ಪ್ರವಾದಿ
[ಸ] ಹೇಳಿದರು: ಅಲ್ಲಾಹನು ಹೀಗೆ ಹೇಳಿರುವನು - "ಮೂರು ಮಂದಿಯಿದ್ದಾರೆ. ಕಿಯಾಮತ್ ದಿನದಂದು
ನಾನು ಅವರ ವಿರುದ್ದ ಮೊಕದ್ದಮೆ ಹೂಡುವೆನು:
1) ನನ್ನ ಹೆಸರೆತ್ತಿ ವಾಗ್ದಾನ ಮಾಡಿ ಮತ್ತೆ
ಅದನ್ನು ಮುರಿದಂತಹ ವ್ಯಕ್ತಿ.
2) ಒಬ್ಬ ಸ್ವಾತಂತ್ರ ವ್ಯಕ್ತಿಯನ್ನು ಮಾರಿ ಅದರ
ಬೆಲೆಯನ್ನು ತಿಂದಂತಹ ವ್ಯಕ್ತಿ.
3) ಒಬ್ಬ ಕಾರ್ಮಿಕನನ್ನು ಕೆಲಸಕ್ಕೆ ಹಚ್ಚಿ
ಅವನಿಂದ ಪೂರ್ಣ ಕೆಲಸ ಮಾಡಿಸಿಯೂ ಅವನ ವೇತನ ನಿಡದಂತಹ ವ್ಯಕ್ತಿ.
[ಬುಖಾರಿ]
ಪ್ರವಾದಿ [ಸ] ಹೇಳಿದರು: ಕಾರ್ಮಿಕನಿಗೆ ಅವನ ವೇತನವನ್ನು ಅವರ ಬೆವರು ಆರುವುದಕ್ಕೆ ಮುಂಚೆ ಕೊಟ್ಟು ಬಿಡಿರಿ.
[ಇಬ್ನ್ ಮಾಜಃ]
ಒಂದು ವಚನದಲ್ಲಿ ಹೀಗಿದೆ - "ಕಾರ್ಮಿಕನಿಗೆ ಅವನ ವೇತನವೆಷ್ಟು ಎಂದು ತಿಳಿಸದೆ
ಅವನನ್ನು ದುಡಿಸವುದರಿಂದ ಪ್ರವಾದಿವರ್ಯರು ತಡೆದಿರುವರು.
[ಅಹ್ಮದ್]
No comments:
Post a Comment