಸಂತತಿಗಳಿಗೆ ವಿಧೇಯವಾಗಲು ನಿರಾಕರಿಸಿದ, ಮಾನವ ಕುಲದ ದಾರಿ ತಪ್ಪಿಸಿ ದುರ್ಮಾರ್ಗಕ್ಕೆ ಪ್ರೇರೆಪಿಸಲಿಕ್ಕಾಗಿ ಅಲ್ಲಾಹನೊಡನೆ ಅಂತ್ಯದಿನದ ತನಕ ಅವಧಿಯನ್ನು ಬೇಡಿದ ಯಕ್ಷ (ಜಿನ್ನ್)ನ ಹೆಸರು.

ಅಝ್ವಾಜ್

ಅರಬಿ ಮೂಲದ ಪದ ಅಝ್ವಾಜ್ ಎಂಬ ಪದಕ್ಕೆ "ಜೋಡಿ" ಎಂಬ ಅರ್ಥವಿದೆ. ಈ ಪದವನ್ನು ಪತಿ ಮತ್ತು ಪತ್ನಿ ಹೀಗೆ ಈರ್ವರಿಗೂ ಬಳಸಲಾಗುತ್ತದೆ

ಇಬಾದತ್

ಇಬಾದತ್ ಎಂಬ ಪದವನ್ನು ಅರಬಿ ಭಾಷೆಯಲ್ಲಿ ಮೂರು ಅರ್ಥಗಳಲ್ಲಿ ಬಳಸಲಾಗಿದೆ.
1.  ಪೂಜೆ ಮತ್ತು ಆರಾಧನೆ
2. ಅನುಸರಣೆ ಮತ್ತು ಅಜ್ಜಾಪಾಲನೆ
3. ದಾಸ್ಯ ಮತ್ತು ಗುಲಾಮತನ

ನಮಾಝ್'ನಲ್ಲಿ ನಿಮ್ಮ ಸಾಲುಗಳನ್ನು ಸರಿಪಡಿಸಿ

ಅನಸ್ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು: ನಿಮ್ಮ ಸಾಲುಗಳನ್ನು ಸರಿಪಡಿಸಿ, ಪರಸ್ಪರ ಸೇರಿಕೊಂಡು ನಿಲ್ಲಿರಿ. ನಾನು ನಿಮ್ಮನ್ನು ಹಿಂದಿನಿಂದ ನೋಡುತ್ತಿದ್ದೇನೆ.
[ಸಹೀಹ್ ಬುಖಾರಿ, ಅಧ್ಯಾಯ ಜಮಾಅತ್ ನಮಾಝ್ ಮತ್ತು ಇಖಾಮತ್]

ಸಾಲುಗಳನ್ನು ನೇರವಾಗಿರಿಸಿರಿ

ನುಹ್ ಮಾನ್ ಬಿನ್ ಬಶೀರ್ [ರ] ಹೇಳುತ್ತಾರೆ -ಪ್ರವಾದಿ [ಸ] ಹೇಳಿದರು: ನೀವು ನಿಮ್ಮ ಸಾಲುಗಳನ್ನು ನೇರವಾಗಿರಿಸಿರಿ. ಅನ್ಯಥಾ ಅಲ್ಲಾಹನು ನಿಮ್ಮ ಮುಖಗಳನ್ನು ವಿಮುಖಗೊಳಿಸಿ ಬಿಡುವನು.  
[ಸಹೀಹ್ ಬುಖಾರಿ, ಅಧ್ಯಾಯ ಜಮಾಅತ್ ನಮಾಝ್ ಮತ್ತು ಇಖಾಮತ್]

ತಾಯಿಗೆ ಆಗುವ ಚಿಂತೆ

ಅಬೂ ಕತಾದಃ [] ಅವರಿಂದ ವರದಿಯಾಗಿದೆ. ಪ್ರವಾದಿ [] ಹೇಳಿದರು - ನಾನು ನಮಾಝ್'ಗೆ ಪ್ರವೇಶಿಸುವಾಗ ಅದನ್ನು ಧೀರ್ಘ ಮಾಡಬೇಕೆಂದು ಬಯಸುತ್ತೇನೆ. ಮಗುವಿನ ಅಳು ಕೇಳಿ ಅದರಿಂದ ಅದರ ತಾಯಿಗೆ ಆಗುವ ಚಿಂತೆಯನ್ನು ನೆನೆದು ನನ್ನ ನಮಾಝ್'ನ್ನು ಕಡಿತಗೊಳಿಸುತ್ತೇನೆ.
[ಬುಖಾರಿ]

ಅದಾನನ್ನು ಪುನರಾವರ್ತಿಸಿ

ಅಬೂ ಸಈದ್ ಖುದ್ರಿ [ರ] ವರದಿ ಮಾಡುತ್ತಾರೆ. ಪ್ರವಾದಿ [ಸ] ಹೇಳಿದರು, ಮುಅದ್ದಿನ್ ಆದಾನ್ ಹೇಳುವುದನ್ನು ಕೇಳಿದಾಗ ನೀವು ಅದನ್ನು ಪುನರಾವರ್ತಿಸಿರಿ.
[ಸಹೀಹ್ ಬುಖಾರಿ, ಅಧ್ಯಾಯ ನಮಾಝ್ ಸಮಯ]          

ನಮಾಝ್'ನಲ್ಲೇ ಇರುವಿರಿ

ಅನಸ್ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು - ನಮಾಝ್'ಗಾಗಿ ಕಾದು ಕುಳಿತಿರುವಾಗ ನೀವು ನಮಾಝ್'ನಲ್ಲೇ ಇರುವಿರಿ. 
[ಸಹೀಹ್ ಬುಖಾರಿ, ಅಧ್ಯಾಯ ನಮಾಝ್ ಸಮಯ]    

ಅವನು ಸ್ವರ್ಗ ಪ್ರವೇಶಿಸುವನು

ಅಬೂ ಮೂಸಾ ಹೇಳುತ್ತಾರೆ - ಯಾರು ತಂಪಾದ ಸಮಯದ ಎರಡು ನಮಾಝ್'ಗಳನ್ನು - ಫಜ್ರ್ ಮತ್ತು ಅಸರ್ ಮಾಡುವನೋ ಅವನು ಸ್ವರ್ಗ ಪ್ರವೇಶಿಸುವನು 
[ಸಹೀಹ್ ಬುಖಾರಿ, ಅಧ್ಯಾಯ ನಮಾಝ್ ಸಮಯ]  

ಅವರ ಕರ್ಮಗಳೆಲ್ಲ ವ್ಯರ್ಥವಾಯಿತು

ಬುರೈದಾ [ರ] ಮೋಡ ಕವಿದ ಒಂದು ದಿವಸ ಹೇಳಿದರು. ಅಸರ್ ನಮಾಝನ್ನು ಬೇಗ ನಿರ್ವಹಿಸಿರಿ. ಏಕೆಂದರೆ ಪ್ರವಾದಿ [ಸ] ಹೇಳಿದರು, ಯಾರು ಅಸರ್ ನಮಾಝನ್ನು ಬಿಟ್ಟನೋ ಅವರ ಕರ್ಮಗಳೆಲ್ಲ ವ್ಯರ್ಥವಾಯಿತು 
[ಸಹೀಹ್ ಬುಖಾರಿ, ಅಧ್ಯಾಯ ನಮಾಝ್ ಸಮಯ]

