Friday, May 9, 2014

ಸಅದ್ [ರ] ಉದಾರ ಸ್ವಬಾವ [ಮದೀನದಲ್ಲಿ]


ಅಬ್ದುರ್ರಹ್ಮಾನ್ ಇಬ್ನ್ ಔಫ್ [ರ]ರವರು ತನ್ನನ್ನು ವಹಿಸಿ ಕೊಟ್ಟ ಸಅದ್ [ರ]ರವರ ಬಗ್ಗೆ ಹೇಳುವುದನ್ನು ಇಮಾಮ್ ಬುಖಾರಿ ಉಲ್ಲೇಖಿಸುವುದನ್ನು ನೋಡಿರಿ:
"ಸಅದ್ [ರ]ರವರು ನನ್ನಲ್ಲಿ ಹೇಳಿದರು: ಅಬ್ದುರ್ರಹ್ಮಾನ್ ನನ್ನ ಬಳಿ ತಂಬಾ ಸಂಪತ್ತಿದೆ, ಅದನ್ನು ನಾನು ಎರಡಾಗಿ ಭಾಗಿಸುತ್ತೇನೆ. ಇನ್ನು ಅದರ ಒಂದು ಪಾಲು ನಿಮ್ಮದಾಗಿರುತ್ತದೆ. ನನಗೆ ಎರಡು ಪತ್ನಿಯರಿದ್ದಾರೆ. ಅವರಿಬ್ಬರನ್ನು ನೋಡಿ ಅವರಿಂದ ನಿಮಗೆ ಇಷ್ಟವಿರುವವರನ್ನು ಆರಿಸಿರಿ. ಆಗಲೇ ನಾನು ಆಕೆಯನ್ನು ವಿವಾಹ ವಿಚ್ಚೆಧನ ನಡೆಸುತ್ತೇನೆ. ಇದ್ದಃ ಕಾಲಾನಂತರ ನೀವು ಆಕೆಯನ್ನು ವಿವಾಹವಾಗಿರಿ. ಆಗ ನಾನು ಹೇಳಿದೆ: ಸಅದ್'ರೇ, ತಮ್ಮ ಸಂಪತ್ತಿನಲ್ಲೂ ಕುಟುಂಬದಲ್ಲೂ ಅಲ್ಲಾಹನು ನಿಮಗೆ ಬರ್ಕತನ್ನು ವರ್ಷಿಸಲಿ. ನನಗೆ ಇಲ್ಲಿಯ ಮಾರುಕಟ್ಟೆಯನ್ನೊಮ್ಮೆ ಪರಿಚಯಿಸಿ ಕೊಟ್ಟರೆ ಸಾಕು, ನಾನು ವ್ಯಾಪಾರ ಮಾಡಿ ಜೀವಿಸುವೇನು. 
[ಬುಖಾರಿ]

ಸುರಕ್ಷಿತ ಕೋಶ


ಅಲ್ಲಾಹನ ಸಂದೇಶವಾಹಕರಾದ ಮುಹಮ್ಮದ್ [ಸ] ಹೇಳಿದರು, "ಅಲ್ಲಾಹನು ಸೃಷ್ಟಿಯ ಯೋಚಿತ ಲಯವನ್ನು (ಪ್ರಮಾಣಬದ್ದವಾಗಿ) ಭೂಮ್ಯಾಕಾಶಗಳನ್ನು ಸೃಷ್ಟಿಸುವುದಕ್ಕಿಂತಲೂ ಐವತ್ತು ಸಾವಿರ ವರ್ಷಗಳ ಮುಂಚೆಯೇ ಬೆರೆದಿಟ್ಟಿದ್ದಾನೆ. 
[ಸಹೀಹ್ ಮುಸ್ಲಿಮ್]

Sunday, April 27, 2014

ಅಲ್ಲಾಹನು ಅವರಿಗೆ ಮನಃಶಾಂತಿಯನ್ನು ಇಳಿಸಿಕೊಟ್ಟನು


ಪ್ರವಾದಿ [ಸ]ರವರ ಮತ್ತು ಅಬೂಬಕರ್ [ರ]ರವರ ಅಡಗಿ ಕುಳಿತಿರುವ ಗುಹೆಯ ದ್ವಾರದ ಬಳಿಗೆ ತಲುಪಿದರು. ಆಗ ಅಬೂಬಕರ್ [ರ]ರವರು ಹೇಳಿದರು: ಇದೋ ಶತ್ರುಗಳು ನಮ್ಮ ಮುಂದಿದ್ದಾರೆ. ಅವರೊಮ್ಮೆ ಬಗ್ಗಿ ನೋಡಿದರೆ ನಾವು ಹಿಡಿಯಲ್ಪಡುವೆವು. ಆಗ ಪ್ರವಾದಿ [ಸ]ರವರು ಹೇಳಿದರು: "ಅಬೂಬಕರ್ [ರ]ರವರೇ, ಶಾಂತರಾಗಿರಿ. ನೀವು ದುಃಖಿಸದಿರಿ, ಅಲ್ಲಾಹನು ನಮೊಂದಿಗಿದ್ದಾನೆ. ಆಗ ಅಬೂಬಕರ್ [ರ], ಪ್ರವಾದಿಯವರೇ ನನ್ನ ವಿಷಯದಲ್ಲಿ ಯೋಚಿಸಲಿಲ್ಲ ನಾನು ದುಃಖಕ್ಕೀಡಾಗಿರುವುದು. ಬದಲಾಗಿ ತಮಗೇನಾದರೂ ಸಂಭವಿಸುವುದೋ ಎಂದು ಯೋಚಿಸುತ್ತಾ ನಾನು ದುಃಖಿಸುತ್ತಿದ್ದೇನೆ ಎಂದರು. ನೋಡಿರಿ, ಆ ಸ್ನೇಹಿತನ ಉನ್ನತಿ ಪ್ರಸ್ತುತಃ ಘಟನೆಯನ್ನು ಅಲ್ಲಾಹನು ಈ ರೀತಿ ಜಗತ್ತಿನ ಮುಂದೆ ಅನಾವರಣ ಗೊಳಿಸಿದನು.

ನೀವು ಅವರಿಗೆ (ದೇವದೂತರಿಗೆ) ನೆರವಾಗದಿದ್ದರೆ, (ನಿಮಗೆ ತಿಳಿದಿರಲಿ,) ಧಿಕ್ಕಾರಿಗಳು ಅವರನ್ನು (ನಾಡಿನಿಂದ) ಹೊರಹಾಕಿದಾಗ ಅಲ್ಲಾಹನು ಅವರಿಗೆ ನೆರವಾಗಿರುವನು. (ಅಂದು) ಅವರು (ದೂತರು) ಇಬ್ಬರಲ್ಲಿ ಎರಡನೆಯವರಾಗಿದ್ದರು. ಅವರಿಬ್ಬರೂ ಗುಹೆಯಲ್ಲಿದ್ದಾಗ, ಅವರು (ದೂತರು) ತಮ್ಮ ಸಂಗಾತಿಯೊಡನೆ, ‘‘ಅಂಜಬೇಡ, ಖಂಡಿತವಾಗಿಯೂ ಅಲ್ಲಾಹನು ನಮ್ಮ ಜೊತೆಗಿದ್ದಾನೆ.’’ಎಂದಿದ್ದರು. ಕೊನೆಗೆ ಅಲ್ಲಾಹನು ಅವರಿಗೆ ಮನಃಶಾಂತಿಯನ್ನು ಇಳಿಸಿಕೊಟ್ಟನು ಮತ್ತು ನಿಮಗೆ ಕಾಣಿಸದ ಪಡೆಗಳ ಮೂಲಕ ಅವರಿಗೆ ಬಲ ಒದಗಿಸಿದನು. ಅಲ್ಲದೆ ಅವನು ಧಿಕ್ಕಾರಿಗಳ ಮಾತನ್ನು ಸೋಲಿಸಿದನು, ಅಲ್ಲಾಹನ ಮಾತೇ ಮೇಲಾಯಿತು. ಅಲ್ಲಾಹನು ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ. 
[ಕುರಾನ್, 9: 40]

ವಿವಾಹವಾಗಲು ಪ್ರೋತ್ಸಾಹ


ಪ್ರವಾದಿಯವರು [ಸ] ಹೇಳಿದ್ದಾರೆ, "ನೀವು ವಿವಾಹವಾಗಿರಿ. ಯಾಕೆಂದರೆ ಅದು ಕಣ್ಣುಗಳನ್ನು ಕೆಟ್ಟ ದೃಷ್ಟಿಯಿಂದ ತಡೆಯುತ್ತದೆ ಮತ್ತು ಗುಪ್ತಾಂಗಗಳನ್ನು ರಕ್ಷಿಸುವ ಉತ್ತಮ ವಿಧಾನವಾಗಿದೆ ಮತ್ತು ನಿಮ್ಮಲ್ಲಿ ಯಾರಿಗೆ ವಿವಾಹ ವಾಗಲು ಸಾಧ್ಯವಿಲ್ಲವೋ ಅವರು ಉಪವಾಸ ಹಿಡಿಯಿರಿ. ಯಾಕೆಂದರೆ ಉಪವಾಸದಿಂದ ಕಾಮನೆಗಳಿಗೆ ಉಪಶಮನವಿದೆ. 
[ಬುಖಾರಿ]  

Saturday, April 26, 2014

ಲಂಚದ ಕುರಿತು ಪ್ರವಾದಿ [ಸ]ರವರ ಅಬಿಪ್ರಾಯ


ಪ್ರವಾದಿವರ್ಯ [ಸ]ರು ಲಂಚ ಕೊಡುವ ಮತ್ತ ಲಂಚ ಪಡೆಯುವವರನ್ನು ಶಪಿಸಿರುವರು. 
[ಹದೀಸ್]

