Wednesday, September 27, 2017

ಲಜ್ಜೆಯು ಈಮಾನಿನ ಅಂಶವಾಗಿದೆ


ಇಬ್ನು ಉಮರ್ [ರ] ಹೇಳುತ್ತಾರೆ - ಪ್ರವಾದಿ [ಸ] ಓರ್ವ ಅನ್ಸಾರಿ (ಮದೀನಾದ)ಯ ಬಳಿಯಿಂದ ಸಾಗುತ್ತಿದ್ದರು. ಅನ್ಸಾರಿ ವ್ಯಕ್ತಿಯು ತನ್ನ ಸಹೋದರನಿಗೆ ಲಜ್ಜೆಯ ಕುರಿತು ಉಪದೇಶಿಸುತ್ತಿದ್ದನು. ಪ್ರವಾದಿ [ಸ] ಹೇಳಿದರು, ಅವನನ್ನು ಬಿಡಿ. ಲಜ್ಜೆಯಂತೂ ಈಮಾನಿನ ಅಂಶವಾಗಿದೆ. 
[ಸಹೀಹ್ ಬುಖಾರಿ, ಅಧ್ಯಾಯ ಈಮಾನ್] 

Tuesday, September 26, 2017

ಭೂಮಿಯಲ್ಲಿ ಮಲಕ್‌ಗಳು ತಿರುಗಾಡುತ್ತರೆ


ಅಲ್ಲಾಹನ ಪ್ರವಾದಿ [ಸ]ರವರು ಹೇಳಿದರು: ಭೂಮಿಯಲ್ಲಿ ಸುತ್ತಾಡುವ ಅಲ್ಲಾಹನ ಕೆಲವು ಮಲಕ್ ಗಳಿದ್ದಾರೆ. ಅವರು ನನ್ನ ಉಮ್ಮತ್ತಿನ ಸ್ವಲಾತನ್ನು ನನಗೆ ತಲುಪಿಸುತ್ತಾರೆ. 
[ನಸಾಈ, ಹಾಕೀಮ್]  

ಒಂದೇ ವುಝೂವಿನಲ್ಲಿ ಅನೇಕ ನಮಾಝ್


ಉಸಾಮಾ ಬಿನ್ ಝೈದ್ [ರ] ಹೇಳುತ್ತಾರೆ: ಪ್ರವಾದಿ [ಸ] ಅರಫಾದಿಂದ ಹೊರಟು ಶುಅಬ್'ಗೆ ತಲುಪಿದಾಗ ಅಲ್ಲಿಳಿದು ಮೂತ್ರ ಶಂಕೆ ಮಾಡಿದರು. ಅನಂತರ ಲಘುವಾದ ವೂಝೂ ಮಾಡಿದರು. ನಾನು ಕೇಳಿದೆ, "ಪ್ರವಾದಿವರ್ಯರೇ! ನಮಾಝ್ (ಎಲ್ಲಿ ನಿರ್ವಹಿಸುವಿರಿ)" ಪ್ರವಾದಿ [ಸ] ಹೇಳಿದರು, ಮುಂದೆ. ತರುವಾಯ ಪ್ರಯಾಣ ಬೆಳೆಸಿದರು. ಮುಝ್ದಲಿಫಕ್ಕೆ ತಲುಪಿದಾಗ ಅಲ್ಲಿಳಿದು ಪೂರ್ಣ ವುಝೂ ಮಾಡಿದರು. ನಂತರ ನಮಾಝ್'ಗಾಗಿ ತಕ್ಬೀರ್ ಹೇಳಲಾಯಿತು. ಪ್ರವಾದಿವರ್ಯರು [ಸ] ಮಗ್ರಿಬ್ ನಮಾಝ್ ಮಾಡಿದರು. ಆ ಬಳಿಕ ಪ್ರತಿಯೊಬ್ಬನೂ ತನ್ನ ಒಂಟೆಯನ್ನು ತನ್ನ ಬಳಿ ಕುಳ್ಳಿರಿಸಿದನು ಮತ್ತು ಈಶಾ ನಮಾಝ್'ಗೆ ತಕ್ಬೀರ್ ಹೇಳಲಾಯಿತು. ಪ್ರವಾದಿ [ಸ] ಅದನ್ನೂ ನಿರ್ವಹಿಸಿದರು. ಮಗ್ರಿಬ್ ಮತ್ತು ಇಶಾ ಮಧ್ಯೆ ಬೇರಾವುದೇ ನಮಾಝ್ ಮಾಡಲಿಲ್ಲ. 
[ಸಹೀಹ್ ಬುಖಾರಿ, ಅಧ್ಯಾಯ ಜ್ಜಾನ]

