Wednesday, June 13, 2018

ಈದುಲ್ ಫಿತರ್


ರಮದಾನ್ ಉಪವಾಸ ವ್ರತ ಕೊನೆಗೊಳ್ಳುವುದರೊಂದಿಗೆ ಈದುಲ್ ಫಿತರ್ ಆಚರಿಸಲ್ಪಡುತ್ತದೆ. ಈ ಹಬ್ಬಕ್ಕೆ ಉಪವಾಸದ ಹಬ್ಬವೆಂದೂ, ಪೆರ್ನಾಲ್ ಎಂದೂ ಹೇಳುತ್ತಾರೆ. ಅಂದು ಮುಂಜಾನೆ ನಮಾಝ್ ನಿರ್ವಹಿಸಲಾಗುವ ಸ್ಥಳಕ್ಕೆ ಹೊರಟು ನಮಾಝ್ ಆರಂಭಿಸುವ ವರೆಗೂ ತಕ್‌ಬೀರ್ ಹೇಳುವುದು ಪ್ರತ್ಯೇಕ ಸುನ್ನತ್ ಆಗಿದೆ. ತಕ್‌ಬೀರ್‌ನ ಹಲವು ರೂಪಗಳು ವರದಿಯಾಗಿದೆ. ಅದರಲ್ಲೊಂದು ಈ ರೀತಿ ಇದೆ.


ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್ ಲಾ ಇಲಾಹ ಇಲ್ಲಲ್ಲಾಹು ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್ ವಲಿಲ್ಲಾಹಿಲ್ ಹಮ್ದ್

ಮುಸ್ಲಿಮರು ಬಹಳ ಸಡಗರ ಸಂತೋಷಗಳಿಂದ ಆಚರಿಸಬೇಕಾದ ಹಬ್ಬವಾಗಿದೆ ಈದುಲ್ ಫಿತರ್. ಅಂದು ಮುಂಜಾನೆ ಕಿರಿಯರು, ಹಿರಿಯರು, ಗಂಡಸರು ಮಹಿಳೆಯರೆಲ್ಲರೂ ಸ್ನಾನ ಮಾಡಿ ಶುದ್ಧರಾಗಿ ಉತ್ತಮ ಬಟ್ಟೆ ಧರಿಸಿ ನಮಾಝ್ ಮಾಡುವ ಸ್ಥಳಕ್ಕೆ ತೆರಳಬೇಕು. ನಮಾಝ್ ಕಡ್ಡಾಯವಲ್ಲದ, ಅಶುದ್ದೆಯುಳ್ಳ ಮಹಿಳೆಯರು ಈ ಸಡಗರದಲ್ಲಿ ಪಾಲ್ಗೊಳ್ಳಬಹುದೆಂದು ಪ್ರವಾದಿ ಮುಹಮ್ಮದ್ [ಸ] ಹೇಳಿರುವರು. ಇಂತಹ ಮಹಿಳೆಯರು ನಮಾಝ್‌ನಲ್ಲಿ ಪಾಲ್ಗೊಳ್ಳದೆ ಖುತ್ಬಾ ಆಲಿಸುವುದು, ತಕ್ಬೀರ್, ದುಆ ಮೊದಲಾದ ಪುಣ್ಯ ಕರ್ಮಗಳಲ್ಲಿ ಪಾಲ್ಗೊಳ್ಳಬಹುದಾಗಿದೆ.

Monday, June 11, 2018

ಫಿತ್ರ್ ಝಕಾತ್


ಫಿತ್ರ್ ಝಕಾತ್ ರಮದಾನ್ ತಿಂಗಳ ಉಪವಾಸದೊಂದಿಗೆ ಸಂಬಂಧವಿರುವ ಝಕಾತ್ ಆಗಿದೆ. ರಮದಾನ್ ಕೊನೆಗೊಂಡು ಮರುದಿನ ಅಂದರೆ ಶವ್ವಾಲ್ ತಿಂಗಳ ಒಂದರಂದು ಈದುಲ್ ಪಿತ್ರ್ ಹಬ್ಬದಂದು ಎಲ್ಲರಿಗೂ ಆಹಾರ ದೊರಕಬೇಕು. ಅಂದು ಯಾರೂ ಉಪವಾಸವಿರಬಾರದು. ಈ ಝಕಾತನ್ನು ಇಸ್ಲಾಮ್ ಇದೇ ಮಹತ್ತರ ಉದ್ದೇಶದಿಮ್ದ ಕಡ್ಡಾಯಗೊಳಿಸಿದೆ. "ಫಿತ್ರ್ ಝಕಾತ್" ಉಪವಾಸಿಗನ ಉಪವಾಸದ ವ್ರತದಲ್ಲಿ ಬಂದಿರುವ ಕುಂದು ಕೊರತೆಗಳನ್ನು ನಿವಾರಿಸುತ್ತದೆ.

