Thursday, March 27, 2014

ಬದರ್ ಯುದ್ದದಲ್ಲಿ ಪಾಲ್ಗೊಂಡ ಸಹಾಬಿಗಳ ಶ್ರೇಷ್ಠತೆಗಳು

ಹಾತಿಬ್ ಬಿನ್ ಅಬೀಬುಲ್'ತ ಅ[ರ]ರವರ ಚರಿತ್ರೆಯ ಕೊನೆಯಲ್ಲಿ ಉಮರ್ [ರ]ರವರು ಹೇಳಿದರು, ಅವನು {ಹಾತಿಬ್ ಬಿನ್ ಅಬೀಬುಲ್'ತ ಅ[ರ]} ಅಲ್ಲಾಹನಿಗೆ ಮತ್ತು ಅವನ ಸಂದೇಶವಾಹಕರಿಗೆ ಹಾಗೂ ಸತ್ಯವಿಶ್ವಾಸಿಗಳಿಗೆ ದ್ರೋಹವೆಸಗಿದನು. ಆದ್ದರಿಂದ ಅವನ ತಲೆಯನ್ನು ಕತ್ತರಿಸಲು ನನಗೆ ಅಪ್ಪಣೆ ನೀಡಿರಿ. ಆಗ ಪ್ರವಾದಿ [ಸ] ರವರು ಹೇಳಿದರು.

ಪ್ರಾಯಶಃ ಅಲ್ಲಾಹನು ಬದ್ರ್ ಸಹಾಬಿಗಳ ಕಡೆಗೆ ತನ್ನ ಕೃಪೆಯ ದೃಷ್ಟಿಯನ್ನು ಬೀರಿರಬಹುದು. ಆ ಬಳಿಕ ಹೇಳಿದರು. "ನೀವು ನಿಮ್ಮ ಇಷ್ಟದಂತೆ ಕಾರ್ಯನಿರ್ವಹಿಸಿರಿ, ನಾನು ನಿಮಗೆ ಕ್ಷಮಿಸಿರುವೇನು.

ಮತ್ತೊಂದು ವರದಿಯಲ್ಲಿ: ನಿಮ್ಮ ಮೇಲೆ ಸ್ವರ್ಗವು ಕಡ್ಡಾಯಗೊಳಿಸಲಾಗಿದೆ.

ಬದ್ರ್ ಸಹಾಬಿಯಾದ ಫಾಅಬಿನ್ ರಾಫಿಅ ಝರ್ಕೀ ತನ್ನ ತಂದೆಯಿಂದ ವರದಿ ಮಾಡಿರುವಂತೆ ಜಿಬ್ರೀಲ್ [ರ]ರವರು ಪ್ರವಾದಿ [ಸ]ರವರ ಬಳಿ ಬಂದು ಕೇಳಿದರು, "ನಿಮ್ಮ ಬಳಿ ಬದ್ರ್ ಸಹಾಬಿಗಳ ಸ್ಥಾನಮಾನವೇನು?" ಪ್ರವಾದಿ [ಸ]ರವರು ಹೇಳಿದರು, "ಅವರು ಸತ್ಯವಿಶ್ವಾಸಿಗಳಲ್ಲೇ ಅತ್ಯಂತ ಶ್ರೇಷ್ಠರಾಗಿರುವರು." ಆಗ ಜಿಬ್ರೀಲ್ [ರ]ರವರು ಹೇಳಿದರು, "ಇದೇ ರೀತಿ ಬದ್ರ್'ನಲ್ಲಿ ಪಾಲ್ಗೊಂಡ ದೇವಚರರು ಇತರ ಎಲ್ಲಾ ದೇವಚರರಿಗಿಂತಲೂ ಅತ್ಯಂತ ಶ್ರೇಷ್ಠರಾಗಿರುವರು. 
[ಬುಖಾರಿ ಕಿತಾಬುಲ್ ಮಗಾಝೀ, ಬಾಬು ಶಂಕೂರ್ದಲ್ ಮಲಾಇಕತು ಬದ್'ರವ ಹದೀಸ್: 3992]

No comments:

Post a Comment