Monday, October 24, 2016

ಸಾರ್ವತ್ರಿಕ ಕರುಣೆ 1

ಪ್ರವಾದಿವರ್ಯರು[ಸ] ಹೀಗೆ ಹೇಳಿರುವರು: "ಮನುಷ್ಯರ ಮೇಲೆ ಕರುಣೆ ತೋರದ ವ್ಯಕ್ತಿಯ ಮೇಲೆ ಅಲ್ಲಾಹನು ಕರುಣೆ ತೋರುವುದಿಲ್ಲ." (ಹ. ಜರೀರ್ ಬಿನ್ ಅಬ್ದುಲ್ಲಾ [ರ]) 
[ಬುಖಾರಿ]

ಸಾರ್ವತ್ರಿಕ ಕರುಣೆ


ಪ್ರವಾದಿ[ಸ] ಹೀಗೆ ಹೇಳಿರುವರು: "ಕರುಣೆ ತೋರದವನ ಮೇಲೆ ಕರುಣೆ ತೋರಿಸಲಾಗುವುದಿಲ್ಲ." (ಹ. ಅಬೂ ಹುರೈರಾ[ರ]) 
[ಬುಖಾರಿ]

Saturday, October 22, 2016

ಪ್ರವಾದಿ[ಸ]ರವರ ವ್ಯಕ್ತಿತ್ವ


ಪ್ರವಾದಿವರ್ಯರ[ಸ] ಮಾತು ಬಯ್ಗುಳ, ಅಶ್ಲೀಲತೆ, ದೂಷಣೆ ಮುಂತಾದುವುಗಳಿಂದೆಲ್ಲಾ ಪೂರ್ಣ ಮುಕ್ತವಾಗಿತ್ತು. ಯಾರ ಮೇಲಾದರೂ ಬಹಳ ಕೋಪ ಬಂದರೆ ಆತನಿಗೇನಾಗಿದೆ, ಆತನ ಹಣೆ ಮಣ್ಣಾಗಲಿ ಎನ್ನುತ್ತಿದ್ದರು. (ಹಝ್ರತ್ ಅನಸ್ [ರ]) 
[ಬುಖಾರಿ]

ಸವಿನುಡಿ


ನಾನು ಹ. ಆಯಿಶಾ[ರ] ಅವರೊಡನೆ ಅಲ್ಲಾಹನ ಸಂದೇಶವಾಹಕರ[ಸ] ಚಾರಿತ್ಯ್ರದ ಬಗ್ಗೆ ವಿಚಾರಿಸಿದಾಗ ಅವರು ಹೀಗೆಂದರು: "ಪ್ರವಾದಿವರ್ಯರು[ಸ] ಅಶ್ಲೀತ ಮಾತುಗಳನ್ನಾಡುವವರಾಗಿರಲಿಲ್ಲ. ಅವರು ಬಯ್ಯುವವರಾಗಿರಲಿಲ್ಲ. ಅವರು ಪೇಟೆಯಲ್ಲಿ ಅರಚಾಟ ನಡೆಸುತ್ತಿರಲಿಲ್ಲ ಮತ್ತು ಅವರೆಂದೂ ಕೆಡುಕಿಗೆ ಕೆಡುಕಿನಿಂದ ಉತ್ತರಿಸುತ್ತರಲಿಲ್ಲ. ಬದಲಾಗಿ ಅವರು ಕ್ಷಮಿಸುತ್ತಿದ್ದರು ಮತ್ತು (ಇತರರ ತಪ್ಪುಗಳನ್ನು) ನಿರ್ಲಕ್ಷಿಸುತ್ತಿದ್ದರು. (ಅಬೂ ಅಬ್ದುಲ್ಲಾಜದ್ಲೀ [ರ]) 
[ತಿರ್ಮಿದಿ]

ದೇವಾರಾಧನೆ


ಪ್ರವಾದಿವರ್ಯರು[ಸ] ಅತ್ಯಧಿಕವಾಗಿ ನಮಾಝ್ ನಿರ್ವಹಿಸುತ್ತಿದ್ದರು. ಎಷ್ಟೆಂದರೆ ಅವರ ಕಾಲುಗಳು ಬಾತು ಕೊಂಡವು.  "ತಮ್ಮ ಹಿಂದಿನ ಎಲ್ಲ ಪಾಪಗಳು ಕ್ಷಮಿಸಲ್ಪಟ್ಟಿದ್ದರೂ ತಾವು ಇಷ್ಟು ಕಷ್ಟಪಡುತ್ತಿರುವಿರೇಕೆ!" ಎಂದು ವಿಚಾರಿಸಿದಾಗ ಪ್ರವಾದಿವರ್ಯರು[ಸ] ಹೇಳಿದರು: "ನಾವು ಕೃತಜ್ಞ  ದಾಸನಾಗಬೇಡವೇ?" (ಹ. ಮುಗೀರಾ ಬಿನ್ ಶುಹ್‌ಬಃ [ರ]) 
[ಮುಸ್ಲಿಮ್]