ಇದು ಸಂಪತ್ತಿನ ಝಕಾತ್ ಅಲ್ಲ. ಬದಲಿಗೆ ವೈಯುಕ್ತಿಕ ಝಕಾತ್ ಆಗಿದೆ. ಈ ಝಕಾತ್ ಗಂಡಸರು, ಮಹಿಳೆಯರು, ಮಕ್ಕಳು, ವಯಸ್ಸಾದವರು, ಸ್ವತಂತ್ರರು, ಗುಲಾಮರಾಗಿರುವವರು ಹೀಗೆ ಪ್ರತಿಯಬ್ಬರ ಮೇಲೂ ಕಡ್ಡಾಯವಾಗಿದೆ. ಅಂದರೆ ಪ್ರತಿಯೊಬ್ಬ ಮುಸ್ಲಿಮನ ಮೇಲೂ ಇದು ಕಡ್ಡಾಯವಾಗಿದೆ. ಪ್ರತಿಯೊಬ್ಬರಿಗೂ ಒಂದು ಸ್ವಾಹ್ ಎಂಬ ಲೆಕ್ಕಚಾರದಲ್ಲಿ (ನಮ್ಮೂರಿನ ತೂಕದಂತೆ ಎರಡುವರೆ ಕಿಲೋಗ್ರಾಂ) ಆಯಾ ಊರಿನ ಮುಖ್ಯ ಆಹಾರ ವಸ್ತುವನ್ನು ಝಕಾತ್ ಆಗಿ ನೀಡಬೇಕು.

ತನ್ನ ಹಾಗೂ ತಾನು ಖರ್ಚು ನೀಡಬೇಕಾದವರ ಹಬ್ಬದ ದಿನದ ಖರ್ಚು ವೆಚ್ಚವನ್ನು ಭರಿಸಲು ಶಕ್ತನಿರುವ ಪ್ರತಿಯೊಬ್ಬನೂ "ಫಿತ್ರ್ ಝಕಾತ್" ನೀಡಬೇಕು. ಮಕ್ಕಳ ಮತ್ತು ಇತರರ ಫಿತ್ರ್ ಝಕಾತನ್ನು ಅವರ ಪೋಷಕರು ನೀಡಬೇಕು. ಈದುಲ್ ಫಿತ್ರ್ ನಮಾಝಿನ ಮೊದಲೇ ಇದು ಕೊಟ್ಟು ಮುಗಿಸಿರಬೇಕು. ಈದುಲ್ ಫಿತ್ರ್‌ಗೆ ಕೆಲವು ದಿನಗಳ ಮೊದಲು ಕೊಡುವುದಕ್ಕೂ ಅನುಮತಿ ಇದೆ.

ಇಬ್ನ್ ಅಬ್ಬಾಸ್(ರ) ಹೇಳುತ್ತಾರೆ : ಯಾರಾದರೂ ಫಿತ್ರ್ ಝಕಾತನ್ನು ನಮಾಝ್‌ಗಿಂತ ಮೊದಲು ನೀಡಿದರೆ ಸ್ವೀಕಾರಾರ್ಹವಾದ ಝಕಾತ್ ಆಗುತ್ತದೆ. ನಮಾಝ್‌ನ ಬಳಿಕ ಕೊಟ್ಟರೆ ಅದು ಇತರ ದಾನಗಳಂತೆ ಒಂದು ದಾನ ಮಾತ್ರ ಆಗುತ್ತದೆ.
[ಸುನಾನ್ ಅಬೂ ದಾವೂದ್ ಸ್ವಹೀಹ್]

ವರದಿ ಹ. ಇಬ್ನು ಅಬ್ಬಾಸ್ [ರ] ಪ್ರವಾದಿ [ಸ], ಉಪವಾಸ ವ್ರತವನ್ನು ನಿರರ್ಥಕ ವಿಷಯಗಳು, ಅಸಭ್ಯ ಮತ್ತು ವ್ಯರ್ಥ ಮಾತುಗಳಿಂದ ಮುಕ್ತಗೊಳಿಸಲಿಕ್ಕಾಗಿ ಬಡವರಿಗೆ ಉಣೆಸುವ ಸಲುವಾಗಿ ಫಿತ್ರ್ ಝಾಕಾತನ್ನು ಕಡ್ಡಾಯಗೊಳಿಸಿರುತ್ತಾರೆ.
[ಅಬೂ ದಾವೂದ್]

