ಪ್ರವಾದಿ [ಸ] ಹೇಳಿದರು:
ವಿಶ್ವಾಸಿಯ ಉದಾಹರಣೆಯು ಮೃದುವಾದ ಗದ್ದೆಯಂತಿದೆ. ಜೋರಾಗಿ ಗಾಳಿ ಬೀಸಿದಾಗ ಅದು ಮತ್ತು
ಎಲೆಗಳಿತ್ಯಾದಿ ಆಚೀಚೆ ಬಗ್ಗುತ್ತದೆ. ಗಾಳಿ ಬೀಸುವುದು ನಿಂತಾಗ ಅದೂ ನಿಂತು ಬಿಡುತ್ತದೆ. ಈ ರೀತಿ
ವಿಶ್ವಾಸಿಯು ಆಪತ್ತುಗಳಿಂದ (ನಾಶವಾಗುವುದರಿಂದ) ರಕ್ಷಿಸಲ್ಪಡುತ್ತಾನೆ. ಸತ್ಯನಿಷೇಧಿಯು
ಉದಾಹರಣೆಯು ಸೂಚಿಪರ್ಣೆಯ ನೇರ ಮತ್ತು ಗಟ್ಟಿ ಮರದಂತಿದೆ. ಅಲ್ಲಾಹನು ಬಯಸಿದಾಗ ಅದನ್ನು ಬುಡಸಹಿತ
ಕಿತ್ತು ಹಾಕುತ್ತಾನೆ.
[ಬುಖಾರಿ]
ಪ್ರವಾದಿ [ಸ] ಹೇಳಿದರು: ವಿಶ್ವಾಸಿಗಳನ್ನು ನೀವು ನೋಡುತ್ತೀರಿ. ಅವರು ಪರಸ್ಪರ
ಕರುಣೆ ತೋರುವವರಾಗಿದ್ದಾರೆ. ಪರಸ್ಪರ ಪ್ರೀತಿಸುವವರಾಗಿದ್ದಾರೆ. ಅವರು ಪರಸ್ಪರ ಸಹಾಯ-ಸಹಕಾರ
ಮಾಡುವವರಾಗಿದ್ದಾರೆ. ಅವರು ಒಂದೇ ಶರೀರದಂತಿದ್ದಾರೆ. ದೇಹದ ಯಾವುದಾದರೂ ಅಂಗಕ್ಕೆ ನೋವಾದರೆ
ಶರೀರದ ಎಲ್ಲ ಅಂಗಗಳು ಆ ಒಂದು ಅಂಗದ ಕಾರಣ ಪರಸ್ಪರ ಆಹ್ವಾನಿಸುತ್ತದೆ ಮತ್ತು ಇಡೀ ದೇಹವು ಜಾಗರಣೆ
ಮತ್ತು ಜ್ವರದಲ್ಲಿ ಭಾಗವಹಿಸುತ್ತದೆ.
[ಬುಖಾರಿ, ಮುಸ್ಲಿಮ್]
ಪ್ರವಾದಿ [ಸ] ಹೀಗೆ
ಹೇಳುರುವುದಾಗಿ ನಾನು ಕೇಳಿದ್ದೇನೆ: ಮುಹಮ್ಮದರ [ಸ] ಪ್ರಾಣವು ಯಾರ ಕೈಯಲ್ಲಿದೆಯೋ ಅವನ ಆಣೆ!
ವಿಶ್ವಾಸಿಯ ಉದಾಹರಣೆಯು ಬಂಗಾರದ ತುಂಡಿನಂತಿದೆ. ಅದರ ಒಡೆಯನು ಅದನ್ನು ಕಾಯಿಸಿದನು. ಆದರೆ ಅದರ
ಬಣ್ಣ ಬದಲಾಗಲೂ ಇಲ್ಲ - ಭಾರ ಕಡಿಮೆಯಾಗಲೂ ಇಲ್ಲ. ಮುಹಮ್ಮದರ [ಸ] ಪ್ರಾಣವು ಯಾರ ಕೈಯಲ್ಲಿದೆಯೋ
ಅವನ ಆಣೆ! ವಿಶ್ವಾಸಿಯ ಉದಾಹರಣೆಯು ಉತ್ತಮ ಜೇನ್ನೊಣದಂತಿದೆ. ಅದು ಉತ್ತಮ ಕುಸುಮದ ರಸ ಹೀರಿತು.
ಉತ್ತಮ ಜೇನು ತಯಾರಿಸಿತು. ಯಾವ ಶಾಖೆಯಲ್ಲಿ ಅದು ಕುಳಿತು ಕೊಂಡಿತೋ ಅದನ್ನು ತನ್ನ ಭಾರದಿಂದ
ಮುರಿಯಲೂ ಇಲ್ಲ ಹಾಳು ಮಾಡಲೂ ಇಲ್ಲ.
[ಅಹ್ಮದ್]
No comments:
Post a Comment