ಮದುವೆಯ ಊಟ [ಇಸ್ಲಾಮಿನಲ್ಲಿ]
Tuesday, September 24, 2013
Friday, September 13, 2013
ಗುರುತಿಸುವುದು
ಪ್ರವಾದಿ [ಸ] ಹೇಳಿದರು:
ಉತ್ತಮ ಕನಸು ಅಲ್ಲಾಹನ ವತಿಯಿಂದ ಆಗಿರುತ್ತದೆ
ಮತ್ತು ಗೊಂದಲಮಯ ಕನಸು ಶೈತಾನನ ಕಡೆಯಿಂದಾಗಿರುತ್ತದೆ.
[ಬುಖಾರಿ, ಮುಸ್ಲಿಮ್]
ಪ್ರವಾದಿ [ಸ] ಹೇಳಿದರು:
ಅಲ್ಲಾಹನು ಒಬ್ಬ ದಾಸನನ್ನು ಪ್ರೀತಿಸಿದರೆ ಜಿಬ್'ರಿಲ್'ರನ್ನು [ಅ] ಕರೆದು ಹೀಗೆ
ಹೇಳುತ್ತಾನೆ - ನಾನು ಇಂತಿಂತಹ ದಾಸನನ್ನು ಪ್ರೀತಿಸುತ್ತೇನೆ. ನೀವೂ ಅವನನ್ನು ಪ್ರೀತಿಸಿರಿ.
ಅನಂತರ ಜೀಬ್'ರೀಲರೂ [ಅ] ಅವನನ್ನು ಪ್ರೀತಿಸುತ್ತಾನೆ ಮತ್ತು ಆಕಾಶದಲ್ಲಿ ಹೀಗೆ ಘೋಷಿಸುತ್ತಾರೆ
- ಅಲ್ಲಾಹನು ಇಂತಿಂತಹ ವ್ಯಕ್ತಿಯನ್ನು ಪ್ರೀತಿಸುತ್ತಾನೆ. ನೀವೂ ಅವನನ್ನು ಪ್ರೀತಿಸಿರಿ. ಅನಂತರ
ಆಕಾಶದವರು (ದೇವಚರರು) ಅವನನ್ನು ಪ್ರೀತಿಸುತ್ತಾರೆ. ತರುವಾಯ ಅವನ ಜನಪ್ರಿಯತೆ ಭೂಮಿಗೆ
ಇಳಿಯುತ್ತದೆ. (ಅರ್ಥಾತ್ ಭುಮಿಯವರೂ ಅವನನ್ನು ಪ್ರೀತಿಸ ತೊಡಗುತ್ತಾರೆ). ಅಲ್ಲಾಹನು ಯಾರಾನ್ನಾದರೂ
ದ್ವೇಷಿಸಿದರೆ ಜೀಬ್'ರೀಲ್'ರನ್ನು (ಅ) ಕರೆದು ಹೀಗೆ ಹೇಳುತ್ತಾನೆ, ನಾನು ಇಂತಿಂತಹ ವ್ಯಕ್ತಿಯನ್ನು
ದ್ವೇಷಿಸುತ್ತಾರೆ. ತರುವಾಯ ಆಕಾಶದವರಲ್ಲಿ ಘೋಷಿಸುತ್ತಾರೆ. ಅಲ್ಲಾಹನು ಇಂತಿಂತಹ ವ್ಯಕ್ತಿಯನ್ನು
ದ್ವೇಷಿಸುತ್ತಾನೆ. ಅನಂತರ ಅವರೂ ಅವನನ್ನು ದ್ವೇಷಿಸತೊಡಗುತ್ತಾರೆ. ಅನಂತರ ಭೂಮಿಯಲ್ಲೂ ಅವನಿಗೆ
ದ್ವೇಷವು ಇಳಿಯುತ್ತದೆ.
[ಮುಸ್ಲಿಮ್]
ಪ್ರವಾದಿವರ್ಯರು [ಸ] ಹೀಗೆ ವಿಚಾರಿಸಲಾಯಿತು: ಒಬ್ಬ ವ್ಯಕ್ತಿ ಉತ್ತಮ
ಕರ್ಮಗಳನ್ನು ಮಾಡುತ್ತಾನೆ ಮತ್ತು ಜನರು ಅವನನ್ನು ಹೊಗಳುತ್ತಾರೆ. ಅವನ ಕುರಿತು ತಮ್ಮ
ಅಭಿಪ್ರಾಯವೇನು? ಪ್ರವಾದಿ [ಸ] ಹೇಳಿದರು: "ಇದು ಸತ್ಯವಿಶ್ವಾಸಿಗೆ ಸಿಗುವ
ತಕ್ಷಣದ ಸುವಾರ್ತೆಯಾಗಿದೆ.
