ಪ್ರವಾದಿ [ಸ] ಹೇಳಿದರು: ಅಲ್ಲಾಹನನ್ನು ತನ್ನ
ಪಭುವಾಗಿ, ಇಸ್ಲಾಮನ್ನು ತನ್ನ ಧರ್ಮವಾಗಿ
ಮತ್ತು ಮುಹಮ್ಮದರನ್ನು ತನ್ನ ಪ್ರವಾದಿಯಾಗಿ ಸಂತೃಪ್ತಿನಾದವನು ವಿಶ್ವಾಸದ ರುಚಿಯನ್ನು
ಅನುಭವಿಸಿದನು.
[ಮುಸ್ಲಿಮ್]
ನನ್ನ ಸೋದರ ಮಾವ ಹರಾಮ್ ಬಿನ್ ಮಿಲ್ ಹಾನ್ ಬಿಅರ್ ಮಊನದ ದಿನ ಈಟಿಯ ಹೊಡೆತದಿಂದ
ಹುತಾತ್ಮರಾದಾಗ ತಮ್ಮ ರಕ್ತವನ್ನು ತಮ್ಮ ಕೈಯಿಂದ ಮುಖ ಮತ್ತು ತಲೆಗೆ ಸವರುತ್ತಾ ಹೀಗೆ ಹೇಳಿದರು -
"ಕಅಬಾದ ಪ್ರಭುವಿನ ಆಣೆ ನಾನು ವಿಜಯಿಯಾದೆ.
[ಬುಖಾರಿ]
ಉಹುದ್ ಯುದ್ದದ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಪ್ರವಾದಿವರ್ಯರಲ್ಲಿ [ಸ] ಹೀಗೆ
ವಿಚಾರಿಸಿದ - "ನಾನು ವಧಿಸಲ್ಪಟ್ಟರೆ ಎಲ್ಲಿಗೆ ಹೋಗುವೆನು?" ಪ್ರವಾದಿ [ಸ] ಹೇಳಿದರು -
"ಸ್ವರ್ಗಕ್ಕೆ." ಇದನ್ನು ಕೇಳಿದ ಆ ವ್ಯಕ್ತಿ ತನ್ನ ಕೈಯಲ್ಲಿದ್ದ ಖರ್ಜೂರಗಳನ್ನು
ಎಸೆದು ಹೋರಾಡುತ್ತಾ ಮದಿದರು.
[ಬುಖಾರಿ, ಮುಸ್ಲಿಮ್]
ಪ್ರವಾದಿ [ಸ] ಹೇಳಿದರು:
"ನಾನು ಒಬ್ಬನಿಗೆ ಅವನ ತಂದೆ, ಅವನ ಮಕ್ಕಳು ಮತ್ತು
ಎಲ್ಲ ಮನುಷ್ಯರಿಗಿಂತ ಹೆಚ್ಚು ಪ್ರಿಯವಾಗುವ ತನಕ ನಿಮ್ಮ ಪೈಕಿ ಯಾರೂ ವಿಶ್ವಾಸಿಯಾಗಲಾರರು.
[ಬುಖಾರಿ, ಮುಸ್ಲಿಮ್]
No comments:
Post a Comment