ಮಾನವರಲ್ಲೇ ಪ್ರವಾದಿ ಮುಹಮ್ಮದ(ಸ) , ತಾಳ್ಮೆಯ ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ಇವರು ತಾಳ್ಮೆಯನ್ನು ಕಾರ್ಯರೂಪದಲ್ಲಿ ತೋರಿಸಿದರು. ಪ್ರವಾದಿ ಮುಹಮ್ಮ(ಸ) ರವರು ಮಕ್ಕಾದಿಂದ ಸಮೀಪದಲ್ಲಿರುವ ‘ತಾಯಿಫ್’ ಎಂಬ ಪ್ರದೇಶಕ್ಕೆ ಭೇಟಿನೀಡಿದರು. ಸ್ಥಳಿಯರಿಗೆ ಇಸ್ಲಾಮಿನ ಬೊಧನೆಗಳನ್ನು ತಿಳಿಸಲು ಮತ್ತು ಅಲ್ಲಿನ ಮುಖಂಡರಿಗೆ ಭೇಟಿಯಾಗಿ ಇಸ್ಲಾಮಿನತ್ತ ಆಹ್ವಾನಿವುದೇ ಅವರ ಉದ್ದೇಶವಾಗಿತ್ತು. ಅಲ್ಲಿನ ಮುಖಂಡರು ಕೇವಲ ಇಸ್ಲಾಮಿನ ಕರೆಯನ್ನು ತಿರಸ್ಕರಿಸಲಿಲ್ಲ ಹೊರತಾಗಿ ಅಲ್ಲಿನ ಯುವಕರನ್ನು ಮತ್ತು ಪುಂಡರನ್ನು ಪ್ರವಾದಿಯರ(ಸ) ನಿಂದನೆ ಮತ್ತು ಕಲ್ಲು ಹೊಡೆಯಲು ಆದೇಶಿಸಿದರು. ಆ ಯುವಕರು ಪ್ರವಾದಿಯರಿಗೆ ಕಲ್ಲುಹೊಡೆಯುತ್ತಾ, ನಿಂದಿಸುತ್ತಾ ‘ತಾಯಿಫ್’ ಪ್ರದೇಶದ ಗಡಿಯವರೆಗೂ ಬೆನ್ನಟ್ಟಿದರು. ಪ್ರವಾದಿಯರ ದೇಹದ ಎಲ್ಲ ಅಂಗಗಳಿಂದಲೂ ರಕ್ತದ ಚಿಲುಮೆಗಳು ಹರಿಯುತ್ತಿದ್ದವು ಮತ್ತು ಅವರ ಪಾದರಕ್ಷೆಗಳು ರಕ್ತದಲ್ಲಿ ಮುಳುಗಿದ್ದವು. ಆಗ ದೇವದೂತರಾದ ಜಿಬ್ರಯೀಲರು ಅವರಲ್ಲಿಗೆ ಬಂದು ‘ಪ್ರವಾದಿಯರೇ ನೀವು ಇಚ್ಛಿಸಿದರೆ, ಪರ್ವತಗಳ ಮಧ್ಯದಲ್ಲಿರು ಈ ತಯಫ್ನ ನಿವಾಸಿಗಳನ್ನು ನುಚ್ಚುನೂರಾಗಿಸಲು ನಾನು ಈ ಎರಡು ದೇವಚರರಿಗೆ ಆದೇಶಿಸುತ್ತೇನೆಂದರು’. ಪ್ರವಾದಿಯರು(ಸ) ನಕಾರಾತ್ಮವಾಗಿ ಉತ್ತರಿಸುತ್ತ “ಅವರ ವಂಶಜರು ಇಸ್ಲಾಮನ್ನು ಸ್ವೀಕರಿಸುತ್ತಾರೆಂದು ನಾನು ಆಶಾಭರಿತನಾಗಿದ್ದೇನೆಂದರು”. ಇದುವೇ ಪ್ರವಾದಿ ಮುಹಮ್ಮದ(ಸ) ರ ತಾಳ್ಮೆಯ ಒಂದು ನಿದರ್ಶನವಾಗಿತ್ತು.
[ಸಹೀಹ್ ಮುಸ್ಲಿಮ್]
No comments:
Post a Comment