ವರದಿ ಹ. ಇಬ್ನು ಉಮರ್ [ರ] ಪ್ರವಾದಿ [ಸ] ಮುಸ್ಲಿಮರ ಪೈಕಿ ಪ್ರತಿಯೊಬ್ಬ ಗುಲಾಮ, ಸ್ವತಂತ್ರ, ಸ್ತ್ರೀ, ಪುರುಷ, ಸಣ್ಣವ, ದೊಡ್ಡವನ ಮೇಲೆ ಫಿತ್ರ್ ಝಕಾತ್'ನ ರೂಪದಲ್ಲಿ ಒಂದು ಸಾಹ್ ಖರ್ಜೂರ ಅಥವಾ ಒಂದು ಸಾಹ್ ಜೋಳವನ್ನು ಕಡ್ಡಾಯಗೊಳಿಸಿರುವರು. ಫಿತರ್ ಝಾಕಾತನ್ನು ಜನರು ನಮಾಝ್'ಗೆ ಹೊರಡುವುದಕ್ಕೆ ಮುಂಚೆ ಪಾವತಿಸಬೇಕೆಂದು ಆದೇಶಿಸಿದ್ದಾರೆ.
[ಬುಖಾರಿ, ಮುಸ್ಲಿಮ್]

ಲೈಲತುಲ್ ಕದ್ರ್



ಲೈಲತುಲ್ ಕದ್ರ್ ಸಾವಿರ ತಿಂಗಳುಗಳಿಗಿಂತಲೂ ಶ್ರೇಷ್ಟವಾದ ರಾತ್ರಿಯಾಗಿದೆ ಎಂದು ಕುರ್‌ಆನ್ ಹೇಳುತ್ತದೆ. ಆ ಒಂದು ರಾತ್ರಿಯಲ್ಲಿ ಮಾಡುವ ಆರಾಧನೆಗಳು ಇತರ ಸಾವಿರ ತಿಂಗಳು ನಿರ್ವಹಿಸುವ ಆರಾಧನೆಗಳಿಗಿಂತಲೂ ಉತ್ತಮವಾಗಿದೆಯೆಂದೇ ಇದರರ್ಥ. ಆದರೆ, ರಮದಾನ್ ತಿಂಗಳ ಯಾವ ರಾತ್ರಿಯಲ್ಲಿ ಈ ಶ್ರೇಷ್ಟವಾಗ ಲೈಲತುಲ್ ಕದ್ರ್ ಬರುತ್ತದೆಯೆಂದು ನಿರ್ಧಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಪ್ರವಾದಿ [ಸ] ರಮಾದಾನ್ ತಿಂಗಳ ಕೊನೆಯ ಹತ್ತು ರಾತ್ರಿಗಳಲ್ಲಿ ಇತರ ರಾತ್ರಿಗಳಿಗಿಂತ ಅತೀ ಹೆಚ್ಚು ಆರಾಧನಾ ಕರ್ಮಗಳಲ್ಲಿ ನಿರತರಾಗುತ್ತಿದ್ದರು. ಹಾಗೇ ಮಾಡುವಂತೆ ಇತರರಿಗೂ ಪ್ರೇರಣೆ ನೀಡುತ್ತಿದ್ದರು. ಈ ಕೊನೆಯ ಹತ್ತು ದಿನಗಳ ಬೆಸ ಸಂಖ್ಯೆಯ ರಾತ್ರಿಗಳಲ್ಲಿ ಲೈಲತುಲ್ ಕದ್ರ್‌ನ್ನು ನಿರೀಕ್ಷಿಸಬಹುದೆಂದು ಪ್ರವಾದಿ [ಸ] ಹೇಳಿರುವರು.

1. ನಾವು ಇದ್ದನ್ನು (ಕುರ್'ಆನನ್ನು) ಪ್ರತಿಷ್ಠಿತ ರಾತ್ರಿಯಲಿ ಅವತಿರ್ಣ ಗೊಳಿಸಿರುವೆವು.
2. ಪ್ರತಿಷ್ಠಿತ ರಾತ್ರಿ ಎನೆಂದು ನಿಮಗೇನು ಗೊತ್ತು?
3. ಪ್ರತಿಷ್ಠಿತ ರಾತ್ರಿಯು ಸಾವಿರ ಮಾಸಗಳಿಗಿಂತಲೂ ಹೆಚ್ಚು ಶ್ರೇಷ್ಠವಾಗಿದೆ.
4. ದೇವಚರರು ಮತ್ತು 'ರೂಹ್' ಆ ರಾತ್ರಿ ತಮ್ಮ ಪ್ರಭುವಿನ ಅನುಜ್ಞೆಯಿಂದ ಪ್ರತಿಯೊಂದು ಆದೇಶದೊಂದಿಗೆ ಇಳಿಯುತ್ತಾರೆ.
5. ಆ ರಾತ್ರಿಯು ಅರುಣೋದಯದ ವರೆಗೂ ಸಾದ್ಯಂತ ಮಂಗಲಮಯವಾಗಿದೆ.
[ಕುರಾನ್: 97: 1-5]