ದಾನ / ಕ್ಷಮೆ / ವಿನಯ ಶೀಲತೆ

ಪ್ರವಾದಿವರ್ಯರು[ಸ] ಹೀಗೆ ಹೇಳಿರುವರು: "ದಾನವು ಸಂಪತ್ತನ್ನು ಕಡಿಮೆಗೊಳಿಸುವುದಿಲ್ಲ. ಕ್ಷಮಿಸುವ ನೀತಿಯನ್ನು ಅನುಸರಿಸುವ ದಾಸನ ಗೌರವವನ್ನು ಅಲ್ಲಾಹನು ವೃದ್ಧಿಸುತ್ತಾನೆ ಮತ್ತು ಅಲ್ಲಾಹನಿಗಾಗಿ ವಿನಯ ಶೀಲತೆಯನ್ನು ಅನುಸರಿಸುವ ವ್ಯಕ್ತಿಗೆ ಅಲ್ಲಾಹನು ಜೌನ್ನತ್ಯವನ್ನು ದಯಪಾಲಿಸುತ್ತಾನೆ." (ಹಝ್ರತ್ ಅಬೂ ಹುರೈರಾ [ರ]) 
[ಮುಸ್ಲಿಮ್]

ಪ್ರವಾದಿ[ಸ] ಜೌದಾರ್ಯ


ಒಮ್ಮೆ ಜನರು ಒಂದು ಆಡನ್ನು ದಿಬ್ಹ ಮಾಡಿದರು. ಪ್ರವಾದಿವರ್ಯರು[ಸ] "ಅದರಲ್ಲಿ ಏನೆಲ್ಲಾ ಉಳಿದಿದೆ?" ಎಂದು ಕೇಳಿದರು. "ಕೈಯ ಹೊರತು ಬೇರೇನೂ ಉಳಿದಿಲ್ಲ" ಎಂದು ನಾನು ಉತ್ತರಿಸಿದೆ. ಆಗ ಪ್ರವಾದಿವರ್ಯರು (ಸ) ಹೇಳಿದರು: "ಕೈಯ ಹೊರತು ಬೇರೆಲ್ಲವೂ ಉಳಿಯಿತು." (ಹಝ್ರತ್ ಆಯಿಶಾ(ರ)) 
[ತಿರ್ಮಿದಿ]

ಜೌದಾರ್ಯ

ಅಲ್ಲಾಹನ ಸಂದೇಶವಾಹಕರು[ಸ] ಎಲ್ಲರಿಗಿಂತ ಅಧಿಕ ದಾನಶೀಲರಾಗಿದ್ದರು. ಅವರನ್ನು ಜಿಬ್ರೀಲ್‌ರು(ಅ) ಭೇಟಿ ಮಾಡುತ್ತಿದ್ದ ರಮಝಾನ್ ತಿಂಗಳಲ್ಲಿ ಅವರ ದಾನಶೀಲತೆಯು ಇನ್ನಷ್ಟು ವೃದ್ಧಿಸುತ್ತಿತ್ತು. ರಮಝಾನ್ ತಿಂಗಳಲ್ಲಿ ಜಿಬ್ರೀಲ್‌ರು(ಅ) ಪ್ರತಿ ರಾತ್ರಿ ಅವರನ್ನು ಭೇಟಿಯಾಗುತ್ತಿದ್ದರು ಮತ್ತು ಅವರು ಜತೆಗೂಡಿ ಕುರ್‌ಆನ್ ಒದುತ್ತಿದ್ದರು. ಆ ದಿನಗಳಲ್ಲಿ ಅಲ್ಲಾಹನ ಸಂದೇಶವಾಹಕರ ದಾನಶೀಲತೆಯು ಬಿರುಗಾಳಿಗಿಂತ ತೀವ್ರವಾಗಿ ವೃದ್ಧಿಸುತ್ತಿತ್ತು. (ಹಝ್ರತ್ ಅಬ್ದುಲ್ಲಾ‌ಬಿನ್ ಅಬ್ಬಾಸ್(ರ)) 
[ಬುಖಾರಿ]

