ಪ್ರವಾದಿ [ಸ] ಹೇಳಿದರು:
ಧರ್ಮ (ಆರಾಧನೆ ಮತ್ತು ಕರ್ಮ)ದ ಅನುಯಾಯಿಯು ಅದನ್ನು ಕಾಯಂ ಆಗಿ ಪಾಲಿಸಿದರೆ ಅದು ಅಲ್ಲಾಹನಿಗೆ
ಹೆಚ್ಚು ಪ್ರಿಯವಾಗಿದೆ.
[ಬುಖಾರಿ, ಮುಸ್ಲಿಮ್]
ಪ್ರವಾದಿ [ಸ] ಹೇಳಿದರು: ಪ್ರತಿಯೊಬ್ಬ ದಾಸನು ಯಾವ ಸ್ಥಿತಿಯಲ್ಲಿ ಮರಣ
ಹೊಂದಿದನೋ ಅವನನ್ನು ಅದೇ ಸ್ಥಿತಿಯಲ್ಲಿ ಕಿಯಾಮತ್ ದಿನದಂದು ಎಬ್ಬಿಸಲಾಗುವುದು.
[ಮುಸ್ಲಿಮ್]
ಪ್ರವಾದಿ [ಸ] ಹೇಳಿದರು: ನರಕದ ಅಗ್ನಿಯಿಂದ
ದೂರವಿರಿ. ಖರ್ಜೂರದ ಒಂದು ತುಂಡು ನೀಡಿಯಾದರೂ ಸರಿಯೆ. ಅದೂ ಸಿಗದಿದ್ದರೆ ಒಂದು ಉತ್ತಮ
ಮಾತಿನಿಂದಾದರೂ ಸರಿಯೆ.
[ಬುಖಾರಿ]
ಪ್ರವಾದಿ [ಸ] ಹೇಳಿದರು:
ಪ್ರತಿಯೊಂದು ಪುಣ್ಯಕಾರ್ಯವು ದಾನವಾಗಿದೆ.
[ಬುಖಾರಿ]
No comments:
Post a Comment