[ಮುಸ್ಲಿಮ್]
ಪ್ರವಾದಿ [ಸ] ಹೇಳಿದರು: ಯಾವ ವ್ಯಕ್ತಿಯು ನರಕಕ್ಕೆ ನಿಷಿದ್ದವಾಗಿದ್ದಾನೋ
ಮತ್ತು ನರಕದ ಅಗ್ನಿಯು ಯಾರಿಗೆ ನಿಷಿದ್ದವಾಗಿದೆಯೋ ಆ ವ್ಯಕ್ತಿಯ ಬಗ್ಗೆ ನಾನು ನಿಮಗೆ ತಿಳಿಸಲೇ? ನರಕದ ಅಗ್ನಿಯು ಪ್ರತಿಯೊಬ್ಬ
ತೀವ್ರವಾದಿಯಲ್ಲದ, ಮೃದುಸ್ವಭಾವದ, ಜನರಿಗೆ ನಿಕಟವಾಗಿರುವ
ಮತ್ತು ಸರಳ ವ್ಯಕ್ತಿಯ ಮೇಲೆ ನಿಷಿದ್ದವಾಗಿದೆ.
[ಅಬೂ ದಾವೂದ್, ತಿರ್ಮಿಧಿ]
ಜೀವನದ ಶಿಷ್ಟಾಚಾರಗಳು
ಪ್ರವಾದಿ [ಸ] ಹೇಳಿದರು: ಬೆಳಿಗ್ಗೆ ಮತ್ತು ಸಂಚೆ
ಮಸೀದಿಗೆ ಹೋಗುವ ವ್ಯಕ್ತಿಗೆ ಅಲ್ಲಾಹನು ಸ್ವರ್ಗದಲ್ಲಿ ಪ್ರತಿ ಬೆಳಿಗ್ಗೆ ಮತ್ತು ಸಂಜೆ ಅವನ
ಆತಿಥ್ಯದ ವ್ಯವಸ್ಥೆ ಮಾಡುವನು.
[ಬುಖಾರಿ,
ಮುಸ್ಲಿಮ್]
ಪ್ರವಾದಿ [ಸ] ಹೇಳಿದರು: ನಿಮ್ಮ ಪೈಕಿ ಯಾರಾದರೂ ನಮಾಝ್ ಮಾಡುವಾಗ ನಿಜವಾಗಿ
ಅವನು ತನ್ನ ಪ್ರಭುವಿನ ಜೊತೆ ಸಂಭಾಷಣೆ ನಡೆಸುತ್ತಾನೆ.
[ಮುಸ್ಲಿಮ್]
ಪ್ರವಾದಿ [ಸ] ಹೇಳಿದರು: ಜನರೇ, ಅಲ್ಲಾಹನ ಕಡೆಗೆ
ಪಶ್ಚಾತ್ತಾಪ ಪಟ್ಟು ಮರಳಿರಿ. ನಾನಂತು ಪ್ರತಿದಿನ ನೂರು ಸಲ ಅಲ್ಲಾಹನ ಕಡೆಗೆ ಪಶ್ಚಾತ್ತಾಪ ಪಟ್ಟು
ಮರಳುತ್ತೇನೆ.
[ಮುಸ್ಲಿಮ್]
ನಾನು ಪ್ರವಾದಿಯವರಲ್ಲಿ
[ಸ] ನಮಾಝ್ ಮಾಡುವ, ಝಕಾತ್ ಕೊಡುವ ಮತ್ತು ಪ್ರತಿಯೊಬ್ಬ ಮುಸ್ಲಿಮನ ಹಿತಾಕಾಂಕ್ಷೆ ಮಾಡುವ ಪ್ರತಿಜ್ಜೆ
ಮಾಡಿದೆನು
[ಮುಸ್ಲಿಮ್]
ನಮ್ಮ ಕರ್ಮಗಳು
ಪ್ರವಾದಿ [ಸ] ಹೇಳಿದರು:
ಧರ್ಮ (ಆರಾಧನೆ ಮತ್ತು ಕರ್ಮ)ದ ಅನುಯಾಯಿಯು ಅದನ್ನು ಕಾಯಂ ಆಗಿ ಪಾಲಿಸಿದರೆ ಅದು ಅಲ್ಲಾಹನಿಗೆ
ಹೆಚ್ಚು ಪ್ರಿಯವಾಗಿದೆ.