Friday, April 25, 2014

ಕಠಿಣವಾಗಿ ಪರೀಕ್ಷಿಸಲ್ಪಟ್ಟವರು ಪ್ರವಾದಿಗಳು


"ಜನರ ಪೈಕಿ ಅತ್ಯಂತ ಕಠಿಣವಾಗಿ ಪರೀಕ್ಷಿಸಲ್ಪಟ್ಟವರು ಪ್ರವಾದಿಗಳು. ನಂತರ ಮಾದರಿ ಪುರಷರು, ಅನಂತರ ಉತ್ತಮ ಜನರು. ಒಬ್ಬ ವ್ಯಕ್ತಿಯು ಅವನಲ್ಲಿರುವ ದೀನ್ [ಧಾರ್ಮಿಕತೆ]ಗನುಸಾರವಾಗಿ ಪರೀಕ್ಷಿಸಲ್ಪಡುವನು. ಅವನಲ್ಲಿ ದೀನ್ ದುರ್ಬಲವಾಗಿದ್ದರೆ ಅದೇ ಪ್ರಕಾರ ಪರೀಕ್ಷಿಸಲಾಗುತ್ತದೆ. ಇನ್ನು ಅವನಲ್ಲಿ ದೀನ್ ಸುದೃಢವಾಗಿದ್ದರೆ ಅದರಂತೆಯೇ ಅವನನ್ನು ಪರಿಕ್ಷಿಸಲಾಗುತ್ತದೆ." ಅವರು [ಸ] ಹೇಳಿದರು, "ಒಬ್ಬ ವ್ಯಕ್ತಿಯಲ್ಲಿ ಇಂತಹಾ ಪರೀಕ್ಷೆಗಳು ನಡೆಯುತ್ತಲೇ ಇರುತ್ತದೆ. ಎಲ್ಲಿಯವರೆಗೆಂದರೆ, ಯಾವುದೇ ಪಾಪಭಾರವಿಲ್ಲದ ಸ್ಥಿತಿಯಲ್ಲಿ ಅವನು ಭೂಮಿಯ ಮೇಲೆ ನಡೆದುಹೋಗುವನು. 
[ಸಹೀಹ್ ಅಲ್ ಜಾಮೀಈ]

ಅಲ್ಲಾಹನ ಸಾಮರ್ಥ್ಯ


ಒಂದು ವೇಳೆ ಅಲ್ಲಾಹನು ನಿಮಗೆ ಏನಾದರೂ ಹಾನಿಮಾಡ ಬಯಸಿದರೆ, ಅವನ ಹೊರತು ಬೇರೆ ಯಾರೂ ಅದನ್ನು ನಿವಾರಿಸಲಾರರು ಮತ್ತು ಅವನು ನಿಮಗೆ ಏನಾದರೂ ಹಿತವನ್ನು ಮಾಡಬಯಸಿದರೆ, ಅವನ ಔದಾರ್ಯವನ್ನು ತಡೆಯಲು ಯಾರಿಗೂ ಸಾಧ್ಯವಾಗದು. ಅವನು ತನ್ನ ದಾಸರ ಪೈಕಿ ತಾನಿಚ್ಛಿಸಿದವರಿಗೆ ಅದನ್ನು ತಲುಪಿಸುತ್ತಾನೆ. ಅವನು ತುಂಬಾ ಕ್ಷಮಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ. 
[ಕುರಾನ್, 10: 107]

ಸ್ವರ್ಗವಾಸಿ ಮತ್ತು ನರಕವಾಸಿಯ ಅನುಭವ ಕೇಳಿದಾಗ ಅವರ ಉತ್ತರ


ಅಲ್ಲಾಹನ ಸಂದೇಶವಾಹಕರು [ಸ] ಹೇಳಿದರು: "ಇಹಲೋಕದಲ್ಲಿ ಸುಖದಲ್ಲಿ ಹಾಗೂ ಅನಾಯಾಸಕರವಾದ ಜೀವನವನ್ನು ಜೀವಿಸಿದ್ದ ನರಕವಾಸಿಯೊಬ್ಬನನ್ನು ಪರಲೋಕದಲ್ಲಿ ಕೇವಲ (ಒಂದೇ) ಒಂದು ಬಾರಿ ನರಕದಲ್ಲೊಮ್ಮೆ ಅಲ್ಪವಾಗಿ ಇಳಿಸಲಾಗುವುದು. ನಂತರ ಆತನಲ್ಲಿ ಕೇಳಲ್ಪಡುವುದು. "ಓ ಆದಮನೆ ಪುತ್ರನೇ, (ಐಹಿಕ ಜೀವನದಲ್ಲಿ) ನೀನು ಯಾವಲಾದರೂ ನೆಮ್ಮದಿರುವೆಯಾ? ಆತನು ಉತ್ತರಿಸುವನು, "ಅಲ್ಲಾಹನಾಣೆ, ಇಲ್ಲ ನನ್ನ ಪ್ರಭು!" ನಂತರ ಇಹಲೋಕದಲ್ಲಿ ಬಹುಕಷ್ಟಯುತವಾದ ಜೀವನವನ್ನು ಜೀವಿಸಿದ್ದ ಸ್ವರ್ಗವಾಸಿಯೊಬ್ಬನನ್ನು ಪುನರುತ್ಥಾನ ದಿನದಂದು ಸ್ವರ್ಗದಲ್ಲೊಮ್ಮೆ ಅಲ್ಪವಾಗಿ ಇಳಿಸಲಾಗುವುದು. ನಂತರ ಆತನಲ್ಲಿ ಕೇಳಲ್ಪಡುವುದು. "ಓ ಆದಮನ ಪುತ್ರನೇ, (ಐಹಿಕ ಜೀವನದಲ್ಲಿ) ನೀನು ಯಾವುದಾದರೂ ವ್ಯಥೆ ಅಥವಾ ಸಂಕಟಗಳನ್ನು ಅನುಭವಿಸಿರುವೆಯಾ? ಆತನು ಉತ್ತರಿಸಲಿರುವನು, "ಅಲ್ಲಾಹನಾಣೆ! ನಾನು ಯಾವುದೇ ವ್ಯಥೆ ಅಥವಾ ಸಂಕಟಗಳನ್ನು ಅನುಭವಿಸಿಲ್ಲ. 
[ಸಹೀಹ್ ಮುಸ್ಲಿಮ್] 

ಸದಾ ನೆನಪಿಡು


ಕಷ್ಟ ಹಾಗೂ ಸುಖಗಳು ನಿನಗೊಂದು ಪರೀಕ್ಷೆಯಾಗಿದೆ.

ಅಲ್ಲಾಹನು ನಿನಗೆ ವಿಧಿಸಿದವುಗಳೆಲ್ಲವೂ; ಒಳಿತು ಅಥವಾ ಕೆಡುಕು,
ಯಾವುದೇ ಆದರೂ ನಿನಗೆ ಒಳಿತಾಗಿದೆ.

ನಿನ್ನೊಂದಿಗೆ ಸಂಭವಿಸಿರುವುದು ತಪ್ಪಿಹೋಗಲು (ಸಂಭವಿಸದಿರಲು)
ಸಾಧ್ಯವಿರಲಿಲ್ಲ, ಮತ್ತು ನಿನ್ನಿಂದ ತಪ್ಪಿ ಹೋದದ್ದು ನಿನಗೆ ಪಡೆಯಲೂ
ಸಾಧ್ಯವಿರಲಿಲ್ಲ.

ಸಬ್ರ್ (ಸಹನೆ) ನಿರ್ಬಂಧವಾಗಿದೆ.

ಅಲ್ಲಾಹನ ವಿಧಿಯೊಂದಿಗೆ ತಾಳ್ಮೆಯನ್ನು ವಹಿಸಿದವರಿಗೆ ಮಾತ್ರ
ಪ್ರತಿಫಲ ಲಭಿಸುವುದು.

ಗಾಬರಿಗೊಳ್ಳುವಿಕೆ ಮತ್ತು ಅಸಹನೆಯು ಅಲ್ಲಾಹನ ವಿಧಿಯನ್ನು
ತಡೆಯಲಾರದು.

ಶಕ್ವಾ (ಆಕ್ಷೇಪಣೆ) ಸಬ್ರ್ (ತಾಳ್ಮೆ)ಗೆ ವಿರುದ್ದವಾಗಿದೆ.

ನಿನ್ನನ್ನು ವಿಪತ್ತಿನಿಂದ ರಕ್ಷಿಸಬಲ್ಲವನು ಮತ್ತು ನಿನ್ನ ಕಷ್ಟಗಳನ್ನು 
ದೂರೀಕರಿಸಬಲ್ಲವನು ಅಲ್ಲಾಹನು ಮಾತ್ರ.