ಅಸರ್ ನಮಾಝ್ ಕಳೆದು ಹೋದರೆ

ಇಬ್ನು ಉಮರ್ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು - ಯಾರೊಬ್ಬನ ಅಸರ್ ನಮಾಝ್ ಕಳೆದು ಹೋಯಿತೋ ಅವನ ಕುಟುಂಬ ಮತ್ತು ಸೊತ್ತು ಲೂಟಿಯಾದಂತೆ. 
[ಸಹೀಹ್ ಬುಖಾರಿ, ಅಧ್ಯಾಯ ನಮಾಝ್ ಸಮಯ] 

ತಹಿಯ್ಯತುಲ್ ಮಸ್ಜಿದ್

ಅಬೂಕತಾದ [ರ] ಹೇಳುತ್ತಾರೆ. ಪ್ರವಾದಿ [ಸ] ಹೇಳಿದರು. ನಿಮ್ಮ ಯಾರಾದರೂ ಮದೀದಿಗೆ ಪ್ರವೇಶಿಸಿದಾಗ ಕುಳಿತುಕೊಳ್ಳುವುದಕ್ಕಿಂತ ಮುಂಚೆ ಎರಡು ರಕಅತ್ ನಮಾಝ್ ಮಾಡಲಿ. [ತಹಿಯ್ಯತುಲ್ ಮಸ್ಜಿದ್] 
[ಸಹೀಹ್ ಬುಖಾರಿ, ಅಧ್ಯಾಯ ಮಸೀದಿ]

ಮನೆಯನ್ನು ಕಬರಸ್ತಾನವಾಗಿ ಮಾಡದಿರಿ

ಅನಸ್ [ರ] ಹೇಳುತ್ತಾರೆ - ಪ್ರವಾದಿವರ್ಯರು [ಸ] ಹೇಳಿದರು: ನಮಾಝ್'ನ ಒಂದು ಭಾಗವನ್ನು ನಿಮ್ಮ ಮನೆಗಳಲ್ಲಿ ಮಾಡಿರಿ. ಅದನ್ನು ಕಬರಸ್ತಾನವಾಗಿ ಮಾಡದಿರಿ. 
[ಸಹೀಹ್ ಬುಖಾರಿ, ಅಧ್ಯಾಯ ಮಸೀದಿ]

ಮಟ್ಟಾಗಿರುವಾಗ - ಮಡಿಲಲ್ಲಿ ಆನಿಸಿ ಕೊಂಡು ಕುರಾನ್ ಪಟಿಸಿದರು

ಆಯಿಷಾ [ರ] ಹೇಳುತ್ತಾರೆ. ನಾನು ಮಟ್ಟಾಗಿರುವ ಸ್ಥಿತಿಯಲ್ಲಿ ಪ್ರವಾದಿಯವರು [ಸ] ನನ್ನ ಮಡಿಲಲ್ಲಿ ಆನಿಸಿಕೊಂಡು ಕುರಾನ್ ಪಟಿಸಿದರು. 
[ಸಹೀಹ್ ಬುಖಾರಿ, ಅಧ್ಯಾಯ ಆರ್ತನ]

ವುಝೂ ಮಾಡಿದರೆ - ಜನಾಬತ್ ಅವಸ್ಥೆಯಲ್ಲಿ ಮಲಗಿ ನಿದ್ರಿಸಬಹುದು!

ಇಬ್ನು ಉಮರ್ [ರ] ವರದಿ ಮಾಡುತ್ತಾರೆ: ಉಮರ್ ಬಿನ್ ಖಾತ್ತಾಬ್ [ರ] ಪ್ರವಾದಿಯವರೊಂದಿಗೆ ಕೇಳಿದರು - ನಮ್ಮಲ್ಲಿ ಯಾರಾದರೂ ಅಶುದ್ದಾವಸ್ಥೆಯಲ್ಲಿ ನಿದ್ರಿಸಬಹುದೇ? ಪ್ರವಾದಿ [ಸ] ಹೇಳಿದರು -ಹೌದು, ವುಝೂ ಮಾಡಿದರೆ ಜನಾಬತ್ ಅವಸ್ಥೆಯಲ್ಲಿ ಮಲಗಿ ನಿದ್ರಿಸಬಹುದು. 
[ಸಹೀಹ್ ಬುಖಾರಿ, ಅಧ್ಯಾಯ ಸ್ನಾನ]

ಹಾಲಿನಲ್ಲಿ ಪಸೆಯಿದೆ

ಇಬ್ನ್ ಅಬ್ಬಾಸ್ ಹೇಳುತ್ತಾರೆ: ಪ್ರವಾದಿ [ಸ] ಹಾಲು ಕುಡಿದು ಬಾಯಿ ಮುಕ್ಕಳಿಸಿದರು. ಇದರಲ್ಲಿ ಪಸೆಯಿದೆಯೆಂದು ಹೇಳಿದರು.  
[ಸಹೀಹ್ ಬುಖಾರಿ, ಅಧ್ಯಾಯ ವುಝೂ]

ಶೌಚಾಲಯಕ್ಕೆ ಹೋಗುವಾಗ ಪಾಲಿಸಬೇಕಾದ ಶಿಷ್ಟಚಾರ

ಅಬೂ ಅಯ್ಯುಬ್ ಅನ್ಸಾರಿ [ರ] ಹೇಳುತ್ತಾರೆ: ಪ್ರವಾದಿ [ಸ] ಹೇಳಿದರು, "ನೀವು ಶೌಚಾಲಯಕ್ಕೆ ಹೋದಾಗ ಕಿಬ್ಲಾಕ್ಕೆ ಮುಖ ಮಾಡಿಯೋ ಬೆನ್ನು ಹಾಕಿಯೋ ಕೊರಬಾರದು. ಬದಲಾಗಿ ಪೂರ್ವ ಅಥವಾ ಪಶ್ಚಿಮಕ್ಕೆ ಮುಖ ಮಾಡಬೇಕು.
[ಸಹೀಹ್ ಬುಖಾರಿ, ಅಧ್ಯಾಯ ವುಝೂ]

ಧರ್ಮದ ಜಾನಿಯಾಗಿ ಮಾಡು - ಇಬ್ನು ಅಬಾಸ್ [ರ]

ಇಬ್ನು ಅಬ್ಬಾಸ್ [ರ] ಹೇಳುತ್ತಾರೆ: ಪ್ರವಾದಿ [ಸ] ಶೌಚಾಲಯಕ್ಕೆ ಪವೇಶಿಸಿದರು. ನಾನು ಅವರಿಗೆ ವುಝೂವಿಗಾಗಿ ನೀರು ತಂದಿಟ್ಟೆ. ಪ್ರವಾದಿ [ಸ] ಇದು ಯಾರಿಟ್ಟದ್ದೆಂದು ಹೇಳಿದರು. ಅವರಿಗೆ ಉತ್ತರಿಸಲಾಯಿತು. ಆಗ ಪ್ರವಾದಿ [ಸ] ಪ್ರಾರ್ಥಿಸಿದರು, " ಪ್ರಭೂ! ಇವನನ್ನು ಧರ್ಮದ ಜಾನಿಯಾಗಿ ಮಾಡು.