ಹೃದಯ ವೈಶಾಲ್ಯ

ಪ್ರವಾದಿ ಮುಹಮ್ಮದ್‌ರೊಡನೆ [ಸ] ಯಾವುದೇ ವಸ್ತುವನ್ನು ಕೇಳಲಾದಾಗ ಅವರು ಎಂದೂ ಕೊಡಲು ನಿರಾಕರಿಸಿದ್ದಿಲ್ಲ. (ಹ. ಜಾಬಿರ್ [ರ]) 
[ಬುಖಾರಿ]

ಸೇವಕನ ಸಾಕ್ಷ್ಯ



 

ನಾನು ಹ‌ತ್ತು ವರ್ಷ ಪ್ರವಾದಿ ಮುಹಮ್ಮದ್‌ರ[ಸ] ಸೇವಕನಾಗಿದ್ದೆ. ಅವರೆಂದೂ ನನಗೆ ಉಫ್ಎಂದು ಹೇಳಿದ್ದಿಲ್ಲ. ಯಾವುದೇ ಕಾರ್ಯದ ಕುರಿತು ಅದನ್ನೇಕೆ ಮಾಡಿದೆ ಎಂದಾಗಲಿ, ಮಾಡದಿದ್ದರೆ ಅದನ್ನೇಕೆ ಮಾಡಿಲ್ಲ ಎಂದಾಗಲಿ ಅವರು ಕೇಳಿದ್ದಿಲ್ಲ. (ಹಝ್ರತ್ ಅನಸ್ [ರ]) 
[ತಿರ್ಮಿದಿ]

ಲಜ್ಜೆ


ಪ್ರವಾದಿ[ಸ] ಒರ್ವ ಪರ್ದಾಧಾರಿ ಕನ್ಯೆಗಿಂತಲೂ ಹೆಚ್ಚು ಲಜ್ಜೆಯುಳ್ಳವರಾಗಿದ್ದರು. (ಅಬೂ ಸಈದ್ ಖುದ್ರೀ[ರ]) 
[ಬುಖಾರಿ]

ವ್ಯಕ್ತಿ ಪೂಜೆಯ ವಿರೋದಿ


ಪ್ರವಾದಿವರ್ಯರ[ಸ] ಸಂಗಾತಿಗಳ ದೃಷ್ಟಿಯಲ್ಲಿ ಪ್ರವಾದಿವರ್ಯರೇ [ಸ] ಜಗತ್ತಿನ ಅತ್ಯಂತ ಹೆಚ್ಚು ಪ್ರೀತಿಪಾತ್ರ ವ್ಯಕ್ತಿಯಾಗಿದ್ದರು. ಆದರೂ ಅವರು ಪ್ರವಾದಿವರ್ಯರನ್ನು[ಸ] ಕಂಡಾಗ ಎದ್ದು ನಿಲ್ಲುತ್ತಿರಲಿಲ್ಲ. ಏಕೆಂದರೆ ಅಂತಹ ಕ್ರಮವನ್ನು ಪ್ರವಾದಿವರ್ಯರು[ಸ] ಮೆಚ್ಚುವುದಿಲ್ಲ ಎಂಬುದು ಅವರಿಗೆ ತಿಳಿದಿತ್ತು. (ಹಝ್ರತ್ ಅನಸ್[ರ]) 
[ತಿರ್ಮಿದಿ]

ಪ್ರವಾದಿ[ಸ]ರವರ ಸರಳತೆ


ಪ್ರವಾದಿ ಮುಹಮ್ಮದ್[ಸ] ರೋಗಿಗಳ ಸಂದರ್ಶನಕ್ಕೆ ಹೋಗುತ್ತಿದ್ದರು. ಶವ ಸಂಶ್ಕಾರದಲ್ಲಿ ಪಾಲ್ಗೊಳ್ಳುತ್ತಿದ್ದರು. ಕತ್ತೆಯ ಮೇಲೆ ಸವಾರಿ ಮಾಡುತ್ತಿದ್ದರು. ಗುಲಾಮನ ಆಮಂತ್ರಣವನ್ನು ಸ್ವೀಕರಿಸುತ್ತಿದ್ದರು. (ಹಝ್ರತ್ ಅನಸ್ ಬಿನ್ ಮಾಲೀಕ್ [ರ]) 
[ತಿರ್ಮಿದಿ]