[ಬುಖಾರಿ, ಮುಸ್ಲಿಮ್]
ಪ್ರವಾದಿ [ಸ] ಹೇಳಿದರು: ಪ್ರತಿಯೊಬ್ಬ ದಾಸನು ಯಾವ ಸ್ಥಿತಿಯಲ್ಲಿ ಮರಣ
ಹೊಂದಿದನೋ ಅವನನ್ನು ಅದೇ ಸ್ಥಿತಿಯಲ್ಲಿ ಕಿಯಾಮತ್ ದಿನದಂದು ಎಬ್ಬಿಸಲಾಗುವುದು.
[ಮುಸ್ಲಿಮ್]
ಪ್ರವಾದಿ [ಸ] ಹೇಳಿದರು: ನರಕದ ಅಗ್ನಿಯಿಂದ
ದೂರವಿರಿ. ಖರ್ಜೂರದ ಒಂದು ತುಂಡು ನೀಡಿಯಾದರೂ ಸರಿಯೆ. ಅದೂ ಸಿಗದಿದ್ದರೆ ಒಂದು ಉತ್ತಮ
ಮಾತಿನಿಂದಾದರೂ ಸರಿಯೆ.
[ಬುಖಾರಿ]
ಪ್ರವಾದಿ [ಸ] ಹೇಳಿದರು:
ಪ್ರತಿಯೊಂದು ಪುಣ್ಯಕಾರ್ಯವು ದಾನವಾಗಿದೆ.
[ಬುಖಾರಿ]
ವಿಶ್ವಾಸಿಯ ಗುಣಗಳು
ಪ್ರವಾದಿ [ಸ] ಹೇಳಿದರು:
ವಿಶ್ವಾಸಿಯ ಉದಾಹರಣೆಯು ಮೃದುವಾದ ಗದ್ದೆಯಂತಿದೆ. ಜೋರಾಗಿ ಗಾಳಿ ಬೀಸಿದಾಗ ಅದು ಮತ್ತು
ಎಲೆಗಳಿತ್ಯಾದಿ ಆಚೀಚೆ ಬಗ್ಗುತ್ತದೆ. ಗಾಳಿ ಬೀಸುವುದು ನಿಂತಾಗ ಅದೂ ನಿಂತು ಬಿಡುತ್ತದೆ. ಈ ರೀತಿ
ವಿಶ್ವಾಸಿಯು ಆಪತ್ತುಗಳಿಂದ (ನಾಶವಾಗುವುದರಿಂದ) ರಕ್ಷಿಸಲ್ಪಡುತ್ತಾನೆ. ಸತ್ಯನಿಷೇಧಿಯು
ಉದಾಹರಣೆಯು ಸೂಚಿಪರ್ಣೆಯ ನೇರ ಮತ್ತು ಗಟ್ಟಿ ಮರದಂತಿದೆ. ಅಲ್ಲಾಹನು ಬಯಸಿದಾಗ ಅದನ್ನು ಬುಡಸಹಿತ
ಕಿತ್ತು ಹಾಕುತ್ತಾನೆ.
[ಬುಖಾರಿ]
ಪ್ರವಾದಿ [ಸ] ಹೇಳಿದರು: ವಿಶ್ವಾಸಿಗಳನ್ನು ನೀವು ನೋಡುತ್ತೀರಿ. ಅವರು ಪರಸ್ಪರ
ಕರುಣೆ ತೋರುವವರಾಗಿದ್ದಾರೆ. ಪರಸ್ಪರ ಪ್ರೀತಿಸುವವರಾಗಿದ್ದಾರೆ. ಅವರು ಪರಸ್ಪರ ಸಹಾಯ-ಸಹಕಾರ
ಮಾಡುವವರಾಗಿದ್ದಾರೆ. ಅವರು ಒಂದೇ ಶರೀರದಂತಿದ್ದಾರೆ. ದೇಹದ ಯಾವುದಾದರೂ ಅಂಗಕ್ಕೆ ನೋವಾದರೆ
ಶರೀರದ ಎಲ್ಲ ಅಂಗಗಳು ಆ ಒಂದು ಅಂಗದ ಕಾರಣ ಪರಸ್ಪರ ಆಹ್ವಾನಿಸುತ್ತದೆ ಮತ್ತು ಇಡೀ ದೇಹವು ಜಾಗರಣೆ
ಮತ್ತು ಜ್ವರದಲ್ಲಿ ಭಾಗವಹಿಸುತ್ತದೆ.