ಒಣ ಸೆಗಣೆ


ಅಬ್ದುಲ್ಲಾ ಬಿನ್ ಮಸ್‌ಊದ್ [ರ] ಹೇಳುತ್ತಾರೆ: ಪ್ರವಾದಿ [ಸ] ಶೌಚಕ್ಕೆ ಹೊರಟರು. ಮೂರು ಕಲ್ಲುಗಳನ್ನು ತರುವಂತೆ ನನಗೆ ಅಜ್ಜಾಪಿಸಿದರು. ನಾನು ಹುಡುಕಿದಾಗ ನನಗೆ ಎರಡು ಕಲ್ಲುಗಳು ಸಿಕ್ಕಿದುವು. ಮೂರನೆಯದು ಸಿಗಲಿಲ್ಲ. ಹಾಗೆ ನಾನು ಒಣ ಸೆಗಣೆ ತಂದು ಪ್ರವಾದಿಯವರ [ಸ] ಮುಂದಿಟ್ಟೆ. ಅವರು ಎರಡು ಕಲ್ಲುಗಳನ್ನು ತೆಗೆದರು. ಸೆಗಣೆಯನ್ನು ಬಿಸಾಡುತ್ತಾ ಇದು ಮಲಿನ ವಸ್ತು ಎಂದರು.  
[ಸಹೀಹ್ ಬುಖಾರಿ]

ಮುಹ್‌ಮಿನ್‌


ಪ್ರವಾದಿ [ಸ]ರವರು ಹೇಳಿದರು: ಮುಹ್‌ಮಿನ್‌ನ ಉದಾಹರಣೆ ಕರ್ಜೂರದ ಮರದಂತಿದೆ ಹೌದು, ಕರ್ಜೂರದ ಮರದಿಂದ ಏನೇ ತೆಗೆದರೂ ಅದು ಲಾಭವಾಗಿರುತ್ತದೆ. 
[ಹದೀಸ್]

Monday, September 25, 2017

ಅಶೂರ


ಅಶೂರ ಮುಹರಮ್ ತಿಂಗಳ ಹತ್ತನೇ ದಿನವಾಗಿದೆ. ಪ್ರವಾದಿ [ಸ] ಉಪವಾಸ ವೃತ್ತವನ್ನು ಆಚರಿಸುತ್ತಿದ್ದರು ಮತ್ತು ಈ ದಿವಸ ಉಪವಾಸವನ್ನು ಹಿಡಿಯಲು ಪ್ರೊತ್ಸಾಹಿಸುತ್ತಿದ್ದರು.

ಇಬ್ನ್ ಅಬ್ಬಾಸ್ [ರ]ರವರ ವರದಿ ಪ್ರಕಾರ ಪ್ರವಾದಿ [ಸ] ಮದೀನಾದ ಆಗಮನದ ನಂತರ, ಪ್ರವಾದಿ [ಸ] ಯಹೂದಿಯರು ಉಪವಾಸ ವೃತ್ತವನ್ನು ಆಚರಿಸುವುದನ್ನು ನೋಡಿದರು, ಆಗ ಅವರು ಯಹೂದಿಯರಲ್ಲಿ ಕೇಳಿದರು? ಇದು ಯಾವ ದಿವಸ ನೀವು ಉಪವಾಸ ಮಾಡುತ್ತಿದ್ದೀರಿ? ಅವರು ಹೇಳಿದರು: ಇದು ಅನುಗ್ರಹಿತ ದಿವಸ.
ಈ ದಿವಸದಲ್ಲಿ ಅಲ್ಲಾಹನು ಬನೂ ಇಸ್ರಾಈಲ್ ಸಂತತಿಯನ್ನು ಫಿರೌನ್ ನ ಅಕ್ರಮದಿಂದ ಪಾರುಮಾಡಿದನು. ಆದ್ದರಿಂದ ಮೂಸಾ [ಅ] ಅಲ್ಲಾಹನಿಗೆ ದನ್ಯವಾದ [Thank] ತೋರಿಸಲು ಉಪವಾಸ ವೃತ್ತವನ್ನು ಆಚರಿಸಿದರು.
[ಬುಖಾರಿ]

ಬರುವ ವರ್ಷ ಅಲ್ಲಾಹು ಮುಸ್ಲಿಮರಿಗೆ ರಮಝಾನ್ ಉಪವಾಸ ಕಡ್ಡಾಯ ಗೊಳಿಸಿದನು. ಅಶೂರದ ಉಪವಾಸವು ಅನುಷ್ಟಿಸುವುದು ಸುನ್ನತ್ ಆಯಿತು.