Sunday, October 9, 2016

ಜನಾಂಗವಾದ


ಪ್ರವಾದಿ[ಸ] ಹೀಗೆ ಹೇಳಿರುವರು: "ನಿಮ್ಮ ಅಜ್ಜಾನ ಕಾಲದ ಜಂಭವನ್ನು ಮತ್ತು ಪೂರ್ವಜರ ಬಗೆಗಿನ ದುರಭಿಮಾನವನ್ನು ಅಲ್ಲಾಹನು ಅಳಿಸಿ ಹಾಕಿರುವನು. ಮನುಷ್ಯನು ಒಂದೋ ದೇವಭಕ್ತ ಸತ್ಯವಿಶ್ವಾಸಿ ಯಾಗಿರುತ್ತಾನೆ. ಇಲ್ಲವೇ ದುಷ್ಟ ಧರ್ಮದ್ರೋಹಿಯಾಗಿರುತ್ತಾನೆ. ಎಲ್ಲ ಮನುಷ್ಯರೂ ಆದಮರ ಸಂತತಿಗಳು. ಆದಮರಾದರೋ ಮಣ್ಣಿನಿಂದ ಸೃಷ್ಟಿಸಲ್ಪಟ್ಟವರು." (ವರದಿ: ಹ. ಅಬೂ ಹುರೈರಾ [ರ]) 
[ತಿರ್ಮಿದಿ]

ಗೋರಿ ಪೂಜೆ


ಪ್ರವಾದಿ[ಸ] ಅವರು ಗೋರಿಯನ್ನು ಗಾರೆಯಿಂದ ಭದ್ರಪಡಿಸುವುದನ್ನು, ಅದರ ಮೇಲೆ ಕುಳಿತಿರುವುದನ್ನು ಮತ್ತು ಅದರ ಮೇಲೆ ಕಟ್ಟಡ ನಿರ್ಮಿಸುವುದನ್ನು ನಿಷೇಧಿಸಿರುವರು. (ವರದಿ: ಹಝ್ರತ್ ಜಾಬಿರ್ [ರ])
[ಮುಸ್ಲಿಮ್]

ಹಝ್ರತ್ ಅಲೀ [ರ] ನನ್ನನ್ನು ಕರೆದು ಹೀಗೆಂದರು: "ಪ್ರವಾದಿವರ್ಯರು [ಸ] ನನ್ನನ್ನು ಯಾವ ಕಾರ್ಯಕ್ಕಾಗಿ ಕಳುಹಿಸಿದ್ದರೋ ಅದೇ ಕಾರ್ಯಕ್ಕಾಗಿ ನಾನು ನಿಮ್ಮನ್ನು ಕಳುಹಿಸಲೇ? ಯಾವ ವಿಗ್ರಹವನ್ನೂ ಅಳಿಸದೆ ಮತ್ತು ಯಾವುದೇ ಎತ್ತರದ ಗೋರಿಯನ್ನು ನೆಲಸಮಗೊಳಿಸದೆ ಬಿಡಬೇಡಿ." (ಅಬೂ ಹಯ್ಯಾಜ್ ಅಸದೀ [ರ]) 
[ಮುಸ್ಲಿಮ್]

ಪ್ರವಾದಿ [ಸ] ಮರಣ ಶಯ್ಯೆಯಲ್ಲಿದ್ದಾಗ ಹೀಗೆ ಹೇಳಿರುವರು: "ಯಹೂದಿಗಳು ಮತ್ತು ಕ್ರೈಸ್ತರ ಮೇಲೆ ಅಲ್ಲಾಹನ ಶಾಪವಿರಲಿ. ಅವರು ತಮ್ಮ ಪ್ರವಾದಿಗಳ ಗೋರಿಗಳನ್ನು ಸಾಷ್ಟಾಂಗವೆರಗುವ ಸ್ಥಳಗಳಾಗಿ ಮಾಡಿಕೊಂಡಿರುವರು. (ಹಝ್ರತ್ ಆಯಿಶಾ [ರ])
[ಬುಖಾರಿ]

ಅಬೂ ಹುರೈರಾ(ರ) ರಿಂದ ವರದಿ: ಪ್ರವಾದಿ(ಸ.ಅ)ಹೇಳಿದರು: ನನ್ನ ಗೋರಿಯನ್ನು ಉತ್ಸವದ ಸ್ಥಳವನ್ನಾಗಿ ಮಾಡಬೇಡಿ. ಆದರೆ ನನ್ನ ಮೇಲೆ ಸ್ವಲಾತ್ ಹೇಳಿರಿ. ನೀವೆಲ್ಲಿದ್ದರೂ ನಿಮ್ಮ ಸ್ವಲಾತ್ ನನಗೆ ತಲುಪುವುದು.
[ಅಬೂ ದಾವೂದ್]