[ಬುಖಾರಿ, ಮುಸ್ಲಿಮ್]
ಪ್ರವಾದಿ [ಸ] ಹೀಗೆ
ಹೇಳುರುವುದಾಗಿ ನಾನು ಕೇಳಿದ್ದೇನೆ: ಮುಹಮ್ಮದರ [ಸ] ಪ್ರಾಣವು ಯಾರ ಕೈಯಲ್ಲಿದೆಯೋ ಅವನ ಆಣೆ!
ವಿಶ್ವಾಸಿಯ ಉದಾಹರಣೆಯು ಬಂಗಾರದ ತುಂಡಿನಂತಿದೆ. ಅದರ ಒಡೆಯನು ಅದನ್ನು ಕಾಯಿಸಿದನು. ಆದರೆ ಅದರ
ಬಣ್ಣ ಬದಲಾಗಲೂ ಇಲ್ಲ - ಭಾರ ಕಡಿಮೆಯಾಗಲೂ ಇಲ್ಲ. ಮುಹಮ್ಮದರ [ಸ] ಪ್ರಾಣವು ಯಾರ ಕೈಯಲ್ಲಿದೆಯೋ
ಅವನ ಆಣೆ! ವಿಶ್ವಾಸಿಯ ಉದಾಹರಣೆಯು ಉತ್ತಮ ಜೇನ್ನೊಣದಂತಿದೆ. ಅದು ಉತ್ತಮ ಕುಸುಮದ ರಸ ಹೀರಿತು.
ಉತ್ತಮ ಜೇನು ತಯಾರಿಸಿತು. ಯಾವ ಶಾಖೆಯಲ್ಲಿ ಅದು ಕುಳಿತು ಕೊಂಡಿತೋ ಅದನ್ನು ತನ್ನ ಭಾರದಿಂದ
ಮುರಿಯಲೂ ಇಲ್ಲ ಹಾಳು ಮಾಡಲೂ ಇಲ್ಲ.
[ಅಹ್ಮದ್]
ವಿಸ್ವಾಸದ ರುಚಿ
ಪ್ರವಾದಿ [ಸ] ಹೇಳಿದರು: ಅಲ್ಲಾಹನನ್ನು ತನ್ನ
ಪಭುವಾಗಿ, ಇಸ್ಲಾಮನ್ನು ತನ್ನ ಧರ್ಮವಾಗಿ
ಮತ್ತು ಮುಹಮ್ಮದರನ್ನು ತನ್ನ ಪ್ರವಾದಿಯಾಗಿ ಸಂತೃಪ್ತಿನಾದವನು ವಿಶ್ವಾಸದ ರುಚಿಯನ್ನು
ಅನುಭವಿಸಿದನು.
[ಮುಸ್ಲಿಮ್]
ನನ್ನ ಸೋದರ ಮಾವ ಹರಾಮ್ ಬಿನ್ ಮಿಲ್ ಹಾನ್ ಬಿಅರ್ ಮಊನದ ದಿನ ಈಟಿಯ ಹೊಡೆತದಿಂದ
ಹುತಾತ್ಮರಾದಾಗ ತಮ್ಮ ರಕ್ತವನ್ನು ತಮ್ಮ ಕೈಯಿಂದ ಮುಖ ಮತ್ತು ತಲೆಗೆ ಸವರುತ್ತಾ ಹೀಗೆ ಹೇಳಿದರು -
"ಕಅಬಾದ ಪ್ರಭುವಿನ ಆಣೆ ನಾನು ವಿಜಯಿಯಾದೆ.
[ಬುಖಾರಿ]
ಉಹುದ್ ಯುದ್ದದ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಪ್ರವಾದಿವರ್ಯರಲ್ಲಿ [ಸ] ಹೀಗೆ
ವಿಚಾರಿಸಿದ - "ನಾನು ವಧಿಸಲ್ಪಟ್ಟರೆ ಎಲ್ಲಿಗೆ ಹೋಗುವೆನು?" ಪ್ರವಾದಿ [ಸ] ಹೇಳಿದರು -
"ಸ್ವರ್ಗಕ್ಕೆ." ಇದನ್ನು ಕೇಳಿದ ಆ ವ್ಯಕ್ತಿ ತನ್ನ ಕೈಯಲ್ಲಿದ್ದ ಖರ್ಜೂರಗಳನ್ನು
ಎಸೆದು ಹೋರಾಡುತ್ತಾ ಮದಿದರು.
[ಬುಖಾರಿ, ಮುಸ್ಲಿಮ್]
ಪ್ರವಾದಿ [ಸ] ಹೇಳಿದರು:
"ನಾನು ಒಬ್ಬನಿಗೆ ಅವನ ತಂದೆ, ಅವನ ಮಕ್ಕಳು ಮತ್ತು
ಎಲ್ಲ ಮನುಷ್ಯರಿಗಿಂತ ಹೆಚ್ಚು ಪ್ರಿಯವಾಗುವ ತನಕ ನಿಮ್ಮ ಪೈಕಿ ಯಾರೂ ವಿಶ್ವಾಸಿಯಾಗಲಾರರು.
