ಅವರನ್ನು ಮತ್ತು ಅಲ್ಲಾಹುವಿನ ಹೊರತು ಅವರು ಆರಾಧಿಸುತ್ತಿರುವುದನ್ನು ಅವನು ಒಂದು ಗೂಡಿಸುವ ದಿನ! ತರುವಾಯ ಅವನು(ಆ ಆರಾಧ್ಯರೊಂದಿಗೆ) ಕೇಳುವನು: "ನನ್ನ ದಾಸರಾಗಿರುವ ಇವರನ್ನು ದಾರಿಗೆಡಿಸಿದವರು ನೀವೋ? ಅಥವಾ ಅವರೇ ಸ್ವತಃ ದಾರಿಗೆಟ್ಟರೋ?" ಆರಾಧ್ಯರು ಹೇಳುವರು: "ನೀನು ಪರಮ ಪಾವನನಾಗಿರುವೆ. ನಿನ್ನ ಹೊರತು ಅನ್ಯರನ್ನು ರಕ್ಷಕರನ್ನಾಗಿ ಮಾಡಿಕೊಳ್ಳುವುದು ನಮಗೆ ಯುಕ್ತವಲ್ಲ. ಆದರೆ ಅವರಿಗೆ ಮತ್ತು ಅವರ ಪೂರ್ವಿಕರಿಗೆ ನೀನು ಸುಖಾನುಕೂಲತೆಗಳನ್ನು ಒದಗಿಸಿದೆ. ಹೀಗೆ ಅವರು ಉಪದೇಶವನ್ನು ಮರೆತು ಬಿಟ್ಟರು ಮತ್ತು ಒಂದು ನಾಶ ಪೀಡಿತ ಜನತೆಯಾಗಿ ಮಾರ್ಪಟ್ಟರು".
[ಅಲ್-ಫುರ್ಕಾನ್:17-18]
No comments:
Post a Comment