ಅಲ್ಲಾಹನ ಪ್ರವಾದಿ [ಸ]ರವರು ಹೇಳಿದರು: ಲೈಲತುಲ್ ಖದ್ರ್'ನ್ನು ರಮದಾನಿನ ಕೊನೆಯ ಹತ್ತರಲ್ಲಿ ಅನ್ವೇಷಿಸಿರಿ
[ಸಹೀಹ್ ಬುಖಾರಿ]

ಅಬೂ ಹುರೈರಾರಿಂದ (ರ) ವರದಿ ಮಾಡುತ್ತಾರೆ: ಪ್ರವಾದಿ (ಸ) ಹೇಳುತ್ತಾರೆ: ಯಾರು ಲೈಲತುಲ್ ಕದ್ರ್'ನಂದು [ರಮಝಾನಿನ ಒಂದು ವಿಧಿ ನಿರ್ಣಾಯಕರಾತ್ರಿ) ಈಮಾನಿನೊಂದಿಗೆ ಪುಣ್ಯಫಲಾಪೇಕ್ಷೆಯಿಂದ (ನಮಾಝ್'ಗಾಗಿ) ನಿಲ್ಲುತ್ತಾನೋ ಅವನ ಗತ ಪಾಪಗಳೆಲ್ಲ ಕ್ಷಮಿಸಲ್ಪಡುವುದು.
[ಸಹೀಹ್ ಬುಖಾರಿ, ಅಧ್ಯಾಯ ಈಮಾನ್] 