ಅಬ್ದುರ್ರಹ್ಮಾನ್ ಇಬ್ನ್ ಔಫ್ [ರ]


ಅಬ್ದುರ್ರಹ್ಮಾನ್ ಇಬ್ನ್ ಔಫ್ [ರ]ರವರು ತನ್ನನ್ನು ವಹಿಸಿ ಕೊಟ್ಟ ಸಅದ್ [ರ]ರವರ ಬಗ್ಗೆ ಹೇಳುವುದನ್ನು ಇಮಾಮ್ ಬುಖಾರಿ ಉಲ್ಲೇಖಿಸುವುದನ್ನು ನೋಡಿರಿ:
"ಸಅದ್ [ರ]ರವರು ನನ್ನಲ್ಲಿ ಹೇಳಿದರು: ಅಬ್ದುರ್ರಹ್ಮಾನ್ ನನ್ನ ಬಳಿ ತಂಬಾ ಸಂಪತ್ತಿದೆ, ಅದನ್ನು ನಾನು ಎರಡಾಗಿ ಭಾಗಿಸುತ್ತೇನೆ. ಇನ್ನು ಅದರ ಒಂದು ಪಾಲು ನಿಮ್ಮದಾಗಿರುತ್ತದೆ. ನನಗೆ ಎರಡು ಪತ್ನಿಯರಿದ್ದಾರೆ. ಅವರಿಬ್ಬರನ್ನು ನೋಡಿ ಅವರಿಂದ ನಿಮಗೆ ಇಷ್ಟವಿರುವವರನ್ನು ಆರಿಸಿರಿ. ಆಗಲೇ ನಾನು ಆಕೆಯನ್ನು ವಿವಾಹ ವಿಚ್ಚೆಧನ ನಡೆಸುತ್ತೇನೆ. ಇದ್ದಃ ಕಾಲಾನಂತರ ನೀವು ಆಕೆಯನ್ನು ವಿವಾಹವಾಗಿರಿ. ಆಗ ನಾನು ಹೇಳಿದೆ: ಸಅದ್'ರೇ, ತಮ್ಮ ಸಂಪತ್ತಿನಲ್ಲೂ ಕುಟುಂಬದಲ್ಲೂ ಅಲ್ಲಾಹನು ನಿಮಗೆ ಬರ್ಕತನ್ನು ವರ್ಷಿಸಲಿ. ನನಗೆ ಇಲ್ಲಿಯ ಮಾರುಕಟ್ಟೆಯನ್ನೊಮ್ಮೆ ಪರಿಚಯಿಸಿ ಕೊಟ್ಟರೆ ಸಾಕು, ನಾನು ವ್ಯಾಪಾರ ಮಾಡಿ ಜೀವಿಸುವೇನು. 
[ಬುಖಾರಿ]

ಅಲ್ಲಾಹನ ಪರೀಕ್ಷೆ


ಅಲೀ ಬಿನ್ ಅಬೀತಾಲಿಬ್ [ರ], ಇಬ್ನು ಅಬ್ಬಾಸ್ [ರ]ರವರಿಂದ ವರದಿ ಮಾಡುತ್ತಾರೆ, "ಅಲ್ಲಾಹನು ನಿಮ್ಮನ್ನು ಸಂಕಷ್ಟ ಮತ್ತು ಏಳಿಗೆ, ಅರೋಗ್ಯ ಮತ್ತು ರೋಗ, ಶ್ರೀಮಂತಿಕೆ ಮತ್ತು ಬಡತನ, ನ್ಯಾಯ ಮತ್ತು ಅನ್ಯಾಯ, ವಿಧೇಯತೆ ಮತ್ತು ಪಾಪ, ಮಾರ್ಗದರ್ಶನ ಮತ್ತು ದಾರಿಗೇಡುಗಳ ಮೂಲಕ ಪರೀಕ್ಷಿಸುತ್ತಾನೆ." 
[ತಫ್ಸೀರ್ ಇಬ್ನ್ ಕಸೀರ್]

ವಿಪತ್ತು ಆಶಿಸುವುದು ವಿಶ್ವಾಸಿಗೆ ಸಲ್ಲ


ಅಲ್ಲಾಹನು ಯಾರ ಮೇಲೂ ಅವರ ಸಾಮರ್ಥ್ಯಕ್ಕಿಂತ ಹೆಚ್ಚಿನ ಹೊರೆಯನ್ನು ಹೊರಿಸುವುದಿಲ್ಲ. ಪ್ರತಿಯೊಬ್ಬನಿಗೂ ಅವನು ಸಂಪಾದಿಸಿದ ಒಳಿತಿನ ಫಲವು ಸಿಗಲಿದೆ ಮತ್ತು ಅವನು ಗಳಿಸಿದ ಕೆಡುಕಿನ ಪ್ರತಿಫಲವೂ ಸಿಗಲಿದೆ. ‘‘ನಮ್ಮೊಡೆಯಾ, ನಾವು ಮರೆತರೆ ಅಥವಾ ನಮ್ಮಿಂದ ಪ್ರಮಾದವಾಗಿ ಬಿಟ್ಟರೆ ನಮ್ಮನ್ನು ದಂಡಿಸಬೇಡ. ನಮ್ಮೊಡೆಯಾ, ನಮಗಿಂತ ಹಿಂದಿನವರ ಮೇಲೆ ನೀನು ಹೊರಿಸಿದಂತಹ ಹೊರೆಗಳನ್ನು ನಮ್ಮ ಮೇಲೆ ಹೊರಿಸಬೇಡ. ನಮ್ಮೊಡೆಯಾ, ನಮಗೆ ಹೊರಲಾಗದ ಹೊರೆಗಳನ್ನೂ ನಮ್ಮ ಮೇಲೆ ಹೊರಿಸಬೇಡ ಮತ್ತು ನೀನು ನಮ್ಮನ್ನು ಮನ್ನಿಸು, ನಮ್ಮನ್ನು ಕ್ಷಮಿಸು ಮತ್ತು ನಮ್ಮ ಮೇಲೆ ಕರುಣೆ ತೋರು. ನೀನೇ ನಮ್ಮ ರಕ್ಷಕನು. ಧಿಕ್ಕಾರಿಗಳ ವಿರುದ್ಧ ನೀನು ನಮಗೆ ನೆರವಾಗು’’(ಎಂದು ಪ್ರಾರ್ಥಿಸಿರಿ). 
[ಕುರಾನ್, 2: 286]


ಆದುದರಿಂದ ವಿಶ್ವಾಸಿಯೊಬ್ಬ ಅಲ್ಲಾಹನ ಅಪಾರ ಕರುಣೆ ಹಾಗೂ ಕ್ಷಮಾಗುಣಗಳ ಅನುಕೂಲತೆಗಳನ್ನು ಉಪಯೋಗಿಸಿಕೊಳ್ಳಬೇಕಾಗಿದೆ. ಅನಸ್ [ರ] ವರದಿ ಮಾಡಿರುತ್ತಾರೆ, "ಪ್ರವಾದಿ [ಸ]ಯವರು ಒಮ್ಮೆ ಕೃಶಕಾಯ ಹಾಗೂ ದುರ್ಬಲರಾದ (ಸ್ಥೂಲಕಾಯದ) ವ್ಯಕ್ತಿಯೊಬ್ಬನನ್ನು ಸಂದರ್ಶಿಸಿದರು.
ಪ್ರವಾದಿ [ಸ] ಆ ವ್ಯಕ್ತಿಯೊಂದಿಗೆ ಕೇಳಿದರು, "ತಾವು ಅಲ್ಲಾಹನಲ್ಲಿ ಯಾವುದಾದರೂ ವಿಶಿಷ್ಟ ಪಾರ್ಥನೆಯನ್ನು ಮಾಡುತ್ತಿರುವಿರಾ"? (ಯಾಕೆಂದರೆ ನೀವು ಈ ರೀತಿ ದುರ್ಬಲರಾಗಿರುವಿರಿ). ಆಗ ಆ ವ್ಯಕ್ತಿ ಉತ್ತರಿಸಿದರು, "ಹೌದು, ನಾನು ಈ ರೀತಿ ಪ್ರಾರ್ಥಿಸುತ್ತಿದ್ದೇನೆ, "ಓ ಅಲ್ಲಾಹನೇ ನನಗಾಗಿ ಪರಲೋಕದಲ್ಲಿ ನೀನು ನಿಶ್ಚಯಿಸಿಟ್ಟ ಶಿಕ್ಷೆಗಳೇನಿವೆಯೋ ಅವಲ್ಲವನ್ನು ಇಹಲೋಕದಲ್ಲೇ ನೀಡಿಬಿಡು." ಇದನ್ನು ಆಲಿಸಿದ ಅಲ್ಲಾಹನ ಸಂದೇಶವಾಹಕರು [ಸ] ಹೇಳಿದರು, ಸರ್ವಸ್ತುತಿಗಳು ಅಲ್ಲಾಹನಿಗೆ! ನೀವು ಈ ರೀತಿ ಪ್ರಾರ್ಥಿಸುವಂತಿಲ್ಲ. ಬದಲಾಗಿ ಈ ರೀತಿ ಪ್ರಾರ್ಥಿಸಿರಿ: 
"ನಮ್ಮ ಪಾಲಕಪ್ರಭುವೇ, ನಮಗೆ ಇಹಲೋಕದಲ್ಲೂ, ಪರಲೋಕದಲ್ಲೂ ಒಳಿತನ್ನು ದಯಪಾಲಿಸು, ಮತ್ತು ನಮ್ಮನ್ನು ನರಕಾಗ್ನಿಯಿಂದ ರಕ್ಷಿಸು"
[ಕುರಾನ್, 2: 201]
ಪ್ರವಾದಿ [ಸ]ಯವರು ತದನಂತರ ಅಲ್ಲಾಹನಲ್ಲಿ ಆ ವ್ಯಕ್ತಿಯನ್ನು ಗುಣಪಡಿಸುವಂತೆ ಬೇಡಿಕೊಂಡರು ಮತ್ತು ಅಲ್ಲಾಹು ಅವರನ್ನು ಸ್ವಸ್ಥಪಡಿಸಿದನು." 
[ಸಹೀಹ್ ಮುಸ್ಲಿಮ್]