[ಸಹೀಹ್ ಬುಖಾರಿ, ಅಧ್ಯಾಯ ವುಝೂ]

ಜೀವನವು ನನ್ನ ಪಾಲಿಗೆ ಉತ್ತಮವಾಗಿದ್ದರೆ ನನ್ನನ್ನು ಬದುಕಿಸು

ಅನಸ್ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು ತನಗೆದುರಾದ ಸಂಕಷ್ಟದಿಂದಾಗಿ ನಿಮ್ಮ ಪೈಕಿ ಯಾರೂ ಮರಣವನ್ನು ಬಯಸಬಾರದು. ಹಾಗೇನಾದರೂ ಮಾಡಬೇಕೆಂದಿದ್ದರೆ ಅವನು ಹೇಳಲಿ: ಅಲ್ಲಾಹನೇ ಜೀವನವು ನನ್ನ ಪಾಲಿಗೆ ಉತ್ತಮವಾಗಿದ್ದರೆ ನನ್ನನ್ನು ಬದುಕಿಸು. ಮರಣವೇ ನನಗೆ ಉತ್ತಮವೆಂದಿದ್ದರೆ ನನ್ನನ್ನು ಸಾಯಿಸು. 
[ಸಹೀಹ್ ಬುಖಾರಿ, ಅಧ್ಯಾಯ ರೋಗಿಗಳು] 

ಖರ್ಜೂರದ ಶ್ರೇಷ್ಟತೆ

ಸಅದ್ ಬಿನ್ ಅಬೀ ವಕ್ಕಾಸ್ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು - ಒಬ್ಬನು ಏಳು ಉತ್ತಮ ತರದ ಅಜ್'ವಾ ಖರುಜೂರಗಳನ್ನು ಬೆಳಗ್ಗಿನ ಹೊತ್ತು ಬೇರೇನಾದರೂ ತಿನ್ನುವುದಕ್ಕಿಂತ ಮುಂಚೆ ತಿಂದರೆ ಅಂದು ಅವನಿಗೆ ವಿಷಬಾಧೆ ಅಥವಾ ಮಾಟ ಭಾಧೆ ಉಂಟಾಗಲಾರದು. 
[ಸಹೀಹ್ ಬುಖಾರಿ, ಅಧ್ಯಾಯ ಆಹಾರ] 

ಇಬ್ನ್ ಮಸ್ ಊದ್ [ರ] ಕುರಾನ್ ಕಲಿತದ್ದು

ಇಬ್ನ್ ಮಸ್ ಊದ್ [ರ] ಹೇಳುತ್ತಾರೆ - ಪ್ರವಾದಿಯವರ [ಸ] ಬಾಯಿಯಿಂದ ನಾನು ಎಪ್ಪತ್ತಕ್ಕಿಂತಲೂ ಹೆಚ್ಚು ಅಧ್ಯಾಯ ಆಲಿಸಿ ಕಲಿತಿದ್ದೇನೆ. ಅಲ್ಲಾಹನಾಣೆ ಪ್ರವಾದಿಯವರ [ಸ] ಸಂಗಾತಿಗಳ ಪೈಕಿ ಅಲ್ಲಾಹನ ಗ್ರಂಥವನ್ನು ಎಲ್ಲರಿಗಿಂತ ಹೆಚ್ಚು ತಿಳಿದಿರುವವನು ನಾನೇ ಆಗಿದ್ದೇನೆ. ಅವರ ಪೈಕಿ ಉತ್ತಮ ವ್ಯಕ್ತಿ ನಾನಲ್ಲವೆಂದು ಅವರಿಗೆ ಗೊತ್ತು. 
[ಸಹೀಹ್ ಬುಖಾರಿ, ಅಧ್ಯಾಯ ಕುರಾನ್ ಸೂಕ್ತಗಳ ವ್ಯಾಖ್ಯಾನ]

ಅಲ್ ಮುತಫ್ಫಿಫ್ಫೀನ್

ಅಬ್ದುಲ್ಲಾ ಬಿನ್ ಉಮರ್ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು - ಜನರು ತಮ್ಮ ಪ್ರಭುವಿನ ಸನ್ನಿಧಿಗೆ ಎದ್ದು ಬರುವ ದಿವಸ - ಅಂದು ಅವರಲ್ಲಿ ಪ್ರತಿಯೊಬ್ಬರೂ ಕಿವಿಗಳ ಅರ್ಥದ ವರೆಗೆ ಬೆವರಿನಲ್ಲಿ ಮುಳುಗಿರುವರು. 
[ಸಹೀಹ್ ಬುಖಾರಿ, ಅಧ್ಯಾಯ ಕುರಾನ್ ಸೂಕ್ತಗಳ ವ್ಯಾಖ್ಯಾನ]

ಅಲ್ ಕೌಸರ್ ಸರೋವರದ ವರ್ಣನೆ

ಆಯಿಷಾ [ರ] ಹೇಳುತ್ತಾರೆ - "ಇನ್ನಾ ಅಹ್'ತೈನಾ ಕಲ್ ಕೌಸರ್" ಎಂಬ ಸೂಕ್ತದ ಕುರಿತು ನನ್ನೊಡನೆ ನಾನು ಹೇಳಿದೆ - ಅದು ನಿಮ್ಮ ಪ್ರವಾದಿಗೆ [ಸ] ನೀಡಲಾದ ಸರೋವರವಾಗಿದೆ. ಅದರ ಸುತ್ತಲೂ ಒಳಭಾಗದಲ್ಲಿ ವಿಶಾಲವಾದ ರತ್ನ ಖಚಿತ ಗೋಪುರಗಳಿವೆ. ಅದರ ಪಾತ್ರೆಗಳು ನಕ್ಷತ್ರಗಳಂತಿವೆ. 
[ಸಹೀಹ್ ಬುಖಾರಿ, ಅಧ್ಯಾಯ ಕುರಾನ್ ಸೂಕ್ತಗಳ ವ್ಯಾಖ್ಯಾನ]                                                                                            

ವ್ಯವಹಾರಗಳನ್ನು ಓರ್ವ ಹೆಣ್ಣಿಗೆ ವಹಿಸಿಕೊಡುವ ಜನತೆ ಎಂದೂ ಯಶಸ್ವಿಯಾಗಲಾರದು

ಅಬೂಬಕ್ರಃ [ರ] ಹೇಳುತ್ತಾರೆ - ನಾನು ಜಮಲ್ ಯುದ್ದದ ವೇಳೆ ಜನರೊಂದಿಗೆ ಸೇರಿ ಯುದ್ದ ಮಾಡಲುದ್ದೇಶಿಸಿದಾಗ, ಕಿಸ್ರಾನ ಪುತ್ರಿಯನ್ನು ಅಧಿಕಾರ ಪಿಟದಲ್ಲಿ ಕುಳ್ಳಿರಿಸಿದ ಸಂಗತಿಯನ್ನು ಕೇಳಿದಾಗ ಪ್ರವಾದಿ [ಸ] ಹೇಳಿದ ಒಂದು ಮಾತು ನನಗೆ ಪ್ರಯೋಜನವಾಯಿತು. ಪ್ರವಾದಿ [ಸ] ಹೇಳಿದ್ದರು - ತಮ್ಮ ವ್ಯವಹಾರಗಳನ್ನು ಓರ್ವ ಹೆಣ್ಣಿಗೆ ವಹಿಸಿಕೊಡುವ ಜನತೆ ಎಂದೂ ಯಶಸ್ವಿಯಾಗಲಾರದು. 
[ಸಹೀಹ್ ಬುಖಾರಿ, ಅಧ್ಯಾಯ ಯುದ್ದಗಳು] 