[ಬುಖಾರಿ, ಮುಸ್ಲಿಮ್]
ಅತ್ಯತ್ತಮ ಜನರು
ಪ್ರವಾದಿ [ಸ] ಹೇಳಿದರು: "ನಿಮ್ಮ ಪೈಕಿ
ಕುರಾನ್ ಕಲಿತು ಇತರರಿಗೆ ಕಲಿಸುವವರು ಅತ್ಯುತ್ತಮ ವ್ಯಕ್ತಿಗಳಾಗಿದ್ದಾರೆ."
[ ಬುಖಾರಿ]
ಪ್ರವಾದಿ [ಸ] ಹೇಳಿದರು:
ಚಾರಿತ್ರ್ಯದ ನೆಲೆಯಲ್ಲಿ ಉತ್ತಮರಾದವರೇ ನಿಮ್ಮ ಪೈಕಿ ಅತ್ಯುತ್ತಮನಾಗಿದ್ದಾರೆ."
[ಬುಖಾರಿ, ಮುಸ್ಲಿಮ್]
ಪ್ರವಾದಿ [ಸ] ಹೇಳಿದರು: "ನಿಮ್ಮಲ್ಲಿ ಅತ್ಯುತ್ತಮ ವ್ಯಕ್ತಿಗಳು
ಯಾರೆಂದು ನಾನು ನಿಮಗೆ ತಿಳಿಸಲೇ?" ಸಹಾಬಿಗಳು ಹೇಳಿದರು -
"ಅಲ್ಲಾಹನ ಸಂದೇಶವಾಹಕರೇ ಖಂಡಿತ ತಿಳಿಸಿ." ಪ್ರವಾದಿ [ಸ] ಹೇಳಿದರು -
"ಯಾರನ್ನು ನೋಡಿ ಅಲ್ಲಾಹನ ನೆನಪಾಗುವುದೋ ಅವರೇ ನಿಮ್ಮ ಪೈಕಿ ಅತ್ಯುತ್ತಮ
ಜನರಾಗಿದ್ದಾರೆ."
[ಇಬ್ನ್ ಮಾಜಃ]
ಪ್ರವಾದಿ
[ಸ] ನಿಮ್ಮ ಮುಂದೆ ಖುತ್ಬಾ [ಪ್ರವಚನ) ಮಾಡುತ್ತಾ ಈ ರೀತಿ ಹೇಳಿದರು: "ನಿಮ್ಮ ಪೈಕಿ ತನ್ನ
ಜನಾಂಗದ ಪರವಾಗಿ ಪ್ರತಿರೋಧಿಸುವವನು ಅತ್ಯುತ್ತಮ ವ್ಯಕ್ತಿಯಾಗಿದ್ದಾನೆ. ಆ ಪ್ರತಿರೋಧದಲ್ಲಿ ಅವನು
ಪಾಪ ಕೃತ್ಯ ಎಸಗದೆ ಇರುವ ತನಕ."
[ಅಬೂ ದಾವೂದ್]
ಅತ್ಯುತ್ತಮ ಕರ್ಮಗಳು
ಪ್ರವಾದಿ [ಸ] ಬಳಿಗೆ ಬಂದು ಈ ರೀತಿ
ವಿಚಾರಿಸಿದರು: "ಅಲ್ಲಾಹನ ಬಳಿ ಎಲ್ಲಕ್ಕಿಂತ ಪ್ರಿಯವಾದ ಕರ್ಮ ಯಾವುದೆಂದು ನಿಮಗೆ
ತಿಳಿದಿದೆಯೇ?" ಯಾರೋ
ಹೇಳಿದರು - "ನಮಾಝ್ ಮತ್ತು ಝಾಕಾತ್" ಇನ್ನಾರೋ ಹೇಳಿದರು - "ಆ ಕರ್ಮ ಜಿಹಾದ್
ಆಗಿದೆ". ಪ್ರವಾದಿ [ಸ] ಹೇಳಿದರು - "ಅಲ್ಲಾಹನ ಬಳಿ ಎಲ್ಲಕ್ಕಿಂತ ಪ್ರಿಯವಾದ ಕರ್ಮವು
ಅಲ್ಲಾಹನಿಗಾಗಿ ಯಾರನ್ನಾದರೂ ಪ್ರೀತಿಸುವುದು ಮತ್ತು ಅಲ್ಲಾಹನಿಗಾಗಿ ಯಾರನ್ನಾದರೂ ದ್ವೇಷಿಸುವುದು
ಆಗಿದೆ."