Tuesday, May 15, 2018

ಜನರೊಂದಿಗೆ ಅನುಕಂಪ


ನಾವು ಪ್ರವಾದಿವರ್ಯರ [] ಸನ್ನಿದಿಯಲ್ಲಿ ಬೆಳಗ್ಗಿನ ನಮಯ ಕುಳಿತುಕೊಂಡಿದ್ದೆವು. ಅಷ್ಟರಲ್ಲಿ ಕೆಲವರು ಖಡ್ಗ ಹಿಡಿದುಕೊಂಡು ದಪ್ಪ ಕಂಬಳಿ ಹೊದ್ದುಕೊಂಡು ಬಂದರು. ಅವರ ಶರೀರದ ಹೆಚ್ಚಿನ ಭಾಗ ತೆರೆದಿತ್ತು. ಅವರಲ್ಲಿ ಹೆಚ್ಚಿನವರೆಲ್ಲರೂ ಮುದರ್ ಗೋತ್ರದವರಾಗಿದ್ದರು. ಅವರ ದಾರಿದ್ರ್ಯವನ್ನು ನೋಡಿ ಪ್ರವಾದಿವರ್ಯರ ಮುಖ ಬೇಸರದಿಂದ ಕಳೆಗುಂದಿತು. ತರುವಾಯ ಅವರು ಮನೆಗೆ ಹೋಗಿ ಹೊರ ಬಂದರು. ಬಿಲಾಲ್ರನ್ನು [] ಕರೆದು ಅದಾನೆ ಹೇಳುವಂತೆ ಆಜ್ಜಾಪಿಸಿದರು. (ನಮಾಝ್ ಸಮಯವಾಗಿತ್ತು) ಬಿಲಾಲ್ ಅದಾನ್ ಹೇಳಿದರು. ತರುವಾಯ ಇಕಾಮತ್ ಹೇಳಿದರು. ಪ್ರವಾದಿ [] ನಮಾಝ್ ಮಾಡಿಸಿದರು. ಸಮಾಝ್ ಬಳಿಕ ಉಪನ್ಯಾಸ ನೀಡುತ್ತಾ ಸೂರಃ ಅನ್ನಿಸಾದ ಮೊದಲ ಆಯತ್ ಪಠಿಸಿದರು. ಅನಂತರ ಹೀಗೆಂದರು - "ಜನರು ಅಲ್ಲಾಹನ ಮಾರ್ಗದಲ್ಲಿ ದಾನ ಧರ್ಮ ಮಾಡಬೇಕು." ಎಲ್ಲಿಯವರೆಗೆಂದರೆ ಪ್ರವಾದಿ [] ಹೇಳಿದರು - "ಒಬ್ಬನ ಬಳಿ ಅರ್ಥ ಖರ್ಜೂರವಿದ್ದರೆ ಅವನು ಅದನ್ನೇ ನೀಡಲಿ."
ಉಪನ್ಯಾಸ ಕೇಳೀದ ಬಳಿಕ ಒಬ್ಬನು ತನ್ನ ಕೈಯಲ್ಲಿ ಒಂದು ಚೀಲ ಹಿಡಿದು ಕೊಂಡು ಬಂದನು. ಅದು ಕೈಯಲ್ಲಿ ನಿಲ್ಲುತ್ತಿರಲಿಲ್ಲ. ತರುವಾಯ ಜನರು ಒಬ್ಬರ ನಂತರ ಒಬ್ಬರಂತೆ ದಾನ ನೀಡಲು ಆರಂಭಿಸಿದರು. ಎಲ್ಲಿಯವರೆಗೆಂದರೆ ನಾನು ಆಹಾರ ಮತ್ತು ವಸ್ತ್ರಗಳ ಎರಡು ರಾಶಿಗಳನ್ನು ನೋಡಿದೆ. ಜನರು ರೀತಿ ದಾನ ಮಾಡವುದನ್ನು ಕಂಡು ಪ್ರವಾದಿಯವರ [] ಮುಖ ಸ್ವರ್ಣ ಮಿಶ್ರಿತ ನೀರು ಚಿಮುಕಿಸಿದಂತೆ ಅರಳಿತು. ತರುವಾಯ ಪ್ರವಾದಿ [] ಹೇಳೀದರು - "ಯಾರು ಇಸ್ಲಾಮಿನಲ್ಲಿ ಯಾವುದಾದರೂ ಉತ್ತಮ ಸಂಪ್ರದಾಯವನ್ನು ಜಾರಿಗೆ ತಂದನೋ ಅವನಿಗೆ ಅದರ ಪುಣ್ಯ ಫಲ ಲಭಿಸುವುದು. ಯಾರು ಉತ್ತಮ ಸಂಪ್ರದಾಯದಂತೆ ಅನಂತರ ನಡೆಯುವರೋ ಅವರ ಪುಣ್ಯ ಫಲವೂ ಅವನಿಗೆ ಲಭಿಸುವುದು. ಆದರೆ ಅವರ ಪುಣ್ಯಫಲದಲ್ಲಿ ಏನೂ ಕಡಿತವಾಗದು. ಅದೇ ರೀತಿ ಯಾರು ಇಸ್ಲಾಮಿನಲ್ಲಿ ಯಾವುದಾದರೂ ಕೆಟ್ಟ ಸಂಪ್ರದಾಯವನ್ನು ಜಾರಿಗೊಳಿಸುತ್ತಾನೋ ಅದರ ಪಾಪ ಅವನ ಮೇಲಿರುವುದು. ಅನಂತರ ಯಾರು ಸಂಪ್ರದಾಯದಂತೆ ನಡೆಯುವರೋ ಅವರ ಪಾಪಗಳನ್ನೂ ಅವನ ಕರ್ಮಪತ್ರದಲ್ಲಿ ಬರೆಯಲಾಗುವುದು. ಆದರೆ ಅವರ ಪಾಪಗಳಲ್ಲಿ ಏನೂ ಕಡಿತವುಂಟಾಗದು. (ವರದಿ: ಜರೀರ್ ಬಿನ್ ಅಬ್ದುಲ್ಲಾ []) 
[ಮುಸ್ಲಿಮ್]

ಬೈತುಲ್ ಮಹ್‌ಮೂರ್


ಬೈತುಲ್ ಮಹ್ ಮೂರ್'ನ ಮೇಲಾಣೆ!
[ಕುರಾನ್, 52: 4]

1.ಇದು ಏಳನೆಯ ಆಕಾಶದಲ್ಲಿ ಇದೆ.
2. ಇದು ಭೂಮಿಯ ಕಹ್ಬಗೆ ಸಮಾನವಾಗಿದೆ.
3. ಇದಕ್ಕೆ ಪ್ರತಿ ದಿನ 7೦,೦೦೦ ಮಲಕ್'ಗಳು ಬಂದು ನಮಾಝ್ ಮಾಡುತ್ತಾರೆ ಅವರು ನಂತರ ಅದರ ಕಡೆಗೆ ಬರುವುದಿಲ್ಲ.

ಆಕಾಶದಲ್ಲಿರುವ ಮಕ್ಕಾದ ಕಅಬಾ ಭವನಕ್ಕೆ ನೇರ ಇರುವ ಮನೆ ಯಾಗಿದೆ, ಇದನ್ನು ಮಲಕ್'ಗಳು ಎಡೆಬಿಡದೆ ಬೇಟಿಕೊಡುತ್ತಿರುತ್ತಾರೆ.