ಮಕ್ಕಾ ವಿಜಯ

ಇಬ್ನು ಅಬಾಸ್ [ರ] ಹೇಳುತ್ತಾರೆ - ಪ್ರವಾದಿ [ಸ] ರಮಝಾನ್ ತಿಂಗಳಲ್ಲಿ ೧೦ ಸಾವಿರ ಯೋಧರೊಂದಿಗೆ ಮದೀನದಿಂದ ಹೊರಟರು. ಪ್ರವಾದಿಯವರು [ಸ] ಮಕ್ಕಾದಿಂದ ಮದೀನಕ್ಕೆ ಬಂದು ಎಂಟು ವರ್ಷಗಳ ಬಳಿಕ, ಈ ಪ್ರಯಾಣ ಮಕ್ಕಾದ ಕಡೆಗಾಗಿತ್ತು. ಪ್ರವಾದಿ [ಸ] ಯೋಧರು ಕದೀದ್'ಗೆ ತಲುಪುವ ವರೆಗೆ ಉಪವಾಸವಿದ್ದರು. ಉಸ್ಫಾನ್ ಮತ್ತು ಕುದೈದ್ ಮಧ್ಯದಲ್ಲಿರುವ ಈ ಸರೋವರದ ಬಳಿಕ ತಲಪಿದಾಗ ಪ್ರವಾದಿ [ಸ] ಮತ್ತು ಸಂಗಾತಿಗಳೆಲ್ಲರೂ ಉಪವಾಸ ತೊರೆದರು. 
[ಸಹೀಹ್ ಬುಖಾರಿ, ಅಧ್ಯಾಯ ಯುದ್ದಗಳು]                             

Monday, January 20, 2014

ಉಬಯ್ಯ್ ಬಿನ್ ಕಅಬ್ [ರ] – ಶ್ರೇಷ್ಠತೆ

ಅನಸ್ ಬಿನ್ ಮಾಲೀಕ್ [ರ] ಹೇಳುತ್ತಾರೆ - ಪ್ರವಾದಿ [ಸ] ಉಬಾಯ್ಯ್'ರೊಡನೆ, ಅಲ್ಲಾಹನು ನಿಮಗೆ ಅಲ್-ಬಯ್ಯಿನ ಅಧ್ಯಾಯ ಪಟಿಸಿ ಕೇಳಿಸಲು ಆಜ್ಜಾಪಿಸಿದ್ದಾರೆನೆಂದು ಹೇಳಿದರು. ಅವರು ಕೇಳಿದರು - ಅಲ್ಲಾಹನು ತನ್ನ ಹೆಸರೆತ್ತಿ ಹೇಳಿದನೇ? ಪ್ರವಾದಿ [ಸ] ಹೌದೆಂದಾಗ ಆವೃತ್ ಅತ್ತು ಬಿಟ್ಟರು. 
[ಸಹೀಹ್ ಬುಖಾರಿ, ಅಧ್ಯಾಯ ಪ್ರವಾದಿ ಸಂಗಾತಿ [ಸಹಾಬಿ]ಗಳ ಶ್ರೇಷ್ಠತೆ]                              

ಪ್ರಾಣೆ ಮತ್ತು ಪಕ್ಷಿಗಳ ಕುರಿತು ಕುರಾನ್ ಏನು ಹೇಳುತ್ತದೆ?

ಇಸ್ಲಾಮೀ ದೃಷ್ಟಿಕೋನದ ಪ್ರಕಾರ ಈ ಜಗತ್ತಿನಲ್ಲಿರುವ ಪ್ರಾಣಿ, ಪಕ್ಷಿ, ಕೀಟ ಮುಂತಾದ ಜೀವಜಾಲಗಳನ್ನೊಳಗೊಂಡಂತೆ ಸಕಲ ಚರಾಚರಗಳೂ ಏಕೈಕನೂ ಅದ್ವಿತೀಯನೂ ಆದ ಅಲ್ಲಾಹುವಿನ ಸೃಷ್ಟಿಗಳಾಗಿವೆ. ಅವುಗಳ ಪೈಕಿ ಮನುಷ್ಯ ಸೃಷ್ಟಿಯು ಉತ್ಕೃಷ್ಟವೂ ಗೌರವಾನ್ವಿತವೂ ಆಗಿದೆ.

ಇನ್ನು, ಜಾನುವಾರುಗಳನ್ನು ಅವನು ಸೃಷ್ಟಿಸಿದನು. ಅವುಗಳಲ್ಲಿ ನಿಮಗಾಗಿ ಬೆಚ್ಚನೆಯ ಉಡುಗೆ ಇದೆ, ಇತರ ಲಾಭಗಳೂ ಇವೆ ಮತ್ತು ಅವುಗಳಲ್ಲಿ ಕೆಲವನ್ನು ನೀವು ತಿನ್ನುತ್ತೀರಿ. 
[ಕುರಾನ್, 16: 5]

ನೀವು ಅವುಗಳ ಮೇಲೆ ಸವಾರಿ ನಡೆಸಬೇಕೆಂದು ಹಾಗೂ (ನಿಮಗೆ) ಭೂಷಣವಾಗಿರಲೆಂದು ಕುದುರೆಗಳನ್ನೂ, ಹೇಸರಗತ್ತೆಗಳನ್ನೂ, ಕತ್ತೆಗಳನ್ನೂ (ಅವನು ಸೃಷ್ಟಿಸಿದನು). ಮತ್ತು ನಿಮಗೆ ತಿಳಿದೇ ಇಲ್ಲದ ಇತರ ಹಲವನ್ನೂ ಅವನು ಸೃಷ್ಟಿಸಿರುತ್ತಾನೆ. 
[ಕುರಾನ್, 16: 8]

ಅವರು ಕಾಣುವುದಿಲ್ಲವೇ, ಆಕಾಶ ಮಧ್ಯದಲ್ಲಿ ವಿಧೇಯ ಸ್ಥಿತಿಯಲ್ಲಿ ಹಾರಾಡುವ ಪಕ್ಷಿಗಳನ್ನು? ಅವುಗಳನ್ನು ಆಧರಿಸುವವನು ಅಲ್ಲಾಹನಲ್ಲದೆ ಬೇರಾರೂ ಅಲ್ಲ. ಖಂಡಿತವಾಗಿಯೂ ಇದರಲ್ಲಿ ಸೂಚನೆಗಳಿವೆ, ನಂಬುವ ಜನರಿಗೆ. 
[ಕುರಾನ್, 16: 79]

