ಅವರನ್ನು
ಮತ್ತು ಅಲ್ಲಾಹುವಿನ ಹೊರತು ಅವರು ಆರಾಧಿಸುತ್ತಿರುವುದನ್ನು ಅವನು ಒಂದು ಗೂಡಿಸುವ ದಿನ ತರುವಾಯ ಅವನು(ಆ ಆರಾಧ್ಯರೊಂದಿಗೆ) ಕೇಳುವನು:
"ನನ್ನ ದಾಸರಾಗಿರುವ ಇವರನ್ನು ದಾರಿಗೆಡಿಸಿದವರು ನೀವೋ? ಅಥವಾ ಅವರೇ ಸ್ವತಃ ದಾರಿಗೆಟ್ಟರೋ?" ಆರಾಧ್ಯರು ಹೇಳುವರು: "ನೀನು ಪರಮ
ಪಾವನನಾಗಿರುವೆ. ನಿನ್ನ ಹೊರತು ಅನ್ಯರನ್ನು ರಕ್ಷಕರನ್ನಾಗಿ ಮಾಡಿಕೊಳ್ಳುವುದು ನಮಗೆ ಯುಕ್ತವಲ್ಲ.
ಆದರೆ ಅವರಿಗೆ ಮತ್ತು ಅವರ ಪೂರ್ವಿಕರಿಗೆ ನೀನು ಸುಖಾನುಕೂಲತೆಗಳನ್ನು ಒದಗಿಸಿದೆ. ಹೀಗೆ ಅವರು
ಉಪದೇಶವನ್ನು ಮರೆತು ಬಿಟ್ಟರು ಮತ್ತು ಒಂದು ನಾಶ ಪೀಡಿತ ಜನತೆಯಾಗಿ ಮಾರ್ಪಟ್ಟರು".
[ಕುರಾನ್, ಅಲ್-ಫುರ್ಕಾನ್ (25): 17-18]
No comments:
Post a Comment