ಜನ್ನಾತುಲ್ ಫಿರ್‌ದೌಸ್


ಖಂಡಿತವಾಗಿಯೂ ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರಿಗೆ ಅತಿಥಿ ಸತ್ಕಾರವಾಗಿ ಸ್ವರ್ಗೋದ್ಯಾನಗಳಿವೆ.
[ಕುರಾನ್,  18: 107]

ಉನ್ನತವಾದ ಸ್ವರ್ಗವನ್ನು ವಾರೀಸಾಗಿ ಪಡೆಯುವವರು. ಅವರು ಅದರಲ್ಲಿ ಶಾಶ್ವತವಾಗಿ ಸೃಷ್ಟಿಸಿದೆವು.
[ಕುರಾನ್, 23: 11]

ಸ್ವರ್ಗದಲ್ಲಿ ಮೂರು ಶ್ರೇಣಿಗಳಿವೆ. ಅಲ್ಲಾಹನು ಅದನ್ನು ಅವನ ಮಾರ್ಗದಲ್ಲಿ ಜಿಹಾದ್ ಮಾಡುವವರಿಗಾಗಿ ಸಿದ್ದಗೊಳಿಸಿರುತ್ತಾನೆ. ಪ್ರತಿಯೊಂದು ಶ್ರೇಣಿಯ ಮಧ್ಯೆ ಎಷ್ಟು ಅಂತರವಿರುವುದೆಂದರೆ ಅದು ಪರಸ್ಪರ ಆಕಾಶ ಮತ್ತು ಭೂಮಿಯಷ್ಟು ದೂರವಾಗಿರುವುದು. ಆದ್ದರಿಂದ ನೀವು ಅಲ್ಲಾಹುನಿಂದ ಬೇಡುವುದಿದ್ದರೆ ಫಿರ್ ದೌಸ್'ನ್ನು ಬೇಡಿರಿ. ಏಕೆಂದರೆ ಅದು ಸ್ವರ್ಗದ ಪ್ರಥಮ ಶ್ರೇಣಿಯಲ್ಲಿದೆ. ಅದರ ಮೇಲ್ಬಾಗದಲ್ಲಿ ಅಲ್ಲಾಹನ ಅರ್ಶ್ ಇದೆ. ಅದರಿಂದ ಸ್ವರ್ಗದ ಕಾಲುವೆಗಳು ಚಿಮ್ಮುತ್ತಿರುತ್ತದೆ.
[ಬುಖಾರಿ]

Sunday, May 13, 2018

ಮಕ್ಕಳಿಗೆ ಸಲಾಮ್


. ಅನಸ್ [] ಅವರ ಒಬ್ಬ ಶಿಷ್ಯ ಹೀಗೆ ಹೇಳಿದನು - . ಅನಸ್ [] ಅವರು ಕೆಲವು ಮಕ್ಕಳ ಬಳಿಯಿಂದ ಸಾಗುತ್ತಿದ್ದಾಗ ಅವರಿಗೆ ಸಲಾಮ್ ಹೇಳಿದರು ಮತ್ತು ಪ್ರವಾದಿವರ್ಯರು [] ಮಕ್ಕಳಿಗೆ ಸಲಾಮ್ ಹೇಳುತ್ತಿದ್ದರೆಂದೂ ಹೇಳಿದರು.  
[ಬುಖಾರಿ, ಮುಸ್ಲಿಮ್]

ಸಹ ಪ್ರಾಯಾಣೆಕನ ಸೇವೆ


ಹ. ಅನಸ್ [ರ] ಹೇಳುತ್ತಾರೆ - ನಾನು ಹ. ಜರೀರ್‌ರೊಂದಿಗೆ ಒಂದು ಪ್ರಯಾಣಕ್ಕೆ ಹೊರಟೆ. ಪ್ರಯಾಣದಲ್ಲಿ ಅವರು ನನ್ನ ಸೇವೆಗೈಯುತ್ತಿದ್ದರು. ನಾನು ಅವರನ್ನು ತಡೆದೆ. ಆದರೆ ಅವರು ಒಪ್ಪದೆ ಹೀಗೆಂದರು - ನಾನು ಅನ್ಸಾರ್‌ಗಳನ್ನು (ಮದೀನಾ ವಾಸಿಗಳು) ಪ್ರವಾದಿವರ್ಯರ [ಸ] ಸೇವೆ ಮಾಡುತ್ತಿರುವುದಾಗಿ ಕಂಡಿದ್ದೇನೆ. ಆಗ ಇನ್ನು ಮುಂದೆ ಅನ್ಸಾರ್‌ಗಳ ಪೈಕಿ ಯಾರೊಂದಿಗೆ ಪ್ರಯಾಣ ಮಾಡಿದರೂ ಅವರ ಸೇವೆಗೈಯುವೆನೆಂದು ಶಪಥ ಮಾಡಿದ್ದೇನೆ. 
[ಬುಖಾರಿ, ಮುಸ್ಲಿಮ್]