ಪ್ರವಾದಿ [ಸ]ರವರ ಕೊನೆಯ ಕಾಲದಲ್ಲಿ, ಅವರು ನಿರ್ಧರಿಸಿದ್ದರು ಕೇವಲ ಅಶೂರ ದಿವಸದಲ್ಲಿ ಉಪವಾಸ ಹಿಡಿಯುವುದಲ್ಲ, ಅದಲ್ಲದೆ ಒಂದು ದಿನ ಜಾಸ್ತಿ. ಅಶೂರದ ಒಂದು ದಿವಸ ಮುಂಚೆ ಅಥವಾ ಅಶೂರದ ದಿವಸದ ನಂತರ. ಇದರ ಉದ್ದೇಶ ಯಹೂದಿಯವರಿಗಿಂತ ವ್ಯತ್ಯಾಸ ವಾಗಿರಲು. ಅವರು ಹೇಳಿದರು, ನಾನು ಬರುವ ವರ್ಷ ಜೀವಿಸಿದರೆ, ನಾನು ಉಪವಾಸವನ್ನು 9ನೇ [ಮುಹರ್ರಮ್] ನಂದೂ ಹಿಡಿಯುತ್ತೇನೆ. ಆದರೆ ಪ್ರವಾದಿ [ಸ]ರವರು ಅದಕ್ಕಿಂತ ಮುಂಚೆ ಮರಣ ಹೊಂದಿದರು.
[ಮುಸ್ಲಿಮ್]

ಪ್ರವಾದಿ [ಸ] ಹೇಳಿದರು: "ಅಶೂರದ ದಿನ ಉಪವಾಸ ಹಿಡಿಯಿರಿ ಮತ್ತು ಯಹೂದಿಯವರಿಗಿಂತ ವಿಬಿನ್ನವಾಗಿ, ಹೇಗೆಂದರೆ ಅಶೂರದ ಒಂದು ದಿವಸ ಮುಂಚೆ ಅಥವಾ ನಂತರ ಉಪವಾಸ ಹಿಡಿದು.
[ಅಹ್ಮದ್]

ಅಶೂರದ ದಿನದ ಉಪವಾಸ ಕಳೆದ ಒಂದು ವರ್ಷದ ದೋಷವನ್ನು ಮನ್ನಿಸುತ್ತದೆ.
[ಮುಸ್ಲಿಮ್]

ಪ್ರವಾದಿ [ಸ] ಹೇಳಿದರು: "ರಮದಾನ್ ತಿಂಗಳ  ಬಳಿಕ ಅತಿಶ್ರೇಷ್ಠ ಉಪವಾಸವು ಅಲ್ಲಾಹನ ತಿಂಗಳಾದ ಮುಹರ್ರಮ್ ತಿಂಗಳಲ್ಲಿ ಆಚರಿಸುವ ಉಪವಾಸವಾಗಿದೆ."
[ಮುಸ್ಲಿಮ್]
ಮುಹರ್ರಮ್ ಹತ್ತನೇ ದಿವಸದ ಉಪವಾಸದ ಬಗ್ಗೆ ಹೇಳಿದರು.

ಅಬೂ ಸೈದ್ [ರ]ರವರು ವರದಿ ಮಾಡಿದ್ದಾರೆ: ನಾನು ಕೇಳಿದ್ದೇನೆ ಪ್ರವಾದಿ [ಸ]ರವರು ಹೀಗೆ ಹೇಳುವುದನ್ನು, "ಯಾರಾದರೂ ಒಂದು ದಿವಸ ಉಪವಾಸ ವೃತಾವನ್ನು ಅಲ್ಲಾಹನ ಸಂತೋಷಕ್ಕಾಗಿ ಅನುಷ್ಟಿಸುತ್ತಾನೋ, ಅಲ್ಲಾಹು ಅವನ ಮುಖವನ್ನು ನರಕದಿಂದ 70 ವರ್ಷಗಳ ದೂರ ವಿರಿಸುವನು (ಪ್ರಯಾಣಿಸುವ ದೂರ).
[ಸಹೀಹ್ ಅಲ್-ಬುಖಾರಿ]