ಅಲ್ಲಾಹನು ಎಲ್ಲ ಜೀವಿಗಳನ್ನು ನೀರಿನಿಂದ ಸೃಷ್ಟಿಸಿರುವನು. ಅವುಗಳಲ್ಲಿ ಕೆಲವು ತಮ್ಮ ಹೊಟ್ಟೆಗೆ ಒರಗಿಕೊಂಡು ಚಲಿಸುತ್ತವೆ, ಕೆಲವು ಎರಡು ಕಾಲುಗಳಲ್ಲಿ ನಡೆಯುತ್ತವೆ ಮತ್ತು ಕೆಲವು ನಾಲ್ಕು ಕಾಲುಗಳಲ್ಲಿ ನಡೆಯುತ್ತವೆ. ಅಲ್ಲಾಹನು ತಾನಿಚ್ಛಿಸಿದ್ದನ್ನು ಸೃಷ್ಟಿಸುತ್ತಾನೆ. ಖಂಡಿತವಾಗಿಯೂ ಅಲ್ಲಾಹನು ಎಲ್ಲವನ್ನೂ ಮಾಡಬಲ್ಲವನಾಗಿದ್ದಾನೆ. 
[ಕುರಾನ್, 24: 45]

ಭೂಮಿಯಲ್ಲಿ ಚಲಿಸುವ ಪ್ರತಿಯೊಂದು ಜೀವಿ ಹಾಗೂ ತನ್ನ ಎರಡು ರೆಕ್ಕೆಗಳ ಮೂಲಕ ಹಾರುವ ಪ್ರತಿಯೊಂದು ಪಕ್ಷಿ ಅವೆಲ್ಲಾ ನಿಮ್ಮಂತಹದೇ ಸಮುದಾಯಗಳು. ನಾವು ಗ್ರಂಥದಲ್ಲಿ ಏನನ್ನೂ ದಾಖಲಿಸದೆ ಬಿಟ್ಟಿಲ್ಲ. ಕೊನೆಗೆ ಎಲ್ಲರನ್ನೂ ಅವರ ಒಡೆಯನ ಬಳಿ ಒಟ್ಟು ಸೇರಿಸಲಾಗುವುದು. 
[ಕುರಾನ್, 6: 38]

ಇಸ್ಲಾಮಿನಲ್ಲಿ ಹಂದಿಮಾಂಸ ನಿಷಿದ್ಧವೇಕೆ?

ಇಸ್ಲಾಮ್ ಹಂದಿ ಮಾಂಸ (Pork) ಸೇವನೆಯನ್ನು ನಿಷಿದ್ಧಗೊಳಿಸಿದೆ ಎಂಬುದು ಎಲ್ಲರೂ ತಿಳಿದಿರುವ ವಿಚಾರವಾಗಿದೆ. ಹಂದಿ ಮಾಂಸವು ತ್ಯಾಜ್ಯ ಯೋಗ್ಯವೇ ಸರಿ ಎಂಬುದನ್ನು ಈ ಕೆಳಗಿನ ಅಂಶಗಳು ಸ್ಪಷ್ಟಪಡಿಸುತ್ತವೆ.

ಕುರ್‌ಆನ್‌ನಲ್ಲಿ ಹಂದಿ ಮಾಂಸ ನಿಷೇಧ:

ಶವವನ್ನು, ರಕ್ತವನ್ನು, ಹಂದಿಯ ಮಾಂಸವನ್ನು, ಅಲ್ಲಾಹನ ಹೊರತು ಇತರರ ಹೆಸರಲ್ಲಿ ಬಲಿ ನೀಡಲಾಗಿರುವ ಪ್ರಾಣಿಯನ್ನು, ಕೊರಳು ಹಿಸುಕಿ ಕೊಂದಿರುವುದನ್ನು, ಪೆಟ್ಟು ತಿಂದು ಸತ್ತಿರುವುದನ್ನು, ಎತ್ತರದಿಂದ ಬಿದ್ದು ಸತ್ತಿರುವುದನ್ನು, (ಕ್ರೂರ ಪ್ರಾಣಿಯು) ಕೊಂಬಿನಿಂದ ಸೀಳಿ ಕೊಂದಿರುವುದನ್ನು ನಿಮ್ಮ ಪಾಲಿಗೆ ನಿಷಿದ್ಧ ಗೊಳಿಸಲಾಗಿದೆ. ಹಾಗೆಯೇ, ಕ್ರೂರ ಪ್ರಾಣಿಯು ತಿಂದು ಬಿಟ್ಟಿರುವುದು (ನಿಮಗೆ ನಿಷಿದ್ಧವಾಗಿದೆ) ನೀವು ಜೀವಂತ ಪಡೆದು ದಿಬ್ಹ್ ಮಾಡಿದ್ದರ ಹೊರತು. (ಮಿಥ್ಯ ದೇವರ) ಗುಡಿಗಳಲ್ಲಿ ಬಲಿ ನೀಡಲಾದ ಪ್ರಾಣಿಗಳನ್ನು ಮತ್ತು ಬಾಣಗಳ ಮೂಲಕ ಅದೃಷ್ಟ ನಿರ್ಧರಿಸುವುದನ್ನು ನಿಮ್ಮ ಪಾಲಿಗೆ ನಿಷಿದ್ಧಗೊಳಿಸಲಾಗಿದೆ. ಇವೆಲ್ಲಾ ಪಾಪ ಕೃತ್ಯಗಳಾಗಿವೆ… 
[ಕುರಾನ್, 5: 3]

ಶವ, ರಕ್ತ ಹಾಗೂ ಹಂದಿಯ ಮಾಂಸವನ್ನು ಮತ್ತು ಅಲ್ಲಾಹನ ಹೊರತು ಅನ್ಯರ ಹೆಸರಲ್ಲಿ ಕಡಿಯಲಾದವುಗಳನ್ನು (ಅಂತಹ ಪ್ರಾಣಿಗಳನ್ನು) ನಿಮ್ಮ ಪಾಲಿಗೆ ನಿಷೇಧಿಸಲಾಗಿದೆ. ಇನ್ನು ಒಬ್ಬ ವ್ಯಕ್ತಿ ತೀರಾ ಅಸಹಾಯಕ ಸ್ಥಿತಿಯಲ್ಲಿ, ವಿದ್ರೋಹದ ಇರಾದೆಯಿಲ್ಲದೆ, ಹಾಗೂ ಮಿತಿಮೀರದೆ (ಅದರಿಂದೇನಾದರೂ ತಿಂದು ಬಿಟ್ಟರೆ) ಅವನ ಮೇಲೆ ಪಾಪವೇನಿಲ್ಲ… 
[ಕುರಾನ್, 2: 173]

(ದೂತರೇ) ಹೇಳಿರಿ; ನನ್ನೆಡೆಗೆ ಇಳಿಸಿಕೊಡಲಾಗಿರುವ ದಿವ್ಯ ಸಂದೇಶದಲ್ಲಂತು ತಿನ್ನುವವನ ಪಾಲಿಗೆ ಶವ, ಹರಿಯುತ್ತಿರುವ ರಕ್ತ ಅಥವಾ ಹಂದಿಯ ಮಾಂಸದ ಹೊರತು ಬೇರೇನನ್ನಾದರೂ ತಿನ್ನುವುದಕ್ಕೆ ನಿಷೇಧ ಹೇರಿರುವುದನ್ನು ನಾನು ಕಾಣುವುದಿಲ್ಲ. ಏಕೆಂದರೆ ಅವು ಮಲಿನ ವಸ್ತುಗಳಾಗಿವೆ. ಹಾಗೆಯೇ ಅಲ್ಲಾಹನ ಹೊರತು ಬೇರೆ ಯಾರದಾದರೂ ಹೆಸರಲ್ಲಿ ವಧಿಸಲಾದ (ಅಥವಾ ಬಲಿ ನೀಡಲಾದ) ಪ್ರಾಣಿಯೂ ನಿಷಿದ್ಧವಾಗಿದೆ. ಏಕೆಂದರೆ ಅದು ಪಾಪಕೃತ್ಯವಾಗಿದೆ. 
[ಕುರಾನ್, 6: 145]