ಪ್ರವಾದಿವರ್ಯರ [ಸ] ಅನುಸರಣೆಯ ಮಹತ್ವ



ಹ. ಜಾಬಿರ್ [ರ] ಹೇಳುತ್ತಾರೆ - ಪ್ರವಾದಿಯವರು [ಸ] ಮಕ್ಕಾ ವಿಜಯದ ವರ್ಷ ರಮಝಾನ್ ತಂಗಳಲ್ಲಿ ಮಕ್ಕಾದ ಆಕ್ರಮಣ ಮಾಡಲಿಕ್ಕಾಗಿ ಹೊರಟು ಕುರಾಉಲ್ ಗುಮೈ ಎಂಬಲ್ಲಿಗೆ ತಲುಪಿದರು. ಪ್ರವಾದಿ [ಸ] ಮತ್ತು ಯೋಧರು ಅಂಧು ಉಪವಾಸ ಆಚರಿಸಿದ್ದರು. ಪ್ರಸ್ತುತ ಸ್ಥಳಕ್ಕೆ ತಲುಪಿದಾಗ ಪ್ರವಾದಿ [ಸ] ನೀರು ತರಿಸಿ ಮೇಲೆತ್ತಿ ಎಲ್ಲರೂ ನೋಡುವ ಹಾಗೆ ಕುಡಿದರು. (ಅರ್ಥಾತ್ ಉಪವಾಸ ಮುರಿದರು) ಆ ಬಳೀಕವೂ ಕೆಲವು ಮಂದಿ ಉಪವಾಸದಿಂದಿದ್ದಾರೆ. (ಅಂದರೆ ಅವರು ಉಪವಾಸ ಮುರಿಯಲಿಲ್ಲ) ಎಂದು ಅವರೊಂದಿಗೆ ಹೇಳಲಾದಾಗ ಪ್ರವಾದಿ [ಸ] ಅವರು ಅವಿಧೇಯರು ಎಂದು ಹೇಳಿದರು. 
[ಮುಸ್ಲಿಮ್]

Saturday, May 12, 2018

ಅರ್ಪಣಾ ಮನೋಭಾವ


. ಅನಸ್ [] ಹೇಳುತ್ತಾರೆ - ಅಬೂ ಸುಫ್ಯಾನರ ನಲ್ವತ್ತು ತಂಡಗಳ ತುಕ್ಕಡಿಯು ಆಧುನಿಕ ಶಸ್ತ್ರಾಸ್ತ ಮತ್ತು ಆಹಾರ ಸಾಮಗ್ರಿಗಳೊಂದಿಗೆ ಸಿರಿಯಾದಿಂದ ಮಕ್ಕಾಕ್ಕೆ ಹೊರಟಿದೆಯೆಂದು ತಿಳಿದಾಗ, ಪ್ರವಾದಿ [] ಸಹಾಬಿಗಳ ಜೊತೆ ಸಮಾಲೋಚನೆ ನಡೆಸಿದರು. ಆಗ ಸಅದ್ ಬಿನ್ ಉಬಾದ [] ಎದ್ದು ನಿಂತು ಹೀಗೆಂದರು - ತಾವು ನಮಗೆ ಸಮುದ್ರದಲ್ಲಿ ಕುದುರೆಗಳನ್ನು ಒಡಿಸಿರಿ ಎಂಬ ಅಪ್ಪಣೆ ಕೊಟ್ಟರೆ ನಾವು ಹಿಂದುಮುಂದು ನೋಡದೆ ಸಮುದ್ರಕ್ಕೆ ನಮ್ಮ ಕುದುರೆಗಳೊಂದಿಗೆ ಧುಮುಕುವೆವು. ಬರ್ಕುಲ್ ಗುಮಾದ್ವರೆಗೆ ಕುದುರೆ ಸವಾರಿ ಮಾಡಿ ಹೋಗಿ ವೈರಿಗಳೊಂದಿಗೆ ಕಾದಾಡಬೇಕೆಂದು ನಮಗೆ ಅಪ್ಪಣೆ ಕೊಟ್ಟರೆ ನಾವು ಅದನ್ನೂ ಪಾಲಿಸುವೆವು.
[ಮುಸ್ಲಿಮ್]