[ಅಹ್ಮದ್,
ಅಬೂ ದಾವೂದ್]
ಪ್ರವಾದಿ [ಸ] ಹೇಳಿದರು:
"ಅತ್ಯುತ್ತಮ ಪುಣ್ಯ ಕಾರ್ಯವು ಒಬ್ಬ ವ್ಯಕ್ತಿಯು ತನ್ನ ತಂದೆಯ ನಿಧನನಂತರ ಸ್ನೇಹಿತರ ಜೊತೆ
ಸದ್ವರ್ತನೆ ಮಾಡುವುದಾಗಿದೆ.
[ಮುಸ್ಲಿಮ್]
ನಾನು ಪ್ರವಾದಿವರ್ಯರಲ್ಲಿ [ಸ] ವಿಚಾರಿಸಿದೆ: "ಅಲ್ಲಾಹನ ಅತ್ಯಧಿಕ
ಮೆಚ್ಚುಗೆಯ ಕರ್ಮ ಯಾವುದು?" ಪ್ರವಾದಿ [ಸ] ಹೇಳಿದರು - "ನಮಾಝ್ ಅದರ ಸಮಯಕ್ಕೆ
ನಿರ್ವಹಿಸುವುದು". ನಾನು ವಿಚಾರಿಸಿದೆ, "ಮತ್ತಾವುದು"? ಪ್ರವಾದಿ [ಸ] ಹೇಳಿದರು -
"ತಂದೆತಾಯಿಗಳ ಜೊತೆ ಉತ್ತಮ ವ್ಯವಹಾರ ಮಾಡುವುದು." ನಾನು ವಿಚಾರಿಸಿದೆ ಮತ್ತಾವುದು? "ಪ್ರವಾದಿ [ಸ] ಹೆಲಿದರು.
"ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡುವುದು."
[ಮುಸ್ಲಿಮ್]
ಪ್ರವಾದಿ [ಸ] ಹೇಳಿದರು: ಹೆಚ್ಚೆಚ್ಚು ಸುಜೂದ್ (ಸಾಷ್ಟಾಂಗ) ಮಾಡುತ್ತಲಿರಿ.
ಏಕೆಂದರೆ ಅಲ್ಲಾಹನಿಗಾಗಿ ನೀವು ಮಾಡುವ ಒಂದು ಸುಜೂದ್'ನಿಂದ ನಿಮ್ಮ ಒಂದು
ಸ್ಥಾನವನ್ನು ಉನ್ನತಗೊಳಿಸುವನು ಮತ್ತು ಅದರಿಂದ ನಿಮ್ಮ ಒಂದು ಪಾಪವನ್ನು ಮನ್ನಿಸುವನು.
[ಮುಸ್ಲಿಮ್]
ಸೌಭಾಗ್ಯಶಾಲಿಗಳು
ಒಮ್ಮೆ ಪ್ರವಾದಿವರ್ಯರ [ಸ] ಬಳಿ ಹಳ್ಳಿಗ ಬಂದು
ಹೀಗೆ ವಿಚಾರಿಸಿದ: 'ಯಾವ
ವ್ಯಕ್ತಿಯು ಉತ್ತಮನು'? ಪ್ರವಾದಿ
[ಸ] ಹೇಳಿದರು - "ಯಾರಿಗೆ ಧಿರ್ಘಾಯುಷ್ಯ ಲಭಿಸಿ ಅವನ ಕರ್ಮಗಳು ಉತ್ತಮವಾದುದೋ ಅವನು
ಭಾಗ್ಯಶಾಲಿಯಾಗಿದ್ದಾನೆ." ಆ ವ್ಯಕ್ತಿ ಪ್ರಶ್ನಿಸಿದ "ಅಲ್ಲಾಹನ ಸಂದೇಶವಾಹಕರೇ,
ಯಾವ ಕರ್ಮವು ಉತ್ತಮವಾಗಿದೆ?"
ಪ್ರವಾದಿ [ಸ] ಹೇಳಿದರು - "ನೀವು ಇಹಲೋಕ
ತ್ಯಚಿಸಿದಾಗ ನಿಮ್ಮ ನಾಲಗೆಯು ಅಲ್ಲಾಹನ ಸ್ಮರಣೆಯಲ್ಲಿ ನಿರತವಾಗಿರುವುದು."