ಶವ, ರಕ್ತ, ಹಂದಿಯ ಮಾಂಸ ಮತ್ತು ಅಲ್ಲಾಹನ ಹೊರತು ಅನ್ಯರ ಹೆಸರನ್ನು ಉಚ್ಚರಿಸಲಾದವುಗಳು ನಿಮ್ಮ ಪಾಲಿಗೆ ನಿಷಿದ್ಧವಾಗಿವೆ. ಇನ್ನು, ತೀರಾ ಅಸಹಾಯಕನಾಗಿ ಬಿಟ್ಟವನು ಅವಿಧೇಯತೆಯ ಅಥವಾ ವಿದ್ರೋಹದ ಇರಾದೆ ಇಲ್ಲದೆ (ತಪ್ಪು ಮಾಡಿದರೂ) ಅಲ್ಲಾಹನು ಖಂಡಿತ ಕ್ಷಮಿಸುವವನು ಮತ್ತು ಕರುಣಾಳುವಾಗಿದ್ದಾನೆ. 
[ಕುರಾನ್, 16: 115]

ಕುರಾನಿನ ಅತೀ ದೊಡ್ಡ ಆಯತ್?

ವಿಶ್ವಾಸಿಗಳೇ, ನೀವು ಒಂದು ನಿಶ್ಚಿತ ಅವಧಿಗಾಗಿ ಸಾಲದ ವ್ಯವಹಾರ ಮಾಡುವಾಗ ಅದನ್ನು ಬರೆದಿಡಿರಿ. ನಿಮ್ಮ ನಡುವೆ (ವ್ಯವಹಾರವನ್ನು) ಬರೆಯುವವನು ನ್ಯಾಯವಾಗಿ ಬರೆಯಲಿ. ಬರೆಯುವವನು ಅಲ್ಲಾಹನು ತನಗೆ ಕಲಿಸಿರುವ ಪ್ರಕಾರ ಬರೆಯುವುದಕ್ಕೆ ನಿರಾಕರಿಸಬಾರದು. ಅವನು ಬರೆಯಬೇಕು ಮತ್ತು ಹಕ್ಕುದಾರನು ಬರೆಸಬೇಕು. ಅವನು ತನ್ನ ಒಡೆಯನಾದ ಅಲ್ಲಾಹನಿಗೆ ಅಂಜುತ್ತಿರಬೇಕು ಮತ್ತು ಅವನು ಅದರಲ್ಲಿ ಏನನ್ನೂ ಕಡಿತಗೊಳಿಸಬಾರದು. ಒಂದು ವೇಳೆ ಹಕ್ಕುದಾರನು ಮಂದ ಬುದ್ಧಿಯವನಾಗಿದ್ದರೆ ಅಥವಾ ದುರ್ಬಲನಾಗಿದ್ದರೆ ಅಥವಾ ಸ್ವತಃ ಬರೆಸಲು ಅಸಮರ್ಥನಾಗಿದ್ದರೆ, ಅವನ ಪೋಷಕನು ನ್ಯಾಯೋಚಿತವಾಗಿ ಬರೆಸಲಿ ಮತ್ತು ನೀವು (ಇಂತಹ ಒಪ್ಪಂದಗಳಿಗೆ) ನಿಮ್ಮ ಪುರುಷರ ಪೈಕಿ ಇಬ್ಬರನ್ನು ಸಾಕ್ಷಿಗಳಾಗಿಸಿರಿ. ಇನ್ನು, ಇಬ್ಬರು ಪುರುಷರು ಲಭ್ಯರಾಗದಿದ್ದರೆ, ನೀವು ಒಪ್ಪುವ ಒಬ್ಬ ಪುರುಷ ಹಾಗೂ ಇಬ್ಬರು ಸ್ತ್ರೀಯರನ್ನು ಸಾಕ್ಷಿಗಳಾಗಿಸಿರಿ ಅವರಲ್ಲಿ ಒಬ್ಬಾಕೆ ಮರೆತರೆ ಇನ್ನೊಬ್ಬಾಕೆಯು ಆಕೆಗೆ ನೆನಪಿಸಲಿಕ್ಕಾಗಿ. ಮತ್ತು ಸಾಕ್ಷಿಗಳು ತಮ್ಮನ್ನು ಕರೆಯಲಾದಾಗ ನಿರಾಕರಿಸಬಾರದು. (ವ್ಯವಹಾರವು) ಒಂದು ನಿಶ್ಚಿತ ಅವಧಿಗಾಗಿರುವಾಗ, ಅದು ಸಣ್ಣದಿರಲಿ, ದೊಡ್ಡದಿರಲಿ, ಅದನ್ನು ಬರೆಯುವ ವಿಷಯದಲ್ಲಿ ಆಲಸ್ಯ ತೋರಬೇಡಿ. ಇದು ಅಲ್ಲಾಹನ ದೃಷ್ಟಿಯಲ್ಲಿ ಹೆಚ್ಚು ನ್ಯಾಯೋಚಿತವಾದ ಹಾಗೂ ಸಾಕ್ಷಕ್ಕೆ ಹೆಚ್ಚು ಪೂರಕವಾದ ಮತ್ತು ನೀವು ಗೊಂದಲಕ್ಕೆ ಸಿಲುಕದಂತಾಗಲು ಹೆಚ್ಚು ಸಮರ್ಪಕವಾದ ವಿಧಾನವಾಗಿದೆ. ಸಾಮಾನ್ಯವಾಗಿ ನೀವು ಪರಸ್ಪರ ನಡೆಸುವ (ಪ್ರತ್ಯಕ್ಷ ವ್ಯವಹಾರವು) ಇದಕ್ಕೆ ಹೊರತಾಗಿದೆ ಅದನ್ನು ನೀವು ಬರೆಯದಿದ್ದರೂ ನಿಮ್ಮ ಮೇಲೆ ಪಾಪವೇನಿಲ್ಲ. ನೀವು ವ್ಯವಹಾರ ಮಾಡುವಾಗ ಸಾಕ್ಷಿಗಳನ್ನು ನೇಮಿಸಿರಿ ಮತ್ತು ಬರೆಯುವವನನ್ನಾಗಲಿ, ಸಾಕ್ಷಿಯನ್ನಾಗಲಿ ಯಾರೂ ಪೀಡಿಸಬಾರದು. ನೀವು ಹಾಗೆ ಮಾಡಿದರೆ, ಖಂಡಿತವಾಗಿಯೂ ಅದು ನಿಮ್ಮ ಪಾಲಿಗೆ ಪಾಪಕೃತ್ಯವೆನಿಸಿಕೊಳ್ಳುವುದು. ನೀವು ಅಲ್ಲಾಹನಿಗೆ ಅಂಜಿರಿ. ಅಲ್ಲಾಹನೇ (ಇದನ್ನೆಲ್ಲಾ) ನಿಮಗೆ ಕಲಿಸುತ್ತಿದ್ದಾನೆ ಮತ್ತು ಅಲ್ಲಾಹನು ಎಲ್ಲವನ್ನೂ ಬಲ್ಲವನಾಗಿದ್ದಾನೆ. 
[ಕುರಾನ್, 2: 282]

ಕುರಾನಿನ ಅತ್ಯುತ್ತಮ ಆಯತ್?