ಶಿರ್ಕ್ ವಿನಾಶಕಾರಿ


ಪ್ರವಾದಿ[ಸ] ಹೀಗೆ ಹೇಳಿರುವರು: "ಒಬ್ಬನು ಅಲ್ಲಾಹನ ಜೊತೆ ಯಾರನ್ನೂ ಭಾಗೀದಾರರಾಗಿ ಮಾಡಿರದ ಆ ಶ್ಥಿತಿಯಲ್ಲಿ ಅಲ್ಲಾಹನನ್ನು ಭೇಟಿಯಾದರೆ ಅವನು ಸ್ವರ್ಗವನ್ನು ಪ್ರವೇಶಿಸುವನು. ಒಬ್ಬನು ಅಲ್ಲಾಹನ ಜೊತೆ ಇತರ ಯಾರನ್ನಾದರೂ ಭಾಗೀದಾರರಾಗಿ ಮಾಡಿ ಆ ಸ್ಥಿತಿಯಲ್ಲಿ ಅಲ್ಲಾಹನನ್ನು ಭೇಟಿಯಾದರೆ ಅವನು ನರಕವನ್ನು ಪ್ರವೇಶಿಸುವನು. (ವರದಿ: ಹಝ್ರತ್ ಜಾಬಿರ್ ಬಿನ್ ಅಬ್ದುಲ್ಲಾ [ರ]) 
[ಮುಸ್ಲಿಮ್]

ಅತಿ ದೊಡ್ಡ ಪಾಪ 1


ಪ್ರವಾದಿ[ಸ] ಹೀಗೆ ಹೇಳಿರುವರು: "ಮಹಾ ಪಾಪಗಳ ಪೈಕಿ ಅತಿ ಪಾಪಗಳು ಹೀಗಿವೆ: ಅಲ್ಲಾಹನ ಜೊತೆ ಇತರರನ್ನು ಪಾಲುದಾರರಾಗಿ ಮಾಡುವುದು, ಹೆತ್ತವರೊಂದಿಗೆ ಕೆಟ್ಟದಾಗಿ ವರ್ತಿಸುವುದು ಮತ್ತು ಸುಳ್ಳು ಸಾಕ್ಷಿ ಹೇಳುವುದು. (ಹಝ್ರತ್ ಅಬೂ ಬಕ್ರಃ [ರ]) 
[ಬುಖಾರಿ]

ಅತಿ ದೊಡ್ಡ ಪಾಪ


ನಾನು ಪ್ರವಾದಿವರ್ಯರೊಡನೆ [ಸ] "ಅತಿ ದೊಡ್ದ ಪಾಪ ಯಾವುದು?" ಎಂದು ಪ್ರಶ್ನಿಸಿದೆ. ಅದಕ್ಕವರು "ನೀನು, ಸೃಷ್ಟಿಸಿದಂತಹ ಅಲ್ಲಾಹನಿಗೆ ಇತರರನ್ನು ಸರಿಸಮಾನರೆಂದು ಪರಿಗಣೆಸುವುದು" ಎಂದು ಉತ್ತರಿಸಿದರು. "ಆ ಬಳಿಕ ಯಾವುದು?" ಎಂದು ನಾನು ಪ್ರಶ್ನಿಸಿದೆ. ಅದಕ್ಕವರು "ನೀನು, ನಿನ್ನ ಆಹಾರದಲ್ಲಿ ಪಾಲುದರರಾಗುವರೆಂಬ ಭೀತಿಯಿಂದ ನಿನ್ನ ಮಕ್ಕಳನ್ನು ಕೊಲ್ಲುವುದು" ಎಂದು ಉತ್ತರಿಸಿದರು. "ಆ ಬಳಿಕ ಯಾವುದು?" ಎಂದು ಕೇಳಿದೆ. ಅದಕ್ಕತ್ತರವಾಗಿ ಅವರು "ನಿನ್ನ ನೆರೆಯವನ ಪತ್ನಿಯೊಂದಿಗೆ ವ್ಯಭಿಚಾರ ಮಾಡುವುದು" ಎಂದರು. (ವರದಿ: ಹಝ್ರತ್ ಅಬ್ದುಲ್ಲಾ [ರ]) 
[ಬುಖಾರಿ]

ಬದುಕು ಇರುವುದು ಮೋಜಿಗಲ್ಲ


ಪ್ರವಾದಿ[ಸ] ಹೀಗೆ ಹೇಳಿರುವರು: "ಲೋಕವು ಸತ್ಯವಿಶ್ವಾಸಿಯ ಪಾಲಿಗೆ ಸೆರೆಮನೆಯಾಗಿದೆ. ಸತ್ಯಧಿಕ್ಕಾರಿಯ ಪಾಲಿಗೆ ಸ್ವರ್ಗವಾಗಿದೆ." (ಹಝ್ರತ್ ಅಬೂ ಹುರೈರಾ [ರ]) 
[ಮುಸ್ಲಿಮ್]

