Friday, September 13, 2013

ನಮ್ಮ ಕರ್ಮಗಳು


ಪ್ರವಾದಿ [ಸ] ಹೇಳಿದರು: ಧರ್ಮ (ಆರಾಧನೆ ಮತ್ತು ಕರ್ಮ)ದ ಅನುಯಾಯಿಯು ಅದನ್ನು ಕಾಯಂ ಆಗಿ ಪಾಲಿಸಿದರೆ ಅದು ಅಲ್ಲಾಹನಿಗೆ ಹೆಚ್ಚು ಪ್ರಿಯವಾಗಿದೆ.
                                                              [ಬುಖಾರಿ, ಮುಸ್ಲಿಮ್]

ಪ್ರವಾದಿ [ಸ] ಹೇಳಿದರು: ಪ್ರತಿಯೊಬ್ಬ ದಾಸನು ಯಾವ ಸ್ಥಿತಿಯಲ್ಲಿ ಮರಣ ಹೊಂದಿದನೋ ಅವನನ್ನು ಅದೇ ಸ್ಥಿತಿಯಲ್ಲಿ ಕಿಯಾಮತ್ ದಿನದಂದು ಎಬ್ಬಿಸಲಾಗುವುದು.
                                                              [ಮುಸ್ಲಿಮ್]

ಪ್ರವಾದಿ [ಸ] ಹೇಳಿದರು: ನರಕದ ಅಗ್ನಿಯಿಂದ ದೂರವಿರಿ. ಖರ್ಜೂರದ ಒಂದು ತುಂಡು ನೀಡಿಯಾದರೂ ಸರಿಯೆ. ಅದೂ ಸಿಗದಿದ್ದರೆ ಒಂದು ಉತ್ತಮ ಮಾತಿನಿಂದಾದರೂ ಸರಿಯೆ.
                                                              [ಬುಖಾರಿ]
 
ಪ್ರವಾದಿ [ಸ] ಹೇಳಿದರು: ಪ್ರತಿಯೊಂದು ಪುಣ್ಯಕಾರ್ಯವು ದಾನವಾಗಿದೆ.
                                                              [ಬುಖಾರಿ]

No comments:

Post a Comment