ಅಲ್ಲಾಹ್ ಚಿರಂತನು, ಸ್ವಯಂಜೀವಂತನು,ಅಖಿಲ ಪ್ರಪಂಚದ ನಿಯಂತ್ರಕನಾದ ಆತನ ಹೊರತು ಆರಾಧ್ಯನಾರೂ ಇಲ್ಲ. ಅವನಿಗೆ ತೂಕಡಿಕೆಯಾಗಲೀ ನಿದ್ರೆಯಾಗಲೀ ಬಾಧಿಸುವುದಿಲ್ಲ. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಆತನದೇ. ಆತನ ಸನ್ನಿಧಿಯಲ್ಲಿ ಆತನ ಅಪ್ಪಣೆಯಿಲ್ಲದೆ ಶಿಫಾರಸು ಮಾಡತಕ್ಕವನಾರಿದ್ದಾನೆ?ದಾಸರ ಮುಂದಿರುವುದನ್ನೂ ಆತನು ಬಲ್ಲನು. ಅವರಿಂದ ಮರೆಯಾಗಿರುವುದನ್ನೂ ಆತನು ಬಲ್ಲನು.ಆತನು ಸ್ವತಃ ತಿಳಿಯಗೊಡಿಸುವ ಹೊರತು ಆತನ ಜ್ಞಾನ ಭಂಡಾರದಿಂದ ಯಾವ ವಿಷಯವನ್ನೂ ಅವರು ತಿಳಿಯಲಾರರು. ಅವನ ಅಧಿಕಾರವು ಆಕಾಶಗಳನ್ನೂ ಭೂಮಿಯನ್ನೂ ವ್ಯಾಪಿಸಿದೆ. ಅವುಗಳ ಸಂರಕ್ಷಣೆಯು ಆತನಿಗೆ ದಣಿಸುವಂತ ಕಾರ್ಯವಲ್ಲ. ಅವನು ಏಕೈಕ ಮಹೋನ್ನತನೂ ಸರ್ವ ಶ್ರೇಷ್ಠನೂ ಆಗಿರುತ್ತಾನೆ. 
[ಕುರಾನ್: 2: 255]  

ಅಲ್ಲಾಹು ಯಾರು?

1.            [ಓ ಪ್ರವಾದಿಯವರೇ!] ಹೇಳಿರಿ: 'ಅವನು ಅಲ್ಲಾಹು! ಏಕಮೇವನಾಗಿರುವನು.
2.           ಅಲ್ಲಾಹು ಸರ್ವರಿಗೂ ಆಶ್ರಯದಾತನಾಗಿರುವನು.
3.           ಅವನು (ಯಾರಿಗೂ) ಜನ್ಮವನ್ನು ನೀಡಿಲ್ಲ. ಅವನು (ಯಾರದೇ ಸಂತತಿಯಾಗಿ) ಜನಿಸಿದವನೂ ಅಲ್ಲ.
4.          ಅವನಿಗೆ ಸರಿಸಾಟಿಯಾಗಿ ಯಾರೂ ಇಲ್ಲ. 
[ಕುರ್ ಆನ್: 112: 1-4]

ನಿಮ್ಮನ್ನೂ ನಿಮ್ಮ ಕುಟುಂಬದವರನ್ನೂ ನರಕಾಗ್ನಿಯಿಂದ ರಕ್ಷಿಸಿರಿ

ವಿಶ್ವಾಸಿಗಳೇ, ನೀವು ಸ್ವತಃ ನಿಮ್ಮನ್ನೂ ನಿಮ್ಮ ಕುಟುಂಬದವರನ್ನೂ ನರಕಾಗ್ನಿಯಿಂದ ರಕ್ಷಿಸಿರಿ. ಮಾನವರು ಮತ್ತು ಕಲ್ಲುಗಳು ಅದರ ಇಂಧನಗಳಾಗಿರುವವು. ಕಠೋರರೂ ಬಲಿಷ್ಠರೂ ಆಗಿರುವ ಮಲಕ್‌ಗಳು ಅದರ ಮೇಲ್ವಿಚಾರಕರಾಗಿರುವರು. ಅವರು ಅಲ್ಲಾಹನು ತಮಗೆ ನೀಡುವ ಯಾವ ಆದೇಶವನ್ನೂ ಮೀರಲಾರರು ಮತ್ತು ಅವರು ತಮಗೆ ಆದೇಶಿಸಿಲಾದುದನ್ನೇ ಮಾಡುವರು. 
[ಕುರಾನ್, 66: 6]

ವಿಶ್ವಾಸಿಗಳಿಗೆ ಯಾವ ಭಯವೂ ಇಲ್ಲ

(ಅವರೊಡನೆ ಹೇಳಲಾಗುವುದು;) ನನ್ನ ದಾಸರೇ, ಇಂದು ನಿಮಗೆ ಯಾವ ಭಯವೂ ಇಲ್ಲ ಮತ್ತು ನೀವು ದುಃಖಿಸಲಾರಿರಿ. 
[ಕುರಾನ್,  43: 68]

ಜನರು ಅಮಲಿನಲ್ಲಿರುವಂತೆ ಕಾಣುವರು!

ಅಂದು ನೀವು ಕಾಣುವಿರಿ; ಹಾಲುಣಿಸುವ ಪ್ರತಿಯೊಬ್ಬಳು (ತಾಯಿ) ತಾನು ಹಾಳುಣಿಸುತ್ತಿದ್ದುದನ್ನು (ತನ್ನ ಮಗುವನ್ನು) ಮರೆತು ಬಿಡುವಳು ಮತ್ತು ಪ್ರತಿಯೊಬ್ಬ ಗರ್ಭಿಣಿಯು ತನ್ನ ಗರ್ಭವನ್ನು ಬೀಳಿಸುವಳು ಮತ್ತು ನಿಮಗೆ, ಜನರು ಅಮಲಿನಲ್ಲಿರುವಂತೆ ಕಾಣುವರು. ಆದರೆ ಅವರು ಅಮಲಿನಲ್ಲಿರಲಾರರು. ನಿಜವಾಗಿ ಅಲ್ಲಾಹನ ಶಿಕ್ಷೆಯು ಅಷ್ಟು ಕಠೋರವಾಗಿರುವುದು. 
[ಕುರಾನ್,  22: 2]

ಆ ಹತಾಶೆಯ ದಿನದ ಕುರಿತು ಅವರನ್ನು ಎಚ್ಚರಿಸಿರಿ!