ತಾರಿಕ್ ಬಿನ್ ಶಿಹಾಬ್ ಹೇಳುತ್ತಾರೆ - ನಾನು ಅಬ್ದುಲ್ಲಾ ಬಿನ್ ಮಸ್ಊದ್ [] ಹೀಗೆ ಹೇಳುವುದಾಗಿ ಕೇಳಿದ್ದೇನೆ. ನಾನು ಮಿಕ್ದಾದ್ ಬಿನ್ ಅಸ್ವದ್ ಒಂದು ವಿಶೇಷ ಸಾಧನೆಯನ್ನು ನೋಡಿದ್ದೇನೆ. ಇತರೆಲ್ಲ ಸಾಧನೆಗಳಿಗಿಂತಲೂ ಪ್ರಿಯವಾಗಿರುವ ಸಾಧನೆಯು ನನ್ನಿಂದಾಗುತ್ತಿದ್ದರೆ! ಅದೇನೆಂದರೆ ಪ್ರವಾದಿಯವರು [] ಮಕ್ಕಾದ ಬಹುದೇವಾರಾಧಕರೊಂದಿಗೆ ಹೋರಾಡುವ ಕರೆಕೊಟ್ಟಾಗ ಮಿಕ್ದಾದ್ ಮುಂದೆ ಬಂದು ಹೀಗೆಂದರು - ಅಲ್ಲಾಹನ ಸಂದೇಶವಾಹಕರೇ! . ಮೂಸಾರ [] ಜನಾಂಗವು ಅವರೊಂದಿಗೆ, ನೀವು ನಿಮ್ಮ ಪ್ರಭೂ ಹೋಗಿ ವೈರಿಗಳೊಂದಿಗೆ ಕಾದಾಡಿರಿ ಎಂದು ಹೇಳಿದಂತೆ ನಾವು ತಮ್ಮೊಂದಿಗೆ ಖಂಡಿತ ಹೇಳಲಾರೆವು. ನಾವಂತೂ ತಮ್ಮ ಬಲಭಾಗದಲ್ಲೂ ಎಡಭಾಗದಲ್ಲೂ ಮುಂದೆಯೂ ಹಿಂದೆಯೂ ನಿಂತು ವೈರಿಗಳೊಂದಿಗೆ ಹೋರಾಡವೆವು. ಮಿಕ್ದಾದ್ ಮಾತನ್ನು ಹೇಳಿದಾಗ ಪ್ರವಾದಿಯವರ [] ಮುಖ ಸಂತೋಷದಿಂದ ಅರಳಿತು
[ಮುಸ್ನದ್ ಅಹ್ಮದ್]

ಸಮಗ್ರ ಮತ್ತು ಸಾರ್ವಕಾಲಿಕ ಸಂದೇಶ


ಅನಸ್ [] ಹೇಳುತ್ತಾರೆ - ಅಬ್ದುಲ್ಲಾ ಬಿನ್ ರವಾಹರು [] ಸಹಾಬಿಗಳ ಪೈಕಿ ಯಾರಾದರೂ ಸಿಕ್ಕಿದರೆ ಅವರೊಂದಿಗೆ, "ಬನ್ನಿ ನಾವು ಸ್ವಲ್ಪ ಹೊತ್ತು ನಿಮ್ಮ ಪಭುವಿನ ಮೇಲೆ ವಿಶ್ವಾಸ್ವವಿಡೊಣ" ಎನ್ನುತ್ತಿದ್ದರು. ಒಂದು ದಿನ ಅವರು ಒಬ್ಬರೊಂದಿಗೆ ಇದೇ ಮಾತನ್ನು ಹೇಳಿದಾಗ ಅವರು ಕೋಪಗೊಂಡು ಪ್ರವಾದಿಯವರ [] ಬಳಿಗೆ ಹೋಗಿ ಹೀಗೆಂದರು: ಅಲ್ಲಾಹನ ಸಂದೇಶವಾಹಕರೇ! ಇಬ್ನು ರವಾಹರನ್ನು ನೋಡಿ! ಅವರು ತಮ್ಮ ವಿಶ್ವಾಸದಿಂದ ಸರಿದು ಸ್ವಲ್ಪ ಹೊತ್ತು ವಿಶ್ವಾಸ ತಾಳಬೇಕೆಂಬ ಕರೆ ಕೊಡುತ್ತಿದ್ದಾರೆ. ಆಗ ಪ್ರವಾದಿ [] ಹೇಳಿದರು - ಅಲ್ಲಾಹನು ಇಬ್ನು ರವಾಹರ ಮೇಲೆ ಅನುಗ್ರಹ ಸುರಿಸಲಿ. ಅವರು ನಿಮಗೆ ಮಲಕ್ಗಳ ಹೆಮ್ಮೆ ಪಡುವಂತಹ ಧಾರ್ಮಿಕ ಕೂಟದ ಕಡೆಗೆ ಕರೆ ನೀಡುತ್ತಿದ್ದಾರೆ. ಅಂತಹ ಸಭೆಗಳನ್ನು ಇಬ್ನು ರವಾಹ ಬಹಳ ಇಷ್ಟಪಡುತ್ತಾರೆ
[ಮುಸ್ನದ್ ಅಹ್ಮದ್]