ತಾಳ್ಮೆಯಿಂದ ಜೀವಿಸುತ್ತಿದ್ದರು


ಪ್ರವಾದಿ [ಸ] ಹೇಳುತ್ತಾರೆ, "ಪ್ರವಾದಿಗಳು ಹಾಗೂ ಅವರ ನಂತರದ ಸ್ವಾತಿಕರು ಅತ್ಯಂತ ಹೆಚ್ಚಿ (ಸಂಕಷ್ಟಗಳ ಮೂಲಕ) ಪರೀಕ್ಷಿಸಲ್ಪಟ್ಟವರಾಗಿದ್ದರು. ನಿಶ್ಚಯವಾಗಿಯೂ, ಅವರಲ್ಲಿ ಕೆಲವರು ದಾರಿದ್ರ್ಯದ ಮೂಲಕ ಯಾವ ರೀತಿ ಪರೀಕ್ಷಿಸಲ್ಪಟ್ಟರೆಂದರೆ ಹರಕು ಬಟ್ಟೆಯ ವಸ್ತ್ರಗಳ ಹೊರತು ಧರಿಸಲು ಅವರಲ್ಲಿ ಬೇರೇನೂ ಇರಲಿಲ್ಲ. ಆದರೂ ನೀವು ನೆಮ್ಮದಿಯುತ ಜೀವನದಲ್ಲಿ ತೃಪ್ತಿಯನ್ನು ಹೊಂದುವ ರೀತಿಯಲ್ಲಿ ಅವರು ಸಂಕಷ್ಟಗಳ ವೇಳೆಗಳಲ್ಲೂ ತೃಪ್ತಿಯನ್ನು ಹೊಂದಿದ್ದರು. 
[ಅಸ್ಸಹೀಹ್]

ಅಲ್ಲಾಹನು ದಾಸನಿಗೆ ಕ್ಷೇಮವನ್ನು ಇಚ್ಚಿಸಿದರೆ


ಪ್ರವಾದಿ ಮುಹಮ್ಮದ್ [ಸ] ಹೇಳಿದರು, "ಅಲ್ಲಾಹನು ದಾಸನೊಬ್ಬನಿಗೆ ಕ್ಷೇಮವನ್ನು (ಒಳಿತನ್ನು) ಇಚ್ಚಿಸಿದರೆ ಅವನು ಆತನ ಶಿಕ್ಷೆಯನ್ನು ಇಹಲೋಕದಲ್ಲೇ ತ್ವರಿತವಾಗಿ ನೀಡುತ್ತಾನೆ. ಇನ್ನು ಅಲ್ಲಾಹು ತನ್ನ ದಾಸನೊಬ್ಬನೊಂದಿಗೆ (ಆತನ ಪಾಪಫಲವಾಗಿ) ಪ್ರತಿಕಾರವೆಸಗಲಿಚ್ಛಿಸಿದರೆ ಆತನ ಪಾಪಗಳ ಕುರಿತಾದ ತೀರ್ಪನ್ನು ಅಂತ್ಯದಿನಕ್ಕೆ ಮುಂದೂಡುತ್ತಾನೆ. 
[ಸಹೀಹ್ ಅಲ್ ಜಾಮಈ]

ಪಾಪ ಪರಿಹಾರ


ಪ್ರವಾದಿ [ಸ] ಈ ರೀತಿ ಹೇಳಿದರು, "ಯಾವುದೇ ಒತ್ತಡ ಅಥವಾ ಆಯಾಸ, ಯಾವುದೇ ತೊಂದರೆ ಅಥವಾ ಸಂಕಟ ಮುಸ್ಲಿಮನೊಬ್ಬನನ್ನು ಭಾಧಿಸದು, ಅಲ್ಲಾಹನು ಪಾಪವೊಂದನ್ನು ಪರಿಹಾರಾರ್ಥವಾಗಿ ಆತನಿಗೆ ಮನ್ನಿಸಿ ಕೊಡುವ ಹೊರತು. ಮುಲ್ಲೊಂದು ಆತನಿಗೆ ಚುಚ್ಚಿದರೂ ಕೂಡಾ." 
[ಬುಖಾರಿ, ಮುಸ್ಲಿಮ್]

ಇಹಲೋಕದ ಸಂಕಷ್ಟಗಳು


ಇಹಲೋಕದ ಸಂಕಷ್ಟಗಳು, ವಿಶ್ವಾಸಿಯೊಬ್ಬ ತನ್ನ ಪಾಪಗಳಿಂದ ಪರಲೋಕದಲ್ಲಿ ಪಡೆಯಲಿರುವ ಪ್ರಯಾಸಗಳನ್ನು ಕಡಿತಗೊಳಿಸುತ್ತದೆ. ಮತ್ತು ಪರಲೋಕದ ದುಸ್ಸಾಹ, ಸಹಿಸಲ ಸಾಧ್ಯವಾದ ಶಿಕ್ಷೆಗಳಿಂದ ಅವನನ್ನು ಪಾರು ಮಾಡುತ್ತದೆ.

ಅಲ್ಲಾಹನ ಸಂದೇಶವಾಹಕರು [ಸ] ಹೇಳಿದರು, "ವಿಶ್ವಾಸವಿಟ್ಟ ಪುರುಷರು ಹಾಗೂ ಸ್ತ್ರೀಯರ ಶರೀರ, ಕುಟುಂಬ ಮತ್ತು ಸೊತ್ತಿನ ಮೇಲೆ ವಿಪತ್ತುಗಳು ಭಾಧಿಸುವುದು ಮುಂದುವರಿಯಲಿದೆ. ಅವರು ಪಾಪಭಾರವಿಲ್ಲದೆ ಅಲ್ಲಾಹನನ್ನು ಭೇಟಿಯಾಗುವ ತನಕ." 
[ಅಸ್ಸಹೀಹ್: 280]

ಲೌಹುಲ್ ಮಹ್'ಫೂದ್


ಅಲ್ಲಾಹನ ಸಂದೇಶವಾಹಕರಾದ ಮುಹಮ್ಮದ್ [ಸ] ಹೇಳಿದರು, "ಅಲ್ಲಾಹನು ಸೃಷ್ಟಿಯ ಯೋಚಿತ ಲಯವನ್ನು (ಪ್ರಮಾಣಬದ್ದವಾಗಿ) ಭೂಮ್ಯಾಕಾಶಗಳನ್ನು ಸೃಷ್ಟಿಸುವುದಕ್ಕಿಂತಲೂ ಐವತ್ತು ಸಾವಿರ ವರ್ಷಗಳ ಮುಂಚೆಯೇ ಬೆರೆದಿಟ್ಟಿದ್ದಾನೆ. 
[ಸಹೀಹ್ ಮುಸ್ಲಿಮ್]

ಪ್ರವಾದಿ [ಸ]ರವರ ಪ್ರಿಯಪುತ್ರ ಇಬ್ರಾಹೀಮ್ ಮರಣದ ಘಟನೆ

ಪ್ರವಾದಿ [ಸ] ಮರಣಸನ್ನನಾಗಿದ್ದ ತನ್ನ ಪ್ರಿಯ ಪುತ್ರ ಇಬ್ರಾಹೀಮ್'ರ ಬಳಿಗೆ ಬಂದಾಗ ಅವರ ಕಣ್ಣುಗಳಿಂದ ಕಣ್ಣೇರುಗಳರಿಯುತ್ತಿತ್ತು. ಇದನ್ನು ಕಂಡು ಪ್ರಮುಖ ಸ್ವಹಾಬಿವರ್ಯರಾದ ಅಬ್ದುಲ್ ರಹ್ಮಾನ್ ಬಿನ್ ಔಫ್ [ರ]ರವರು ಪ್ರವಾದಿಯವರೊಂದಿಗೆ [ಸ] ಕೇಳಿದರು, "ಅಲ್ಲಾಹನ ಸಂದೇಶವಾಹಕರೇ! ನೀವೂ ಸಹ...? ಪ್ರವಾದಿವರ್ಯರು [ಸ] ಉತ್ತರಿಸಿದರು, "ಓ ಔಫನ ಪುತ್ರನೇ, ನಿಜವಾಗಿಯೂ ಇದು ಕಾರುಣ್ಯವಾಗಿದೆ". ಪ್ರವಾದಿ [ಸ] ಬಳಿಕ ಪುನಃ ಒಂದಿಷ್ಟು ಅತ್ತ ನಂತರ ಹೇಳಿದರು, "ಕಣ್ಣುಗಳು ಅಳುತ್ತಿವೆ, ಹೃದಯವು ದುಖಿಃಸುತ್ತದೆ, ಆದರೆ ನಮ್ಮ ಪಾಲಕಪ್ರಭುವು ಸಂತೃಪ್ತಿಪಡುವುದರ ಹೊರತು ಬೇರೆನನ್ನೂ ನಾನು ಹೇಳಲಾರೆ. ಓ ಇಬ್ರಾಹೀಮ್! ನಿನ್ನ ಅಗಲುವಿಕೆಯಿಂದ ನಿಜವಾಗಿಯೂ ನಾವು ದುಃಖಿತರಾಗಿದ್ದೇವೆ." 
[ಸಹೀಹ್ ಬುಖಾರಿ]

ಪ್ರವಾದಿ [ಸ]ರವರ ಕಣ್ಣೀರು


ಒಂದು ದಿನ ಪ್ರವಾದಿ [ಸ] ತನ್ನ ಕೆಲವು ಅನುಚರರೊಂದಿಗೆ ಸ್ವಹಾಬಿವರ್ಯರಾದ ಸಅದ್ ಬಿನ್ ಉಬಾದ [ರ]ರವರನ್ನು ಕಾಣಲು ತೆರಳಿದರು. ಸಅದ್ ಬಿನ್ ಉಬಾದ [ರ]ರವರನ್ನು ಕಂಡಾಗ ಪ್ರವಾದಿ [ಸ] ಅತ್ತುಬಿಟ್ಟರು. ಪ್ರವಾದಿಯವರ ಕಣ್ಣೀರನ್ನು ಕಂಡಾಗ ಸಂಗವಿದ್ದ ಅನುಚರರಿಂದಲೂ [ರ] ಅಳುವನ್ನು ತಡೆದುಕೊಳ್ಳಲಾಗಲಿಲ್ಲ. ಆಗ ಪ್ರವಾದಿ [ಸ] ಹೇಳಿದರು, "ನೀವು ಕೆಳುವಿರುತ್ತಿರಾ! ನಿಸ್ಸಂದೇಹವಾಗಿಯೂ ಕಣ್ಣೇರು ಹಾಗೂ ಹೃದಯದ ಬೇಗುದಿಯ ಕಾರಣಕ್ಕಾಗಿ ಶಿಕ್ಷಿಸನು, ಆದರೆ ಇದರ ಕಾರಣಕ್ಕಾಗಿ (ತನ್ನ ನಾಲಗೆಯತ್ತ ಬೊಟ್ಟು ಮಾಡುತ್ತಾ) ಶಿಕ್ಷಿಸುವನು. ಇಲ್ಲವೇ ಕರುಣೆ ತೋರುವನು. 
[ಸಹೀಹ್ ಅಲ್ ಬುಖಾರಿ]

