Thursday, August 1, 2013

ಹದೀತ್ ರತ್ನಗಳು

"ಅಬು ಹುರೈರಾ (ರ) ಮತ್ತು ಅಬು ಸಈದ್ (ರ) ರಿಂದ: ಪ್ರವಾದಿ (ರ)ರವರು ಈ ರೀತಿ ಹೇಳಿದರೆಂದು ಅವರು ಪ್ರವಾದಿ (ಸ)ರವರ ಮೇಲೆ ಸಾಕ್ಷ್ಯವಹಿಸಿ ಹೇಳಿದ್ದಾರೆ, ಅವರ ಮೇಲೆ ಶಾಂತಿಯು ಅವತಿರ್ಣಗೊಳ್ಳಲಿದೆ ಮತ್ತು ಅಲ್ಲಾಹನು ತನ್ನ ಸಮಿಪದಲ್ಲಿರುವವರೊಂದಿಗೆ ಅವರ ಕುರಿತು ಪ್ರಸ್ತಾಪಿಸದೆ, ಅವರು ಅಲ್ಲಹನನ್ನು ಸ್ಮರಿಸುತ್ತಾ ಕೂರಲಾರರು."

[ಮುಸ್ಲಿಮ್]

ಅಬು ಹುರೈರಾರಿಂದ: ಪ್ರವಾದಿ (ಸ)ರವರು ಹೇಳಿದರು: "ಯಾರಾದರು ಕುಳಿತುಕೊಳ್ಳುವಾಗ ಅದರಲ್ಲಿ ಅಲ್ಲಾಹನನ್ನು ಸ್ಮರಿಸದಿದ್ದರೆ ಅವನ ಮೇಲೆ ಅಲ್ಲಾಹನಿಂದ ಒಂದು ನಷ್ಟವುಂಟಾವುದು. ಯಾರಾದರೂ ಮಲಗುವಾಗ ಅದರಲ್ಲಿ ಅಲ್ಲಾಹನನ್ನು ಸ್ಮರಿಸದಿದ್ದರೆ ಅವನ ಮೇಲೆ ಅಲ್ಲಾಹನಿಂದ ಒಂದು ನಷ್ಟವುಂಟಾವುದು.
[ಅಬು ದಾವೂದ್]

ಅಬೂ ಹುರೈರಾರಿಂದ ಪ್ರವಾದಿ (ಸ) ರವರು ಹೇಳಿದರು: 'ಉತ್ತರವು ಲಬಿಸುತ್ತದೆಯೆಂಬ ದ್ರಢವಿಶ್ವಾಶದಿಂದ ನೀವು ಅಲ್ಲಹನೊಂದಿಗೆ ಪ್ರಾರ್ಥಿಸಿರಿ.ತಿಳಿದುಕೊಳ್ಳಿರಿ, ಅಲಕ್ಷ್ಯವಾಗಿರುವ, ಸ್ವೇಚ್ಚೆಯಾಗಿರುವ ಹ್ರದಯದಿಂದಿರುವ ಪ್ರಾರ್ಥನೆ ಅಲ್ಲಾಹನು ಉತ್ತರವನ್ನೀಯಲಾರನು."
[ತಿರ್ಮಿದಿ]

ಸುಮ್ರಾ ಇಬ್ನ್ ಜುನ್ದಬ್ (ರ)ರಿಂದ: ಪ್ರವಾದಿ (ಸ)ರವರು ಹೇಳಿದರು: 'ವಚನಗಳಲ್ಲಿ ಅಲ್ಲಹುನಿಗೆ ನಾಲ್ಕು ವಚನಗಲಾಗಿವೆ: ಸುಬ್'ಹಾನಲ್ಲಾಹ್, ವಲ್'ಹಮ್ದುಲಿಲ್ಲಾಹ್, ವಾಲಾಇಲಾಹ ಇಲ್ಲಲ್ಲಾಹ್, ವಲ್ಲಾಹು ಅಕ್ಬರ್. ಇವುಗಳಲ್ಲಿ ನೀನು ಯಾವುದರಿಂದ ಆರಂಭಿಸಿದರೂ ನಿನಗೇನೂ ತೊಂದರೆಯಿಲ್ಲ."
[ಮುಸ್ಲಿಮ್, ಇಬ್ನ್ ಮಾಜ] 

ಅಬೂ ಹುರೈರಾ (ರ) ಹೇಳಿದರು: ಪ್ರವಾದಿ (ಸ)ರವರು ಹೀಗೆ ಹೇಳುವುದನ್ನು ನಾನು ಆಲಿಸಿದ್ದೀನೆ : 'ಅಲ್ಲಾಹನಾನೆ, ನಾನು ದಿನದಲ್ಲಿ  ಎಪ್ಪತ್ತಕ್ಕಿಂತಲೂ ಹೆಚ್ಚು ಬಾರಿ ಅಲ್ಲಾಹನೊಂದಿಗೆ ಇಸ್ತಿಗ್ಫಾರ್ ಮಾಡಿ ಅವನೆಡೆಗೆ ಪಶ್ಚಾತ್ತಾಪಪಟ್ಟು ಮರಳುತ್ತೇನೆ.'

[ಬುಖಾರಿ, ತಿರ್ಮಿದಿ]  

No comments:

Post a Comment