ಪ್ರಯಾಣೆಕ


ಪ್ರವಾದಿ[ಸ] ನನ್ನ ಹೆಗಲ ಮೇಲೆ ಕೈಯಿಟ್ಟು ಹೀಗೆ ಹೇಳಿದರು: "ಲೋಕದಲ್ಲಿ ನೀವು ವಿದೇಶಿಯಂತೆ ಅಥವಾ ಒಬ್ಬ ಪ್ರಯಾಣೆಕನಂತೆ ಬದುಕಿರಿ" (ವರದಿ: ಹಝ್ರತ್ ಅಬ್ದುಲ್ಲಾ ಬಿನ್ ಉಮರ್ [ರ]) 
[ಬುಖಾರಿ]

Saturday, October 8, 2016

ನಗುವ ಸ್ಥಳವಲ್ಲ


ಪ್ರವಾದಿ [ಸ] ಹೀಗೆ ಹೇಳಿರುವರು: "ನಾನು ತಿಳಿದುಕೊಂಡಿರುವುದನ್ನು ನೀವು ತಿಳಿದುಕೊಂಡಿದ್ದರೆ ನೀವು ಕಡಿಮೆ ನಗುತ್ತಿದ್ದಿರಿ ಹೆಚ್ಚು ಅಳುತ್ತಿದ್ದಿರಿ." (ಹಝ್ರತ್ ಅಬೂ ಹುರೈರಾ [ರ]) 
[ಬುಖಾರಿ]

ಇಹಪರಲೋಕಗಳ ಹೋಲಿಕೆ


ಪ್ರವಾದಿ [ಸ] ಹೀಗೆ ಹೇಳಿರುವರು: "ಅಲ್ಲಾಹನಾಣೆ! ಪರಲೋಕಕ್ಕೆ ಹೋಲಿಸಿದರೆ ಈ ಲೋಕವು ಒಬ್ಬ ವ್ಯಕ್ತಿ ಸಮುದ್ರಕ್ಕೆ ಬೆರಳನ್ನು ಮುಳುಗಿಸಿ ಆ ಬಳಿಕ ಅದನ್ನು ಹೊರ ತೆಗೆದು ಅದಕ್ಕೆ ಎಷ್ಟು ನೀರು ತಗಲಿದೆ ಎಂದು ನೋಡುವಂತಿದೆ." 
[ಮುಸ್ಲಿಮ್]

ಲಂಚ


ಪ್ರವಾದಿವರ್ಯರು [ಸ] ಲಂಚ ಕೊಡುವವರನ್ನು ಮತ್ತು ಲಂಚ ಪಡೆಯುವವರನ್ನು ಶಪಿಸಿರುವರು. (ವರದಿ: ಅಬ್ದುಲ್ಲಾ ಬಿನ್ ಅಮ್ರ್ [ರ]) 
[ತಿರ್ಮಿದಿ]

ವಚನ ಭಂಗ


ಪ್ರವಾದಿ[ಸ] ಹೀಗೆ ಹೇಳಿರುವರು: "ವಚನ ಭಂಗ ಮಾಡುವ ಪ್ರತಿಯೊಬ್ಬನ ಬಳಿ ಪುನರುತ್ಥಾನ ದಿನ ಒಂದು ಧ್ವಜ ವಿರುವುದು. ಅವನ ವಚನ ಭಂಗದ ಪ್ರಮಾಣಕ್ಕನುಗುಣವಾಗಿ ಆ ಧ್ವಜವು ಎತ್ತರವಾಗಿರುವುದು. ತಿಳಿಯಿರಿ! ಜನತೆಗೆ ಕೊಟ್ಟ ವಚನವನ್ನು ಮುರಿದ ಆಡಳಿತಗಾರನಿಗಿಂತ ಕೆಟ್ಟ ವಚನ ಭಂಗ ಬೇರೆ ಯಾರದೂ ಇಲ್ಲ." (ಹ. ಅಬೂ ಸೈಈದ್ [ರ]) 
[ಮುಸ್ಲಿಮ್]