ಯಹ್ ಕೂಬ್ [ಅ]ರವರು ಅಲ್ಲಾಹನ ಮೇಲಿಟ್ಟ ದೃಢವಿಶ್ವಾಸ


ಯಹ್ ಕೂಬ್ ಹೇಳಿದರು; ‘‘ನನ್ನ ಪುತ್ರರೇ, ನೀವೆಲ್ಲಾ ಒಂದೇ ಬಾಗಿಲಿಂದ ಪ್ರವೇಶೀಸಬೇಡಿ. ಪ್ರತ್ಯೇಕ ಬಾಗಿಲುಗಳಿಂದ ಪ್ರವೇಶಿಸಿರಿ. ಯಾವುದೇ ವಿಷಯದಲ್ಲಿ ನಿಮ್ಮನ್ನು ಅಲ್ಲಾಹನಿಂದ ರಕ್ಷಿಸಲು ಮಾತ್ರ ನನಗೆ ಸಾಧ್ಯವಿಲ್ಲ. ಅಧಿಕಾರವೆಲ್ಲವೂ ಅಲ್ಲಾಹನಿಗೇ ಸೇರಿದೆ. ನಾನು ಅವನಲ್ಲೇ ಭರವಸೆ ಇಟ್ಟಿದ್ದೇನೆ ಮತ್ತು ಭರವಸೆ ಇಡುವವರೆಲ್ಲರೂ ಅವನಲ್ಲೇ ಭರವಸೆ ಇಡಬೇಕು’’. 
[ಕುರಾನ್, 12: 67]

ಅಲ್ಲಾಹನ ವಿಧಿಗೆ ಸದಾ ಸಂತುಷ್ಟನಾಗಿರಬೇಕು


ಪ್ರವಾದಿ [ಸ] ಹೇಳಿದರು, "ಅವನಿಗೆ (ಸತ್ಯವಿಶ್ವಾಸಿಗೆ) ಅನುಕೂಲತೆಯೇನಾದರೂ ಒದಗಿದರೆ ಅವನು (ಅಲ್ಲಾಹನಿಗೆ) ಕೃತಜ್ಜತೆ ತೋರಿಸುತ್ತಾನೆ, ಇದು ಅವನಿಗೆ ಒಳಿತಾಗಿರುತ್ತದೆ. ಇನ್ನು ಅವನಿಗೆ ಸಂಕಷ್ಟಗಳೇನಾದರೂ ಭಾಧಿಸಿದರೆ ಅವನು ಸಹನೆ ವಹಿಸುತ್ತಾನೆ, ಇದು ಅವನಿಗೆ ಒಳಿತಾಗಿರುತ್ತದೆ. 
[ಸಹೀಹ್ ಮುಸ್ಲಿಮ್]

ಅಲ್ಲಾಹನ ನಿರ್ಣಾಯದಲ್ಲಿ ಸಂಪೂರ್ಣ ಭರವಸೆ


ಅಲ್ಲಾಹನ ಪ್ರವಾದಿ ಹೇಳಿದರು, "ನನ್ನಾತ್ಮ ಯಾರ ಕೈಯಲ್ಲಿದೆಯೋ ಅವನಾಣೆ, ಅಲ್ಲಾಹನು ಒಬ್ಬ ಸತ್ಯವಿಶ್ವಾಸಿಯ ಪಾಲಿಗೆ ಏನನ್ನು ವಿಧಿಸಿದರೂ ಅದು ಅವನಿಗೆ ಒಳಿತಾಗಿರುತ್ತದೆ. ಇದು (ಈ ಒಳಿತು) ಸತ್ಯವಿಶ್ವಾಸಿಗಳಿಗೆ ಹೊರತು ಇನ್ಯಾರಿಗೂ ದಕ್ಕದು." 
[ಸಹೀಹ್ ಮುಸ್ಲಿಮ್]

Thursday, April 24, 2014

ಅವಿಶ್ವಾಸಿಗಳು ನಿಶ್ಚಯವಾಗಿಯೂ ನಷ್ಟದಲ್ಲಿದ್ದಾರೆ

ನೀವು ಅಸ್ವಸ್ಥತೆಯಿಂದ ಬಳಲುತ್ತಿರುವಿರಾದರೆ ಅವರು ಸಹ ನಿಮ್ಮಂತೆಯೇ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ, ಮತ್ತು ನೀವು ಅಲ್ಲಾಹನಿಂದ ಯಾವುದರ ನಿರೀಕ್ಷೆಯಲ್ಲಿದ್ದಿರೋ (ಸ್ವರ್ಗ) ಅದರ ನಿರೀಕ್ಷೆ ಅವರಿಗಿಲ್ಲ" 
[ಕುರಾನ್, 4: 104]

ಇಹಲೋಕದ ಜೀವನ ಒಂದು ಪರೀಕ್ಷೆ


ಭಯ ಹಾಗೂ ಹಸಿವುಗಳ ಮೂಲಕ ಹಾಗೂ ಸೊತ್ತುಗಳ, ಜೀವಗಳ ಮತ್ತು ಬೆಳೆಗಳ ನಷ್ಟದ ಮೂಲಕ ನಾವು ನಿಮ್ಮನ್ನು ಖಂಡಿತ ಪರೀಕ್ಷಿಸಲಿದ್ದೇವೆ. ಸಹನಶೀಲರಿಗೆ ಶುಭವಾರ್ತೆ ನೀಡಿರಿ. ಅವರು ತಮಗೇನಾದರೂ ವಿಪತ್ತು ಎದುರಾದಾಗ ‘‘ನಾವು ಅಲ್ಲಾಹನಿಗೆ ಸೇರಿದವರು ಮತ್ತು ನಾವು ಅವನೆಡೆಗೇ ಮರಳಲಿಕ್ಕಿರುವವರು’’ ಎನ್ನುತ್ತಾರೆ. ಅವರೇ, ತಮ್ಮ ಒಡೆಯನ ಅನುಗ್ರಹ ಮತ್ತು ಕರುಣೆಗೆ ಪಾತ್ರರಾದವರು ಮತ್ತು ಅವರೇ ಸನ್ಮಾರ್ಗ ಪಡೆದವರು. 
[ಕುರಾನ್, 2: 155-157]

ಕಚೇರಿ ಕಾರ್ಯಾಲಯಗಳಲ್ಲಿ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಕುಳಿತು ಕೊಳ್ಳುವ ಶಿಷ್ಟಾಚಾರ


ಅಲ್ಲಾಹನ ಪ್ರವಾದಿ ಮುಹಮ್ಮದ್ [ಸ] ಹೇಳಿದರು: ಯಾರಾದರೂ ತಾನು ಕುಳಿತುಕೊಂಡಿದ್ದ ಸ್ಥಳದಿಂದ ಅನಿವಾರ್ಯ ಕಾರಣಗಳಿಗಾಗಿ ಎದ್ದು ಹೋಗಿ ನಂತರ ಆತ ತಿರುಗಿ ಬಂದರೆ ಆಗ ಆ ಸ್ಥಳದಲ್ಲಿ ಕುಳಿತು ಕೊಳ್ಳಲು ಹೆಚ್ಚು ಅರ್ಹನಾಗಿರುವ ವ್ಯಕ್ತಿ ಅವನೇ ಆಗಿರುತ್ತಾನೆ. 
[ಸಹೀಹ್ ಮುಸ್ಲಿಮ್]

Wednesday, April 23, 2014

ಅನ್ಸಾರುಗಳು ಸೌಹಾರ್ದತೆ


ಮುಹಾಜಿರ್ ಮತ್ತು ಅನ್ಸಾರುಗಳ ನಡುವೆ ಪರಸ್ಪರ ಶಕ್ತವಾದ ಸೌಹಾರ್ದತೆ ಮತ್ತು ಸಾಹೋದರ್ಯತೆಯನ್ನು ಪ್ರವಾದಿ [ಸ]ರವರು ಬೆಳೆಸಿದರು. ಅನ್ಸಾರುಗಳಿಂದ ಒಬ್ಬೊಬ್ಬರಿಗೆ ಮುಹಾಜಿರ್'ಗಳಾದ ಸಹೋದರರಿಂದ ಒಬ್ಬೊಬ್ಬರಂತೆ ವಹಿಸಿ ಕೊಟ್ಟರು. ಅಬ್ದುರ್ರಹ್ಮಾನ್ ಇಬ್ನ್ ಔಫ್ [ರ]ರವರು ತನ್ನನ್ನು ವಹಿಸಿ ಕೊಟ್ಟ ಸಅದ್ [ರ]ರವರ ಬಗ್ಗೆ ಹೇಳುವುದನ್ನು ಇಮಾಮ್ ಬುಖಾರಿ ಉಲ್ಲೇಖಿಸುವುದನ್ನು ನೋಡಿರಿ:

"ಸಅದ್ [ರ]ರವರು ನನ್ನಲ್ಲಿ ಹೇಳಿದರು: ಅಬ್ದುರ್ರಹ್ಮಾನ್ ನನ್ನ ಬಳಿ ತಂಬಾ ಸಂಪತ್ತಿದೆ, ಅದನ್ನು ನಾನು ಎರಡಾಗಿ ಭಾಗಿಸುತ್ತೇನೆ. ಇನ್ನು ಅದರ ಒಂದು ಪಾಲು ನಿಮ್ಮದಾಗಿರುತ್ತದೆ. ನನಗೆ ಎರಡು ಪತ್ನಿಯರಿದ್ದಾರೆ. ಅವರಿಬ್ಬರನ್ನು ನೋಡಿ ಅವರಿಂದ ನಿಮಗೆ ಇಷ್ಟವಿರುವವರನ್ನು ಆರಿಸಿರಿ. ಆಗಲೇ ನಾನು ಆಕೆಯನ್ನು ವಿವಾಹ ವಿಚ್ಚೆಧನ ನಡೆಸುತ್ತೇನೆ. ಇದ್ದಃ ಕಾಲಾನಂತರ ನೀವು ಆಕೆಯನ್ನು ವಿವಾಹವಾಗಿರಿ. ಆಗ ನಾನು ಹೇಳಿದೆ: ಸಅದ್'ರೇ, ತಮ್ಮ ಸಂಪತ್ತಿನಲ್ಲೂ ಕುಟುಂಬದಲ್ಲೂ ಅಲ್ಲಾಹನು ನಿಮಗೆ ಬರ್ಕತನ್ನು ವರ್ಷಿಸಲಿ. ನನಗೆ ಇಲ್ಲಿಯ ಮಾರುಕಟ್ಟೆಯನ್ನೊಮ್ಮೆ ಪರಿಚಯಿಸಿ ಕೊಟ್ಟರೆ ಸಾಕು, ನಾನು ವ್ಯಾಪಾರ ಮಾಡಿ ಜೀವಿಸುವೇನು. 
[ಬುಖಾರಿ]

ಧೌರ್ ಗುಹೆಯಲ್ಲಿ ಪ್ರವಾದಿ [ಸ]ರವರ ಅನುಭವಗಳು


ನೂರು ಒಂಟೆಯ ಅಭಿಲಾಷೆಯಿಂದ ಜನರು ವಿವಿಧ ದಿಕ್ಕುಗಳಲ್ಲಿ ಹುಡುಕಾಟ ತೊಡಗಿದರು. ಕೆಲವರು ಪ್ರವಾದಿ [ಸ]ರವರ ಮತ್ತು ಅಬೂಬಕರ್ [ರ]ರವರ ಅಡಗಿ ಕುಳಿತಿರುವ ಗುಹೆಯ ದ್ವಾರದ ಬಳಿಗೆ ತಲುಪಿದರು.

ಆಗ ಅಬೂಬಕರ್ [ರ]ರವರು ಹೇಳಿದರು: ಇದೋ ಶತ್ರುಗಳು ನಮ್ಮ ಮುಂದಿದ್ದಾರೆ. ಅವರೊಮ್ಮೆ ಬಗ್ಗಿ ನೋಡಿದರೆ ನಾವು ಹಿಡಿಯಲ್ಪಡುವೆವು. ಆಗ ಪ್ರವಾದಿ [ಸ]ರವರು ಹೇಳಿದರು: "ಅಬೂಬಕರ್ [ರ]ರವರೇ, ಶಾಂತರಾಗಿರಿ. ನೀವು ದುಃಖಿಸದಿರಿ, ಅಲ್ಲಾಹನು ನಮೊಂದಿಗಿದ್ದಾನೆ. ಆಗ ಅಬೂಬಕರ್ [ರ], ಪ್ರವಾದಿಯವರೇ ನನ್ನ ವಿಷಯದಲ್ಲಿ ಯೋಚಿಸಲಿಲ್ಲ ನಾನು ದುಃಖಕ್ಕೀಡಾಗಿರುವುದು. ಬದಲಾಗಿ ತಮಗೇನಾದರೂ ಸಂಭವಿಸುವುದೋ ಎಂದು ಯೋಚಿಸುತ್ತಾ ನಾನು ದುಃಖಿಸುತ್ತಿದ್ದೇನೆ ಎಂದರು. ನೋಡಿರಿ, ಆ ಸ್ನೇಹಿತನ ಉನ್ನತಿ ಪ್ರಸ್ತುತಃ ಘಟನೆಯನ್ನು ಅಲ್ಲಾಹನು ಈ ರೀತಿ ಜಗತ್ತಿನ ಮುಂದೆ ಅನಾವರಣ ಗೊಳಿಸಿದನು. ನೀವು ಅವರಿಗೆ (ದೇವದೂತರಿಗೆ) ನೆರವಾಗದಿದ್ದರೆ, (ನಿಮಗೆ ತಿಳಿದಿರಲಿ,) ಧಿಕ್ಕಾರಿಗಳು ಅವರನ್ನು (ನಾಡಿನಿಂದ) ಹೊರಹಾಕಿದಾಗ ಅಲ್ಲಾಹನು ಅವರಿಗೆ ನೆರವಾಗಿರುವನು. (ಅಂದು) ಅವರು (ದೂತರು) ಇಬ್ಬರಲ್ಲಿ ಎರಡನೆಯವರಾಗಿದ್ದರು. ಅವರಿಬ್ಬರೂ ಗುಹೆಯಲ್ಲಿದ್ದಾಗ, ಅವರು (ದೂತರು) ತಮ್ಮ ಸಂಗಾತಿಯೊಡನೆ, ‘‘ಅಂಜಬೇಡ, ಖಂಡಿತವಾಗಿಯೂ ಅಲ್ಲಾಹನು ನಮ್ಮ ಜೊತೆಗಿದ್ದಾನೆ.’’ಎಂದಿದ್ದರು. ಕೊನೆಗೆ ಅಲ್ಲಾಹನು ಅವರಿಗೆ ಮನಃಶಾಂತಿಯನ್ನು ಇಳಿಸಿಕೊಟ್ಟನು ಮತ್ತು ನಿಮಗೆ ಕಾಣಿಸದ ಪಡೆಗಳ ಮೂಲಕ ಅವರಿಗೆ ಬಲ ಒದಗಿಸಿದನು. ಅಲ್ಲದೆ ಅವನು ಧಿಕ್ಕಾರಿಗಳ ಮಾತನ್ನು ಸೋಲಿಸಿದನು, ಅಲ್ಲಾಹನ ಮಾತೇ ಮೇಲಾಯಿತು. ಅಲ್ಲಾಹನು ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ. 
[ಕುರಾನ್, 9: 40]

ಮೊದಲು ತಿರ್ಮಾನಿಸಿದಂತೆ ಅಬ್ದುಲ್ಲಾಹ್ ಮಕ್ಕಾದ ವಿವರಗಳನ್ನು ರಾತ್ರಿ ಹೊತ್ತು ಗುಹೆಗೆ ತಲುಪಿಸುತ್ತಿದ್ದರು. ಅಬ್ದುಲ್ಲಾಹ್ ರ ಕಾಲಿನ ಹೆಚ್ಚೆಗಳನ್ನು ಮರೆಮಾಚಲಿಕ್ಕಾಗಿ ಆಮೀರ್ ಇಬ್ನ್ ಫುಹೈರ ಆಡುಗಳನ್ನು ಆ ದಾರಿಯಾಗಿ ತಂದು ಗುಹೆಯೊಳಗೆ ಪ್ರವೇಶಿಸಿ ಪ್ರವಾದಿ [ಸ]ರವರಿಗೂ ಅಬೂ ಬಕ್ಕರ್ [ರ]ರವರಿಗೂ ಹಾಲನ್ನು ನೀಡುತ್ತಿದ್ದರು. ನಂತರ ಮೊದಲ ನಿಶ್ಚಯಿಸಿರುವುದಕ್ಕನುಸಾರ ದಾರಿ ತೋರಿಸಲು ಅಬ್ದುಲ್ಲಾಹ್ ಇಬ್ನ್ ಉರೈಖತ್ ಕೂಡಾ ತಲುಪಿದರು. ಹಾಗೆ ಮೂರು ದಿನದ ಗುಹಾ ವಾಸದ ಬಳಿಕ ಅವರು ಯಥ್ ರಿಬ್ [ಮದೀನಾ]ನ ಕಡೆಗೆ ಯಾತ್ರೆ ಹೊರಟರು.