[ಅಹ್ಮದ್,
ತಿರ್ಮಿಧಿ]
ಪ್ರವಾದಿ [ಸ] ಹೇಳಿದರು: "ಯಾರ
ಕರ್ಮಪತ್ರದಲ್ಲಿ ಅತ್ಯಧಿಕ ಪ್ರಶ್ಚಾತ್ತಾಪವಿದೆಯೋ ಅವನು ಭಾಗ್ಯಶಾಲಿಯಾಗಿದ್ದಾನೆ."
[ಇಬ್ನ್
ಮಾಜಃ]
ಅತ್ಯುತ್ತಮ ಬಿಂದುಗಳು
ಪ್ರವಾದಿ [ಸ] ಹೇಳಿದರು: ಅಲ್ಲಾಹನಿಗೆ ಎರಡು
ಬಿಂದುಗಳು ಮತ್ತು ಎರಡು ಚಿಹ್ನೆಗಳಿಗಿಂತ ಪ್ರಿಯವಾದ ವಸ್ತು ಯಾವುದು ಇಲ್ಲ. ಒಂದು ಅಲ್ಲಾಹನ
ಭಯದಿಂದ ಇಳಿಯುವ ಕಣ್ಣೇರು ಬಿಂದು ಮತ್ತು ಅಲ್ಲಾಹನ ಮಾರ್ಗದ ಹೋರಾಟದಲ್ಲಿ ಹರಿಯುವ ರಕ್ತ ಬಿಂದು.
ಎರಡು ಚಿಹ್ನೆಗಳ ಪೈಕಿ ಒಂದು ಚಿಹ್ನೆ ಅಲ್ಲಾಹನ ಮಾರ್ಗದಲ್ಲಿ ನಡೆದ ಕಾರಣ ಪಾದದಲ್ಲಿ ಆದ ಚಿಹ್ನೆ.
ಇನ್ನೊಂದು ಅಲ್ಲಾಹನು ಕಡ್ಡಾಯಗೊಳಿಸಿರುವ ವಿಧಿಗಳ ಪೈಕಿ ಒಂದು ವಿಧಿಯನ್ನು ನಿರ್ವಹಿಸುವಾಗ ಆದ
ಚಿಹ್ನೆ.
[ತಿರ್ಮಿಧಿ]
ಶ್ರಮ ಮತ್ತು ವೇತನ
ಪ್ರವಾದಿ
[ಸ] ಹೇಳಿದರು: ಅಲ್ಲಾಹನು ಹೀಗೆ ಹೇಳಿರುವನು - "ಮೂರು ಮಂದಿಯಿದ್ದಾರೆ. ಕಿಯಾಮತ್ ದಿನದಂದು
ನಾನು ಅವರ ವಿರುದ್ದ ಮೊಕದ್ದಮೆ ಹೂಡುವೆನು:
1) ನನ್ನ ಹೆಸರೆತ್ತಿ ವಾಗ್ದಾನ ಮಾಡಿ ಮತ್ತೆ
ಅದನ್ನು ಮುರಿದಂತಹ ವ್ಯಕ್ತಿ.
2) ಒಬ್ಬ ಸ್ವಾತಂತ್ರ ವ್ಯಕ್ತಿಯನ್ನು ಮಾರಿ ಅದರ
ಬೆಲೆಯನ್ನು ತಿಂದಂತಹ ವ್ಯಕ್ತಿ.
3) ಒಬ್ಬ ಕಾರ್ಮಿಕನನ್ನು ಕೆಲಸಕ್ಕೆ ಹಚ್ಚಿ
ಅವನಿಂದ ಪೂರ್ಣ ಕೆಲಸ ಮಾಡಿಸಿಯೂ ಅವನ ವೇತನ ನಿಡದಂತಹ ವ್ಯಕ್ತಿ.
[ಬುಖಾರಿ]
ಪ್ರವಾದಿ [ಸ] ಹೇಳಿದರು: ಕಾರ್ಮಿಕನಿಗೆ ಅವನ ವೇತನವನ್ನು ಅವರ ಬೆವರು ಆರುವುದಕ್ಕೆ ಮುಂಚೆ ಕೊಟ್ಟು ಬಿಡಿರಿ.
[ಇಬ್ನ್ ಮಾಜಃ]
ಒಂದು ವಚನದಲ್ಲಿ ಹೀಗಿದೆ - "ಕಾರ್ಮಿಕನಿಗೆ ಅವನ ವೇತನವೆಷ್ಟು ಎಂದು ತಿಳಿಸದೆ
ಅವನನ್ನು ದುಡಿಸವುದರಿಂದ ಪ್ರವಾದಿವರ್ಯರು ತಡೆದಿರುವರು.