ಆಶ್ರಿತನ ಹತ್ಯೆ


ಪ್ರವಾದಿ [ಸ] ಹೀಗೆ ಹೇಳಿರುವರು: "ಯಾರಾದರೂ, ಒಪ್ಪಂದ ಮಾಡಿಕೊಂಡ ಮುಸ್ಲಿಮೇತರನ ಹತ್ಯೆ ಮಾಡಿದರೆ, ಅವನು ನಲ್ವತ್ತು ವರ್ಷ ಪ್ರಾಯಾಣದ ಹೋಗುಬೇಕಾದಷ್ಟು ದೂರವರೆಗೂ ಹಬ್ಬುವಂತಹ ಸ್ವರ್ಗದ ಪರಿಮಳವನ್ನು ಕೂಡ ಅನುಭವಿಸಲಾರನು. (ವರದಿ: ಅಬ್ದುಲ್ಲಾ ಬಿನ್ ಅಮ್ರ್ [ರ]) 
[ಬುಖಾರಿ]

ಮರ್ದಿತರ ಮೋರೆ


ಪ್ರವಾದಿ [ಸ] ಅವರು, ಹಝ್ರತ್  ಮುಆದ್‌ರನ್ನು[ರ] ಯಮನ್‌ನ ರಾಜ್ಯಪಾಲರಾಗಿ ನೇಮಿಸಿ ಕಳುಹಿಸಿದಾಗ ಅವರೊಡನೆ ಹೀಗೆಂದರು: "ಮರ್ದಿತರ ಮೋರೆಯಿಂದ ಸುರಕ್ಷಿತವಾಗಿರಿ. ಅವನು ಮತ್ತು ಅಲ್ಲಾಹನ ಮಧ್ಯೆ ಯಾವ ಅಡೆತಡೆಯೂ ಇರುವುದಿಲ್ಲ." (ಹಝ್ರತ್ ಇಬ್ನು ಅಬ್ಬಾಸ್[ರ]) 
[ಬುಖಾರಿ]

ದುಷ್ಟ ಆಡಳಿತಗಾರ


ಪ್ರವಾದಿ[ಸ] ಹೀಗೆ ಹೇಳಿರುವರು. "ಜನತೆಯನ್ನು ಮರ್ದಿಸುವವರೇ ಅತ್ಯಂತ ದುಷ್ಟ ಆಡಳಿತಗಾರರು." (ವರದಿ: ಆಯಿದ್ ಬಿನ್ ಅಮ್ರ್ [ರ]) 
[ಮುಸ್ಲಿಮ್]

Monday, October 3, 2016

ಜನರಲ್ಲಿ ಹೆಚ್ಚು ಶ್ರೇಷ್ಠನು?


ರಸೂಲ್ [ಸ]ರು ಹೇಳಿದರು: "ಅಲ್ಲಾಹನ ಬಳಿ ಜನರಲ್ಲಿ ಹೆಚ್ಚು ಶ್ರೇಷ್ಠನು (ಇತರರಿಗೆ) ಮೊದಲು ಸಲಾಮ್ ಹೇಳುವವನಾಗಿದ್ದಾನೆ. 
[ತಿರ್ಮಿದಿ]

ಸಲಾಮ್ ಹೇಳುವುದರ ಪ್ರತಿಫಲ


ಇಮ್ರಾನುಬ್ ಹುಸೈನ್'ರಿಂದ ವರದಿ: "ಒಬ್ಬರು ಪ್ರವಾದಿ [ಸ]ರ ಬಳಿ ಬಂದು ಅಸ್ಸಲಾಮು ಅಲೈಕುಮ್ (ನಿಮಗೆ ಶಾಂತಿಯಿರಲಿ) ಎಂದು ಹೇಳಿದಾಗ ಅವರು [ಸ]ಸಲಾಮನ್ನು ಹಿಂತಿರುಗಿಸಿದರು. ಬಳಿಕ ಕುಳಿತುಕೊಂಡು 'ಹತ್ತು' ಎಂದರು. ಇನ್ನೊಬ್ಬರು ಬಂದು 'ಅಸ್ಸಲಾಮು ಅಲೈಕುಮ್ ವ ರಹ್ಮತುಲ್ಲಾಹ್' (ನಿಮಗೆ ಶಾಂತಿ ಹಾಗೂ ಅಲ್ಲಾಹನ ಕರುಣೆಯುಂಟಾಗಲಿ) ಎಂದಾಗ ಅವರು [ಸ] ಪ್ರತಿ ಸಲಾಮ್ ಹೇಳಿ ಇಪ್ಪತ್ತು ಎಂದರು. ಬಳಿಕ ಮತ್ತೊಬ್ಬರು ಬಂದು ಅಸ್ಸಲಾಮು ಅಲೈಕುಮ್ ವ ರಹ್ಮತುಲ್ಲಾಹಿ ವ ಬರಕಾತುಹು' (ನಿಮಗೆ ಶಾಂತಿ, ಅಲ್ಲಾಹನ ಕರುಣೆ ಮತ್ತು ಅವನ ಅನುಗ್ರಹವುಂಟಾಗಲಿ) ಎಂದಾಗ ಅವರು [ಸ] ಪ್ರತಿ ಸಲಾಮ್ ಹೇಳಿ ಮೂವತ್ತು ಎಂದರು. 
[ತಿರ್ಮಿದಿ, ಬೈಹುಕಿ]