ಇಸ್ಲಾಮ್ ಧರ್ಮ ಪರಿಪೂರ್ಣ ಗೊಂಡಿದೆ


ಇಂದು ನಾನು ನಿಮಗಾಗಿ ನಿಮ್ಮ ಧರ್ಮವನ್ನು ಪೂರ್ಣಗೊಳಿಸಿದ್ದೇನೆ ಮತ್ತು ನಿಮ್ಮ ಪಾಲಿಗೆ ನನ್ನ ಕೊಡುಗೆಯನ್ನು ಪೂರ್ತಿಗೊಳಿಸಿದ್ದೇನೆ. ಹಾಗೆಯೇ ನಿಮಗಾಗಿ ನಾನು, ಇಸ್ಲಾಮ್ ಧರ್ಮವನ್ನು ಮೆಚ್ಚಿದ್ದೇನೆ. 
[ಕುರಾನ್, 5: 3]

ಉತ್ತಮ ಮಾತು ಮತ್ತು ಚರ್ಯೆ


ಜಾಬೀರ್ [ರ]ರವರಿಂದ ವರದಿ: ಪ್ರವಾದಿ [ಸ]ರವರು ಜುಮುಆ ಖುತುಬದಲ್ಲಿ ಈ ರೀತಿಯಲ್ಲಿ ಹೇಳಿದರು: "ಇನ್ನು ನಾನು ಹೇಳೆಲೇ: ಮಾತುಗಳಲ್ಲಿ ಅತೀ ಉತ್ತಮವಾದುದು ಅಲ್ಲಾಹನ ಗ್ರಂಥವಾಗಿದೆ. ಚರ್ಯೆಗಳಲ್ಲಿ ಅತೀ ಉತ್ತಮವಾದು ಪ್ರವಾದಿ [ಸ]ರವರ ಚರ್ಯೆಯಾಗಿದೆ. ನೂತನ ನಿರ್ಮಿಸಲ್ಪಡುವ ಸರ್ವವೂ ಪಥಬ್ರಷ್ಟತೆಯಾಗಿದೆ." 
[ಮುಸ್ಲಿಮ್]

ವಯಸ್ಸು ವೃದ್ದಿಸಲು


ಪ್ರವಾದಿ [ಸ] ಹೇಳಿದರು "ವಯಸ್ಸು ವೃದ್ದಿಸಲಿಕ್ಕಾಗಿ ಪುಣ್ಯಕರ್ಮವನ್ನು ಅಧಿಕ ಗೊಳಿಸಿರಿ. 
[ತಿರ್ಮಿದಿ]

ಆಹಾರ ವಿಶಾಲತೆ ಬಯಸುವವರು


ಪ್ರವಾದಿ [ಸ] ಹೇಳಿದರು: ಆಹಾರ ವಿಶಾಲತೆ ಬಯಸುವವರು ಕುಟುಂಬ ಸಂಬಂಧವನ್ನು ಸಂಸ್ಥಾಪಿಸಿರಿ. 
[ಬುಖಾರಿ]

ಅಲ್ಲಾಹನು ಅವನಿಗಾಗಿ ಸ್ವರ್ಗದಲ್ಲಿ ಒಂದು ಭವನವನ್ನು ನಿರ್ಮಿಸುತ್ತಾನೆ


ಪ್ರವಾದಿ [ಸ] ಹೇಳಿದರು: ಯಾರು ಅಲ್ಲಾಹನಿಗಾಗಿ ಒಂದು ಭವನವನ್ನು [ಮಸೀದಿಯನ್ನು] ನಿರ್ಮಿಸುತ್ತಾನೋ, ಅಲ್ಲಾಹನು ಅವನಿಗಾಗಿ ಸ್ವರ್ಗದಲ್ಲಿ ಒಂದು ಭವನವನ್ನು ನಿರ್ಮಿಸುತ್ತಾನೆ. 
[ಬುಖಾರಿ, ಮುಸ್ಲಿಮ್]

ಹಸ್ಬುನಲ್ಲಾಹು ವನಿಅಮಲ್ ವಕೀಲ್


ಅಲ್ಲಾಹ್ ಒಬ್ಬನೇ ನಮಗೆ ಸಾಕು ಆತನೇ ಉತ್ತಮ ಕಾರ್ಯ ನಿರ್ವಾಹಕ

ಅಲ್ಲಾಹು ನಿಮಗೆ ಸಾಕು, ಮತ್ತು ನಿಮ್ಮನ್ನು ಹಿಂಬಾಲಿಸುವ ಸತ್ಯವಿಶ್ವಾಸಿಗಳಿಗೂ ಅವನೇ ಸಾಕು 
[ಕುರಾನ್, 5: 23]

ವಧು ದಕ್ಷಿಣೆ


ಪ್ರವಾದಿ [ಸ] ಹೇಳಿದರು: ಶರ್ತಗಳ ಪೈಕಿ ಪೂರೈಸಲು ಹೆಚ್ಚು ಅರ್ಹವಾದುದು ನೀವು ನಿಮ್ಮ ಪತ್ನಿಯರ ಮಾನದ ಒಡೆಯರಾಗುವಂತಹ ಶರ್ತವನ್ನು ಪೂರೈಸುವುದಾಗಿದೆ. (ಅರ್ಥಾತ್ ಮಹ್ರ್ ಪಾವತಿಸಬೇಕಾದ ಕಡ್ಡಾಯ. ಇದು ನಿಮ್ಮ ಮೇಲೆ ನಿಮ್ಮ ಪತ್ನಿಯರ ಸಾಲವಾಗಿದ್ದು ಅದನ್ನು ಸಂದಾಯ ಮಾಡಲೇಬೇಕಾಗಿದೆ. 
[ಬುಖಾರಿ, ಮುಸ್ಲಿಮ್]

ಪ್ರವಾದಿ [ಸ] ಹೇಳಿದರು: ಸಣ್ಣ ಪ್ರಮಾಣದ, ಸುಲಭದಲ್ಲಿ ಪಾವತಿ ಮಾಡಬಲ್ಲಂತಹ ಮಹ್ರ್ ಅತ್ಯತ್ತಮ ಮಹ್ರ್ ಆಗಿದೆ.

ಹ. ಉಮರ್ ಬಿನ್ ಖಾತ್ತಾಬ್ [ರ] ಹೇಳಿದರು: ಸ್ತ್ರೀಯರಿಗೆ ದುಬಾರಿ ಮಹ್ರ್ ನಿಶ್ಚಯಿಸಬೇಡಿರಿ. ಯಾಕೆಂದರೆ ಇದು ಇಹಲೋಕದಲ್ಲಿ ಗೌರವಾರ್ಹ ವಸ್ತುವಾಗಿರುತ್ತಿದ್ದರೆ ಹಾಗೂ ಅಲ್ಲಾಹನ ದೃಷ್ಟಿಯಲ್ಲಿ ಧರ್ಮನಿಷ್ಠಿಯ ಕಾರ್ಯವಾಗಿರುತ್ತದ್ದರೆ ಅದಕ್ಕೆ ಅತಿ ಹೆಚ್ಚು ಅರ್ಹರು ಪ್ರವಾದಿ [ಸ] ಆಗಿರುತ್ತಾರೆ. ಪ್ರವಾದಿ [ಸ] ೧೨ ಊಕಿಯ (೧೨೬ ತೊಲೆ ಬೆಳ್ಳಿಕ್ಕಿಂತ  ಹೆಚ್ಚು "ಮಹ್ರ್" ಕೊಟ್ಟು ವಿವಾಹ ಮಾಡಿದ್ದಾಗಲಿ ತಮ್ಮ ಪುತ್ರಿಯರ ಪೈಕಿ ಯಾರದಾದರೂ ವಿವಾಹ ಮಾಡಿದಾಗಲಿ ನನಗೆ ತಿಳಿದಿಲ್ಲ. 
[ಬುಖಾರಿ]

ಹೃದಯದ ಮೇಲೆ ಒಂದು ಕಪ್ಪು ಕಲೆ


ಪ್ರವಾದಿ [ಸ] ಹೇಳಿದರು: "ಓರ್ವ ವಿಶ್ವಾಸಿಯು ಪಾಪಗಳನ್ನು ಮಾಡಿದಾಗ ಅವನ ಹೃದಯದ ಮೇಲೆ ಒಂದು ಕಪ್ಪು ಕಲೆ ಗೋಚರಿಸುವುದು. ಆದರೆ ಆತನು ಪಶ್ಚಾತಾಪಪಟ್ಟು ಅಲ್ಲಾಹನಿಂದ ಕ್ಷಮೆಯಾಚಿಸಿದರೆ ಆತನ ಹೃದಯವು ಶುಭ್ರವಾಗಿ ಶೋಭಿಸುವುದು. ಹಾಗೆಯೇ ಆತನು ಪಾಪಗಳನ್ನು ಹೆಚ್ಚೆಚ್ಚು ಮಾಡುತ್ತಾ [ಕ್ಷಮೆ ಯಾಚಿಸಿದರೆ] ಹೋದರೆ ಆ ಕಲೆಯು ಹರಡುತ್ತಾ ಕೊನೆಗೆ ಆತನ ಸಂಪೂರ್ಣ ಹೃದಯವನ್ನು ಆವರಿಸುವುದು." 
ಇದುವೇ ಅಲ್ಲಾಹನು [ಕುರಾನಿನಲ್ಲಿ] ಪ್ರಸ್ತಾಪಿಸಿರುವ ತುಕ್ಕು ಆಗಿದೆ: "ಅವರು ಮಾಡಿದ ಕರ್ಮಗಳಿಂದ ಅವರ ಹೃದಯಗಳ ಮೇಲೆ ತುಕ್ಕು ಹಿಡಿದಿದೆ". (ವರದಿ: ಅಬೂ ಹುರೈರಾ) 
[ಅಹ್ಮದ್, ತಿರ್ಮಿದಿ]

ಕೈಗಳು ಮಾತನಾಡುವವು

ಇಂದು ನಾವು ಅವರ (ಧಿಕ್ಕಾರಿಗಳ) ಬಾಯಿಗಳಿಗೆ ಮುದ್ರೆ ಜಡಿದಿರುವೆವು. ನಮ್ಮೊಡನೆ ಅವರ ಕೈಗಳು ಮಾತನಾಡುವವು ಮತ್ತು ಅವರು ಏನೆಲ್ಲಾ ಮಾಡಿದ್ದರೆಂದು ಅವರ ಕಾಲುಗಳು ಸಾಕ್ಷಿ ಹೇಳುವವು. 
[ಕುರಾನ್, 36:  65]

ಸ್ತ್ರೀಯರ ಸ್ಥಾನಮಾನ - ಇಸ್ಲಾಮಿನಲ್ಲಿ


ಪ್ರವಾದಿ [ಸ] ಹೇಳಿದರು: ಹೆಣ್ಣು ಮಕ್ಕಳು ಸಾಕಿ ಸಲಹಿದರೆ, ವಿಧ್ಯೆ ಬುದ್ದಿ ಕಲಿಸಿ ಅವರೊಂದಿಗೆ ಕರುಣೆಯಿಂದ ವರ್ತಿಸಿ ವಿವಾಹ ಮಾಡಿಕೊಡುವವರಿಗೆ ಪ್ರವಾದಿ ಮುಹಮ್ಮದ್ [ಸ] ಸ್ವರ್ಗದ ಸುವಾರ್ತೆ ನೀಡಿರುವರು. 
[ಮಿಸ್ಕಾತ್]

