ಇಬ್ನು
ಅಬ್ಬಾಸ್ ವರದಿ ಮಾಡುತ್ತಾರೆ,
ಪ್ರವಾದಿ [ಸ]ರವರು ಹೇಳಿರುವರು, ನಿಮ್ಮ ಸಹೋದರರು ಉಹುದು ಯುದ್ದದಲ್ಲಿ
ಹುತಾತ್ಮರಾದಾಗ ಅಲ್ಲಾಹನು ಅವರ ಆತ್ಮಗಳನ್ನು ಹಸಿರು ಪಕ್ಷಿಗಳ ಉದರದಲ್ಲಿ ಕಳುಹಿಸಿದನು. ಅವುಗಳು
ಸ್ವರ್ಗೋಧ್ಯಾನದ ನದಿಗಳ ದಡದಲ್ಲಿದ್ದು ಅಲ್ಲಿಯ ಫಲಗಳನ್ನು ತಿನ್ನುತ್ತದೆ. ಆ ಬಳಿಕ ವಿಶ್ವ
ಸಿಂಹಾಸನದ ನೆರಳಿನಲ್ಲಿ ತೂಗು ಹಾಕಲ್ಪಟ್ಟ ಸ್ವರ್ಣದ ಪಂಜರದೆಡೆಗೆ ಮರಳುತ್ತಿವೆ. ನಂತರ ಅವುಗಳಿಗೆ
ತಮ್ಮ ತಿನ್ನುವ, ಕುಡಿಯುವ ಹಾಗೂ ನಿದ್ದೆಯ ಸುಖವು ಅನುಭವಕ್ಕೆ
ಬಂದಾಗ ಅವುಗಳು ಹೇಳತೊಡಗಿದವು. ನಾವು ವಾಸಿಸುತ್ತಿರುವೆವೆಂದು, ನಮಗೆ ಇಲ್ಲಿ ಆಹಾರಗಳನ್ನು
ನೀಡಲಾಗುತ್ತಿದೆಯೆಂದು, ನಮ್ಮ ಕಡೆಯಿಂದ ಈ ಸಂದೇಶವನ್ನು ಸಹೋದರರು
ಜಿಹಾದಿನಿಂದ ಹಿಂದೇಟು ಹಾಕದಿರಲೆಂದು ಹಾಗೂ ಯುದ್ದದ ಸಂದರ್ಭದಲ್ಲಿ ಹಿಂದಿರುಗಿ ಓಡದೆರಲೆಂದು
ನಾವು ಬಯಸುತ್ತೇವೆ. ಆಗ ಅಲ್ಲಾಹನು ನಿಮ್ಮ ಕಡೆಯಿಂದ ಈ ಸಂದೇಶವನ್ನು ನಾವು ನಿಮ್ಮ ಸಹೋದರರಿಗೆ
ತಲುಪಿಸುವೆನೆಂದನು. ನಂತರ ಅಲ್ಲಾಹನು ಈ ಸೂಕ್ತವನ್ನು ಅವತೀರ್ಣಗೊಳಿಸಿದನು.
No comments:
Post a Comment