ಆಣೆ ಹಾಕುವುದು


ಆಣೆ ಹಾಕುದಾದದರೆ ಅಲ್ಲಾಹನ ಆಣೆ ಹಾಕಬೇಕು. ಅನ್ಯಥಾ ಮೌನವಾಗಿರಬೇಕು. (ವರದಿ: ಇಬ್ನು ಉಮರ್ [ರ]) 
[ಸಹೀಹ್ ಮುಸ್ಲಿಮ್]

ಭೂಮಿಯ ಅತ್ಯುತ್ತಮ ನೀರು?


ಈ ಭೂಮಿಯ ಅತ್ಯುತ್ತಮ ನೀರು ಝಂ ಝಂ ಆಗಿದೆ. 
[ತಬರಾನೀ]

ಪರೋಕ್ಷದ ಐದು ಕೀಲಿಕೈಗಳು


ಇಬ್ನು ಉಮರ್ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು: ಪರೋಕ್ಷದ ಐದು ಕೀಲಿಕೈಗಳಿವೆ. ಅದನ್ನು ಅಲ್ಲಾಹನ ಹೊರತು ಯಾರು ಬಲ್ಲವರಿಲ್ಲ.
1. ನಾಳೆ ಏನಾಗುವುದೆಂದು ಯಾರಿಗೂ ತಿಳಿಯದು.
2. ಗರ್ಭದೋಳಗೆ ಏನಿರುವುದು,
3. ನಾಳೆ ತಾನು ಮಾಡುವೆನು,
4. ಯಾವ ಭೂಭಾಗದಲ್ಲಿ ಮರಣ ಹೊಂದುವೆನು, ಮತ್ತು
5. ಮಳೆ ಯಾವಾಗ ಬರುವುದು ಎಂಬುದು ಯಾರಿಗೂ ತಿಳಿದಿರುವುದಿಲ್ಲ. 
[ಸಹೀಹ್ ಬುಖಾರಿ]

ಇಸ್ಲಾಮ್


ಇಸ್ಲಾಮ್ ಎಂಬ ಅರಬಿ ಪದದ ಅರ್ಥ ಶಾಂತಿ, ಸಮರ್ಪಣೆ ಎಂದಾಗಿದೆ. ಒಬ್ಬ ವ್ಯಕ್ತಿ ತನ್ನನ್ನು ತಾನೇ ಸೃಷ್ಟಿಕರ್ತನಿಗೆ ಸಮರ್ಪಿಸುವ ಮೂಲಕ ಪಡೆಯುವ ಮನಃಶಾಂತಿಯಾಗಿದೆ ಇಸ್ಲಾಮ್. 

ಮುಸ್ಲಿಮರು ಹಜರುಲ್ ಅಸ್ಪದ್‌ಗೆ ಆರಾಧನೆ ಮಾಡುವುದಿಲ್ಲ


ಉಮರ್ ಬಿನ್ ಖತಾಬ್(ರ) ಹೇಳಿಕೆ: ಪ್ರವಾದಿ ಯವರ ಅನುಯಾಯಿಯಾಗಿದ್ದ ಹಾಗೂ 2ನೇ ಖಲೀಫರಾಗಿದ್ದ ಉಮರ್ ಬಿನ್ ಖತಾಬ್, ಕಅಬಾದ ಕಪ್ಪು ಶಿಲೆ( ಹಜರುಲ್ ಅಸ್ಪದ್) ಬಗ್ಗೆ ಹೀಗೆ ಹೇಳಿರುವರು: "ನೀನು ಲಾಭವೂ, ನಷ್ಟವೂ ಮಾಡಲಾಗದ ಕೇವಲ ಒಂದು ಕಲ್ಲೆಂದು ನಾನು ಅರಿತಿರುವೆನು. ಪ್ರವಾದಿ(ಸ) ವರ್ಯರು ನಿನ್ನನ್ನು ಮುಟ್ಟುವುದನ್ನು (ಚುಂಬಿಸುವುದನ್ನು) ನೋಡಿರದಿದ್ದಲ್ಲಿ. ನಾನೂ ನಿನ್ನನ್ನು ಮುಟ್ಟುವುದೂ(ಚುಂಬಿಸುವುದು) ಮಾಡುತ್ತಿರಲಿಲ್ಲ." 
[ಬುಖಾರಿ]