ಪ್ರವಾದಿ [ಸ] ಹೇಳಿದರು: "ಪತ್ನಿಯರ ಜೊತೆಯಲ್ಲಿ ಉತ್ತಮವಾಗಿ ವರ್ತಿಸುವವರೇ ನಿಮ್ಮ ಪೈಕಿ ಅತ್ಯುತ್ತಮರು." 
[ಅಹ್ಮದ್, ತಿರ್ಮಿದಿ]

ಪ್ರವಾದಿ [ಸ] ಹೇಳಿದರು: "ತಾಯಿಯ ಪಾದದಡಿ ಸ್ವರ್ಗವಿದೆ." 
[ತಿರ್ಮಿದಿ]

ಕುರಾನ್ ನಲ್ಲಿ ಜೀವ-ಜಂತುಗಳು


ಇನ್ನು ನಿಮ್ಮೊಡೆಯನು, ಜೇನು ನೊಣಗಳಿಗೆ (ಹೀಗೆಂದು) ದಿವ್ಯ ಸಂದೇಶವನ್ನು ಕಳಿಸಿದನು; ‘‘ಕೆಲವು ಬೆಟ್ಟಗಳಲ್ಲೂ, ಮರಗಳಲ್ಲೂ ಅವರು (ಜನರು) ನಿರ್ಮಿಸುವ ಚಪ್ಪರಗಳಲ್ಲೂ ನೀನು ಮನೆ (ಗೂಡು)ಗಳನ್ನು ನಿರ್ಮಿಸು’’.

‘‘ತರುವಾಯ ನೀನು ಎಲ್ಲ ಬಗೆಯ ಫಲಗಳನ್ನು ತಿನ್ನು ಮತ್ತು ನಿನ್ನ ಒಡೆಯನು ಒದಗಿಸಿರುವ ಸುಗಮವಾದ ಹಾದಿಗಳಲ್ಲಿ ಚಲಿಸು.’’ ಅವುಗಳ ಹೊಟ್ಟೆಯಿಂದ ಒಂದು ಪಾನೀಯವು ಹೊರಡುತ್ತದೆ. ಅದು ವಿವಿಧ ಬಣ್ಣಗಳಲ್ಲಿರುತ್ತದೆ. ಅದರಲ್ಲಿ ಜನರಿಗೆ ಗುಣವಿದೆ. ಚಿಂತನೆ ನಡೆಸುವವರಿಗೆ ಇದರಲ್ಲಿ ಖಂಡಿತ ಪಾಠವಿದೆ. 
[ಕುರಾನ್, 16: 68-69]

Tuesday, April 22, 2014

ತಾಯಿಯ ಸೇವೆಯ ಮಹತ್ವ


ಪ್ರವಾದಿ ಮುಹಮ್ಮದ್ [ಸ] ಹೇಳಿದರು: "ತಾಯಿಯ ಪಾದದಡಿ ಸ್ವರ್ಗವಿದೆ."

"ಅವನ ತಾಯಿ ಬಹಳ ಕಷ್ಟಪಟ್ಟು ಅವನನ್ನು ಗರ್ಭದಲ್ಲಿರಿಸಿದಳು ಮತ್ತು ಕಷ್ಟಪಟ್ಟೇ ಅವನನ್ನು ಹೆತ್ತಳು" 
[ಕುರಾನ್, ಸೂರ ಅಲ್ ಕಾಫ್: 15] 

ಮತ್ತು ನಾವು ಮಾನವರಿಗೆ ಅವನ ಹೆತ್ತವರ ಕುರಿತು ಉಪದೇಶಿಸಿರುವೆವು. ಅವನ ತಾಯಿಯು ಬೆನ್ನು ಬೆನ್ನಿಗೆ ಸಂಕಷ್ಟಗಳನ್ನು ಸಹಿಸಿ ಅವನನ್ನು ತನ್ನ ಹೊಟ್ಟೆಯಲ್ಲಿ ಹೊತ್ತಿದ್ದಳು… 
[ಕುರಾನ್, 31: 14

ಮಾತಾಪಿತರಿಗಾಗಿ ಪ್ರಾರ್ಥನೆ: "ಓ ನನ್ನ ಪ್ರಭೂ, ಇವರು ಚಿಕ್ಕಂದಿನಲ್ಲಿ ದಯಾ ವಾತ್ಸಲ್ಯಗಳಿಂದ ನನ್ನನ್ನು ಸಾಕಿದಂತೆಯೇ ನೀನು ಅವರ ಮೇಲೆ ಕೃಪೆತೋರು." 
[ಕುರಾನ್, ಬನೀ ಇಸ್ರಾಯೀಲ್: 24]

ಸಂಘಟಿತ ನಮಾಝ್


ಪ್ರವಾದಿ [ಸ] ಹೇಳಿದರು: ಜನರಿಗೆ ಸಂಘಟಿತ ನಮಾಝ್'ನ ಪುಣ್ಯ ಫಲಗಳ ಬಗ್ಗೆ ತಿಳಿದರೆ ಅವರು ಸಹಸ್ರ ಅಡೆತಡೆಗಳಿದ್ದರೂ ಓಡೋಡಿ ಬರುವರು. ಸಂಘಟಿತ ನಮಾಝ್ ನ ಮೊದಲ ಪಂಕ್ತಿಯ ದೇವಚರರ [ಮಲಾಯಿಕ್] ಪಂಕ್ತಿಯಿದ್ದಂತೆ. ಒಬ್ಬಂಟಿಗನಾಗಿ ನಮಾಝ್ ಮಾಡುವುದಕ್ಕಿಂತ ಇಬ್ಬರ ಸಂಘಟಿತ ನಮಾಝ್ ಉತ್ತಮ. ಸಂಘಟಿತ ನಮಾಝ್ ನಲ್ಲಿ ಜನರು ಹೆಚ್ಚಿದಂತೆಯೇ ಅದು ಪ್ರಿಯವಾಗುತ್ತದೆ. 
[ಅಬೂ ದಾವೂದ್]

ದುರ್ಮಾರ್ಗದತ್ತ ಕರೆಯುವವನು


ಪ್ರವಾದಿ [ಸ] ಹೇಳಿದರು: ... ಯಾರು ಜನರನ್ನು ದುರ್ಮಾರ್ಗದತ್ತ ಕರೆಯುವನೋ ಅವನಿಗೆ ಅವನನ್ನು ಅನುಸರಿಸುವವರೆಲ್ಲದ ಪಾಪ ಬರೆಯಲ್ಪಡುವುದು. ಅದರಿಂದ ಅವರ ಪಾಪಗಳಲ್ಲೇನೂ ಕಡಿತವಾಗದು. [ವರದಿ: ಅಬೂ ಹುರೈರಾ] 
[ಬುಖಾರಿ, ಮುಸ್ಲಿಮ್]

ಸನ್ಮಾರ್ಗಕ್ಕೆ ಕರೆಯುವವನು


ಪ್ರವಾದಿ [ಸ] ಹೇಳಿದರು: ಯಾರು ಜನರನ್ನು ಸನ್ಮಾರ್ಗಕ್ಕೆ ಕರೆಯುವನೋ ಅವನಿಗೆ ಅವನನ್ನು ಅನುಸರಿಸುವವರೆಲ್ಲರ ಪುಣ್ಯ ಸಿಗುವುದು. ಅದರಿಂದ ಅವರ ಪುಣ್ಯದಲ್ಲೇನೂ ಕಡಿತವಾಗದು... 
[ಬುಖಾರಿ, ಮುಸ್ಲಿಮ್]  

ಕಿಯಾಮತ್ ದಿನದ ಮೊದಲ ಸವಾಲು?


ಪ್ರವಾದಿ [ಸ] ಹೇಳಿದರು: ನಿರ್ಣಾಯಕ ದಿನದಂದು ಪ್ರಪ್ರಥಮವಾಗಿ ನಮಾಝ್ ನ ಕುರಿತು ವಿಚಾರಣೆ ನಡೆಯುವುದು. ದಾಸನು ಅದರಲ್ಲಿ ವಿಜಯಿಯಾದರೆ ಉಳಿದ ಕರ್ಮಗಳಲ್ಲೂ ವಿಜಯಿ ಹೊಂದುವನು. ಅವನ ನಮಾಝ್ ಸರಿಯಾಗಿರದಿದ್ದರೆ ಇತರ ಎಲ್ಲ ಕರ್ಮಗಳೂ ಹಾಳಾಗುವುದು. 
[ತಬ್ರಾನೀ]  

ಮನುಷ್ಯನ ಅತಿಯಾದ ಆಸೆ



ಪ್ರವಾದಿ [ಸ] ಹೇಳಿದರು: ಮನುಷ್ಯನ ಬಳಿ ಎರಡು ಕಣೆವೆ ತುಂಬಾ ಸಂಪತ್ತಿದ್ದರೂ ಅವನು ಮೂರನೆಯದಕ್ಕಾಗಿ ಹಾತೊರೆಯುತ್ತಾನೆ. ಮನುಷ್ಯನ ಹೊಟ್ಟೆಯನ್ನು ಮಣ್ಣು ಮಾತ್ರ ತುಂಬಬಲ್ಲದು. ತನ್ನ ಕಡೆಗೆ ಮರಳುವವರ ಕಡೆಗೆ ಅಲ್ಲಾಹನು ಗಮನ ಹರಿಸುತ್ತಾನೆ. [ವರದಿ: ಇಬ್ನು ಅಬ್ಬಾಸ್] 
[ಬುಖಾರಿ]