Thursday, March 27, 2014

ಉಹುದು ಯುದ್ದದಲ್ಲಿ ಪಾಲ್ಗೊಂಡ ಸಹಾಬಿಗಳ ಶ್ರೇಷ್ಠತೆಗಳು

ಇಬ್ನು ಅಬ್ಬಾಸ್ ವರದಿ ಮಾಡುತ್ತಾರೆ, ಪ್ರವಾದಿ [ಸ]ರವರು ಹೇಳಿರುವರು, ನಿಮ್ಮ ಸಹೋದರರು ಉಹುದು ಯುದ್ದದಲ್ಲಿ ಹುತಾತ್ಮರಾದಾಗ ಅಲ್ಲಾಹನು ಅವರ ಆತ್ಮಗಳನ್ನು ಹಸಿರು ಪಕ್ಷಿಗಳ ಉದರದಲ್ಲಿ ಕಳುಹಿಸಿದನು. ಅವುಗಳು ಸ್ವರ್ಗೋಧ್ಯಾನದ ನದಿಗಳ ದಡದಲ್ಲಿದ್ದು ಅಲ್ಲಿಯ ಫಲಗಳನ್ನು ತಿನ್ನುತ್ತದೆ. ಆ ಬಳಿಕ ವಿಶ್ವ ಸಿಂಹಾಸನದ ನೆರಳಿನಲ್ಲಿ ತೂಗು ಹಾಕಲ್ಪಟ್ಟ ಸ್ವರ್ಣದ ಪಂಜರದೆಡೆಗೆ ಮರಳುತ್ತಿವೆ. ನಂತರ ಅವುಗಳಿಗೆ ತಮ್ಮ ತಿನ್ನುವ, ಕುಡಿಯುವ ಹಾಗೂ ನಿದ್ದೆಯ ಸುಖವು ಅನುಭವಕ್ಕೆ ಬಂದಾಗ ಅವುಗಳು ಹೇಳತೊಡಗಿದವು. ನಾವು ವಾಸಿಸುತ್ತಿರುವೆವೆಂದು, ನಮಗೆ ಇಲ್ಲಿ ಆಹಾರಗಳನ್ನು ನೀಡಲಾಗುತ್ತಿದೆಯೆಂದು, ನಮ್ಮ ಕಡೆಯಿಂದ ಈ ಸಂದೇಶವನ್ನು ಸಹೋದರರು ಜಿಹಾದಿನಿಂದ ಹಿಂದೇಟು ಹಾಕದಿರಲೆಂದು ಹಾಗೂ ಯುದ್ದದ ಸಂದರ್ಭದಲ್ಲಿ ಹಿಂದಿರುಗಿ ಓಡದೆರಲೆಂದು ನಾವು ಬಯಸುತ್ತೇವೆ. ಆಗ ಅಲ್ಲಾಹನು ನಿಮ್ಮ ಕಡೆಯಿಂದ ಈ ಸಂದೇಶವನ್ನು ನಾವು ನಿಮ್ಮ ಸಹೋದರರಿಗೆ ತಲುಪಿಸುವೆನೆಂದನು. ನಂತರ ಅಲ್ಲಾಹನು ಈ ಸೂಕ್ತವನ್ನು ಅವತೀರ್ಣಗೊಳಿಸಿದನು. 

(ಅಲ್ಲಾಹನು ಮಾರ್ಗದಲ್ಲಿ ವಧಿಸಲ್ಪಟ್ಟವರನ್ನು ಮೃತರೆನ್ನಬೇಡಿರಿ. ಅವರು ಯಥಾರ್ಥವಾಗಿ ಜೀವಂತವಿದ್ದಾರೆ ತಮ್ಮ ಪ್ರಭುವಿನ ಬಳಿ ... ಪಡೆಯುತ್ತಿದ್ದಾರೆ.)

No comments:

Post a Comment