[ಅಹ್ಮದ್]
ವಿನಾಶಕಾರೀ ಅವರಾಧಗಳು
ಪ್ರವಾದಿ(ಸ.ಅ)ರು
ಹೇಳಿದರು- "ಏಳು ವಿನಾಶಕಾರಿ ವಸ್ತುಗಳುಇಂದ ದೂರವಿರಿ." ಸಹಾಬಿಗಳು ವಿಚಾರಿಸಿದರು-
"ಅವು ಯಾವುವು...?"
ಪ್ರವಾದಿ(ಸ.ಅ)ರು
ವಿವರಿಸಿದರು,
1.) ಅಲ್ಲಾಹನ ಜೊತೆ ಭಾಗೀದಾರರನ್ನು ಮಾಡುವುದು.
2.) ಮಾಟ ಮಾಡುವುದು.
3.) ಅಲ್ಲಾಹನು ನಿಷಿದ್ಧಗೊಳಿಸಿದ ಪ್ರಾಣವನ್ನು
ಅನ್ಯಾಯವಾಗಿ ಹರಣ ಮಾಡುವುದು.
4.) ಬಡ್ಡಿ ತಿನ್ನುವುದು.
5.) ಅನಾಥನ ಸೊತ್ತನ್ನು ಕಬಳಿಸುವುದು.
6.) ಯುದ್ಧದ ವೇಳೆ ಬೆನ್ನು ತಿರುಗಿಸಿ ಓಡುವುದು.
7.) ಸುಶೀಲೆಯರಾದ ನಿರ್ದೋಷಿ ಸತ್ಯವಿಶ್ವಾಸಿನಿಯರ
ಮೇಲೆ ಆರೋಪ ಹೊರಿಸುವುದು.
[ಮುತ್ತಫಕುನ್ ಅಲೈಹಿ]
ಅತ್ಯಂತ ಕೆಟ್ಟ ಜನರು
ಪ್ರವಾದಿ [ಸ] ಹೇಳಿದರು: ಕಿಯಾಮತ್'ನ ದಿನ ಸ್ಥಾನಮಾನದ
ದೃಷ್ಟಿಯಿಂದ ಅತ್ಯಂತ ಕೆಟ್ಟ ವ್ಯಕ್ತಿ ಇನ್ನೊಬ್ಬನ ಲೌಕಿಕ ಉದ್ದಾರಕ್ಕಾಗಿ ತನ್ನ ಪರಲೋಕವನ್ನು
ಹಾಳು ಮಾಡಿದವನಾಗಿರುವನು.
[ಇಬ್ನ್ ಮಾಜಃ]
ಪ್ರವಾದಿ [ಸ] ಹೇಳಿದರು: "ಜಗಳಗಂಟಿಯಾದ ವ್ಯಕ್ತಿಯು ಅಲ್ಲಾಹನಿಗೆ
ಅತ್ಯಂತ ಅಪ್ರಿಯನಾಗಿದ್ದಾನೆ.
[ಬುಖಾರಿ]
ಪ್ರವಾದಿ [ಸ] ಹೇಳಿದರು: ಆಡಳಿತಗಾರರ ಪೈಕಿ ಅತ್ಯಂತ ಕೆಟ್ಟ ಆಡಳಿತಗಾರರು
ಅನ್ಯಾಯ ಮಾಡುವವರಾಗಿದ್ದಾರೆ.
[ಮುಸ್ಲಿಮ್]
ಪ್ರವಾದಿವರ್ಯರಲ್ಲಿ [ಸ] ಈ ರೀತಿ ಪ್ರಶ್ನಿಸಲಾಯಿತು - 'ಅತ್ಯುತ್ತಮ ವ್ಯಕ್ತಿ ಯಾರು?' ಪ್ರವಾದಿ [ಸ] ಹೇಳಿದರು, "ದೀರ್ಘ ಆಯುಷ್ಯ ಪಡೆದು
ಸತ್ಕರ್ಮವೆಸಗಿದವನು." ಮತ್ತೆ ಪ್ರಶ್ನಿಸಲಾಯಿತು. 'ಅತ್ಯಂತ ಕೆಟ್ಟ ವ್ಯಕ್ತಿ
ಯಾರು?'
ಪ್ರವಾದಿ [ಸ] ಹೇಳಿದರು, "ಧೀರ್ಘ ಆಯುಷ್ಯ ಹೊಂದಿ
ದುಷ್ಕರ್ಮವೆಸಗಿದವನು.
[ತಿರ್ಮಿಧಿ]
Subscribe to:
Posts (Atom)