ಆಯಿಶಾ(ರ)
ಹೇಳುತ್ತಾರೆ- ಮಖ್ಝೂಮ್ ಗೋತ್ರದ ಓರ್ವ ಮಹಿಳೆ ಕಳ್ಳತನ ಮಾಡಿದಳು. ಅವಳ ಕುರಿತು
ಪ್ರವಾದಿಯವರಲ್ಲಿ(ಸ.ಅ) ಯಾರಾದರೂ ಶಿಫಾರಸು ಮಾಡುವವರು ಇರುವರೇ ಎಂದು ಅವಳ ಸಂಬಂಧಿಕರು
ವಿಚಾರಿಸಿದರು. ಪ್ರವಾದಿಯವರೊಡನೆ(ಸ.ಅ) ಮಾತಾಡಲು ಯಾರಿಗೂ ಧೈರ್ಯವಿರಲಿಲ್ಲ. ಕೊನೆಗೆ ಉಸಾಮಾ
ಪ್ರವಾದಿಯವರಲ್ಲಿ(ಸ.ಅ) ಈ ವಿಷಯ ಮಾತಾಡಿದರು. ಅವರ ಶಿಫಾರಸ್ಸನ್ನು ಆಲಿಸಿದ ಪ್ರವಾದಿ(ಸ.ಅ)
ಹೀಗೆಂದರು- ಇಸ್ರಾಈಲರು ಗಣ್ಯರಾರಾದರೂ ಕದ್ದರೆ ಅವರನ್ನು ಬಿಟ್ಟುಬಿಡುತ್ತಿದ್ದರು. ಬಡವರು
ಕದ್ದರೆ ಅವರ ಕೈ ಕಡಿಯುತ್ತಿದ್ದರು. (ನನ್ನ ಪುತ್ರಿ) ಫಾತಿಮಾಳೇ ಕದ್ದಿದ್ದರೂ ನಾನವಳ ಕೈ
ಕಡಿಯುವೆ.
[ಸಹೀಹ್ ಬುಖಾರಿ]
No comments:
Post a Comment