(ದೂತರೇ,) ಅಂತಿಮ ತೀರ್ಪು ನೀಡಿ ಬಿಡಲಾಗುವ, ಆ ಹತಾಶೆಯ ದಿನದ ಕುರಿತು ಅವರನ್ನು ಎಚ್ಚರಿಸಿರಿ ಸದ್ಯ ಅವರು ನಿರ್ಲಕ್ಷ ತೋರುತ್ತಿದ್ದಾರೆ ಮತ್ತು ಅವರು ನಂಬುತ್ತಿಲ್ಲ. 
[ಕುರಾನ್,  19: 39]

ಅಂತಿಮ ತೀರ್ಪಿನ ದಿನ

ಇದು ಅಂತಿಮ ತೀರ್ಪಿನ ದಿನ. (ಇಂದು) ನಾವು ನಿಮ್ಮನ್ನೂ ನಿಮ್ಮ ಹಿಂದಿನವರನ್ನೂ ಒಟ್ಟು ಸೇರಿಸಿರುವೆವು.
[ಕುರಾನ್,  77: 38]

ತೀರ್ಪಿನ ದಿನವು ಈಗಾಗಲೇ ನಿಶ್ಚಿತವಾಗಿದೆ. 
[ಕುರಾನ್,  78: 17]

ಒಟ್ಟು ಸೇರಿಸುವ ದಿನ

ಅವನು ನಿಮ್ಮನ್ನು ಒಟ್ಟು ಸೇರಿಸುವ ದಿನ, ಅಂತಿಮ ಸಮಾವೇಶದ ಆ ದಿನವು, ಭಾರೀ ನಷ್ಟದ ದಿನವಾಗಿರುವುದು. ಅಲ್ಲಾಹನು, ತನ್ನಲ್ಲಿ ವಿಶ್ವಾಸವಿಟ್ಟು ಸತ್ಕರ್ಮ ಮಾಡಿದವನ ಎಲ್ಲ ಪಾಪಗಳನ್ನು ನಿವಾರಿಸುವನು ಮತ್ತು ಅವನನ್ನು, ತಳ ಭಾಗದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗದೊಳಗೆ ಸೇರಿಸುವನು. ಅವರು ಅಲ್ಲಿ ಸದಾಕಾಲ ಇರುವರು. ಇದು ನಿಜಕ್ಕೂ ಮಹಾ ಸೌಭಾಗ್ಯವಾಗಿದೆ. 
[ಕುರಾನ್,  64: 9]

ರಬ್ಬೈಸ್ ಮತ್ತು ಮೊಂಕ್'ಗಳು

31. ಅವರು ಅಲ್ಲಾಹನ ಹೊರತಾಗಿ, ತಮ್ಮ ವಿದ್ವಾಂಸರನ್ನು, ಸನ್ಯಾಸಿಗಳನ್ನು ಮತ್ತು ಮರ್ಯಮರ ಪುತ್ರ ಮಸೀಹರನ್ನು ದೇವರಾಗಿಸಿಕೊಂಡಿದ್ದಾರೆ. ನಿಜವಾಗಿ ಅವರಿಗೆ, ಒಬ್ಬ ದೇವರ ಹೊರತು ಬೇರೆ ಯಾರನ್ನೂ ಪೂಜಿಸಬಾರದೆಂದು ಆದೇಶಿಸಲಾಗಿದೆ. ಅವನ ಹೊರತು ಬೇರೆ ಯಾರೂ ಪೂಜಾರ್ಹರಲ್ಲ. ಅವರು ಪಾಲುಗೊಳಿಸುವ ಎಲ್ಲದರಿಂದ ಅವನು ಸಂಪೂರ್ಣ ಮುಕ್ತನು.
34. ವಿಶ್ವಾಸಿಗಳೇ, ಖಂಡಿತವಾಗಿಯೂ ಧರ್ಮಗುರುಗಳು ಮತ್ತು ಸನ್ಯಾಸಿಗಳಲ್ಲಿ ಹೆಚ್ಚಿನವರು ಜನರ ಸಂಪತ್ತನ್ನು ಅಕ್ರಮ ವಿಧಾನಗಳಿಂದ ಕಬಳಿಸುತ್ತಾರೆ ಮತ್ತು ಅಲ್ಲಾಹನ ಮಾರ್ಗದಿಂದ ತಡೆಯುತ್ತಾರೆ. (ಅವರಿಗೂ) ಚಿನ್ನ ಹಾಗೂ ಬೆಳ್ಳಿಯನ್ನು ಅಲ್ಲಾಹನ ಮಾರ್ಗದಲ್ಲಿ ಖರ್ಚುಮಾಡದೆ ಅವುಗಳನ್ನು ಸಂಗ್ರಹಿಸಿಟ್ಟುಕೊಳ್ಳುವವರಿಗೂ ಕಠಿಣ ಶಿಕ್ಷೆಯ ಶುಭವಾರ್ತೆ ನೀಡಿರಿ. 
[ಕುರಾನ್,  9: 31, 34]

ಮಳೆಯು ಅಲ್ಲಾಹನ ಕೊಡುಗೆ

68. ನೀವು ಕುಡಿಯುವ ನೀರನ್ನು ನೀವು ನೋಡಿದಿರಾ?
69. ಅದನ್ನು ಮೋಡಗಳ ಮೂಲಕ ಸುರಿಸುವವರು ನೀವೋ ಅಥವಾ ಸುರಿಸುವವರು ನಾವೋ?
70. ನಾವು ಬಯಸಿದರೆ ಅದನ್ನು ಉಪ್ಪು ನೀರಾಗಿಸ ಬಲ್ಲೆವು. ಇಷ್ಟಾಗಿಯೂ ನೀವೇಕೆ ಕೃತಜ್ಞರಾಗುವುದಿಲ್ಲ
[ಕುರಾನ್,  56: 68-70]

ಅಕ್ರಮಿಯು ತನ್ನ ಕೈಗಳನ್ನು ಕಚ್ಚಿಕೊಳ್ಳುತ್ತಾ!

ಅಂದು ಅಕ್ರಮಿಯು ತನ್ನ ಕೈಗಳನ್ನು ಕಚ್ಚಿಕೊಳ್ಳುತ್ತಾ ಹೇಳುವನು; ಅಯ್ಯೋ ನಾನು ದೇವದೂತರ ಜೊತೆ ಅವರ ಮಾರ್ಗದಲ್ಲಿ ನಡೆದಿದ್ದರೆ ಎಷ್ಟು ಚೆನ್ನಾಗಿತ್ತು! 
[ಕುರಾನ್25: 27]

ಇಬ್ರಾಹೀಮರು ತುಂಬಾ ಮೃದು ಸ್ವಭಾವದವರು

ಇಬ್ರಾಹೀಮರು ತಮ್ಮ ತಂದೆಯ ಪರವಾಗಿ ನಡೆಸಿದ ಕ್ಷಮಾಯಾಚನೆಯು, ಅವರು ಆತನಿಗೆ ನೀಡಿದ್ದ ಒಂದು ವಾಗ್ದಾನದ ಪಾಲನೆ ಮಾತ್ರವಾಗಿತ್ತು. ಕೊನೆಗೆ, ಆತನು ಅಲ್ಲಾಹನ ಶತ್ರುವೆಂಬುದು ಅವರಿಗೆ ಸ್ಪಷ್ಟವಾದಾಗ ಅವರು ಆತನಿಂದ ದೂರ ಉಳಿದರು. ಖಂಡಿತವಾಗಿಯೂ ಇಬ್ರಾಹೀಮರು ತುಂಬಾ ಮೃದು ಸ್ವಭಾವದವರು ಹಾಗೂ ಸಂಯಮಿಯಾಗಿದ್ದರು. 
[ಕುರಾನ್9: 114]